ಕೇಂದ್ರ ಸರ್ಕಾರದ ಅಗ್ನಿಪಥ್ ನೇಮಕಾತಿ ಯೋಜನೆ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ ಮುಂದುವರಿದಿರುವ ನಡುವೆಯೇ ಅಗ್ನಿಪಥ್ ಯೋಜನೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದಾರೆ.
ಇದರೊಂದಿಗೆ ಯುವ ಜನತೆ ಪ್ರಧಾನಿ ಮೋದಿ ಅವರ ನಾಯಕತ್ವ ಮತ್ತು ನಿರ್ಧಾರದ ಮೇಲೆ ವಿಶ್ವಾಸ ಇಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ದೇಶದ ಯುವಕರು ಮುಂದೆ ಅಗ್ನಿವೀರರಾಗಬೇಂದು ಬಯಸಬೇಕು. ಇದು ಪಾಸಿಟಿವ್ ವಿಚಾರ. ಈ ಮೂಲಕ ದೇಶದ ಮೇಲೆ ನಂಬಿಕೆ ಇಡಬೇಕು. ಅದೇ ರೀತಿ ಪ್ರಧಾನಿ ಮೋದಿ ನಾಯಕತ್ವದ ಮೇಲೆ ಮತ್ತು ನಿಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಿ ಎಂದು ದೋವಲ್ ಹೇಳಿರುವುದಾಗಿ ಮಾದ್ಯಮ ಮೂಲಗಳು ತಿಳಿಸಿವೆ.