Monday, August 24, 2026
Monday, August 24, 2026

ಡಿಜಿಟಲ್ ಪೇಮೆಂಟ್ ದೋಖಾ ಮಾಡುತ್ತಿರುವ ಸೈಬರ್ ಕಳ್ಳರು

Date:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡಿಜಿಟಲ್‌ ಪೇಮೆಂಟ್‌ ಹೆಚ್ಚಾಗುತ್ತಿದ್ದಂತೆ ಡಿಜಿಟಲ್‌ ಪೇಮೆಂಟ್‌ನಿಂದ ದೋಖಾಗಳು ಕೂಡ ಹೆಚ್ಚಾಗುತ್ತಿವೆ.

ಮೊಬೈಲ್‌ನಲ್ಲಿ ಪೋನ್‌ ಪೇ, ಪೇಟಿಎಂ, ಗೂಗಲ್‌ ಪೇ ಇದ್ರೆ ಸಾಕು ಜನ ತಮ್ಮ ಜೇಬಲ್ಲಿ ಹತ್ತು ರೂಪಾಯಿ ಇಲ್ಲದಿದ್ರೂ ಹತ್ತಾರು ಏರಿಯಾ ಸುತ್ತಿ, ಹತ್ತಾರು ಕಡೆ ಶಾಪಿಂಗ್‌ ಮಾಡಿ ಬರ್ತಾರೆ. 10 ರೂಪಾಯಿ ಟೀ ಕುಡಿದ್ರೂ ಪೋನ್‌ ಪೇ, 15 ರೂಪಾಯಿಯ ಕಬ್ಬಿನ ಹಾಲಿಗೂ ಗೂಗಲ್‌ ಪೇ, 30 ರೂಪಾಯಿಯ ತಿಂಡಿ ತಿಂದ್ರೂ ಕೂಡಾ ಪೇಟಿಎಂ ಮಾಡುವ ಕಾಲ ಬಂದಿದೆ.

ಹೀಗೆ ನಿತ್ಯ ಬದುಕಿನಲ್ಲಿ ಡಿಜಿಟಲ್‌ ಪೇಮೆಂಟ್‌ ಬಳಕೆ ಹೆಚ್ಚಾಗುತ್ತಿದ್ದಂತೆ ಇದೇ ಡಿಜಿಟಲ್‌ ಪೇಮೆಂಟ್‌ ಮೇಲೂ ಸೈಬರ್‌ ಕಳ್ಳರ ಕಣ್ಣು ಬಿದ್ದಿದೆ. ನಿತ್ಯ ಹತ್ತಾರು ಕೇಸ್‌ಗಳು ಬೆಳಕಿಗೆ ಬರ್ತಿವೆ.
ನಗರದಲ್ಲಿ ಹೆಚ್ಚಾಗ್ತಿವೆ ಸೈಬರ್‌ ಕಳ್ಳತನ
ಬೆಳಗ್ಗೆ ಎದ್ದು ಟೀ ಕುಡಿಯೋದ್ರಿಂದ ಸಂಜೆ ಮನೆಗೆ ರೇಷನ್‌ ತರೋವರೆಗೂ ಎಲ್ಲದಕ್ಕೂ ಡಿಜಿಟಲ್‌ ಪೇಮೆಂಟ್‌ ಮೂಲಕವೇ ಜನ ಹಣ ಕಳಿಸ್ತಾರೆ. ಹೀಗಾಗಿ ಕ್ಯಾಶ್‌ ವ್ಯವಹಾರ ಅರ್ಧಕ್ಕಿಂತ ಕಡಿಮೆಯಾಗಿದೆ. ಗೂಗಲ್ ಪೇ, ಪೋನ್ ಪೇ, ಪೇಟಿಎಂ ನಂತಹ ಆಪ್‌ಗಳ ಮೂಲಕ ಅಂಗಡಿ ಮಾಲೀಕರಿಗೆ ಗ್ರಾಹಕರು ಡಿಜಿಟಲ್ ಪೇಮೆಂಟ್‌ ಮಾಡ್ತಾರೆ. ಆದ್ರೆ ಇದ್ರಿಂದ ಕೆಲ ಅಂಗಡಿ ಮಾಲೀಕರಿಗೆ ವಂಚನೆಯಾಗ್ತಿರೋದು ಬೆಳಕಿಗೆ ಬಂದಿದೆ. ಅಂಗಡಿಗೆ ಬಂದ ಗ್ರಾಹಕರು ಪೋನ್ ಪೇ ಮಾಡಿದ ಬಳಿಕ ಪೋನ್ ಪೇ ಆಗಿದೆ ಅಂತಾ ಗ್ರೀನ್ ಸಿಗ್ನಲ್ ತೋರಿಸಿ ಹೋಗ್ತಾರೆ. ಆದರೆ ಅಕೌಂಟ್ ಚೆಕ್ ಮಾಡಿದಾಗ ಅಕೌಂಟ್‌ಗೆ ಅಮೌಂಟ್ ಬಾರದೆ ಶಾಪ್‌ ಮಾಲೀಕರು ವಂಚನೆಗೆ ಒಳಗಾಗ್ತಿದ್ದಾರೆ.

ಅದ್ರಲ್ಲೂ ನಗರದ ಮೆಜೆಸ್ಟಿಕ್‌ ಭಾಗದಲ್ಲೇ ಇಂಥಾ ಪ್ರಕರಣಗಳು ಹೆಚ್ಚಾಗ್ತಿವೆ.
ಇನ್ನೂ ಡಿಜಿಟಲ್ ಪೇಮೆಂಟ್‌ನಲ್ಲಿ ಆಗ್ತಿರೋ ಕಳ್ಳತನದ ಬಗ್ಗೆ ಸೈಬರ್‌ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ನಗದು ವ್ಯವಹಾರಕ್ಕಿಂತ ಕೇಸ್‌ಲೆಸ್‌ ವ್ಯವಹಾರವೇ ಹೆಚ್ಚಾಗ್ತಿರೋದ್ರಿಂದ ಸೈಬರ್‌ ಕಳ್ಳರು ಕೂಡಾ ಇಂಥಾ ದಾರಿ ಹಿಡಿದಿದ್ದಾರೆ. ಹೀಗಾಗಿ ಗ್ರಾಹಕರು ಹಾಗೂ ಶಾಪ್‌ ಮಾಲೀಕರು ಇಂಥಾ ಌಪ್‌ಗಳನ್ನ ಎಚ್ಚರಿಕೆಯಿಂದ ಬಳಸಬೇಕು. ಮೊಬೈಲ್‌ಗೆ ಬರೋ ಯಾವುದೇ ಓಟಿಪಿ, ಲಿಂಕ್‌ಗಳನ್ನ ಕ್ಲಿಕ್‌ ಮಾಡಬಾರ್ದು ಅಂತಾರೆ.
ಒಟ್ನಲ್ಲಿ ಬ್ಯಾಂಕ್‌ಗೆ ಹೋಗಿ ಹಣ ಬಿಡಿಸಿಕೊಂಡು ಬರೋದನ್ನ ನಿಲ್ಲಿಸಿರೋ ಜನ, ಎಟಿಎಂ ಕೂಡಾ ಮರೆತಿದ್ದಾರೆ.

ಎಲ್ಲದಕ್ಕೂ ಡಿಜಿಟಲ್‌ ಪೇಮೆಂಟ್‌ ಌಪ್‌ಗಳನ್ನೇ ಬಳಸ್ತಿದ್ದಾರೆ. ಆದ್ರೆ ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಶಾಪ್‌ ಮಾಲೀಕರಿಗೆ ಯಾಮಾರಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ರಕ್ಷಾಬಂಧನವು ಸಹೋದರ- ಸಹೋದರರಿಯರ ನಡುವಿನ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬ: ರಾಜಯೋಗಿನಿ ಬಿ.ಕೆ.ಅನಸೂಯ ಅಕ್ಕ

ರಕ್ಷಾಬಂಧನವು ಕೇವಲ ಒಂದು ಹಬ್ಬವಲ್ಲ. ಅದು ಪ್ರೀತಿ, ವಿಶ್ವಾಸ, ಗೌರವ ಮತ್ತು...

D.K. Shivakumar 500 ಕೆಪಿಎಸ್ ಶಾಲೆಗಳನ್ನ ಸಮಗ್ರ ಉನ್ನತೀಕರಿಸುವ “ಶಿಕ್ಷಣ ಕ್ರಾಂತಿ-2030″ಯೋಜನೆಗೆ ಹೆಜ್ಜೆಯಿಟ್ಟಿದ್ದೇವೆ,- ಡಿ.ಕೆ.ಶಿವಕುಮಾರ್.

D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ...

B.Y. Raghavendra “ಸರ್ಕಾರಿ ಶಾಲೆಗೆ ನೀವು ಸಲ್ಲಿಸಿರುವ ಅಪಾರಸೇವೆಗೆ ದೊರೆತ ಅರ್ಹ ಗೌರವ”- ಬಿ.ವೈ.ರಾಘವೇಂದ್ರ.

B.Y. Raghavendra ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ...

Shivamogga News ಹರಕೆರೆ ರಿಂಗ್ ರಸ್ತೆಯಲ್ಲಿ ದರೋಡೆ ಮಾಡಿದ್ದ ಖದೀಮರು ಈಗ ‘ಅಂದರ್’.

Shivamogga News ಹರಕೆರೆ ರಿಂಗ್‌ರೋಡ್‌ನಲ್ಲಿ ಸಾರ್ವಜನಿಕರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ...