ಪ್ರಧಾನಿಯವರು ಕರ್ನಾಟಕದಲ್ಲಿ ಪಂಚಾಯತ್ ರಾಜ್ ದಿವಸ ಆಚರಿಸಲು ಇಚ್ಚಿಸಿದರೆ ಜಿಲ್ಲೆಯ ಯಾವ ಪಂಚಾಯಿತಿ ಆಯ್ಕೆ ಮಾಡಿಕೊಳ್ಳಬಹುದು ಎಂಬ ಮಾಹಿತಿ ನೀಡುವಂತೆ ಪ್ರಧಾನ ಮಂತ್ರಿ ಕಾರ್ಯಾಲಯ ಜಿಲ್ಲಾಡಳಿತವನ್ನು ಕೋರಿದೆ.
ಕೋರಿಕೆ ಬಂದ ತಕ್ಷಣ ಕಾರ್ಯಪ್ರವೃತ್ತರಾಗಿರುವ ಜಿಲ್ಲಾಡಳಿತವು ಶಿವಮೊಗ್ಗ ಬಳಿಯ ಕೊಮ್ಮನಾಳ್ ಅಥವಾ ಹೊಳಲೂರು ಪಂಚಾಯತಿ ಹೆಸರು ಅಂತಿಮಗೊಳಿಸುವ ಕುರಿತು ಚರ್ಚಿಸಿದ್ದಾರೆ. ಕಸ ವಿಲೇವಾರಿ ನಿರ್ವಹಣೆಯಲ್ಲಿ ಹೊಳಲೂರು ಪಂಚಾಯಿತಿ ರಾಜ್ಯಕ್ಕೆ ಮಾದರಿಯಾಗಿರುವುದು ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.
ಪ್ರಧಾನಮಂತ್ರಿ ಕಚೇರಿ ತೆಗೆದುಕೊಳ್ಳುವ ಅಂತಿಮ ನಿರ್ಧಾರದ ಮೇಲೆ ಜಿಲ್ಲೆಯ ಭೇಟಿ ಖಚಿತವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ಮೋದಿಯವರ ಶಿವಮೊಗ್ಗ ಭೇಟಿ ಸುಳಿವು
Date: