Monday, August 24, 2026
Monday, August 24, 2026

ಸಂಸತ್ತಿನಲ್ಲಿ ಗಮನ ಸೆಳೆದ ಎರಡು ಪ್ರಸಂಗಗಳು

Date:

ಸಂಸತ್ತು ಮತ್ತು ಶಾಸನ ಸಭೆಯ ನಡಾವಳಿಗಳು‌ ಈಗ ಟಿವಿಯಲ್ಲಿ ನೇರಪ್ರಸಾರದಲ್ಲಿ ಲಭ್ಯವಿವೆ. ಪುರುಸೊತ್ತು ಮಾಡಿಕೊಂಡು ನಾವೆಲ್ಲಾ ವೀಕ್ಷಿಸಬೇಕು.

ಇಂದು ನಮ್ಮ ಸೆಳೆದ ಸಂಗತಿ.ಸದಾ ಮುಗುಳ್ನಗುತ್ತಲೇ ಮಾತಾಡುವ ಲೋಕಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರು ಕೊಂಚ ವ್ಯಗ್ರರಾಗಿ ಮಾತಾಡಿದ ಪ್ರಸಂಗ.

ಅಷ್ಟೇ ಅಲ್ಲ ರಾಜ್ಯ ಸಭೆಯಲ್ಲೂ ಕೂಡ ಮೊದಲ ಬಾರಿಗೆ ಅಧ್ಯಕ್ಷರಾಗಿ
ಪೀಠ ಅಲಂಕರಿಸಿರುವ ಶ್ರೀ ಜಗದೀಶ ಧನಕರ್ ಕೂಡ ಅದೇ ರೀತಿ ಸಂಸದರಿಗೆ ಮಾತಿನ ಚಾಟಿ ಬೀಸಿದ ಸಂಗತಿ.

ಲೋಕಸಭೆಯಲ್ಲಿ ಸಂಸದರಾದ ಎ.ಆರ್ .ರೆಡ್ಡಿ ಅವರು ವಿತ್ತ ಸಚಿವರು ತಮ್ಮನ್ನ ಹಿಂದಿ ಮಾತಾಡಲು ಬಾರದ ಹಾಗೂ
ಕೆಳಜಾತಿಯವರೆಂದೂ ಗ್ರಹಿಸಿ
ಮಾತಾಡಿದ್ದಾರೆ ಎಂದು ಆರೋಪಿಸಿದರು.
ಜಾತಿಯ ಪ್ರಸ್ತಾಪ ಬಂದಾಕ್ಷಣ
ಲೋಕಸಭಾಧ್ಯಕ್ಷರು ಸಂಸದ ರೆಡ್ಡಿಯವರಿಗೆ ಸದಸ್ಯರು ಜಾತಿ ಧರ್ಮ ಉಲ್ಲೇಖಿಸಿ ಮಾತಾಡಬೇಡಿ ಎಂದು ಕಿವಿಮಾತು ಹೇಳಿದರು.
ಇನ್ನು ಮುಂದೆ ಯಾವ ಸದಸ್ಯರೂ ಆ ಪದಗಳನ್ನ ಉಪಯೋಗಿಸಬಾರದು.
ಅಂತಹ ಪದಗಳನ್ನ ಪ್ರಯೋಗಿಸಿದ್ದೇ ಆದರೆ ಕಠಿಣ ಕ್ರಮ
ಕೈಗೊಳ್ಳಲಾಗುತ್ತದೆ.ಎಂದು ಎಚ್ಚರಿಸಿದ್ದಾರೆ.
ಸದಸ್ಯರನ್ನ ಎಚ್ಚರಿಸುವ ಇನ್ನೊಂದು ಪ್ರಸಂಗ ರಾಜ್ಯಸಭೆಯಲ್ಲಿ ನಡೆದಿದಿದೆ.
ರಾಜ್ಯಸಭೆ ಅಧ್ಯಕ್ಷರಾದ ಉಪರಾಷ್ಟ್ರಪತಿ ಶ್ರೀ ಜಗದೀಶ್ ಧನಕರ್ ಸಂಸದ ಎಎಪಿ ಪಕ್ಷದ ಸಂಜಯ್ ಸಿಂಗ್ ಅವರು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನ ದುರ್ಬಳಕೆ ಮಾಡುತ್ತಿದೆ.ಅವುಗಳ ಮೂಲಕ ವಿರೋಧ ಪಕ್ಷದ ನಾಯಕರ ಮೇಲೆ ದಾಳಿ ನಡೆಸುತ್ತಿದೆ.
ಎಂದು ಆರೋಪಿಸಿದರು.

ಇದಕ್ಕೆ ಆಡಳಿತ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದರಿ.ಸಭಾಧ್ಯಕ್ಷರನ್ನ ನಡುವೆ ಪ್ರವೇಶಿಸಿ ಮಾತಾಡಲು ಕೋರಿದರು.
ಶ್ರೀಧನಕರ್ ಅವರು ಎಲ್ಲಾ ಸದಸ್ಯರಿಗೂ ಸೇರಿ ಕಿವಿಮಾತು ಹೇಳಬೇಕಾಯಿತು. ಯಾವುದೇ ಆರೋಪ ಮಾಡುವಾಗ ಆಧಾರಸಹಿತ ಮಾಡಬೇಕು. ಮಾಧ್ಯಮ ವರದಿ, ಸಂಸತ್ತಿನಿಂದ ಹೊರಗೆ ನೀಡಿದ ಹೇಳಿಕೆಗಳನ್ನ ಆಧಾರಾವಾಗಿಟ್ಟು ಮಾತಾಡುವುದು ಪ್ರಯೋಜನಕ್ಕೆ ಬರುವುದಿಲ್ಲ. ಮಾತಾಡುವಾಗ ಸೂಕ್ತ ದಾಖಲೆಗಳನ್ನ ಇರಿಸಿಕೊಂಡಿರಿ ಎಂದು ಹೇಳಿದರು.
ನಂತರ ಸಂಸದರ ಮಾತಿಗೆ ಸಭಾನಾಯಕ ಪೀಯುಷ್ ಗೋಯಲ್ ಉತ್ತರಿಸಲು ಸಭಾಧ್ಯಕ್ಷರು ಸೂಚಿಸಿದರು.

ಈ ಎರಡೂ ಪ್ರಸಂಗಗಳು ನಮ್ಮಿಂದ ಆಯ್ಕೆಯಾಗಿ ಹೋಗುವ ಪ್ರತಿನಿಧಿಗಳು ಮಾತಿಗೆ ಮುನ್ನ ಎಷ್ಟು
ಪೂರ್ವತಯಾರಿ ಹಾಗೂ ಯಾವರೀತಿ ನಮ್ಮ ಮಾತಿನ ಧಾಟಿ ಇರಬೇಕು? ಎನ್ನುವ ಬಗ್ಗೆ ತಿಳಿಸುತ್ತದೆ ಅಲ್ಲವೆ ?

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...