ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಸವೇಶ್ವರ ಸರ್ಕಲ್ 75ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ನಡಿಗೆ ಜಾಥ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 300ಅಡಿ ಉದ್ದದ ತ್ರಿರ್ವಣ ಧ್ವಜಾ ಹೊತ್ತು ಭವ್ಯ ಮೆರವಣಿಗೆ ನಡೆಸಿದರು.
ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು,ಮಾಜಿ ಮಹಾಪೌರರಾದ ಶ್ರೀಮತಿ ಜಿ.ಪದ್ಮಾವತಿ,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಜಿ.ಕೃಷ್ಣಮೂರ್ತಿ,ಶ್ರೀಮತಿ ಮಂಜುಳ ವಿಜಯಕುಮಾರ್, ಮೋಹನ್ ಕುಮಾರ್, ವಿಜಯಕುಮಾರ್ ಮತ್ತು ರಾಜಾಜಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಾಧಕೃಷ್ಣ,ಶ್ರೀ ರಾಮಮಂದಿರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವೆಂಕಟೇಶ್ ರವರು,ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಅಪಲ್ ನಾಗರಾಜ್,ಯುವ ಕಾಂಗ್ರೆಸ್ ಮುಖಂಡರುಗಳಾದ ಸಂತೋಷ್,ಸಂದೀಪ್,ಸುನೀಲ್ ರವರು ಸ್ವಾತಂತ್ಯ್ರ ನಡಿಗೆ ಜಾಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಾವಿರಾರು ಕಾರ್ಯಕರ್ತರು 300ಅಡಿ ಉದ್ದದ ತ್ರಿರ್ವಣ ಧ್ವಜಾ ಹೊತ್ತು ಭವ್ಯ ಮೆರವಣಿಗೆಯಲ್ಲಿ ಹಾವನೂರು ಸರ್ಕಲ್,ಬಸವೇಶ್ವನಗರ,ಶಾರದಾ ಕಾಲೋನಿ,ಕಾಮಾಕ್ಷಿಪಾಳ್ಯ ಪ್ರಮುಖ ರಸ್ತೆಗಳಲ್ಲಿ ನಡಿಗೆ ಜಾಥ ಮಾಡಿದರು.