ತಮಿಳುನಾಡಿನಲ್ಲಿ ವರುಣನ ಆರ್ಭಟ ಮತ್ತಷ್ಟು ಹೆಚ್ಚಾಗಿದೆ. ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನಾಹುತಕ್ಕೆ ಕಾರಣ ವಾಗಿದೆ.
ಚೆನ್ನೈ, ತಿರುಕೊಯಿಲೂರ್, ಕಡಲೂರು, ಮಧುರೈ, ಕೃಷ್ಣಗಿರಿ, ಪುದುಚೇರಿ, ತಿರುವಣ್ಣಾಮಲೈ ಹೀಗೆ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಜಲಪ್ರಳಯದಿಂದಾಗಿ 12 ಜನ ಸಾವನ್ನಪ್ಪಿದ್ದಾರೆ.
ಬಂಗಾಳಕೊಲ್ಲಿಯಲ್ಲಿನ ಚಿತ್ರದ ಮುಂದುವರೆಯುವ ಹಿನ್ನೆಲೆಯಲ್ಲಿ ತಮಿಳುನಾಡು, ಆಂಧ್ರಪ್ರದೇಶದ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ತಗಿ ಇನ್ನೆರಡು ದಿನ ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ತಿಳಿಸಿದೆ.
ತಮಿಳುನಾಡು, ಪುದುಚೇರಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಗೆ ಐದು ಲಕ್ಷ ಎಕರೆ ಕೃಷಿಭೂಮಿ ನೀರಿನಿಂದ ಆವೃತಗೊಂಡಿದೆ. ಇದರಿಂದ ಭತ್ತ ಬೆಳೆ ನಾಶವಾಗಿದೆ ಎಂದು ಮೂಲಗಳು ತಿಳಿಸಿವೆ.