Monday, August 24, 2026
Monday, August 24, 2026

ಆಸ್ಟ್ರೇಲಿಯನ್ ಓಪನ್ ಟೆನ್ನಿಸ್;ಆಶ್ಲೀ- ಬಾರ್ಟಿ ‌ಮಹಿಳೆಯರ ಫೈನಲ್ಸ್ ಗೆ

Date:

ಆಸ್ಟ್ರೇಲಿಯನ್ ಓಪನ್ ಹಾಲಿ ಆವೃತ್ತಿಯ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಗಾಗಿ ಸೆಣಸಾಡಲು ಅಗ್ರಶ್ರೇಯಾಂಕದ ಸ್ಥಳೀಯ ಪ್ರತಿಭೆ ಆಶ್ಲೀ, ಅಮೆರಿಕದ ಡೇನಿಯಲ್ ಕಾಲಿನ್ಸ್ ಮೊದಲ ಗ್ರ್ಯಾ ನ್ ಸ್ಲಾಮ್ ಪ್ರಶಸ್ತಿಯ ಕನಸು ಕಾಣುತ್ತಿದ್ದರೆ, ಎರಡನೇ ಸೆಮಿಫೈನಲ್ ನಲ್ಲಿ ಜಯ ಗಳಿಸಿರುವ ಕಾಲಿನ್ಸ್ ಮೊದಲ ಗ್ರ್ಯಾನ್ ಸ್ಲಾಮ್ ಟ್ರೋಫಿಯ ನಿರೀಕ್ಷೆಯಲ್ಲಿದ್ದಾರೆ.

ರಾಡ್ ಲೇವರ್ ಅರೇನಾದಲ್ಲಿ ನಡೆದ 2ಸೆಮಿಸ್ಟರ್ ಪಂದ್ಯಗಳು ಕ್ಷಿಪ್ರಗತಿಯಲ್ಲಿ ಮುಕ್ತಾಯ ಕಂಡಿದೆ. ಮೊದಲ ಪಂದ್ಯದಲ್ಲಿ ಆಶ್ಲೀ, ಅಮೆರಿಕದ ಮ್ಯಾಡಿಸನ್ ಕೀಸ್ ಗೆ 6-1,6-3 ನೇರ ಸೆಟ್ ಗಳಿಂದ ಸೋಲಿಸಿದರೇ, ಎರಡನೇ ಪಂದ್ಯದಲ್ಲಿ ಪೋಲೆಂಡ್ ನ ಇಗಾ ಸ್ವಿಯಾಟೆಕ್ ವಿರುದ್ಧ ಕಾಲಿನ್ಸ್ 6-4,6-1 ನೇರ ಸೆಟ್ ಗಳ ಸುಲಭ ಜಯ ದಾಖಲಿಸಿದರು. ಇವರಿಬ್ಬರ ನಡುವೆ ಶನಿವಾರ ಫೈನಲ್ ನಡೆಯಲಿದೆ. ಸ್ಥಳೀಯ ಆಟಗಾರ್ತಿ ಬಾರ್ಟಿ ಪ್ರಶಸ್ತಿ ಫೇವರಿಟ್ ಎನಿಸಿಕೊಂಡಿದ್ದಾರೆ.

ವಿಶ್ವದ ಅಗ್ರಶ್ರೇಯಾಂಕದ ಆಟಗಾರ್ತಿ ಬಾರ್ಟಿ ಮತ್ತು 51 ನೇ ಶ್ರೇಯಾಂಕದ ಕೀಸ್ ನಡುವಿನ ಪಂದ್ಯ ಕೇವಲ ಒಂದು ಗಂಟೆ ಎರಡು ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದ್ದ 25 ವರ್ಷದ ಬಾರ್ಟಿ, ಸ್ಥಳೀಯ ಅಭಿಮಾನಿಗಳ ಬೆಂಬಲದೊಂದಿಗೆ ಸುಲಭ ಜಯಕ್ಕೆ ಪಾತ್ರರಾದರು. ಇಷ್ಟಲ್ಲದೆ ಈ ಮೂಲಕ 42 ವರ್ಷಗಳ ನಂತರ ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶ ಪಡೆದ ಆಸ್ಟ್ರೇಲಿಯಾದ ಆಟಗಾರ್ತಿ ಎನಿಸಿಕೊಂಡರು. 2019 ರ ಫ್ರೆಂಚ್ ಓಪನ್ ಮತ್ತು 2021ರ ವಿಂಬಲ್ಡನ್ ಪ್ರಶಸ್ತಿಗಳ ಒಡತಿಯಾಗಿರುವ ಬಾರ್ಟಿ ತಮಗೆ ದೊರಕಿದ ಆರು ಬ್ರೇಕ್ ಪಾಯಿಂಟ್ ಅವಕಾಶಗಳಲ್ಲಿ ನಾಲ್ಕನ್ನು ತಮ್ಮ ಪರವಾಗಿಸಿಕೊಂಡರು. ಅವರ ಚಾಕಚಕ್ಯತೆ ಮತ್ತು ಬಲವಾದ ಮುಂಗೈ ಹೊಡೆತಗಳಿಗೆ 2017ರ ಯುಎಸ್ ಓಪನ್ ರನ್ನರ್ ಅಪ್ ಮ್ಯಾಡಿಸನ್ ನಿರುತ್ತರರಾದರು. ಒಂದು ಡಬಲ್ ಫಾಲ್ಟ್ ಎಸ ಗದೆ, ಶರವೇಗದಲ್ಲಿ 5 ಏಸ್ ಗಳನ್ನು ಸಿಡಿಸಿದ ಆಸ್ಟ್ರೇಲಿಯಾದ ತರುಣಿಗೆ ಅರ್ಹ ಜಯ ಲಭಿಸಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar 500 ಕೆಪಿಎಸ್ ಶಾಲೆಗಳನ್ನ ಸಮಗ್ರ ಉನ್ನತೀಕರಿಸುವ “ಶಿಕ್ಷಣ ಕ್ರಾಂತಿ-2030″ಯೋಜನೆಗೆ ಹೆಜ್ಜೆಯಿಟ್ಟಿದ್ದೇವೆ,- ಡಿ.ಕೆ.ಶಿವಕುಮಾರ್.

D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ...

B.Y. Raghavendra “ಸರ್ಕಾರಿ ಶಾಲೆಗೆ ನೀವು ಸಲ್ಲಿಸಿರುವ ಅಪಾರಸೇವೆಗೆ ದೊರೆತ ಅರ್ಹ ಗೌರವ”- ಬಿ.ವೈ.ರಾಘವೇಂದ್ರ.

B.Y. Raghavendra ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ...

Shivamogga News ಹರಕೆರೆ ರಿಂಗ್ ರಸ್ತೆಯಲ್ಲಿ ದರೋಡೆ ಮಾಡಿದ್ದ ಖದೀಮರು ಈಗ ‘ಅಂದರ್’.

Shivamogga News ಹರಕೆರೆ ರಿಂಗ್‌ರೋಡ್‌ನಲ್ಲಿ ಸಾರ್ವಜನಿಕರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ...

D. Devaraj Arasu ದೇವರಾಜ ಅರಸು ಅವರಿಗೆ ನಮ್ಮರೈತರು ಚಿರ ಋಣಿಯಾಗಿರಬೇಕು – ಬಿ.ಆರ್.ಜಯಂತ್.

D. Devaraj Arasu  1974ರ ಭೂ ಸುಧಾರಣಾ ಕಾಯ್ದೆಗೆ ಐತಿಹಾಸಿಕ ಮಹತ್ವವಿದ್ದು,...