Saturday, March 22, 2025
Saturday, March 22, 2025

ಲಕ್ನೊ ಜೈಂಟ್ಸ್ ಡೆಲ್ಲಿ ವಿರುದ್ಧ ಜಯಭೇರಿ

Date:

ನಾಯಕ ಕೆ ಎಲ್ ರಾಹುಲ್ (77, 51 ಎಸೆತ, 4 ಫೋರ್, 5 ಸಿಕ್ಸರ್) ಹಾಗೂ ದೀಪಕ್ (52 ರನ್, 34 ಎಸೆತ, 6 ಫೋರ್, ಒಂದು ಸಿಕ್ಸರ್) ಅವರ ಮಾರಕ ದಾಳಿಯ ನೆರವಿನಿಂದ ಲಕ್ನೋ ಸೂಪರ್ ಜಯಂಟ್ಸ್ ತಂಡ ಐಪಿಎಲ್ 15ನೇ ಆವೃತ್ತಿಯ 45ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ ಆಡಿರುವ 10 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕಗಳಿಗೆ ರಾಹುಲ್ ಬಳಗ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೆ ಎಲ್ ರಾಹುಲ್ ನೇತೃತ್ವದ ಲಕ್ನೋ ತಂಡ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 195 ರನ್ ಬಾರಿಸಿದರು. ಬೃಹತ್ ಗುರಿ ಬೆನ್ನಟ್ಟಿದ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಕ್ತಾಯಗೊಂಡಾಗ ಏಳು ವಿಕೆಟ್ ನಷ್ಟಕ್ಕೆ 189 ಮಾತ್ರ ಗಳಿಸಲು ಸಾಧ್ಯವಾಯಿತು.


ದೊಡ್ಡ ಮತ ಗುರಿ ಬೆನ್ನಟ್ಟಲು ಆರಂಭಿಸಿದ ಡೆಲ್ಲಿ ತಂಡ ಬಾರಿ ಅಗ್ಗದಲ್ಲಿ ಪೃಥ್ವಿ ಶಾ (5) ಹಾಗೂ ಡೇವಿಡ್ ವಾರ್ನರ್ (3) ಕ್ರಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭದಲ್ಲಿ ಹಿನ್ನಡೆ ಗೊಳಗಾಯಿತು. ಬಳಿಕ ಬ್ಯಾಟ್ ಹಿಡಿದು ಬಂದ ಮಿಚೆಲ್ ಮಾರ್ಷ್ (37) ಹಾಗೂ ತಂಡದ ಗರಿಷ್ಠ ಸ್ಕೋರ್ ರಿಷಬ್ ಪಂತ್ (44) ಮರು ಹೋರಾಟ ಸಂಘಟಿಸಿದರು. ಆದರೆ, ಕಳಪೆ ಅಂಪೈರಿಂಗ್ ಗೆ ಮಾರ್ಷ್ ಬಲಿಯಾದರು. ನಂತರ ಕ್ರೀಸಿಗೆ ಬಂದ ಲಲಿತ್ ಯಾದವ್ 3 ರನ್ ಗಳಿಗೆ ಸೀಮಿತ ಗೊಂಡರು. ವಿಂಡೀಸ್ ದೈತ್ಯ ಪೋವೆಲ್ (35) ಸಿಡಿದೇಳುವ ಸೂಚನೆ ನೀಡಿದರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಅಕ್ಷರ ಪಟೇಲ್ (42) ಕೊನೆತನಕ ತಂಡವನ್ನು ಗೆಲ್ಲಿಸುವ ಯತ್ನ ಮಾಡಿದರು ಆದರೆ ಸಾಪಲ್ಯ ಗಳಿಸಲಿಲ್ಲ.
ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬಾರಿಸಿದ ಅರ್ಧಶತಕ ಮೂಲಕ ಉತ್ತಮ ಆರಂಭ ಲಭಿಸಿತು. ಕ್ವಿಂಟನ್ ಡಿಕಾಕ್ 23 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ದೀಪಕ್ ವೇಗದ ಅರ್ಧಶತಕ ಬಾರಿಸಿದರು. ಕೊನೆಯಲ್ಲಿ ಮಾರ್ಕರ್ಸ್ (17) ಹಾಗೂ ಕೃನಾಲ್ ಪಾಂಡ್ಯ (9) 26ರನ್ ಗಳ ಕಾಣಿಕೆ ಕೊಟ್ಟರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kumsi MESCOM ಕುಂಸಿ ಮೆಸ್ಕಾಂ ಕಛೇರಿಯಲ್ಲಿ ಮಾರ್ಚ್ 18. ಜನಸಂಪರ್ಕ ಸಭೆ

Kumsi MESCOM ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.18 ರಂದು ಬೆಳಿಗ್ಗೆ...

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು...

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ...