Monday, August 24, 2026
Monday, August 24, 2026

ಭಾರತದ ಅಕ್ಕಿ ಗೋಧಿಗೆ ವಿದೇಶಿ ಬೇಡಿಕೆ ರಫ್ತು ಹೆಚ್ಚಳ – ಪೀಯುಷ್

Date:

ಭಾರತದ ಅಕ್ಕಿ, ಗೋಧಿಗೆ ವಿದೇಶಗಳ ಬೇಡಿಕೆಯಿಂದ ರಫ್ತು ಹೆಚ್ಚಾಗಿದೆ. 2013-14 ಮತ್ತು 2021-22 ರ ನಡುವೆ ಭಾರತದ ಅಕ್ಕಿ ರಫ್ತು ಹೆಚ್ಚಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭಾನುವಾರ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈಕುರಿತು ಮಾಹಿತಿ ಹಂಚಿಕೊಂಡಿರುವ ಪಿಯೂಷ್ ಗೋಯಲ್ ಅವರು ಭಾರತದ ಅಕ್ಕಿ ರಫ್ತು ದೊಡ್ಡ ಮಟ್ಟದಲ್ಲಿ ಬೆರಗುಗೊಳಿಸುವ ಬೆಳವಣಿಗೆಯನ್ನು ಗಳಿಸಿದೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್ ಇಂಡಿಯಾ ದಿ ರೈಸ್ ಬಾಸ್ಕೆಟ್ ಆಫ್ ದಿ ವರ್ಲ್ಡ್ ಎಂಬ ಶೀರ್ಷಿಕೆಯ ಚಿತ್ರದಲ್ಲಿ ಅಕ್ಕಿ ರಫ್ತಿನ ಅಂಕಿಅಂಶಗಳನ್ನು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿಗಳು ರೈತರಿಗೆ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲು ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಥಿಸಿ ವಿವರಿಸಿದ್ದಾರೆ.

ಎಷ್ಟು ಬೆಳವಣಿಗೆ ಸಾಧಿಸಿದೆ ಎಂಬುವುದಕ್ಕೆ ಉತ್ತರ ಇಲ್ಲಿದೆ.
2013-14ರ ಆರ್ಥಿಕ ವರ್ಷದಲ್ಲಿ ಬಾಸುಮತಿ ಅಕ್ಕಿಯನ್ನು ಹೊರತುಪಡಿಸಿ ಅಕ್ಕಿ ರಫ್ತು 2,925 ಮಿಲಿಯನ್ ಆಗಿತ್ತು. ಅಂದಿನಿಂದ 2021-22ನೇ ಹಣಕಾಸು ವರ್ಷದಲ್ಲಿ ಇದು 6,115 ಮಿಲಿಯನ್ ಡಾಲರ್‌ಗಳಿಗೆ 109 ಪ್ರತಿಶತದಷ್ಟು ಬೆಳೆದಿದೆ.

ಈಕುರಿತು ಕೃಷಿ ಸಚಿವಾಲಯ ಒದಗಿಸಿರುವ ಪ್ರತ್ಯೇಕ ಮಾಹಿತಿಯಲ್ಲಿ 2021-22 ಹಣಕಾಸು ವರ್ಷದಲ್ಲಿ ಅಕ್ಕಿ ರಫ್ತು ಶೇ. 9.24 ರಷ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. ಅಕ್ಕಿ ರಫ್ತು ವರ್ಷಕ್ಕೆ ಅದರ ಒಟ್ಟು ಗುರಿಯ 102 ಪ್ರತಿಶತವನ್ನು ಸಾಧಿಸಿದೆ ಎಂದು ಕೃಷಿ ಸಚಿವಾಲಯ ಮಾಹಿತಿ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ರಕ್ಷಾಬಂಧನವು ಸಹೋದರ- ಸಹೋದರರಿಯರ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬ: ರಾಜಯೋಗಿನಿ ಬಿ.ಕೆ.ಅನಸೂಯ ಅಕ್ಕ

ರಕ್ಷಾಬಂಧನವು ಕೇವಲ ಒಂದು ಹಬ್ಬವಲ್ಲ. ಅದು ಪ್ರೀತಿ, ವಿಶ್ವಾಸ, ಗೌರವ ಮತ್ತು...

D.K. Shivakumar 500 ಕೆಪಿಎಸ್ ಶಾಲೆಗಳನ್ನ ಸಮಗ್ರ ಉನ್ನತೀಕರಿಸುವ “ಶಿಕ್ಷಣ ಕ್ರಾಂತಿ-2030″ಯೋಜನೆಗೆ ಹೆಜ್ಜೆಯಿಟ್ಟಿದ್ದೇವೆ,- ಡಿ.ಕೆ.ಶಿವಕುಮಾರ್.

D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ...

B.Y. Raghavendra “ಸರ್ಕಾರಿ ಶಾಲೆಗೆ ನೀವು ಸಲ್ಲಿಸಿರುವ ಅಪಾರಸೇವೆಗೆ ದೊರೆತ ಅರ್ಹ ಗೌರವ”- ಬಿ.ವೈ.ರಾಘವೇಂದ್ರ.

B.Y. Raghavendra ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ...

Shivamogga News ಹರಕೆರೆ ರಿಂಗ್ ರಸ್ತೆಯಲ್ಲಿ ದರೋಡೆ ಮಾಡಿದ್ದ ಖದೀಮರು ಈಗ ‘ಅಂದರ್’.

Shivamogga News ಹರಕೆರೆ ರಿಂಗ್‌ರೋಡ್‌ನಲ್ಲಿ ಸಾರ್ವಜನಿಕರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ...