Wednesday, March 19, 2025
Wednesday, March 19, 2025

ಭಾರತವನ್ನ ಬಿಟ್ಟರೆ ನಮಗೆ ಒಂಟಿತನ ಕಾಡುತ್ತದೆ-ಬಿಲಾವಲ್ ಬುಟ್ಟೊ

Date:

ಪಾಕಿಸ್ತಾನ ಈಗಾಗಲೇ ಜಾಗತಿಕವಾಗಿ ಒಬ್ಬಂಟಿಯಾಗಿದೆ. ಹಾಗಾಗಿ ಭಾರತದೊಂದಿಗೆ ನಮ್ಮ ಸ್ನೇಹವನ್ನು ಮತ್ತೆ ಆರಂಭಿಸಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಬುಟ್ಟೋ ಜರ್ಧಾರಿ ಅವರು ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಭಾರತದ ರಾಜಕೀಯ ನೀತಿಗಳು, ಮುಸ್ಲಿಂ ವಿರೋಧಿ ನಿಲುವುಗಳಿಂದ ನಮ್ಮ ಅವರ ಸಂಬಂಧ ಕಠಿಣವಾಗಿದೆ. ಕೆಲವು ವಿಚಾರಗಳಲ್ಲಿ ನಾವು ಅವರಿಗೆ ವಿರೋಧ ವ್ಯಕ್ತಪಡಿಸಿದ್ದೇವೆ. ಆದರೆ ಅವರ ಜೊತೆಗೆ ನಾವು ಮಾತನಾಡದಿದ್ದರೆ ನಮ್ಮ ಆಸಕ್ತಿಗಳನ್ನು ಅವರ ಜೊತೆಗೆ ಹೇಗೆ ಹಂಚಿಕೊಳ್ಳಲು ಸಾಧ್ಯ ಎಂದರು.

ನಾವು ಭಾರತದೊಂದಿಗೆ ಗಂಭೀರವಾದ ಸಮಸ್ಯೆಗಳನ್ನ ಹೊಂದಿದ್ದೇವೆ.
ಇತಿಹಾಸವನ್ನು ತೆಗೆದು ನೋಡಿದರೆ ಅವರ ಜೊತೆಗೆ ಯುದ್ದಗಳೂ ಆಗಿವೆ. ಆದರೆ ಅವರ ಜೊತೆಗೆ ಸಂಬಂಧವನ್ನ ಕಳೆದು ಕೊಳ್ಳಲು ಸಾಧ್ಯವಾಗುತ್ತಾ? ಒಬ್ಬ ವಿದೇಶಾಂಗ ಸಚಿವನಾಗಿ ನಾನು ಅಲ್ಲಿನ ಜನರ ಜೊತೆಗೆ ಮಾತನಾಡದೇ ಅಲ್ಲಿನ ಸರ್ಕಾರದ ಜೊತೆ ಮಾತನಾಡದೇ ನಮ್ಮ ಹಿತಾಸಕ್ತಿಗಳನ್ನು, ನಮ್ಮ ಉದ್ದೇಶಗಳನ್ನು ಹೇಗೆ ಹಂಚಿಕೊಳ್ಳಲು ಆಗುತ್ತದೆ ಎಂದು ಪ್ರಶ್ನಿಸಿದರು.

ಇದಲ್ಲದೇ ಭಾರತದೊಂದಿಗೆ ನಾವು ವ್ಯಾಪಾರ ಮಾಡಲು ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ. ನನಗೆ ಆ ರೀತಿಯ ವಿಮರ್ಶೆಗಳೇ ತಪ್ಪು ಎಂದೆನಿಸುತ್ತದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kumsi MESCOM ಕುಂಸಿ ಮೆಸ್ಕಾಂ ಕಛೇರಿಯಲ್ಲಿ ಮಾರ್ಚ್ 18. ಜನಸಂಪರ್ಕ ಸಭೆ

Kumsi MESCOM ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.18 ರಂದು ಬೆಳಿಗ್ಗೆ...

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು...

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ...