Thursday, September 17, 2026
Thursday, September 17, 2026

ಶತಮಾನಗಳ ಕಾಲ ಮೌನವಾಗಿದ್ದದನಿಗಳಿಗೆ ಸಿಕ್ಕ‌ ಮಹಾಶಕ್ತಿ,ಡಾ.ಅಂಬೇಡ್ಕರ್- ಎಂ.ಗುರುಮೂರ್ತಿ

Date:

ಡಾ.ಬಿ ಆರ್ ಅಂಬೇಡ್ಕರ್ ಎಂಬ ಹೆಸರು ಕೇವಲ ಒಂದು ಅಕ್ಷರವಲ್ಲ. ಅದು ಶತಮಾನಗಳ ಕಾಲ ಮೌನವಾಗಿದ್ದ ದನಿಗಳಿಗೆ ಸಿಕ್ಕ ಮಹಾನ್ ಶಕ್ತಿ ಎಂದು ಪ್ರೊ ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗರವರು ಹೇಳಿದರು. ಶಿವಮೊಗ್ಗ ಬಿ ಹೆಚ್ಏ ರಸ್ತೆಯಲ್ಲಿರುವ ಡಿ.ಎಸ್. ಎಸ್ ಕೇಂದ್ರ ಕಾರ್ಯಾಲಯದಲ್ಲಿ ನಡೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 135 ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸಿ ಮಾತನಾಡಿದರು.

ಅವರು ಮುಂದುವರೆದು ಮಾತನಾಡುತ್ತಾ ಡಾ ಬಿ ಆರ್ ಅಂಬೇಡ್ಕರ್ ರವರು ಅಕ್ಷರವನ್ನೇ ಆಯುಧವನ್ನಾಗಿ ಮಾಡಿಕೊಂಡು ಅಸಮಾನತೆಯ ಕತ್ತಲೆಯನ್ನು ಸರಿಸಿದ ಹಾದಿ ಕೇವಲ ಒಂದು ಇತಿಹಾಸವಲ್ಲ. ಅದು ನಮ್ಮೆಲ್ಲರಿಗೂ ಎಂದೆಂದಿಗೂ ದಾರಿದೀಪವಾಗಿದೆ ಎಂದು ಎಂ. ಗುರುಮೂರ್ತಿ ಶಿವಮೊಗ್ಗ ರವರು ಹೇಳಿದರು.

ಕಾರ್ಯಕ್ರಮದಲ್ಲಿ ಡಿ ಎಸ್ ಎಸ್ ಜಿಲ್ಲಾ ಸಂಚಾಲಕರಾದ ಎಂ ಏಳುಕೋಟಿ, ಪ್ರಗತಿಪರ ಚಿಂತಕರಾದ ಪ್ರೊ. ಚಂದ್ರಪ್ಪ ಜೋಗಿ, ಡಿ ಎಸ್ ಎಸ್ ಮಾಜಿ ಜಿಲ್ಲಾ ಸಂಚಾಲಕರಾದ ಎ ಅರ್ಜುನ್, ಶಿವಮೊಗ್ಗ ಉಪ ವಿಭಾಗದ ಅಟ್ರಾಸಿಟಿ ಕಮಿಟಿ ಸದಸ್ಯರಾದ ಯಡವಾಲ ಹನುಮಂತಪ್ಪ, ಶಿವಮೊಗ್ಗ ಡಿ ಎಸ್ ಎಸ್ ತಾಲೂಕ್ ಸಂಚಾಲಕರಾದ ಎಂ ರಮೇಶ್ ಚಿಕ್ಕ ಮರಡಿ, ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಸಂಚಾಲಕರಾದ ಮನ್ಸೂರ್ ಲಕ್ಕವಳ್ಳಿ, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಸೂರ್ಯ,ಮುಖಂಡರುಗಳಾದ ಗಾಜನೂರು ಹರೀಶ್, ಪುರ್ಲೆ ಸಂತೋಷ್,ಮೈದೊಳಲು ಜಯಣ್ಣ, ಬೆಳಲಕಟ್ಟೆ ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು.

ತಮ್ಮ ವಿಶ್ವಾಸಿ
ಸ್ಥಳ: ಶಿವಮೊಗ್ಗ
(ರಮೇಶ್ ಚಿಕ್ಕಮರಡಿ)
ತಾಲೂಕ್ ಸಂಚಾಲಕರು
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...