Youth Hostel Association ಉತ್ತರಖಾಂಡ ರಾಜ್ಯವು ನಮ್ಮ ದೇಶದ ದೇವ ಭೂಮಿ ಎಂದು ಹೆಸರುವಾಸಿ ಇಲ್ಲಿರುವ ಪುಣ್ಯಕ್ಷೇತ್ರಗಳ ಬೇಟಿ ನೀಡುವುದು ಚಾರಣದ ಅನುಭವವನ್ನು ನೀಡುತ್ತದೆ ಚಾರ್ ದಾಮ್ ಯಾತ್ರೆಯು ಅಮಿಸ್ಮರಣಿಯವಾಗಿ ಉಳಿಯುತ್ತದೆ ಎಂದು ಯೂತ್ ಹಾಸ್ಟೇಲ್ಸ್ ಛೇರ್ಮನ್ ವಾಗೇಶ್ ಯಾತ್ರೆಗೆ ಹೊರಟ ಸದಸ್ಯರಿಗೆ ಬೀಳ್ಕೊಡುವ ಸಮಾರಂಭದಲ್ಲಿ ತಿಳಿಸಿದರು. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್, ಭದ್ರಿನಾಥ್ ಪ್ರಸಿದ್ದ ಯಾತ್ರಾ ಸ್ಥಳಗಳು. ಎಲ್ಲರಿಗೂ ಜೀವನದಲ್ಲಿ ಒಮ್ಮೆಯಾದರು ಬೇಟಿ ನೀಡಬೇಕೆಂಬ ಹಂಬಲ ಸಹಜ. ಹಿಮಾಲಯದ ತಡದಲ್ಲಿರುವ ಈ ಪ್ರದೇಶಗಳನ್ನು ನೋಡುವುದೆ ಕಣ್ಣಿಗೆ ಹಬ್ಬ. ಕಡಿದಾದ ದಾರಿಯಲ್ಲಿ ಸಾಗಿ, ದೇವರ ದರ್ಶನ ಮಾಡಿದರೆ ಜೀವನ ಸಾರ್ಥಕ ಬಾವ ಮೂಡುತ್ತದೆ. ಪ್ರಾಕೃತಿಕ ವಿಸ್ಮಯಗಳನ್ನು ನೋಡುವುದರೊಂದಿಗೆ, ನಮ್ಮ ದೇಶದ ಕೊನೆಯ ಭಾಗ ಮಾನ ಗ್ರಾಮದಲ್ಲಿ ಚಾ ಕುಡಿದು ಬರುವುದು ವಿಶೇಷ ಅನುಭವ ನೀಡುತ್ತದೆ ಎಂದರು. Youth Hostel Association ನಾಗರಾಜ್ ನೆಲೆ ಸ್ವಾಗತಿಸಿದರು, ನರಸಿಂಹಮೂರ್ತಿ ಪ್ರಸ್ಥಾವಿಕವಾಗಿ ಮಾತನಾಡಿದರು, ರಮೇಶ್ ವಂದಿಸಿದರು. ಮಂಜುನಾಥ್, ಧನಂಜಯ, ಜಯಂತಿ, ಶ್ರೀನಿವಾಸ್, ಚಂದ್ರಿಕಾಮೂರ್ತಿ, ಪ್ರೇಮಹೆಗ್ಡೆ, ಗೋಪಿನಾಥ್, ಆದ್ಯ, ಲಕ್ಷ್ಮಿ,,ಸಾವಿತ್ರಿ, ವೀರೇಶ್, ಶಂಕರಪ್ಪ ಮುಂತಾದವರಿದ್ದರು
Youth Hostel Association ದೇವ ಭೂಮಿಯಲ್ಲಿ ಚಾರ್ ದಾಮ್ ಯಾತ್ರೆ ಅವಿಸ್ಮರಣಿಯ : ಎಸ್.ಎಸ್.ವಾಗೇಶ್
Date:
