Saturday, June 21, 2025
Saturday, June 21, 2025

ಜಿಲ್ಲೆಯ ಕೆಲವು ಹಾಸ್ಟೆಲ್ ಗಳಲ್ಲಿ ಅವ್ಯವಹಾರ ನಡೆದ ಬಗ್ಗೆ ದಲಿತ ಸಂಘರ್ಷ ಸಮಿತಿಯಿಂದ ದೂರು ಸಲ್ಲಿಕೆ

Date:

2021-22ನೇ ಸಾಲಿನಿಂದ ಪ್ರಸ್ತುತ ದಿನದವರೆಗೂ ಜಿ.ಇ.ಎಂ. (ಜೆಮ್) ಎಂಬ ಕಂಪನಿಯು ಕರ್ನಾಟಕ ಪಾರದರ್ಶಕ ಅಧಿನಿಯಮದ ನಿಯಮಗಳನ್ನು ಉಲ್ಲಂಘಿಸಿ ಬಾರೀ ಅವ್ಯವಹಾರದಲ್ಲಿ ತೊಡಗಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯಾತಾ ಚಾಲನಾ ಸಮಿತಿಯು ಜಿಲ್ಲಾ ಪಂಚಾಯಿತಿಗೆ ಮನವಿ ನೀಡಿ ದೂರು ಸಲ್ಲಿಸಿದೆ.

ಈ ಸಂಬಂಧ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಫ್ರಭು ಅವರಿಗೆ ಮನವಿ ಸಲ್ಲಿಸಿದ ಚಾಲನಾ ಸಮಿತಿ ಸದಸ್ಯರು ಕಂಪನಿಯು ತಿಂಗಳ ನಿಗಧಿತ ಖರ್ಚಿಗಿಂತ ಹೆಚ್ಚು ಹಣ ವ್ಯಯಿಸಿ ಜಿಲ್ಲೆಯಲ್ಲಿ ಭಾರೀ ಅವ್ಯವಹಾರ ನಡೆಸಿ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ಚಾಲನಾ ಸಮಿತಿ ಸದಸ್ಯ ದಂಟರಮಕ್ಕಿ ಶ್ರೀನಿವಾಸ್ ಸರ್ಕಾರದ ಅಧೀನದ ಲ್ಲಿರುವ ಜಿ.ಇ.ಎಂ. (ಜೆಮ್) ಎಂಬ ಕಂಪನಿಯು ಜಿಲ್ಲೆಯಲ್ಲಿರುವ ಹಾಸ್ಟೆಲ್‌ನ ಮೂಲಭೂತ ವಸ್ತುಗಳ ಒಂದು ತಿಂಗಳ ನಿಯಮಿತ ಖರೀದಿಗಿಂತಲೂ ಐದು ಪಟ್ಟು ಹೆಚ್ಚು ಹಣ ವ್ಯಯಿಸಿ ಭಾರೀ ಅವ್ಯವಹಾರದಲ್ಲಿ ತೊಡಗಿ ಪಾರದರ್ಶಕ ಅಧಿನಿಯಮವನ್ನು ಉಲ್ಲಂಘಿಸಿದೆ ಎಂದು ದೂರಿದರು.

ಜಿಇಎಂ (ಜೆಮ್) ಕಂಪನಿಯು ಮಾರುಕಟ್ಟೆ ದರ ಹಾಗೂ ಅದರ ಗುಣಮಟ್ಟದ ಬ್ರಾಂಡ್ ಕಾರ್ಯ ಕ್ಷಮತೆಗಳನ್ನು ಪರಿಶೀಲಿಸಿ ಆಯ್ಕೆ ಮಾಡಬೇಕಾಗಿದೆ. ಮಾಹೆಯಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಸರಕು ಸೇವೆಗಳನ್ನು ಪಡೆಯಬೇಕಿದೆ. ಆದರೆ ಕಂಪನಿಯು ಸೋಲಾರ್ ವಾಟರ್ ಹೀಟರ್ ವಿಚಾರವಾಗಿ ಮಾಹೆಯ ಒಂದೇ ದಿನದಲ್ಲಿ 36 ಲಕ್ಷ ಸರಕನ್ನು ಆಯ್ಕೆ ಮಾಡಿ ಅಧಿನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ ಎಂದರು.

ಕಂಪನಿಯಿಂದ ಪೂರೈಕೆಯಾದ ಸರಕುಗಳಲ್ಲಿಯೂ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಸರಕುಗಳನ್ನು ಖರೀದಿಸಲಾಗಿರುತ್ತದೆ. ಉಪನಿರ್ದೇಶಕರ ವೈಯಕ್ತಿಕ ಲಾಭಕ್ಕಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ಅನುದಾನವನ್ನು ಕೂಡಾ ಜೆಮ್‌ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.

2021-22ನೇ ಸಾಲಿನ ಕೆಟಿಪಿಪಿ ನಿಯಮಗಳನ್ನು ಗಾಳಿಗೆ ತೂರಿ ಒಂದೇ ಸರಕುಗಳನ್ನು ಹಲವು ಬಾರಿ ಖರೀದಿಸಲು ತಾಲ್ಲೂಕು ಹಂತದ ಅಧಿಕಾರಿಗಳಿಗೆ ಸೂಚಿಸಿ ಮೇಲು ರುಜುಗೊಳಿಸಿರುವುದು ಕಂಡು ಬಂದಿರುತ್ತದೆ ಎಂದರು.

ಜಿಲ್ಲಾ ವೃತ್ತಿಪರ ಹಾಸ್ಟೆಲ್‌ನಲ್ಲಿ 180ಕ್ಕೂ ಹೆಚ್ಚು ಅಕ್ಕಿಮೂಟೆಗಳನ್ನು ದಾಸ್ತಾನು ಮಾಡಿದ್ದರೂ ಸಹ ಪುನಃ ಅಕ್ಕಿಗೆ ಇಂಡೆಂಟ್ ಹಾಕಿದ್ದಾರೆ. ನಂತರ ವಿಷಯ ಹೊರಬಂದಾಕ್ಷಣ ಕೂಡಲೇ ಅಕ್ಕಿ ಮೂಟೆ ಯನ್ನು ಹಾಸ್ಟೆನ್‌ನಿಂದ ಕಣ್ಮರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ವಾರ್ಡನ್ ಹಾಗೂ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.

ಕೂಡಲೇ ಇಷ್ಟೆಲ್ಲಾ ಅವ್ಯವಹಾರದಲ್ಲಿ ತೊಡಗಿರುವ ಅಧಿಕಾರಿಗಳು ಹಾಗೂ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿರುವವರ ವಿರುದ್ಧ ನ್ಯಾಯಯುತ ತನಿಖೆ ನಡೆಸಿ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಮರ್ಲೆ ಅಣ್ಣಯ್ಯ, ಬಾಲಕೃಷ್ಣ ಬಿಳೇಕಲ್ಲು, ಸುಜೇಂದ್ರ, ಸಂತೋಷ್ ಮತ್ತಿತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಕ್ಕಳಿಗೆ ಜಾನಪದದ ಅರಿವು ಮೂಡಿಸುವುದು ಅವಶ್ಯ: ಕವಿತಾ ಸುಧೀಂದ್ರ

ಮಕ್ಕಳಲ್ಲಿ ಬಾಲ್ಯದಿಂದಲೇ ಜಾನಪದ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು...

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...