Wednesday, August 5, 2026
Wednesday, August 5, 2026

Department of Kannada and Culture ವಿವಿಧ ವಯೋಮಾನದ ಕಲಾವಿದರಾಗಿ ನಿರ್ದಿಷ್ಟಪಡಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನ

Date:

Department of Kannada and Culture ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ವಯೋಮಾನದ ಕಲಾವಿದರಿಗಾಗಿ ಹಮ್ಮಿಕೊಳ್ಳಲಾಗುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇಲಾಖೆಯು ಮಕ್ಕಳಿಗಾಗಿ ‘ಚಿಗುರು’, ಯುವಕರಿಗಾಗಿ ‘ಯುವಸೌರಭ’ ಹಾಗೂ ಹಿರಿಯ ಕಲಾವಿದರಿಗಾಗಿ ‘ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಆಯಾ ವಿಭಾಗಗಳಲ್ಲಿ ಈ ಕೆಳಗಿನ ಕಲಾ ಪ್ರಕಾರಗಳಿಗೆ ಅವಕಾಶ ಕಲ್ಪಿಸಲಾಗಿದೆ:
ಚಿಗುರು ಕಾರ್ಯಕ್ರಮ (8 ರಿಂದ 14 ವರ್ಷದೊಳಗಿನ ಮಕ್ಕಳಿಗೆ):
ಶಾಸ್ತ್ರೀಯ ಸಂಗೀತ / ಕರ್ನಾಟಕ / ಹಿಂದೂಸ್ತಾನಿ / ಗಾಯನ ಮತ್ತು ವಾದ್ಯಸಂಗೀತ.
ಸುಗಮ ಸಂಗೀತ / ವಚನ ಸಂಗೀತ.
ಜನಪದ ಗೀತೆಗಳು.
ಸಮೂಹ ನೃತ್ಯ / ನೃತ್ಯ ರೂಪಕ.
ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಯಾಟ ಇತ್ಯಾದಿ ಸಮೂಹ ಕಾರ್ಯಕ್ರಮಗಳು.
ಏಕಪಾತ್ರಾಭಿನಯ.
ಯುವಸೌರಭ ಕಾರ್ಯಕ್ರಮ (15 ರಿಂದ 30 ವರ್ಷದೊಳಗಿನ ಯುವಕರಿಗೆ):
ಸುಗಮ ಸಂಗೀತ / ವಚನ ಸಂಗೀತ.
ಜನಪದ ಗೀತೆಗಳು.
ಸಮೂಹ ನೃತ್ಯ / ನೃತ್ಯ ರೂಪಕ.
ಜನಪದ ಪ್ರದರ್ಶನ ಕಲಾತಂಡ (ವಿವಿಧ 02 ಕಲಾ ಪ್ರಕಾರಗಳು).
ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಯಾಟ ಇತ್ಯಾದಿ ಸಮೂಹ ಕಾರ್ಯಕ್ರಮಗಳು.
ಸಾಂಸ್ಕೃತಿಕ ಸೌರಭ ಕಾರ್ಯಕ್ರಮ (30 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರಿಗೆ):
ಶಾಸ್ತ್ರೀಯ ಸಂಗೀತ / ಕರ್ನಾಟಕ / ಹಿಂದೂಸ್ತಾನಿ / ಗಾಯನ ಮತ್ತು ವಾದ್ಯಸಂಗೀತ.
ಸುಗಮ ಸಂಗೀತ / ವಚನ ಸಂಗೀತ.
ಜನಪದ ಗೀತೆಗಳು.
ಸಮೂಹ ನೃತ್ಯ / ನೃತ್ಯ ರೂಪಕ.
ಜನಪದ ಪ್ರದರ್ಶನ ಕಲಾತಂಡ (ವಿವಿಧ 03 ಕಲಾ ಪ್ರಕಾರಗಳು).
ನಾಟಕ, ಯಕ್ಷಗಾನ, ಬಯಲಾಟ, ಗೊಂಬೆಯಾಟ ಇತ್ಯಾದಿ ಸಮೂಹ ಕಾರ್ಯಕ್ರಮಗಳು.
ಗಮಕ / ಕಥಾಕೀರ್ತನೆ.
Department of Kannada and Culture ಆಸಕ್ತ ಕಲಾವಿದರು ತಮ್ಮ ವಯಸ್ಸಿನ ಧೃಢೀಕರಣ ದಾಖಲೆಗಳೊಂದಿಗೆ, ಸಂಗೀತ ವಿದ್ಯಾಭ್ಯಾಸದ ಪ್ರಥಮ ದರ್ಜೆ (ಜೂನಿಯರ್ ಗ್ರೇಡ್), ಪ್ರೌಢದರ್ಜೆ (ಸೀನಿಯರ್ ಗ್ರೇಡ್), ವಿದ್ವತ್ ಶ್ರೇಣಿ, ಆಕಾಶವಾಣಿ ‘ಬಿ’ ಗ್ರೇಡ್ ಅಥವಾ ಸರ್ಕಾರದಿಂದ ನೀಡುವ ಪ್ರಶಸ್ತಿ ಪುರಸ್ಕೃತ ದಾಖಲೆಗಳನ್ನು ಲಗತ್ತಿಸಬೇಕು.
ಅಭ್ಯರ್ಥಿಗಳು ತಮ್ಮ ಸ್ವವಿವರವನ್ನು ಬಿಳಿ ಹಾಳೆಯ ಮೇಲೆ ಬರೆದು, ಅಗತ್ಯ ದಾಖಲೆಗಳೊಂದಿಗೆ “ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ರಂಗಮಂದಿರ, ಶಿವಮೊಗ್ಗ” ಈ ವಿಳಾಸಕ್ಕೆ ದಿನಾಂಕ: 25-06-2026ರ ಸಂಜೆ 5.00 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಿಶೇಷ ಸೂಚನೆ: ಈ ಹಿಂದೆ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದ ಕಲಾವಿದರು ಈ ಬಾರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: 08182-223354 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

DC Shivamogga “ಭಾರತ್ ಜೋಡೋ” ಯೋಜನೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ: ಪ್ರಭುಲಿಂಗ ಕವಳಿಕಟ್ಟಿ

DC Shivamogga ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ-ಸಾಮಾಜಿಕ...

B.Y. Raghavendra ಕೇಂದ್ರದ ಅಟಲ್ ಪಿಂಚಣಿ ಯೋಜನೆಗೆಶಿವಮೊಗ್ಗ ಜಿಲ್ಲೆಯಲ್ಲಿ ಗಮನಾರ್ಹ ಸ್ಪಂದನ- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ಅಸಂಘಟಿತ ವಲಯದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೂ ವೃದ್ಧಾಪ್ಯದಲ್ಲಿ ಆರ್ಥಿಕ...

S. N. Channabasappa ಶಿವಮೊಗ್ಗ ಸಾಂಸ್ಕೃತಿಕ ರಾಜಧಾನಿ ಎಂಬ ಪ್ರಸಿದ್ಧಿಗೆ ಇಲ್ಲಿನ ಸಹೃದಯರೇ ಕಾರಣ- ಕಾ.ವೆಂ‌.ಶ್ರೀ.

S. N. Channabasappa "ಶಿವಮೊಗ್ಗ ನಗರದ ಜೀವನಾಡಿ ಹಾಗೂ ಸಮೃದ್ಧಿಯ ಸಂಕೇತವಾಗಿ...