Tuesday, August 25, 2026
Tuesday, August 25, 2026

ಶಿಕ್ಷಣ ಸಂಸ್ಥೆ ಮತ್ತು ಕೈಗಾರಿಕೆ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ನಾವೀನ್ಯತೆ ಹೆಚ್ಚು, ಫಲಪ್ರದವಾಗಲು ಸಾಧ್ಯ : ಡಾ.ಮೈಲಸ್ವಾಮಿ ಅಣ್ಣಾದೊರೈ

Date:

ಬೆಂಗಳೂರು ಪ್ರತಿನಿಧಿಯಿಂದ

ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳು ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ನಾವೀನ್ಯತೆ ಹೆಚ್ಚು, ಫಲಪ್ರದವಾಗಲು ಸಾಧ್ಯ. ಆ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಾಧ್ಯ ಎಂದು ಇಸ್ರೋ ಮಾಜಿ ನಿರ್ದೇಶಕ ಡಾ.ಮೈಲಸ್ವಾಮಿ ಅಣ್ಣಾದೊರೈ ಹೇಳಿದರು.

ಬೆಂಗಳೂರು ಜೈವಿಕ ನಾವೀನ್ಯತಾ ಕೇಂದ್ರ. ಕೆ-ಟೆಕ್‌ ಸಹಯೋಗದೊಂದಿಗೆ ಕನೆಕ್ಟ್‌- ಕೌಶಲ್ಯದ ಅಭಿವೃದ್ಧಿ ಜತೆಗೆ ಆವೀಷ್ಕಾರ ಮತ್ತು ಸ್ವಯಂ ಉದ್ಯಮ ಉತ್ತೇಜಿಸುವ ಕುರಿತು ಆಯೋಜಿಸಿದ್ದ ಬಿಬಿಸಿ 2.0 ಕ್ಯಾಟಲಿಸ್ಟ್‌ ಕನೆಕ್ಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ಸೌಲಭ್ಯಗಳು ಲಭ್ಯವಿದ್ದರೂ, ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ ಸುಧಾರಿತ ತಂತ್ರಜ್ಞಾನ ಮತ್ತು ನವೀನ ಪರಿಹಾರಗಳನ್ನು ನಿರೀಕ್ಷಿಸುತ್ತಿವೆ.

ಇಂಧನ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಇಲ್ಲಿ ಜವಾಬ್ದಾರಿಯುತವಾಗಿ ಪಾತ್ರವಹಿಸಿದ್ದೇ ಆದಲ್ಲಿ, ಸಾಕಷ್ಟು ಸಮಸ್ಯೆಗಳನ್ನು ಅವಕಾಶಗಳಾಗಿ ಮಾರ್ಪಾಡು ಮಾಡಿಕೊಳ್ಳಬಹುದು.

ಬೆಂಗಳೂರು ವಿಶೇಷವಾಗಿ ಐಟಿ ಮತ್ತು ಬಿಟಿ ಕ್ಷೇತ್ರಗಳ ಮೂಲಕ, ಜಾಗತಿಕವಾಗಿ ಹೆಸರು ಮಾಡಲು ಮತ್ತು ನಾವೀನತೆ ಆಧಾರಿತ ಅಭಿವೃದ್ಧಿಯ ಕೇಂದ್ರವಾಗಲು ಸಾಮರ್ಥ್ಯ ಹೊಂದಿದೆ. ಭಾರತವು ಮುಖ್ಯವಾಗಿ ಕೃಷಿ ದೇಶವಾಗಿದ್ದು, ಜಾಗತಿಕವಾಗಿ ಬಾಳೆ ಬೆಳೆಗಾರಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ.

ಬಾಳೆ ಹಣ್ಣು ಕಟಾವು ನಂತರ ಉಳಿಯುವ ತೊಗಟೆಯನ್ನು ಸಾಮಾನ್ಯವಾಗಿ ತ್ಯಜಿಸಲಾಗುತ್ತದೆ, ಇದು ರೈತರಿಗೆ ತ್ಯಾಜ್ಯ ನಿರ್ವಹಣಾ ಸವಾಲುಗಳನ್ನು ಉಂಟುಮಾಡುತ್ತದೆ. ಸಂಶೋಧನೆ ಆಧಾರಿತ ಪರಿಹಾರಗಳನ್ನು ಅನ್ವಯಿಸುವ ಮೂಲಕ, ಬಾಳೆ ತೊಗಟೆಯ ಘನ ತ್ಯಾಜ್ಯವನ್ನು ಮರುಪ್ರಕ್ರಿಯೆಗೊಳಿಸಿ ಮರುಬಳಕೆ ಮಾಡಬಹುದು, ಇದರಿಂದ ತ್ಯಾಜ್ಯ ಬದಲು ಮೌಲ್ಯ ಸೃಷ್ಟಿಯಾಗುತ್ತದೆ ಎಂದರು.

ಚಂದ್ರನ ಅನ್ವೇಷಣೆಗೆ ಸುಮಾರು 100 ಮಿಷನ್‌ಗಳು ಪ್ರಯತ್ನಿಸಿದರೂ, ಚಂದ್ರಯಾನವು ಚಂದ್ರನನ್ನು ವಿಶಿಷ್ಟ ಮತ್ತು ಸಮಗ್ರವಾಗಿ ವಿಶ್ಲೇಷಿಸಿದ ಮೊದಲ ಮಿಷನ್ ಆಗಿ ಜಾಗತಿಕ ಮಾನ್ಯತೆ ಪಡೆದಿತು. ಚಂದ್ರನು ಎಲ್ಲರಿಗೂ ಒಂದೇ. ವ್ಯತ್ಯಾಸವು ದೃಷ್ಟಿಕೋನದಲ್ಲಿ ಇದೆ. ಭಾರತವು ಜಾಗತಿಕ ನವೀನತೆ ಪರಿಸರ ವ್ಯವಸ್ಥೆಯ ಶೃಂಗಕ್ಕೆ ಸಾಗುತ್ತಿದೆ. ಸರಿಯಾದ ಪ್ರತಿಭೆ, ತಂತ್ರಜ್ಞಾನ ಮತ್ತು ಸಹಕಾರದ ಸಂಯೋಜನೆಯೊಂದಿಗೆ, ಭಾರತವು ಪರಿವರ್ತನಾ ಮಿಷನ್‌ಗಳನ್ನು ನೀಡುವ ಸಾಮರ್ಥವನ್ನು ಹೊಂದಿದೆ ಎಂದರು.

ರಾಜ್ಯ ಸರಕಾರದ ಐಟಿ-ಬಿಟಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್‌ ಶರಣಪ್ಪ ಸಂಕನೂರು ಮಾತನಾಡಿ*, ನಾಬಾರ್ಡ್ ನ ಸಹಕಾರದೊಂದಿಗೆ ಕೃಷಿಯಲ್ಲಿ ನವೀನತೆಯ ಆಧಾರಿತ ಪರಿಹಾರಗಳನ್ನು ಉತ್ತೇಜಿಸುವಲ್ಲಿ ಮಹತ್ವದ ಮತ್ತು ಪರಿಣಾಮಕಾರಿ ಪಾತ್ರ ವಹಿಸುತ್ತಿದೆ. ಪೋಷಣೆಯ ಮೇಲೆ, ಮೌಲ್ಯವರ್ಧನೆ ಮತ್ತು ಶಾಶ್ವತ ಆಹಾರ ವ್ಯವಸ್ಥೆಗಳ ಮೇಲೆ ಕೇಂದ್ರೀಕರಿಸುವುದು ಕರ್ನಾಟಕದ ದೀರ್ಘಕಾಲೀನ ಅಭಿವೃದ್ಧಿಗೆ ಅತ್ಯಂತ ಅಗತ್ಯವೆಂದರು.

ಬಿಬಿಸಿ 2.0 ಇದು ಯಶಸ್ಸನ್ನು ತೋರಿಸಿದ್ದು ಮಾತ್ರವಲ್ಲದೆ, ಹೆಚ್ಚಿನ ಹಿತಾಸಕ್ತಿದಾರರನ್ನು ತಲುಪಲು ಮತ್ತು ಗರಿಷ್ಠ ಬೆಂಬಲವನ್ನು ಆಕರ್ಷಿಸಲು ಬಲವಾದ ಸಾಮರ್ಥ್ಯವನ್ನು ಹೊಂದಿದೆ. ಶೈಕ್ಷಣಿಕ, ಸರ್ಕಾರ ಮತ್ತು ಕೈಗಾರಿಕೆಗಳ ನಿರಂತರ ಸಹಕಾರದೊಂದಿಗೆ ಬಿಬಿಸಿ 2.0 ರಾಜ್ಯದಲ್ಲಿ ಶಾಶ್ವತ ನವೀನತೆಯ ಮಾದರಿ ವೇದಿಕೆಯಾಗಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬಿಬಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಮೊಹಮದ್‌ ಅದಿಲ್‌, ಕಾವೇರಿ ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ಡಾ.ವಿಜಯ ಬಾಸ್ಕರನ್‌ ಸುಂದರರಾಜು, ಐಐಎಸ್ಸಿ ಮೆಡಿಕಲ್ ಪೌಂಡೇಶನ್ ನಿರ್ದೇಶಕರಾದ ಡಾ. ಉಮಾ ನಂಬಿಯಾರ್ ಇತರರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...