Thursday, July 9, 2026
Thursday, July 9, 2026

ಪಾಪ್ಯುಲರ್ ಭಾರಧ್ವಾಜ್ ಒಂದು ನೆನಪು

Date:

ಶಿವಮೊಗ್ಗದ ಮನೆಮಾತು. ಒಂದು ರೀತಿ ಉದ್ಯಮಿಗಳ ಲೋಕದ ದಂತಕತೆ.
ಸಾಂಸ್ಕೃತಿಕ ಮನಸ್ಸು,
ದಣಿವರಿಯದ ಸಮಾಜ ಸೇವಕ …ಇಷ್ಟೆಲ್ಲಾ ಹೇಳಿದರೂ ಮತ್ತೂ ಇನ್ನೇನೋ ಹೇಳಬೇಕು ಅನಿಸುತ್ತದೆ ಹಿರಿಯ ಭಾರದ್ವಾಜ್ ಬಗ್ಗೆ. ಅವರು ಸಿಹಿಮೊಗೆಯ ಮರೆಯದ ಮಾಣಿಕ್ಯ.

ಇಡೀ ಶಿವಮೊಗ್ಗದ ವ್ಯವಹಾರ ಜಗತ್ತು , ಜಿಲ್ಲೆಯ ವ್ಯಾಪಾರ ವಹಿವಾಟುಗಳ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದ ಮನುಷ್ಯ.
ಮೊನ್ನೆ ಮೊನ್ನೆಯವರೆಗೂ ಸ್ಥಳೀಯವಾಗಿ ಕೆಲ ಹೊತ್ತು ಅವರು ನಡೆದು ಹೋಗುತ್ತಿದ್ದನ್ನ ಕಂಡಿದ್ದೆ. ಇಷ್ಟು ವಯಸ್ಸಾದರೂ ನಡೆದಾಡುತ್ತಿದ್ದಾರೆ ಪರವಾಗಿಲ್ಲ ಎಂದು ಅಭಿಮಾನ ಉಕ್ಕುತ್ತಿತ್ತು.

ಅವರು ನನಗೆ ಬಹಳ ವರ್ಷಗಳಿಂದಲೂ ಪರಿಚಯ. ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದರು. ಶಿವಮೊಗ್ಗದಲ್ಲಿ ನಡೆದ ಹಲವಾರು ಸಭೆ ಸಮಾರಂಭಗಳಲ್ಲಿ ವೇದಿಕೆಯಲ್ಲಿರುತ್ತಿದ್ದರು.

ನೋಡಿ ಮಾತಾಡಿಸುತ್ತಿದ್ದರು.
ಒಮ್ಮೆ ಹಿರಿಯ ಸಂಗೀತಜ್ಞ ಡಾ.ಎಂ.ಬಾಲ ಮುರಳಿ ಕೃಷ್ಣ ಅವರ ಗಾಯನ ಕಚೇರಿಗೆ ನನ್ನನ್ನ ನಿರೂಪಣೆಗೆ ಕರೆಸಿದ್ದರು. ಕುವೆಂಪು ರಂಗ ಮಂದಿರದಲ್ಲಿ ಖ್ಯಾತ ಬಾಲಮುರಳಿಕೃಷ್ಣರಿಂದ ಸ್ಮರಣಿಕೆ ಸ್ವೀಕರಿಸಿದ ನೆನಪು ಹಸಿರಾಗಿದೆ.

ನಾನು ಜೊತೆಯಲ್ಲಿದ್ದಾಗ ಮಿಕ್ಕವರಿಗೆ ನಾನು ಸಂಕೋಚಪಡುವಷ್ಟು ಹೊಗಳಿ ಪರಿಚಯಿಸುತ್ತಿದ್ದರು.
ವಿವಿಧ ಸಂಘ ಸಂಸ್ಥೆಗಳಲ್ಲಿ ಅವರು ಪದಾಧಿಕಾರಿಗಳಾಗಿ
ಸೇವೆ ಸಲ್ಲಿಸಿದ್ದಾರೆ.
ಪ್ರಧಾನವಾಗಿ ಅವರು ಬೆಳೆಸಿದ ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಈಗ ತಿಲಕ ಪ್ರಾಯವಾಗಿ ನಿಂತಿದೆ.

ಶಿವಮೊಗ್ಗದ ಅಭಿವೃದ್ಧಿ ಬಗ್ಗೆ ಸದಾ ಚಿಂತಿಸುತ್ತಿದ್ದ ಮಾಗಿದ ಮನಸ್ಸಿನ ಚೇತನ
ಈಗ ನಮ್ಮನ್ನಗಲಿದ್ದಾರೆ.
ಅವರಿಗೆ ನಮ್ಮ ನುಡಿ ನಮನಗಳು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...