Wednesday, August 12, 2026
Wednesday, August 12, 2026

JCI India ಜೆಸಿಐ ಇಂಡಿಯಾದ ವಲಯ 24 ರ ಮಧ್ಯ ವಾರ್ಷಿಕ ಸಮ್ಮೇಳನ: ಜೆಸಿಐ ಶಿವಮೊಗ್ಗ ವಿವೇಕ್‌ಗೆ ಪ್ರಶಸ್ತಿಗಳ ಸುರಿಮಳೆ

Date:

JCI India ಜೆಸಿಐ ಇಂಡಿಯಾದ ವಲಯ 24 ರ ಮಧ್ಯ ವಾರ್ಷಿಕ ಸಮ್ಮೇಳನ ವೈಭವ 2026 ರಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು, ಘಟಕಕ್ಕೆ ಹೆಮ್ಮೆಯ ಕೀರ್ತಿಯನ್ನು ತಂದಿದೆ.
ಈ ಯಶಸ್ಸಿನ ಪಯಣಕ್ಕೆ ಸ್ಪೂರ್ತಿ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ ಜೆಸಿಐ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ ಭರತ್ ಎನ್. ಆಚಾರ್ಯ ಹಾಗೂ ನಿರಂತರ ಬೆಂಬಲ ಮತ್ತು ಸಹಕಾರ ನೀಡಿದ ವಲಯ ಅಧ್ಯಕ್ಷರಾದ ಜೆಎಫ್‌ಎಸ್ ಮಧುಸೂಧನ ನಾವಡ ಮತ್ತು ವಲಯ ಉಪಾಧ್ಯಕ್ಷರಾದ ಜೆಸಿಐ ಸೆನೆಟರ್ ಕೆ.ಜಿ.ಆರ್. ಗಣೇಶ್ ಪೈ ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಲಾಯಿತು.
ಎಲ್ಲಾ ಪ್ರಶಸ್ತಿಗಳು ಜೆಸಿಐ ಶಿವಮೊಗ್ಗ ವಿವೇಕ್‌ನ ಪ್ರತಿಯೊಬ್ಬ ಸದಸ್ಯರ ಸಮರ್ಪಣೆ, ಸೇವಾ ಮನೋಭಾವ, ನಾಯಕತ್ವ ಹಾಗೂ ತಂಡದ ಕಾರ್ಯಕ್ಷಮತೆಗೆ ಸಂದ ಗೌರವವಾಗಿದೆ.
ಈ ಯಶಸ್ಸಿನ ಹಿಂದೆ ಜೆಸಿಐ ಶಿವಮೊಗ್ಗ ವಿವೇಕ್‌ನ ಎಲ್ಲಾ ಪೂರ್ವಾಧ್ಯಕ್ಷರು, 2026ರ ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಪ್ರತಿಯೊಬ್ಬ ಸದಸ್ಯರ ಅಮೂಲ್ಯ ಸಹಕಾರ, ಮಾರ್ಗದರ್ಶನ ಮತ್ತು ನಿರಂತರ ಬೆಂಬಲ ಪ್ರಮುಖ ಪಾತ್ರ ವಹಿಸಿದೆ. ಅವರೆಲ್ಲರ ಸಹಯೋಗ, ಸಂಘಟನೆಯ ಮೇಲಿನ ಬದ್ಧತೆ ಮತ್ತು ಸೇವಾ ಮನೋಭಾವದಿಂದಲೇ ಈ ಸಾಧನೆ ಸಾಧ್ಯವಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷೆ ಜೆಸಿ ವಿಜಯಲಕ್ಷ್ಮಿ ಯು. ಕಡಂಬ ಹಾಗೂ ಜೆವಿಸಿ – ವಲಯ 24 ಉದಯ ಕಡಂಬ, ಜೆಕಾಮ್ ಚೇರ್ಮನ್ ಚಂದ್ರಹಾಸ ಶೆಟ್ಟಿ, ರೀಜನಲ್ ಸೆಕ್ರೆಟರಿ ಜೆಸಿ ಜಗದೀಶ್.ಬಿ.ಎನ್, ಪಾಸ್ಟ್ ಝೋನ್ ಆಫೀಸರ್ ಭಾರತೀ.ಹೆಚ್.ಡಿ, ಜೆಸಿ ಜಯಕುಮಾರ್, ಜೆಸಿ ರಾಘವೇಂದ್ರ ಶೆಟ್ಟಿ, ಜೆಸಿ ಶಾಮಲಾ ಶೆಟ್ಟಿ, ಜೆಸಿ ಅನನ್ಯ, ಜೂನಿಯರ್ ಜೆಸಿ ಆದ್ವಿಕ್ ಮತ್ತು ಆರ್ವಿಕ ಹಾಗೂ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರು ಈ ವೈಭವ ಅರ್ಧವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಸಂಭ್ರಮಕ್ಕೆ ಸಾಕ್ಷಿಯಾದರು.

JCI India ಸಮ್ಮೇಳನದಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ಈ ಕೆಳಕಂಡ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಪ್ರದೇಶ ಸಿ – ಝೆಡ್.ವಿ.ಪಿ. ಗುರುತಿಸುವಿಕೆ ಮನ್ನಣೆ ವಿಜೇತರಾದ ಅಧ್ಯಕ್ಷೆ ಜೆಸಿ ವಿಜಯಲಕ್ಷ್ಮಿ ಯು. ಕಡಂಬ (2026) ಸ್ಥಳೀಯ ಘಟಕದ ಕಾರ್ಯದರ್ಶಿಯ ಅತ್ಯುತ್ತಮ ಸೇವೆಗಾಗಿ.
ಝೆಡ್.ವಿ.ಪಿ. ಗುರುತಿಸುವಿಕೆ ಜೆಕಾಮ್ ಅಧ್ಯಕ್ಷ ವಿಶೇಷ ಮನ್ನಣೆ ಪ್ರಶಸ್ತಿ – ಜೆಸಿ ಚಂದ್ರಹಾಸ್ ಶೆಟ್ಟಿ (ಜೆಕಾಮ್ ಶಿವಮೊಗ್ಗ 1.0 ಟೇಬಲ್ ಅಧ್ಯಕ್ಷ)
ನಿರ್ವಹಣಾ ಪ್ರದೇಶ – ಅತ್ಯುತ್ತಮ ಸಾಧನೆ
ತರಬೇತಿ ಪ್ರದೇಶ – ವಿಶೇಷ ಗುರುತಿಸುವಿಕೆ
ಸಮುದಾಯ ಅಭಿವೃದ್ಧಿ – ವಿಶೇಷ ಮನ್ನಣೆ ಪ್ರಶಸ್ತಿ
ಬೆಳವಣಿಗೆ ಮತ್ತು ಅಭಿವೃದ್ಧಿ – ವಿಶೇಷ ಪ್ರಶಸ್ತಿ
ವ್ಯಾಪಾರ ವಿಭಾಗ – ವಿಶೇಷ ಪ್ರಶಸ್ತಿ
ಸಾರ್ವಜನಿಕ ಸಂಪರ್ಕಗಳು – ವಿಶೇಷ ಪ್ರಶಸ್ತಿ
ಅಂತರಾಷ್ಟ್ರೀಯತೆ ವಿಭಾಗ – ವಿಶೇಷ ಪ್ರಶಸ್ತಿ
ಲೇಡಿ ಜೆಸಿ ವಿಭಾಗ – ವಿಶೇಷ ಪ್ರಶಸ್ತಿ
ಜೆಸಿಐ ಇಂಡಿಯಾ ಆಯೋಜಿಸಿದ್ದ “ಜಾಸ್ಮಿನ್” (JASMINE) ಕಾರ್ಯಕ್ರಮದಲ್ಲಿ ಅತ್ಯುತ್ತಮ ಭಾಗವಹಿಸುವಿಕೆಗಾಗಿ ಹೇಮಾಂಗ್ ಪರಿಸರ, ಗಗನ್, ವಂಶಿಕ ಸಿ. ಶೆಟ್ಟಿ, ಸೃಜನ್, ಕೌಶಲ್ ಡಿ. ಪಟೇಲ್, ದಿಯಾ, ವರ್ದನ್ ಹಾಗೂ ಶಿಕ್ಷಕಿ ಜೆಸಿ ಭಾರತಿ ಹೆಚ್.ಡಿ ಅವರಿಗೆ ಸ್ಟಾರ್ ಪರ್ಫಾರ್ಮರ್ ಪ್ರಶಸ್ತಿಯನ್ನು ಪಡೆದು ಘಟಕಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...