Dr. Babasaheb Ambedkar ಶೋಷಣೆಯ ವಿರುದ್ಧ ಹೋರಾಡಿದ ಮಹಾನ್ ಕ್ರಾಂತಿಕಾರಿ ವಿಶ್ವರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ ರವರು ಹೇಳಿದರು.
ದಿನಾಂಕ 27-04-2025 ರಂದು ಶಿವಮೊಗ್ಗ ತಾಲೂಕ್ ರಾಮನಗರದ ಡಾ ಬಿ ಆರ್ ಅಂಬೇಡ್ಕರ್ ಹವ್ಯಾಸಿ ಯುವಕರ ಸಂಘದ ವತಿಯಿಂದ ನಡೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಬಾಬಾ ಸಾಹೇಬರ ತತ್ವ ಸಿದ್ಧಾಂತ ಮತ್ತು ವಿಚಾರ ಧಾರೆಗಳು ಇಂದು ಅತ್ಯಂತ ಪ್ರಸ್ತುತವಾಗಿದ್ದು ದೇಶಕ್ಕೆ ಈಗ ಅನಿವಾರ್ಯವೂ ಆಗಿದೆ.ಕಡ್ಡಾಯ ಮತ್ತು ಉಚಿತ ಶಿಕ್ಷಣ ಎಲ್ಲರಿಗೂ ಮೊದಲು ದೊರೆಯುವಂತಾಗಬೇಕು. ಪ್ರತಿಯೊಬ್ಬರಿಗೂ ಓದುವ ಅವಕಾಶ ಸಿಗಬೇಕು. ಶಿಕ್ಷಣದಿಂದಲೇ ಸ್ವಾಭಿಮಾನದ ಬದುಕು ಸಾಧ್ಯ. ಹಾಗಾದಾಗಲೇ ಜಾತಿ ವಿನಾಶ ಸಾಧ್ಯಎಂದು ಅಂಬೇಡ್ಕರ್ ಹೇಳಿದ್ದರು ಎಂದು ಗುರುಮೂರ್ತಿ ಯವರು ಹೇಳಿದರಲ್ಲದೆ ಸಂವಿಧಾನದ ಆಶೂತ್ತರಗಳನ್ನು ಎತ್ತಿ ಹಿಡಿದು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಗುರುಮೂರ್ತಿಯವರು ಹೇಳಿದರು.
ವೇದಿಕೆಯಲ್ಲಿ ಗ್ರಾಮದ ಮುಖಂಡರಾದ ಬಸವರಾಜಪ್ಪ, ನಿವೃತ್ತ ಶಿಕ್ಷಕರಾದ ಕೃಷ್ಣಪ್ಪ, ವೀರಶೈವ ಸಮಾಜದ ಮುಖಂಡರಾದ ಮಲ್ಲೇಶಪ್ಪ, ಡಿ ಏಸ್ ಏಸ್ ಜಿಲ್ಲಾ ಸಂಚಾಲಕರಾದ ಎಂ ಏಳುಕೋಟಿ, ಶಿಕ್ಷಕರಾದ ನೀಲಪ್ಪ, ಕುಪ್ಪಸ್ವಾಮಿ, ರಿಜ್ವಾನ್, ಗ್ರಾಮಪಂಚಾಯಿತಿ ಸದಸ್ಯರಾದ ಸೌಮ್ಯ, ಸಾಕಮ್ಮ ನೀಲಪ್ಪ, ಹರಿಗೆ ರವಿ, ಹನುಮಂತಪ್ಪ, ಮಣಿ ಮೊದಲಾದವರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷೆಗಾಕರಾದ ಶಿವಲಿಂಗಪ್ಪ ನವರು ವಹಿಸಿದ್ದರು.
Dr.Babasaheb Ambedkar ಬಾಬಾ ಸಾಹೇಬರ ತತ್ವ ಸಿದ್ದಾಂತಗಳು ಇಂದು ಅತ್ಯಂತ ಪ್ರಸ್ತುತ- ಎಂ.ಗುರುಮೂರ್ತಿ
Date: