Sunday, June 21, 2026
Sunday, June 21, 2026

ಏಕದಿನ ಕ್ರಿಕೆಟ್ ಶ್ರೀಲಂಕಾ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು

Date:

ಭಾರತ ಮತ್ತು ಶ್ರೀಲಂಕಾ ನಡುವಣ ಮೊದಲ ಏಕದಿನ ಕ್ರಿಕೆಟ್ ಪಂದ್ಯ ಚೇತೋ ಹಾರಿಯಾಗಿತ್ತು. ಟಾಸ್ಕ್ ಗೆದ್ದ ಭಾರತ ನಿಗದಿತ 50 ಓವರ್ ಗಳಲ್ಲಿ 373 ರನ್ ಕಲೆ ಹಾಕಿತು.

ಇದರಲ್ಲಿ ಕೊಹ್ಲಿ ಬಾರಿಸಿದ 113 ರನ್ ಗಳು ಉತ್ತಮ ಕೊಡುಗೆಯಾಗಿತ್ತು. 87 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 12 ಬೌಂಡರಿಗಳಿದ್ದವು.

ಅವರು ಗಳಿಸಿದ ಶತಕಗಳಲ್ಲಿ ಇದು 45 ನೇಯದ್ದಾಗಿದೆ. ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ 49 ಶತಕ ದಾಖಲಾಗಿವೆ. ಅಂದರೆ ಇನ್ನು ನಾಲ್ಕು ಶತಕಗಳನ್ನು ಮುಂಬರುವ ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಅವರು ಗಳಿಸಿದರೆ, ಸರಿಸಾಟಿಯಾಗಬಹುದು.

ಭಾರತದ ಆರಂಭ ಉತ್ತಮ ಹಾಗೂ ಜಬರ್ದಸ್ತ್ ಆಗಿತ್ತು. ಇದರಲ್ಲಿರೋಹಿತ್ ಶರ್ಮಾ 83, ಗಿಲ್ 70, ಹೆಚ್ಚಿನ ಕೊಡುಗೆ ನೀಡಿದರು.

ಶ್ರೀಲಂಕಾ ತಂಡದ ಕಸುನ್ ರಜಿತ 3 ವಿಕೆಟ್ ಪಡೆದರೆ ಇನ್ನುಳಿದವರು ತಲ ಒಂದೊಂದು ವಿಕೆಟ್ ಪಡೆದರು. ಭಾರತ ತಂಡದ ಏಳು ವಿಕೆಟ್ ಕೀಳಲು ಲಂಕನ್ನರು ಸಫಲರಾದರು.

ಹಾಗೂ ಆಟ ಆರಂಭಿಸಿದ ಶ್ರೀಲಂಕಾ ಮೊದಲನೇ 19 ರನ್ ಗೆ ಪ್ರಥಮ ವಿಕೆಟ್ ಕಳೆದುಕೊಂಡಿತು. ಫರ್ನಾಂಡೊ ಅವರು ಉಮ್ರಾನ್ ಗೆ ತಮ್ಮ ವಿಕೆಟ್ ಒಪ್ಪಿಸಿದರು.

ಶ್ರೀಲಂಕಾ ಅತ್ಯಂತ ಪ್ರತಿರೋಧ ಒಡ್ಡಿ ಬ್ಯಾಟಿಂಗ್ ಆರಂಭಿಸಿತು. ಆದರೆ ಭಾರತದ ಬೌಲಿಂಗ್ ಆರಂಭದಲ್ಲಿ ಮೊನಚಾಗಿತ್ತು. 3 ವಿಕೆಟ್ ತಪ ತಪನೆ ಬಿದ್ದಿತು.ಆದರೆ ಮಧ್ಯಮ ಕ್ರಮಾಂಕ ಹಾಗೂ ಬಾಲಂ ಗೋಚಿಗಳು ಕಚ್ಚಿಕೊಂಡು ಬ್ಯಾಟ್ ಮಾಡಿದರು. ಅತ್ಯಂತ ಆಕರ್ಷಕವೆಂದರೆ ಶ್ರೀಲಂಕಾ ಕ್ಯಾಪ್ಟನ್ ಶನಕ ಅವರ ಬ್ಯಾಟಿಂಗ್ ವೈಖರಿ. 8 ನೇ ವಿಕೆಟ್ ಜೊತೆಯಾಗುವಂತೆ ಅತ್ಯಂತ ಜಾಗರೂಕ, ಜವಾಬ್ದಾರಿ ಬ್ಯಾಟಿಂಗ್ ಅವರದ್ದಾಗಿತ್ತು. ಕ್ರಿಕೆಟ್ ಪ್ರಿಯರಿಗೆ ಅವರ ಆಟ ಅವಿಸ್ಮರಣೀಯ ಒಟ್ಟಾರೆ 50 ಓವರ್ ಗಳಲ್ಲಿ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 306ರನ್ ಕಲೆ ಹಾಕಿತು. ಭಾರತ 67 ರನ್ ಗಳಿಂದ ಜಯಗಳಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

State Election Commission ರಾಜ್ಯ ಚುನಾವಣಾ ಆಯೋಗದ ನಿರ್ದೇಶನ: ಜೂನ್ 24 ರಂದು ಮತಗಟ್ಟೆ ಏಜೆಂಟರುಗಳಿಗೆ ಕಾರ್ಯಾಗಾರ

State Election Commission ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ...

B.Y. Raghavendra ಪಿಎಂ- ವಿಬಿಆರ್ ವೈ ಯೋಜನೆಯಿಂದ ಉದ್ಯೋಗ ಸೃಷ್ಠಿ- ಬಿ.ವೈ.ರಾಘವೇಂದ್ರ

B.Y. Raghavendra ಪ್ರಧಾನ ಮಂತ್ರಿ ವಿಕಸಿತ್ ರೋಜ್ ಗಾರ್ ಯೋಜನೆ ಅಡಿಯಲ್ಲಿ...