Monday, August 17, 2026
Monday, August 17, 2026

ಶಬರಿಮಲೆ ಯಾತ್ರಿಕರಿಗೆ ಸರ್ಜಿ ಪ್ರತಿಷ್ಠಾನದಿಂದ ಮೆಡಿಕಲ್ ಕಿಟ್ ವಿತರಣೆ

Date:

ಶಿವಮೊಗ್ಗ:
ನಡೆದಾಡುವ ಅಯ್ಯಪ್ಪ ಶ್ರೀ ರೋಜಾ ಷಣ್ಮುಗಂ ಗುರೂಜಿಯವರ ಹುಟ್ಟಿದ ಹಬ್ಬವನ್ನು ಅವರ ಶಿಷ್ಯ ವೃಂದದಿಂದ ಭಕ್ತಿ ಪೂರ್ವಕವಾಗಿ ನಡೆಯಿತು.

ಮುಂಜಾನೆ ಸ್ವಾಮಿ ಅಯ್ಯಪ್ಪನ ಜೊತೆ ಗುರೂಜಿಯವರ ಪಾದುಕೆಯು ಗುರೂಜಿ ಅವರ ಮನೆಯಿಂದ ಹೊರಟು ಸಾರ್ವಜನಿಕ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾರ್ಗವಾಗಿ ಮೆರವಣಿಗೆಯಲ್ಲಿ ಹೊಸೂಡಿ ಫಾರ್ಮಿಗೆ ತೆಗೆದುಕೊಂಡು ಹೋಗಲಾಯಿತು. ಹೊಸೂಡಿ ಗ್ರಾಮಸ್ಥರು ಹಾಗೂ ಶ್ರೀ ಶಬರೀಶ ಭಕ್ತ ಮಂಡಳಿ ವತಿಯಿಂದ ವಿಶೇಷ ಪೂಜೆ ನೆರವೇರಿಸಿದರು. ಗುರುಗಳ ದಿವ್ಯ ಸಾನಿಧ್ಯದಲ್ಲಿ ಶಿಷ್ಯರು ಅವರ ಆಶೀರ್ವಾದ ಪಡೆದರು.

ಶ್ರೀ ಸಾರ್ವಜನಿಕ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರೋಜಾ ಗುರೂಜಿ ಶಿಷ್ಯ ವೃಂದದಿಂದ ಏರ್ಪಡಿಸಲಾದ ಗುರುವಂದನಾ ಕಾರ್ಯಕ್ರಮವು ಪುಟಾಣಿ ಮಕ್ಕಳ ಹಾಡಿನಿಂದ ಶುರು ಮಾಡಿ, ಅಯ್ಯಪ್ಪನ ಭಜನೆ, ಡಾ.ಧನಂಜಯ್ ಸರ್ಜಿ, ಹಾಗೂ ಶಬರೀಶ್ ಗುರುಸ್ವಾಮಿಗಳು ಮಾತನಾಡಿದರು.

ಇದೇ ಸಂದರ್ಭದಲ್ಲಿ 25 ವರ್ಷ ಶಬರಿಮಲೆ ಯಾತ್ರೆ ಮಾಡಿದ ಗುರುಸ್ವಾಮಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಸರ್ಜಿ ಫೌಂಡೇಶನ್ ವತಿಯಿಂದ ಡಾ. ಧನಂಜಯ ಸರ್ಜಿ ಅವರು ಶಬರಿಮಲೆ ಯಾತ್ರೆ ಮಾಡುವ ಭಕ್ತರಿಗೆ ಮೆಡಿಕಲ್ ಕಿಟ್ ಹಾಗೂ ತುರ್ತು ಆರೋಗ್ಯ ಸಮಾಲೋಚನೆಗೆ ಇಬ್ಬರು ವೈದ್ಯರ ಫೋನ್ ನಂಬರ್ ಸಹ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ರೋಜಾ ಗುರೂಜಿ ಶಿಷ್ಯ ವೃಂದ, ಹೊಸೂಡಿ ಗ್ರಾಮಸ್ಥರು ಹಾಗೂ ಶ್ರೀ ಶಬರೀಶ ಭಕ್ತ ಮಂಡಳಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bharat Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರಮುಖ ಧ್ಯೇಯವೇ ದೇಶಪ್ರೇಮ- ಶಕುಂತಳಾ ಚಂದ್ರಶೇಖರ್

Bharat Scouts and Guides ನಮ್ಮ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಭಾರತ್...

Chamber of commerce Shivamogga ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಜಾಗತಿಕವಾಗಿ ಗಂಭೀರ ಸಮಸ್ಯೆಯಾಗಿದೆ: ಆರ್.ಮನೋಹರ್

Chamber of commerce Shivamogga ಶಿವಮೊಗ್ಗ ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್...

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...