Kuvempu University ಶಿವಮೊಗ್ಗದ ಕೇಂದ್ರ ಸಂವಹನ ಇಲಾಖೆ ವತಿಯಿಂದ ಇಂದು ಜಿಲ್ಲೆಯ ಸಿದ್ಲಿಪುರದಲ್ಲಿ ವಿಶ್ವ ಪರಿಸರ
ದಿನ ಹಾಗೂ ಮಿಷನ್ ಲೈಫ್ ಅಭಿಯಾನದ ಅಂಗವಾಗಿ ಕೆರೆಯಂಗಳದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಆಯೋಜಿಸಲಾಯಿತು.
ಕುವೆಂಪು ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಘಟಕದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ
ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಹಾಗೂ ಕಳೆ ಗಿಡಗಳನ್ನು
ಕೀಳುವ ಮೂಲಕ ಕೆರೆಯ ಆವರಣವನ್ನು ಸ್ವಚ್ಛಗೊಳಿಸಿದರು.
ಜಾಗೃತಿ ಜಾಥಾ ಹಾಗೂ ಮಾನವ
ಸರಪಳಿ ರೂಪಿಸುವ ಮೂಲಕ ಪರಿಸರ ಜಾಗೃತಿ ಸಂದೇಶಗಳನ್ನು ಗ್ರಾಮೀಣ ಜನತೆಗೆ ತಿಳಿಸುವ
ಪ್ರಯತ್ನವನ್ನು ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಪರಿಸರ ದಿನದ ಪ್ರತಿಜ್ಞಾ ವಿಧಿ
ಬೋಧಿಸಲಾಯಿತು.
Kuvempu University ಸಿದ್ಲಿಪುರ ಗ್ರಾಮದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನೂ
ನಡೆಸಿಕೊಡಲಾಯಿತು.
ಪರಿಸರ ತಜ್ಷ ಹಾಗೂ ಕುವೆಂಪು ವಿವಿಯ ಎನ್.ಎಸ್.ಎಸ್ ಘಟಕದ ಸಂಯೋಜಕರಾದ ಡಾ.
ನಾಗರಾಜು ಪರಿಸರ ಹಾಗೂ ಕ್ಷೇತ್ರ ಪ್ರಚಾರ ಅಧಿಕಾರಿ ಶ್ರೀಮತಿ. ಅಕ್ಷತಾ ಸಿ.ಹೆಚ್ ಸೇರಿದಂತೆ
ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗಾಗಿ ‘ಪರಿಸರಕ್ಕಾಗಿ ಜೀವನಶೈಲಿ’ ವಿಷಯದ ಕುರಿತು ಪ್ರಬಂಧ ಹಾಗೂ ಭಾಷಣ
ಸ್ಪರ್ಧೆ ಏರ್ಪಡಿಸಲಾಯಿತು.

