Friday, May 15, 2026
Friday, May 15, 2026

‘ಪಾರ್ತಿಸುಬ್ಬ’ ಪ್ರಶಸ್ತಿ ಪುರಸ್ಕೃತ ಯಕ್ಷ ಪ್ರತಿಭೆ, ಶ್ರೀಧರ.

Date:

ಹುಟ್ಟೂರಿನಲ್ಲಿ ನನಗೆ ಮಾಡಿದ ಸನ್ಮಾನ ಎಲ್ಲಾ ಸನ್ಮಾನ ಗಳಿಗಿಂತ ದೊಡ್ಡದಾಗಿದೆ. ಅತ್ಯಂತ ಸಂತೋಷವನ್ನು ತಂದಿದೆ. ನಾನು ಬರೆದ ಎಲ್ಲಾ ಬರವಣಿಗೆಯಲ್ಲಿ ಹುಟ್ಟೂರಿನ ಉಲ್ಲೇಖವಿದೆ ಎಂದು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಕವಿ ಶ್ರೀಧರ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನನ್ನ ಬಾಲ್ಯದ ದಿನಗಳು ಅತ್ಯಂತ ಬಡತನದಿಂದ ಕೂಡಿತ್ತು. ನನಗೆ ಯಕ್ಷಗಾನದಲ್ಲಿ ಆಸಕ್ತಿ ಬಾಲ್ಯದಿಂದಲೂ ಇತ್ತು. ಯಕ್ಷಗಾನ ಕಲಿಕೆ ಮತ್ತು ವೀಕ್ಷಣೆಗೆ 20ರಿಂದ 30 ಕಿ. ಮೀ. ದೂರ ನಡೆದುಕೊಂಡು ಹೋಗಬೇಕಾಗಿತ್ತು. ಆದರೆ ಇಂದು ನನ್ನ ಪ್ರಯತ್ನ ಸಾರ್ಥಕ ಎನಿಸುತ್ತಿದೆ. ನಿವೃತ್ತಿ ಜೀವನ ನಡೆಸುತ್ತಿರುವ ನನ್ನ ಸಂಪೂರ್ಣ ಜೀವನವನ್ನು ಯಕ್ಷಗಾನಕ್ಕಾಗಿಯೇ ಮೀಸಲಿಡುತ್ತೇನೆ ಎಂದರು. ಪಾರ್ತಿಸುಬ್ಬ ಪ್ರಶಸ್ತಿ
ಪಡೆದ ಶ್ರೀಧರ್ ಹೇಳಿದ್ದಾರೆ.ಹುಟ್ಟೂರು ನಿಟ್ಟೂರಿನಲ್ಕಿ ಅಭಿಮಾನಿಗಳು ಏರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಖ್ಯಾತ ಭಾಗವತ ಸುಬ್ರಮಣ್ಯ ಧಾರೇಶ್ವರ ಅವರು ಮಾತನಾಡಿ, ಕವಿ ಶ್ರೀಧರ ಅವರು ಬಹುಮುಖ ಪ್ರತಿಭೆ ಉಳ್ಳವರು. ಇವರಿಂದ ನಾನು ಅನೇಕ ವಿಷಯಗಳನ್ನು ಕಲಿತುಕೊಂಡಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕವಿ ಶ್ರೀಧರ ಅವರ ಜೀವನ, ಯಶೋಗಾಥೆ ಒಳಗೊಂಡ ‘ಯಕ್ಷ ಶ್ರೀಧರ’ ಎಂಬ ಗೌರವಗ್ರಂಥ ಬಿಡುಗಡೆಗೊಳಿಸಿದರು. ಈ ಗೌರವ ಗ್ರಂಥವನ್ನು ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಬಿಡುಗಡೆ ಮಾಡಿದರು.

ಈ ಸಮಾರಂಭದಲ್ಲಿ ಯಕ್ಷಗಾನ ಸಂಘಟಕರಾದ ನಾರಾಯಣ ಎಂ. ಹೆಗಡೆ, ಡಾ. ಶಾಂತರಾಮ ಪ್ರಭು, ಶ್ರೀಧರ ಅವರ ಧರ್ಮಪತ್ನಿ ನಟೇಶ್ವರಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga Postal Department ಅಂಚೆ ಇಲಾಖೆ ಜೀವವಿಮಾ ಏಜೆಂಟ್ ಆಗ ಬಯಸುವಿರ? ಈ ಮಾಹಿತಿ ನಿಮಗಾಗಿ

Shimoga Postal Department ಶಿವಮೊಗ್ಗ ಅಂಚೆ ಇಲಾಖೆಯಲ್ಲಿ ಅಂಚೆ ಜೀವ ವಿಮೆ...

Karnataka Forest Department ವಾಹನ ಸಂಚಾರದ ಹೆಚ್ಚಳ: ವನ್ಯಜೀವಿಗಳ ಮುಕ್ತ ಓಡಾಟಕ್ಕೆ ಅಡ್ಡಿಯಾಗಿ ಮಾನವ- ವನ್ಯಪ್ರಾಣಿ ಸಂಘರ್ಷ ಹೆಚ್ಚುತ್ತಿದೆ- ಕುಮಾರ್ ಪುಷ್ಕರ್

Karnataka Forest Department ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮಾನವ–ವನ್ಯಜೀವಿ...