Shimog News ತಾ.17-5-25 ರ ಶನಿವಾರ ಸಂಜೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜರುಗಿದ ಶ್ರೀ ಹಿರಿಯೂರು ಕೃಷ್ಣಮೂರ್ತಿರವರ “ಕೃಷ್ಣ ಸ್ಮೃತಿ” ಎಂಬ ಸಂಸ್ಮರಣಾ ಕೃತಿಯ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು.
HK ಯಾವರು,ಮೇಷ್ಟ್ರು, ಎಂದೇ ಖ್ಯಾತರಾಗಿದ್ದದ ಶ್ರೀ ಹಿರಿಯೂರು ಕೃಷ್ಣಮೂರ್ತಿ ಅವರದು ವಿಬಿನ್ನವಾದ ವ್ಯಕ್ತಿತ್ವ ಅಂತಹ ಅಪರೂಪದ ಸಂಘಟಕರ ನೆನಪುಗಳನ್ನು ಚಿರವಾಗಿಸಲು, ಅವರ ಜೀವನದ ಸಾರ್ಥಕತೆಯ ನೆನಪಿಗಾಗಿ ಅವರೊಂದಿಗೆ ಒಡನಾಟವಿದ್ದ ಅನೇಕರು ಬರೆದಿರುವ ಲೇಖನಗಳನ್ನು ಒಳಗೊಂಡ ಕೃತಿ “ಕೃಷ್ಣಸ್ಮೃತಿ”
ಸಂಸ್ಮರಣಾ ಕೃತಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು ಬಿಡುಗಡೆಗೊಳಿಸಿ, ಹಿರಿಯೂರು ಕೃಷ್ಣಮೂರ್ತಿರವರ ಕಾರ್ಯಶೈಲಿ ಮತ್ತು ವ್ಯಕ್ತಿತ್ವವನ್ನು ಸ್ಮರಿಸಿದರು.
Shimog News ಕಾರ್ಯಕ್ರಮದಲ್ಲಿ ಶ್ರೀಮತಿ ಉಮಾ ಹಿರಿಯೂರು ಕೃಷ್ಣಮೂರ್ತಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಚಾರಕರಾದ ಶ್ರೀ ಸು. ರಾಮಣ್ಣ, ಜೇಷ್ಠ ಕಾರ್ಯಕರ್ತರಾದ ಭ.ಮ ಶ್ರೀಕಂಠ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ, ಮಾಜಿ ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಡಿ.ಎಚ್ ಶಂಕರಮೂರ್ತಿ, ಕೇಂದ್ರೀಯ ವಿಶ್ವವಿದ್ಯಾಲಯ ಒರಿಸ್ಸಾದ ಕುಲಪತಿಗಳಾದ ಶ್ರೀ ಪಿ.ವಿ ಕೃಷ್ಣ ಭಟ್, ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ ಕೆಎಸ್ ಈಶ್ವರಪ್ಪ, ಪ್ರಾಂತ್ಯ ಸಹ ಕಾರ್ಯವಾಹರಾದ ಶ್ರೀ ಪಟ್ಟಾಭಿರಾಂ ರವರು ಮಾತನಾಡಿ ಹಿರಿಯೂರು ಕೃಷ್ಣಮೂರ್ತಿಯವರ ಕಾರ್ಯವೈಕರಿ ಮತ್ತು ಸಂಘಟನಾ ಚತುರತೆ ಬಗ್ಗೆ ಮಾತನಾಡಿ ಅವರ ಈ ಗುಣ ಸ್ವಭಾವಗಳನ್ನು ಮುಂದಿನ ಪೀಳಿಗೆಯು ಕೂಡ ಅನುಸರಿಸುವಂತೆ ಸಭಿಕರಲ್ಲಿ
. ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು, ಸಾಹಿತಿಗಳು, ವಿದ್ವಾಂಸರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು
ವರದಿ ಸೌಜನ್ಯ: ಎಸ್.ದತ್ತಾತ್ರಿ
ರಾಜ್ಯ ಬಿಜೆಪಿ ವಿವಿಧ ಪ್ರಕೋಷ್ಟಗಳ ಅಧ್ಯಕ್ಷರು