Sunday, August 2, 2026
Sunday, August 2, 2026

Astronomy ಮಕ್ಕಳಲ್ಲಿ ಖಗೋಲದ ಬಗ್ಗೆ ಆಸಕ್ತಿ ಮೂಡಿಸಲು ಆಕಾಶ ವೀಕ್ಷಣೆಗೆ ಪ್ರೋತ್ಸಾಹ- ಡಾ.ಪರಮೇಶ್ವರ ಶಿಗ್ಗಾವ್

Date:

Astronomy ಆಕಾಶದಲ್ಲಿ ವೈವಿಧ್ಯ ಸಂಗತಿಗಳ ಅಧ್ಯಯನ ನಡೆಸುವುದು ವಿಶೇಷ ಹವ್ಯಾಸ ಎಂದು ಐಎಂಎ ತಾರಾವೀಕ್ಷಕರ ಸಂಘದ ಅಧ್ಯಕ್ಷ, ಹವ್ಯಾಸಿ ಖಗೋಳ ಛಾಯಾಗ್ರಹಕ ಡಾ. ಪರಮೇಶ್ವರ್ ಶಿಗ್ಗಾವ್ ಹೇಳಿದರು.

ರಾಜೇಂದ್ರ ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ಮತ್ತು ಇತರ ಶಾಲಾ ಮಕ್ಕಳಿಗೆ ಆಕಾಶ ವೀಕ್ಷಣೆ, ವಿವಿಧ ಗ್ರಹಗಳು, ಚಂದ್ರನ ಬಗ್ಗೆ ಮಾಹಿತಿ ನೀಡುತ್ತೇವೆ. ಟೆಲಿಸ್ಕೋಪ್ ಮೂಲಕ ಆಕಾಶ ಕಾಯಗಳನ್ನು ತೋರಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಮಕ್ಕಳಲ್ಲಿ ಖಗೋಳಶಾಸ್ತ್ರದ ಬಗ್ಗೆ, ನಕ್ಷತ್ರ, ನಕ್ಷತ್ರ ಪುಂಜ, ಗ್ರಹಗಳು, ಸೂರ್ಯ ಚಂದ್ರರ ಬಗ್ಗೆ ಮಾಹಿತಿ ಹೆಚ್ಚಾಗಿ ಕುತೂಹಲವು ಮೂಡಲು ಸಹಾಯಕ ಆಗುತ್ತದೆ. ವಿದ್ಯಾರ್ಥಿಗಳು ಖಗೋಳಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆಯಬಹುದು ಎಂದರು.

Astronomy ನಕ್ಷತ್ರ ವೀಕ್ಷಣೆ ಮತ್ತು ಚಂದ್ರನ ಕುಳಿಗಳು, ವಿವಿಧ ಗ್ರಹಗಳನ್ನು ದೂರದರ್ಶಕ ಯಂತ್ರದ ಮೂಲಕ ವೀಕ್ಷಣೆ ಮಾಡಲಾಯಿತು. ರೋಟರಿ ಪೂರ್ವದ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ ಮಾಹಿತಿ ನೀಡಿದರು.

ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಕಿಶೋರಕುಮಾರ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿ ಧನಂಜಯ್ ವಂದಿಸಿದರು. ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಜಿ.ವಿಜಯಕುಮಾರ್, ಅರುಣ್ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...