Shimoga News ವಿಕಾಸ ರಂಗದ ಸಂಸ್ಥಾಪಕರಾದ ದಿ. ಕೆ.ಸಿ.ಪ್ರಭಾಕರ್ ರವರ ಸ್ಮರಣಾರ್ಥ ಜನವರಿ 3ರ ಶನಿವಾರ ಸಂಜೆ 5.30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಹಿರಿಯ ಸಾದಕರಿಗೆ ಗೌರವಿಸುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ.
ಸಮಾಜವಾದ ಸಂತ ನಿಷ್ಟಾವಂತ ರಾಜಕಾರಿಣಿ, ಹೊಸನಗರದ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಬಿ.ಸ್ವಾಮಿರಾವ್, ಕುವೆಂಪು ರವರ ನೆಚ್ಚಿನ ಶಿಷ್ಯ, ಕಮಲಾ ನೆಹರೂ ಕಾಲೇಜಿನ ಮಾಜಿ ಪ್ರಾಚಾರ್ಯರು ಪ್ರೋ. ಎಸ್.ಪಂಚಾಕ್ಷರಿ, ಬಡವರ-ರೈತರ ಬಂಧು ಡಾ.ಚಿಕ್ಕಸ್ವಾಮಿ, ಪ್ರಖ್ಯಾತ ಹಿರಿಯ ನ್ಯಾಯವಾದಿ ಶ್ರೀ ಬಿ.ಎನ್.ಕೃಷ್ಣಮೂರ್ತಿ ಹೀಗೆ ವಿವಿದ ಕಾಯಕ ಜೀವಿಗಳ ಸೇವೆಯನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಶ್ರೀಮತಿ ಹೆಚ್.ವಿಶಾಲಾಕ್ಷಿಯವರ ಅಧ್ಯಕ್ಷತೆಯಲ್ಲಿ ಜರುಗಲಿದೆ.
Shimoga News ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೋ.ಹೆಚ್.ಆರ್.ಶಂಕರನಾರಾಯಣ ಶಾಸ್ರ್ತಿ ಯವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಖ್ಯಾತ ಅಂಕಣ ಬರಹಗಾರರಾದ ಶ್ರೀ ಸುಂದರ್ ರಾಜ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
