ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವನದೇವತೆ ಹೊನ್ನಾಳಿಯ ತುಳಸಿ ಗೌಡ ಅವರಿಗೆ ಈಗ ಮತ್ತೊಂದು ಪ್ರತಿಷ್ಠಿತ ಮದರ್ ತೆರೇಸಾ ಪ್ರಶಸ್ತಿ ಒಲಿದು ಬಂದಿದೆ.
ಡಿಸೆಂಬರ್ 13ರಂದು ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಕೋಲ್ಕತ್ತದಲ್ಲಿ 2005ರಲ್ಲಿ ಮದರ್ ತೆರೇಸಾ ನೆನಪಿಗಾಗಿ ಹಾರ್ಮನಿ ಫೌಂಡೇಶನ್ ಹುಟ್ಟಿಕೊಂಡಿತ್ತು. ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಈ ಸಂಸ್ಥೆ, ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದೆ.
ಪ್ರತಿವರ್ಷ ಒಬ್ಬರಂತೆ ಶ್ರೇಷ್ಠ ವ್ಯಕ್ತಿಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಬೌದ್ಧ ಧರ್ಮದ ಗುರು ದಲೈ ಲಾಮಾ, ಮಲಲ ಯುಸೂಫ್, ಘಾನ ದೇಶದ ಅಧ್ಯಕ್ಷ ನಾನಾ ಅಕೂಪೋ- ಅಡ್ಡೋ ಹೀಗೆ ಹಲವಾರು ಗಣ್ಯರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.
ನಾನು ಅಕ್ಷರ ಕಲಿತವಳಲ್ಲ. ಆದರೆ ನನ್ನ ಕೆಲಸವನ್ನು ಗುರುತಿಸಿ, ಹಲವು ಪ್ರಶಸ್ತಿಗಳು ಬಂದಿವೆ. ಈಗ ಪ್ರಶಸ್ತಿ ಸ್ವೀಕರಿಸಿ ಕಾರಣಕ್ಕಾಗಿ ಮತ್ತೆ ವಿಮಾನಯಾನ ಮಾಡಲಿದ್ದೇನೆ ಎಂದು ವೃಕ್ಷ ದೇವತೆ ಆದಂತಹ ತುಳಸಿ ಗೌಡ ಅವರು ತಿಳಿಸಿದ್ದಾರೆ.
ಹಾರ್ಮನಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಬ್ರಹಾಂ ಮಥಾಯಿ ನೇತೃತ್ವದಲ್ಲಿ ನಡೆಯಲಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಯವರ ಮೊಮ್ಮಗ ತುಷಾರ ಗಾಂಧಿ, ಚಿತ್ರ ನಿರ್ಮಾಪಕ ಮಹೇಶ್ ಭಟ್ , ಭಾರತೀಯ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಪ್ಲಾನಿಯಾ ಅಗ್ನೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.