ಒಂದು ಕಾಲದಲ್ಲಿ ಮದ್ಯೊತ್ಪನ್ನ ಮತ್ತು
ವಿಮಾನಯಾನಕ್ಕೆ ಹೆಸರಾಗಿದ್ದ ಕಿಂಗ್ ಫಿಷರ್ ಸಂಸ್ಥೆ ಈಗ ಮುಂಚಿನ ಪ್ರಚಾರದ ಬಿರುಸಿನಲ್ಲಿಲ್ಲ.
ಅದರ ಮಾಲಿಕ ಶ್ರೀ. ವಿಜಯ ಮಲ್ಯ ಅವರು ಭಾರತದ ಬ್ಯಾಂಕುಗಳಿಂದ
ಒಂಭತ್ತು ಕೋಟಿ ರೂ
ಸಾಲ ಪಡೆದಿದ್ದರು.
ಅದನ್ನ ಮರುಪಾವತಿ ಮಾಡಿರಲಿಲ್ಲ. ಬ್ಯಾಂಕುಗಳಿಗೆ ಸಾಲ ಪಾವತಿಸದೇ ನಾಪತ್ತೆಯಾಗಿದ್ದರು.
ಈ ಕುರಿತು ಭಾರತೀಯ ಬ್ಯಾಂಕುಗಳು ಕೋರ್ಟಿನ ಮೆಟ್ಟಿಲೇರಿದ್ದವು.
ಕ್ರಮೇಣ ಅದು ನ್ಯಾಯಾಂಗ ನಿಂದನೆ ಪ್ರಕರಣದ ಹಂತವನ್ನು ಮುಟ್ಟಿತ್ತು.
ಈ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ವರ್ಷ ಜನವರಿ 18ರಂದು ನಡೆಸುವುದಾಗಿ ತಿಳಿಸಿದೆ.
ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮಲ್ಯ ಅವರು ತಮ್ಮ ಮಕ್ಕಳಿಗೆ 40 ದಶಲಕ್ಷ ಡಾಲರ್ ವರ್ಗಾಯಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ 2017ರಲ್ಲಿ ಮಲ್ಯ ಅವರನ್ನು ತಪ್ಪಿತಸ್ಥ ಎಂದು ಆದೇಶಿಸಿತು. ಅದನ್ನು ಪ್ರಶ್ನಿಸಿದ ಮಲ್ಯ ಅವರ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ಈ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ 2017 ರಿಂದ ಸಾಕಷ್ಟು ಸಮಯ ಕಾದಿದೆ. ಇನ್ನೂ ಹೆಚ್ಚಿನ ಸಮಯ ಕಾಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಯು.ಯು. ಲಲಿತ್, ಎಸ್.ಆರ್. ಭಟ್,ಬೇಲಾ ಎಂ. ತ್ರಿವೇದಿ ಅವರ ನ್ಯಾಯಪೀಠ ತಿಳಿಸಿದೆ.
ವಿಜಯ್ ಮಲ್ಯ ಅವರು ಮುಂಚೆಯೇ ತಮ್ಮ ವಾದ ಮಂಡಿಸಲು ಮುಕ್ತರಾಗಿದ್ದಾರೆ. ಒಂದು ವೇಳೆ ಅದರಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗದೆ ಹೋದರೆ, ಅವರ ಪರವಾಗಿ ವಕೀಲರು ವಾದ ಮಂಡಿಸಬಹುದು ಎಂದು ನ್ಯಾಯಪೀಠ ಹೇಳಿದೆ.