Guarantee scheme ಶಿವಮೊಗ್ಗ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರೀಶೀಲನಾ ಸಭೆಯು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ಮಧು ಅಧ್ಯಕ್ಷತೆಯಲ್ಲಿ ತಾಲ್ಲೂಕು ಕಚೇರಿಯಲ್ಲಿ ನಡೆಯಿತು.ಈ ವೇಳೆ ತಾಲ್ಲೂಕು ಸಮಿತಿ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
Guarantee scheme ಶಿವಮೊಗ್ಗ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ
MESCOM ಏಪ್ರಿಲ್ 27. ಆಲ್ಕೊಳ ಸುತ್ತಮುತ್ತ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ
MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-16ರಲ್ಲಿ ತುರ್ತು ಕಾಮಗಾರಿ ಇರುವುದರಿಂದ ಏ.27 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ಸಾಗರ ರಸ್ತೆ, ಛಾನಲ್ ಏರಿಯಾ, ಶರಾವತಿನಗರ, ಆಟೋ ಕಾಂಪ್ಲೇಕ್ಸ್, ಶುಭಮಂಗಳ ಹಿಂಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
Kateel Ashok Pai Memorial College ಮಹಿಳೆಯರಲ್ಲಿ ಋತುಚಕ್ರ ನಿರ್ವಹಣೆ,ಗರ್ಭಕಂಠ ಕ್ಯಾನ್ಸರ್, ಬೊಜ್ಜು ಇತ್ಯಾದಿಗಳಲ್ಲಿ ಸುರಕ್ಷಾ ಕ್ರಮಗಳ ಅನುಸರಣೆ ಬೇಕು- ಡಾ.ರಕ್ಷಾರಾವ್
Kateel Ashok Pai Memorial College ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಮಾನಸ ಟ್ರಸ್ಟ್, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಶಿವಮೊಗ್ಗ , ಕಾಲೇಜಿನ ಸಮಾಜ ಕಾರ್ಯ ವಿಭಾಗ, ಯುವ ರೆಡ್ ಕ್ರಾಸ್ ಘಟಕ ಹಾಗೂ ಐ ಕ್ಯೂ ಎ ಸಿ ವಿಭಾಗ ದ ಸಹಯೋಗದಲ್ಲಿ ದಿನಾಂಕ 24/04/2025 ರಂದು ಮಹಿಳೆಯರಿಗಾಗಿ ” ಸಖಿ – ಆರೋಗ್ಯ ” – ಹೆಣ್ಣು ಮಕ್ಕಳ ಆರೋಗ್ಯ ದ ಬಗ್ಗೆ ಒಂದು ದಿನದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಇಂದಿನ ಸನ್ನಿವೇಶದಲ್ಲಿ ಮಹಿಳೆಯರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅದರಲ್ಲಿಯೂ ಋತು ಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿ ದ್ದಾಗ ಬಹುಪಾಲು ಮಹಿಳೆಯರು ಯಾರೊಂದಿಗೂ ಇದರ ಬಗ್ಗೆ ಚರ್ಚಿಸಲು ಹಿಂಜರಿಯುತ್ತಾರೆ.
ನಾವು ನಮ್ಮ ದೇಹವನ್ನು ಗೌರವಿಸಬೇಕು, ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ಏಕೆ ಸಂಭವಿಸುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ತಿಳುವಳಿಕೆಯ ಕೊರತೆಯಿದ್ದರೆ ಕೆಲವು ಅಭ್ಯಾಸಗಳನ್ನು ಕುರುಡಾಗಿ ಅನುಸರಿಸುತ್ತೇವೆ ಮತ್ತು ಆ ತಪ್ಪು ಕಲ್ಪನೆಗಳನ್ನು ನಂಬುತ್ತೇವೆ.
ಯುವತಿಯರಿಗೆ ಮುಟ್ಟಿನ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಜ್ಞಾನವು ಅತ್ಯಂತ ಅವಶ್ಯಕವಾಗಿದೆ. ಇದು ಅವರ ಆರೋಗ್ಯವನ್ನು ಕಾಪಾಡಲು, ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಶಿಕ್ಷಣದಲ್ಲಿ ನಿರಂತರತೆ ಸಾಧಿಸಲು ಸಹಾಯ ಮಾಡುತ್ತದೆ. ಸರಿಯಾದ ಮಾಹಿತಿ ಮತ್ತು ಸಂಪನ್ಮೂಲಗಳ ಮೂಲಕ ಅವರು ತಮ್ಮ ದೇಹವನ್ನು ಗೌರವದಿಂದ ನಿರ್ವಹಿಸಬಹುದು.ಯುವ ಮನಸ್ಸುಗಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಾಡಿನ ಖ್ಯಾತ ವೈದ್ಯರಾದ ಡಾ. ರಕ್ಷಾ ರಾವ್ ಪ್ರಸೂತಿ ತಜ್ಞರು, ಉಷಾ ನರ್ಸಿಂಗ್ ಹೋಮ್ ಶಿವಮೊಗ್ಗ, ಇವರು ಸಂಪನ್ಮೂಲ ವ್ಯಕ್ತಿ ಗಳಾಗಿ ಆಗಮಿಸಿ ಹೆಣ್ಣು ಮಕ್ಕಳ ಆರೋಗ್ಯ ದ ಪ್ರಾಮುಖ್ಯತೆ ಬಗ್ಗೆ ಮಾತನಾಡಿ ಮುಟ್ಟಿನ ನೈರ್ಮಲ್ಯ, ಮುಟ್ಟಿನ ಚಕ್ರ ಮತ್ತು ಅದರ ಪ್ರಕ್ರಿಯೆ, ಮುಟ್ಟಿನ ಸಮಯದಲ್ಲಿ ಉಂಟಾಗುವ ಸಮಸ್ಯೆಗಳು, ಮುಟ್ಟಿನ ಕಿಟ್ ಬ್ಯಾಗ್ನಲ್ಲಿ ಇಡಬೇಕಾದ ಅಗತ್ಯ ವಸ್ತುಗಳು, ಆರೋಗ್ಯಕರವಾಗಿ ಮುಟ್ಟಿನ ಚಕ್ರವನ್ನು ನಿರ್ವಹಿಸುವ ವಿಧಾನಗಳು. PCOD ಸಮಸ್ಯೆ, ಗರ್ಭಕಂಠದ ಕ್ಯಾನ್ಸರ್, ದೇಹದ ಬೊಜ್ಜು ಮತ್ತು ಮಹಿಳೆಯರು ತಮ್ಮನ್ನು ತಾವು ಆರೋಗ್ಯವಾಗಿಡಲು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು …ಇತ್ಯಾದಿಗಳನ್ನು ವಿವರಿಸಿದರು. ಇಂದಿನ ಹೆಚ್ಚಿನ ಸಮಸ್ಯೆಗಳ ಮೂಲ ಕಾರಣ ತಪ್ಪು ಜೀವನ ಶೈಲಿ ಹಾಗು ಒತ್ತಡ. ನಾವು ವ್ಯಾಯಾಮ,ಆಹಾರ ಇವುಗಳ ಕುರಿತು ಸರಿಯಾದ ಕ್ರಮ ಅನುಸರಿಸಲೇ ಬೇಕು.ದೈಹಿಕ ಶ್ರಮ ಅಥವಾ ವ್ಯಾಯಾಮ ಬಹಳ ಅಗತ್ಯ. ಹಾಗೆಯೇ ಪೌಷ್ಟಿಕ ಆಹಾರ ಸೇವನೆ ,ಜಂಕ್ ಆಹಾರಗಳಿಂದ ಆದಷ್ಟು ದೂರವಿರುವುದು ,ಸಾಕಷ್ಟು ನೀರು ಕುಡಿಯುವುದು ಹೆಣ್ಣುಮಕ್ಕಳ ಆರೋಗ್ಯಕ್ಕೆ ಅನುಸರಿಸಬೇಕಾದ ತತ್ವಗಳಿ ದ್ದಂತೆ…ಇದರೊಂದಿಗೆ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು.ಎನ್ನುತ್ತಾರೆ ಡಾ ರಕ್ಷಾರಾವ್.
Kateel Ashok Pai Memorial College ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಡಾ. ಆರ್ ಪಿ ಸಾತ್ವಿಕ್, ಅಧ್ಯಕ್ಷರು FPAI ಇವರು ಮಾತನಾಡಿ ಮಹಿಳೆಯರ ಆರೋಗ್ಯದ ಮಹತ್ವವನ್ನು ಮತ್ತು ಅವರು ತಮ್ಮ ಸಂಸ್ಥೆಯಾದ FPAI ಬಗ್ಗೆ ಮಾತನಾಡಿ,ಸಂಸ್ಥೆಯ ಕಾರ್ಯಗಳನ್ನು ವಿವರಿಸಿದರು.
ವಿಶೇಷ ಉಪನ್ಯಾಸವನ್ನು ಉದ್ದೇಶಿಸಿ ಮಾತನಾಡಿದ ಪ್ರಾoಶುಪಾಲಾರದ ಡಾ. ಸಂಧ್ಯಾ ಕಾವೇರಿಯವರು .
ಸಂಸ್ಥೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮಹತ್ವದ ಬಗ್ಗೆ ಮಾತನಾಡಿದರು. ಈ ರೀತಿಯ ಕಾರ್ಯಕ್ರಮವು ನಮಗೆ ಜ್ಞಾನ ವನ್ನು ನೀಡುತ್ತದೆ ಮತ್ತು ಅನಾರೋಗ್ಯಕರ ಅಭ್ಯಾಸಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.
ಕಾರ್ಯಕ್ರಮದ ಸಮಯದಲ್ಲಿ ಶ್ರೀ ಸತೀಶ್ ಕಾರ್ಯಕ್ರಮ ಸಂಯೋಜಕರು FPAI ಶಿವಮೊಗ್ಗ,
ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ಶ್ರೀಮತಿ ನಾನ್ಸಿ ಲವೀನಾ ಪಿಂಟೋ ಮತ್ತು ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಶ್ಮೀರ ಪಹಲ್ಗಂನಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದ ಭಾರತೀಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕು. ಜ್ಯೋತಿ ಸ್ವಾಗತಿಸಿದರು.
ಕು. ಪೂರ್ಣಿಮಾಶ್ರೀ ವಂದಿಸಿದರು.
ಕು.ಮಂಜುಳ ನಿರೂಪಣೆ ಮಾಡಿದರು.

Jog Falls ಮೇ 1 ರಿಂದ ಜೋಗ ಜಲಪಾತ ನೋಡಲು ಬನ್ನಿ ! ಪ್ರವೇಶ ತೆರೆದಿದೆ
Jog Falls ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ವಿಶ್ವ ಪ್ರಸಿದ್ಧ ಜೋಗ ಜಲಪಾತದ ವೀಕ್ಷಣೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಪ್ರವೇಶವನ್ನು ಮೇ 1 ರಿಂದ ಪುನರಾರಂಭಿಸಲಾಗುತ್ತಿದೆ.
ಜಲಪಾತದ ಪ್ರವೇಶ ದ್ವಾರದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದ ಕಾರಣ ಏಪ್ರಿಲ್ 30ರ ವರೆಗೆ ಪ್ರವಾಸಿಗರ ಹಾಗೂ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಮುಂದಿನ ತಿಂಗಳಿಂದ ಮತ್ತೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.
B.Y.Vijayendra ಡಿಜಿಟಲ್ ಮೀಟರ್ ದುಬಾರಿ ಬೆಲೆ, ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಕೋರ್ಟ್ ತಡೆಯಾಜ್ಞೆ
B.Y.Vijayendra ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿಯ ಮೂಲಕ 200 ಯೂನಿಟ್ ವರೆಗೆ ಎಲ್ಲರಿಗೂ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಅವಾಸ್ತವಿಕ ಗ್ಯಾರಂಟಿ ನೀಡಿ ಅದಕ್ಕೂ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು.
ಆದರೆ ಗ್ಯಾರಂಟಿ ಅನುಷ್ಠಾನದ ಬಳಿಕ ಇಂಧನ ಇಲಾಖೆ ದಿವಾಳಿಯಂಚಿಗೆ ಸಾಗಿದ ಬೆನ್ನಲ್ಲೇ ಗ್ರಾಹಕರ ಮೇಲೆ ಹೊರೆ ಹಾಕಿ ದಿನದಿಂದ ದಿನಕ್ಕೆ ವಿದ್ಯುತ್ ದರ ಏರಿಸುತ್ತಲೇ ಇದ್ದ ಈ ಸರ್ಕಾರ ಇದೀಗ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿ ಬರೋಬ್ಬರಿ ₹10,000 ರೂ. ನಿಗಧಿಪಡಿಸಿದ ನಿರ್ಧಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿ ತಡೆಯಾಜ್ಞೆ ನೀಡಿದೆ.
₹2000 ರೂ. ಇದ್ದ ಸ್ಮಾರ್ಟ್ ಮೀಟರ್ ಬೆಲೆಯನ್ನು ₹10000 ಕ್ಕೆ ಏರಿಸಿ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ ಕಾಂಗ್ರೆಸ್ ಕಾಂಗ್ರೆಸ್ ಸರ್ಕಾರಕ್ಕೆ ಉಚಿತ ವಿದ್ಯುತ್ ಕೊಡಿ ಎಂದು ಯಾರಾದರೂ ಕೇಳಿದ್ರಾ? ಬಡವರ ಸ್ಥಿತಿ ಏನಾಗಬೇಕು? ಎಂದು ಉಚ್ಛ ನ್ಯಾಯಾಲಯ ಮಂಗಳಾರತಿ ಎತ್ತಿದೆ.
B.Y.Vijayendra ಇನ್ನಾದರೂ ಈ ಸರ್ಕಾರ ಜನಪೀಡಕ ನಿರ್ಧಾರಗಳನ್ನು ಕೈಬಿಟ್ಟು ಜನಪರ ಕಾರ್ಯಕ್ರಮಗಳಿಗೆ ಮುಂದಾಗಲಿ ಎಂದು ಒತ್ತಾಯಿಸುತ್ತೇನೆ ಎಂದು ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಅಭಿಯಾನದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ
ಬಿ.ವೈ.ವಿಜಯೇಂದ್ರ ತಮ್ಮ ಅನಿಸಿಕೆಯನ್ನ
ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Shivaganga Yoga Center ಕು.ಮೇಘನಾ ಯಶಸ್ಸಿಗೆ ಏಕಾಗ್ರತೆ,ಛಲ & ಆತ್ಮವಿಶ್ವಾಸ ಕಾರಣ- ಸಿ.ವಿ.ರುದ್ರಾರಾಧ್ಯ
Shivaganga Yoga Center ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ೪೨೧ನೇ ರ್ಯಾಂಕ್ ಗಳಿಸಿದ ಬಿ.ಎಂ.ಮೇಘನಾ ಗೆ ಶಿವಮೊಗ್ಗ ವಿವೇಕ್ ಹಾಗೂ ಶಿವಗಂಗಾ ಯೋಗ ಕೇಂದ್ರ ಅಶ್ವತ್ಥನಗರ ನಿವಾಸಿಗಳ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ರಾಜ್ಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯರು ಮಾತನಾಡಿ, ಸಾಧನೆ ಸಾಧಕ ಸ್ವತ್ತೆ ಹೊರತು, ಸೋಮಾರಿಯ ಸ್ವತ್ತಲ್ಲ. ಮೀಘನಾರವರು ಪ್ರತಿ ದಿನ 10 ರಿಂದ 12 ಗಂಟೆಗಳ ಕಾಲ ಅಭ್ಯಾಸ ಮಾಡಿ ಏಕಾಗ್ರತೆ ಹಾಗೂ ಛಲದಿಂದ ಮತ್ತು ಆತ್ಮ ವಿಶ್ವಾಸದಿಂದ ಈ ಸಾಧನೆ ಮಾಡಿದ್ದಾರೆ. ಇವರ ಸಾಧನೆ ಇಂದಿನವರಿಗೆ ಮಾರ್ಗದರ್ಶನವಾಗಿದೆ. ಮೇಗನಾರವರಿಗೆ ತಂದೆ ತಾಯಿ ಆಶೀರ್ವಾದ ಮತ್ತು ಸಂಸ್ಕಾರ ಹಾಗೂ ಇವರ ವಿದ್ಯಾಭ್ಯಾಸದಲ್ಲಿ ಯೋಗವನ್ನು 1 ವಿಷಯವನ್ನಾಗಿ ತೆಗೆದುಕೊಂಡು ಅಭ್ಯಾಸ ಮಾಡಿದ್ದಾರೆ. ಆದ್ದರಿಂದ ಈ ರೀತಿಯ ಯಶಸ್ಸು ಸಿಕ್ಕಿದೆ ಎಂದು ನುಡಿದರು.
ಜೆಸಿಐನ ಅಧ್ಯಕ್ಷರಾದ ಮಂಜುಳಾ ಕೇಶವ್ ರವರು ಮಾತನಾಡಿ, ನಮ್ಮ ಜೆಸಿಐ ಸಂಸ್ಥೆ ಸಮಾಜದಲ್ಲಿ ಉತ್ತಮವಾದ ರೀತಿಯಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಗೆ ಕೀರ್ತಿ ತಂದಿದ ಮೇಘನಾರವರನ್ನು ಸನ್ಮಾನಿಸಿ ಗೌರವಿಸಿದ್ದೇವೆ. ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ. ಮೇಘನಾರವರು ಭರತನಾಟ್ಯ, ಸಂಗೀತ, ಗಮಕ ಸೇರಿದಂತೆ ಇನ್ನೂ ಹಲವಾರು ಕಲೆಗಳಲ್ಲಿ ಕರಗತವಾಗಿದೆ. ಇಂತಹ ಪ್ರತಿಭೆಯನ್ನು ಗೌರವಿಸಲು ನಮಗೆ ಸಂತೋಷವಾಗಿದೆ ಎಂದು ನುಡಿದರು.
Shivaganga Yoga Center ವೇದಿಕೆಯಲ್ಲಿ ಮಾಜಿ ಎಂ ಎಲ್ ಸಿ ರುದ್ರೇಗೌಡರು, ಈ.ವಿಶ್ವಾಸ್, ಇಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ.ವಿಜಯ್ ಕುಮಾರ್, ಕಾಟನ್ ಜಗದೀಶ್, ರಂಗಪ್ಪ, ಚಂದ್ರಶೇಖರಯ್ಯ, ವತ್ಸಲ ಮೋಹನ್, ಜೆಸಿ ಬಾಲರಾಜ್, ಪರಿಸರ ನಾಗರಾಜ್, ನೀಲಕಂಠ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
“ತಳಿ” ನಾಟಕ ನೋಡಲು ತಪ್ಪದೇ ಬನ್ನಿ!
ಶಿವಮೊಗ್ಗ ನಗರದ ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಏಪ್ರಿಲ್ 27ರ ಭಾನುವಾರ ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಹೃದಯಂಗಮವಾದ ವಸ್ತುವನ್ನು ಹೊಂದಿರುವ ‘ತಳಿ’ ಎಂಬ ನೂತನ ನಾಟಕವನ್ನು ಏರ್ಪಡಿಸಲಾಗಿದೆ.
ಖ್ಯಾತ ನಟ ಮತ್ತು ನಿರ್ದೇಶಕ ಎಸ್.ಎನ್. ಸೇತುರಾಮ್ ಅವರ ರಚನೆ ಮತ್ತು ನಿರ್ದೇಶನದ ಈ ನಾಟಕದ ಪ್ರದರ್ಶನಕ್ಕೆ 100 ರೂಗಳ ಟಿಕೆಟ್ ದರ ಇರಿಸಲಾಗಿದೆ.
ಈಗಾಗಲೇ ಕೆಲವು ಪ್ರದರ್ಶನ ಕಂಡು, ಭಾರೀ ಜನ ಮೆಚ್ಚುಗೆ ಪಡೆದಿರುವ ಈ ನಾಟಕವನ್ನು ಆಸಕ್ತ ನಾಟಕಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸಬೇಕೆಂದು ಅಜೇಯ ಸಂಸ್ಕೃತಿ ಬಳಗ ವಿನಂತಿಸಿದೆ.
ಮುಂಚಿತವಾಗಿ ಟಿಕೆಟ್ ಬೇಕಾದವರು ನೆಹರು ರಸ್ತೆಯ ರಾಯಲ್ ಕಾಫಿ ವರ್ಕ್ಸ್ ನಲ್ಲಿ ಪಡೆಯಬಹುದು. ಟಿಕೆಟ್ ಗಾಗಿ ಅಥವಾ ಹೆಚ್ಚಿನ ಮಾಹಿತಿಗಾಗಿ 94484 58457, 83108 76277, 98441 53534 ಇಲ್ಲಿಗೆ ಸಂಪರ್ಕಿಸಿ.
World Intellectual Property Day ಏಪ್ರಿಲ್ 26. ವಿಶ್ವ ಬೌದ್ಧಿಕ ಹಕ್ಕು ದಿನ, ವ್ಯಕ್ತಿಯ ನಾವೀನ್ಯತೆ ಮತ್ತು ಸೃಜನಶೀಲತೆಗೆ ಎಷ್ಟು ಸುರಕ್ಷತೆ?
World Intellectual Property Day ಪ್ರತಿ ವರ್ಷ ಏಪ್ರಿಲ್ 26 ರಂದು ವಿಶ್ವ ಬೌದ್ಧಿಕ ಆಸ್ತಿ ದಿನವು ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆ ವಹಿಸುವ ನಿರ್ಣಾಯಕ ಪಾತ್ರವನ್ನು ನಮಗೆ ನೆನಪಿಸುತ್ತದೆ.
2025 ರ ಥೀಮ್ – “IP ಮತ್ತು ಸಂಗೀತ: ಫೀಲ್ ದಿ ಬೀಟ್” (IP and music: Feel the beat of IP). ಸಂಗೀತ ಉದ್ಯಮದ ಮೇಲೆ ಬೆಳಕು ಚೆಲ್ಲುತ್ತದೆ. ಬೌದ್ಧಿಕ ಆಸ್ತಿ ಹಕ್ಕುಗಳು ಸಂಗೀತಗಾರರು, ಗೀತೆರಚನೆಕಾರರು, ನಿರ್ಮಾಪಕರು ಮತ್ತು ಪ್ರದರ್ಶಕರನ್ನು ಅವರ ಸೃಷ್ಟಿಗಳನ್ನು ರಕ್ಷಿಸುವ ಮೂಲಕ ಮತ್ತು ನ್ಯಾಯಯುತ ಮನ್ನಣೆ ಮತ್ತು ಪರಿಹಾರವನ್ನು ಖಚಿತಪಡಿಸಿಕೊಳ್ಳುವ ಮೂಲಕ ಹೇಗೆ ಸಬಲೀಕರಣಗೊಳಿಸುತ್ತವೆ ಎಂಬುದನ್ನು ತಿಳಿಸುತ್ತದೆ.
ಶಿವಮೊಗ್ಗದಂತಹ ಸಾಂಸ್ಕೃತಿಕವಾದ ಶ್ರೀಮಂತ ಮತ್ತು ಬೆಳೆಯುತ್ತಿರುವ ನಗರಕ್ಕೆ, ಈ ವರ್ಷದ ಥೀಮ್ ಹೆಚ್ಚು ಪ್ರಸ್ತುತವಾಗಲು ಸಾಧ್ಯ. ನಗರವು ಉದ್ಯಮಶೀಲತಾ ಚಟುವಟಿಕೆಯಲ್ಲಿ ಉಲ್ಬಣವನ್ನು ಕಾಣುತ್ತಿದೆ. ಮಾತ್ರವಲ್ಲದೆ, ಸಾಂಪ್ರದಾಯಿಕ ಸಂಗೀತ ಮತ್ತು ಪ್ರದರ್ಶನ ಕಲೆಗಳಲ್ಲಿ ಆಳವಾದ ಬೇರುಗಳನ್ನು ಹೊಂದಿದೆ. ತಾಂತ್ರಿಕ ನವೋದ್ಯಮಗಳು ಮತ್ತು MSMEಗಳು ವೇಗವನ್ನು ಪಡೆಯುತ್ತಿರುವಾಗ, ಶಿವಮೊಗ್ಗದ ಚೈತನ್ಯಶೀಲ ಸಾಂಸ್ಕೃತಿಕ ಮತ್ತು ಸೃಜನಶೀಲ ಪರಿಸರ ವ್ಯವಸ್ಥೆಯು IP ಹಕ್ಕುಗಳ ಬಲವಾದ ತಿಳುವಳಿಕೆ ಮತ್ತು ಅನ್ವಯದಿಂದ ಸಮಾನವಾಗಿ ಪ್ರಯೋಜನ ಪಡೆಯುತ್ತದೆ.
ಬೌದ್ಧಿಕ ಆಸ್ತಿ: ಪ್ರಮುಖ ವ್ಯವಹಾರ ಮತ್ತು ಸೃಜನಶೀಲ ಆಸ್ತಿ :
ಇದು ಪೇಟೆಂಟ್ ಪಡೆದ ಉತ್ಪನ್ನವಾಗಲಿ, ಹಕ್ಕುಸ್ವಾಮ್ಯ ಪಡೆದ ಸಂಗೀತ ತುಣುಕು ಆಗಿರಲಿ ಅಥವಾ ನೋಂದಾಯಿತ ಬ್ಯಾಂಡ್ ಆಗಿರಲಿ, ಬೌದ್ಧಿಕ ಆಸ್ತಿಯು ವಿಚಾರಗಳನ್ನು ಆರ್ಥಿಕ ಸ್ವತ್ತುಗಳಾಗಿ ಪರಿವರ್ತಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನವೋದ್ಯಮಗಳಿಗೆ – ವಿಶೇಷವಾಗಿ ಕೃಷಿ ತಂತ್ರಜ್ಞಾನ, ಶುದ್ಧ ಇಂಧನ ಅಥವಾ ಡಿಜಿಟಲ್ ಸೇವೆಗಳಂತಹ ಕ್ಷೇತ್ರಗಳಲ್ಲಿ – IP ಸ್ಪರ್ಧಾತ್ಮಕ ಅಂಚನ್ನು ಒದಗಿಸುತ್ತದೆ. ಹೂಡಿಕೆಯನ್ನು ಆಕರ್ಷಿಸಲು ಸಹಾಯ ಮಾಡುತ್ತದೆ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಬಾಗಿಲು ತೆರೆಯುತ್ತದೆ.
World Intellectual Property Day ಶಿವಮೊಗ್ಗದಂತಹ ನಗರಗಳಲ್ಲಿ, ಸ್ಥಳೀಯ ಉದ್ಯಮಿಗಳು ಸಾಮಾನ್ಯವಾಗಿ ಪ್ರಾದೇಶಿಕ ಸವಾಲುಗಳು ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಪ್ರೇರಿತವಾದ ಪರಿಹಾರಗಳನ್ನು ನಿರ್ಮಿಸುತ್ತಾರೆ. ಈ ನಾವೀನ್ಯತೆಗಳು, ಅನನ್ಯ ಮತ್ತು ಮೌಲ್ಯಯುತವಾಗಿದ್ದರೂ, IPR ಬಗ್ಗೆ ಸೀಮಿತ ಅರಿವಿನಿಂದಾಗಿ ಅವುಗಳನ್ನು ಹೆಚ್ಚಾಗಿ ಅಸುರಕ್ಷಿತವಾಗಿ ಬಿಡಲಾಗುತ್ತದೆ. ಇದು ಅವರನ್ನು ನಕಲು ಮಾಡುವ, ಕಡಿಮೆ ಮೌಲೀಕರಿಸುವ ಅಥವಾ ಸರಿಯಾದ ಕ್ರೆಡಿಟ್ ಇಲ್ಲದೆ ಶೋಷಿಸುವ ಅಪಾಯಕ್ಕೆ ಒಡ್ಡುತ್ತದೆ.
ಅಂತೆಯೇ, ಸ್ಥಳೀಯ ಸಂಗೀತಗಾರರು, ಜಾನಪದ ಕಲಾವಿದರು ಮತ್ತು ಪ್ರದರ್ಶಕರು ಪ್ರದೇಶದ ಸಾಂಸ್ಕೃತಿಕ ಗುರುತಿಗೆ ಅಪಾರ ಕೊಡುಗೆ ನೀಡುತ್ತಾರೆ. ಆದಾಗ್ಯೂ, ಸರಿಯಾದ ಹಕ್ಕುಸ್ವಾಮ್ಯ ರಕ್ಷಣೆಗಳಿಲ್ಲದೆ, ಅವರ ಕೆಲಸವನ್ನು ಅಂಗೀಕಾರ ಅಥವಾ ಆರ್ಥಿಕ ಲಾಭವಿಲ್ಲದೆ ಇತರರು ಪುನರುತ್ಪಾದಿಸಬಹುದು ಮತ್ತು ಹಣಗಳಿಸಬಹುದು.
ಸಣ್ಣ ನಗರಗಳಲ್ಲಿನ MSMEಗಳು ಏಕೆ ಗಮನ ಹರಿಸಬೇಕು :
MSMEಗಳು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ರಾಷ್ಟ್ರೀಯ GDP ಗೆ ಸುಮಾರು 30% ಕೊಡುಗೆ ನೀಡುತ್ತವೆ, ಭಾರತದ ಒಟ್ಟು ರಫ್ತಿನ ಸುಮಾರು 45% ರಷ್ಟನ್ನು ಹೊಂದಿವೆ ಮತ್ತು ಸುಮಾರು 120 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತವೆ, ಇದು ದೇಶದ ಕಾರ್ಯಪಡೆಯ ಸುಮಾರು 30% ರಷ್ಟು ಆಗಿದೆ. ಇದು MSMEಗಳನ್ನು ಅಂತರ್ಗತ ಬೆಳವಣಿಗೆಯ ಪ್ರಬಲ ಎಂಜಿನ್ ಮಾಡುತ್ತದೆ, ವಿಶೇಷವಾಗಿ ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಲ್ಲಿ, ಅವುಗಳ ಆರ್ಥಿಕ ಪ್ರಾಮುಖ್ಯತೆಯ ಹೊರತಾಗಿಯೂ, ಸಣ್ಣ ಪಟ್ಟಣಗಳಲ್ಲಿನ ಹೆಚ್ಚಿನ MSMEಗಳು ಬೌದ್ಧಿಕ ಆಸ್ತಿ ತಮ್ಮ ವ್ಯವಹಾರವನ್ನು ಹೇಗೆ ಹೆಚ್ಚಿಸಬಹುದು ಎಂಬುದರ ಬಗ್ಗೆ ತಿಳಿದಿಲ್ಲ. ಅನೇಕರು IP ದೊಡ್ಡ ನಿಗಮಗಳು ಅಥವಾ ಮೆಟ್ರೋ ನಗರಗಳಲ್ಲಿನ IT ಕಂಪನಿಗಳಿಗೆ ಮಾತ್ರ ಪ್ರಸ್ತುತವಾಗಿದೆ ಎಂದು ಭಾವಿಸುತ್ತಾರೆ. ಈ ತಪ್ಪು ಕಲ್ಪನೆಯನ್ನು ಪರಿಹರಿಸಬೇಕಾಗಿದೆ.
ಸ್ಪಾರ್ಟ್-ಅಪ್ಸ್ ಇಂಡಿಯಾ ಬೌದ್ಧಿಕ ಆಸ್ತಿ ರಕ್ಷಣೆ (SIPP) ಯೋಜನೆ ಮತ್ತು ರಾಷ್ಟ್ರೀಯ IPR ನೀತಿಯಂತಹ ಸರ್ಕಾರಿ ಉಪಕ್ರಮಗಳಿಗೆ ಧನ್ಯವಾದಗಳು. MSMEಗಳು ಈಗ ಸಬ್ಸಿಡಿ IP ನೋಂದಣಿ, ಸರಳೀಕೃತ ಫೈಲಿಂಗ್ ಪ್ರಕ್ರಿಯೆಗಳು ಮತ್ತು ಕಾನೂನು ಬೆಂಬಲವನ್ನು ಹೊಂದಿವೆ. ಅದಾಗ್ಯೂ, ಅಂತರವನ್ನು ನಿಜವಾಗಿಯೂ ಕಡಿಮೆ ಮಾಡಲು, IPR ಅರಿವು ಮತ್ತು ಸೌಲಭ್ಯವನ್ನು ಸ್ಥಳೀಯ ಮಟ್ಟದಲ್ಲಿ ಹೆಚ್ಚು ಪ್ರವೇಶಿಸುವಂತೆ ಮಾಡಬೇಕು.
ಶಿವಮೊಗ್ಗದಂತಹ ಸ್ಥಳಗಳಲ್ಲಿ, ಸಂಸ್ಥೆಗಳು, ವ್ಯಾಪಾರ ಕೊಠಡಿಗಳು ಮತ್ತು ಇನ್ನುಬೇಟರ್ಗಳು ನಿಯಮಿತವಾಗಿ ಐಪಿ ಸಾಕ್ಷರತಾ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಬೇಕು – ವಿಶೇಷವಾಗಿ ಮೊದಲ ಬಾರಿಗೆ ಉದ್ಯಮಿಗಳು, ಮಹಿಳೆಯರು ನೇತೃತ್ವದ ವ್ಯವಹಾರಗಳು ಮತ್ತು ಕುಶಲಕರ್ಮಿಗಳಿಗೆ ಆಯೋಜಿಸಬೇಕು.
ಸ್ಥಳೀಯ ನಾವೀನ್ಯತೆ ಮತ್ತು ಸಾಂಸ್ಕೃತಿಕ ಸಾಮರ್ಥ್ಯವನ್ನು ಅಸ್ಲಾಕ್ ಮಾಡುವುದು :
ಭಾರತದ ನಾವೀನ್ಯತೆ ಕಥೆ ನಗರ ತಂತ್ರಜ್ಞಾನ ಕೇಂದ್ರಗಳಿಗೆ ಸೀಮಿತವಾಗಿಲ್ಲ. ಇದು ಶಿವಮೊಗ್ಗದಂತಹ ಸ್ಥಳಗಳಲ್ಲಿ ತರಗತಿ ಕೊಠಡಿಗಳು, ಗ್ಯಾರೇಜ್ಗಳು, ಹೊಲಗಳು ಮತ್ತು ಸಣ್ಣ ಸ್ಟುಡಿಯೋಗಳಲ್ಲಿ ಅಭಿವೃದ್ದಿ ಹೊಂದುತ್ತದೆ. ಇದು ಜೈವಿಕ ವಿಘಟನೀಯ ಪ್ಯಾಕೇಜಿಂಗ್ ಪರಿಹಾರವಾಗಲಿ. ಸುಸ್ಥಿರ ಕೃಷಿ ತಂತ್ರವಾಗಲಿ ಅಥವಾ ಜಾಗತಿಕ ಪ್ರೇಕ್ಷಕರಿಗಾಗಿ ಮರುರೂಪಿಸಲಾದ ಜಾನಪದ ಗೀತೆಯಾಗಲಿ – ಈ ಸೃಷ್ಟಿಗಳು ಮನ್ನಣೆ, ರಕ್ಷಣೆ ಮತ್ತು ಬೆಂಬಲಕ್ಕೆ ಅರ್ಹವಾಗಿವೆ.
ಐಪಿ ಮತ್ತು ಸಂಗೀತದ ಮೇಲೆ ಕೇಂದ್ರೀಕರಿಸುವ ಈ ವರ್ಷದ ವಿಷಯವು ಸೃಜನಶೀಲ ಕೈಗಾರಿಕೆಗಳನ್ನು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕಾನೂನುಬದ್ಧ ಕೊಡುಗೆದಾರರಾಗಿ ನೋಡುವಂತೆ ನಮ್ಮನ್ನು ಒತ್ತಾಯಿಸುತ್ತದೆ. ಶಿವಮೊಗ್ಗದ ಸಾಂಪ್ರದಾಯಿಕ ಪ್ರದರ್ಶಕರು ಮತ್ತು ಸಮಕಾಲೀನ ಸಂಗೀತಗಾರರು ತಮ್ಮ ಕೆಲಸವನ್ನು ಸಂರಕ್ಷಿಸಲು, ಆದಾಯ ಗಳಿಸಲು ಮತ್ತು ಜಾಗತಿಕ ಮಾನ್ಯತೆ ಪಡೆಯಲು ಹಕ್ಕುಸ್ವಾಮ್ಯ ಕಾನೂನುಗಳು, ಪ್ರದರ್ಶನ ಹಕ್ಕುಗಳು ಮತ್ತು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳಬಹುದು.
ಸೃಜನಶೀಲರಲ್ಲಿ ಐಪಿ ಜಾಗೃತಿಯನ್ನು ಉತ್ತೇಜಿಸುವುದು ತಂತ್ರಜ್ಞಾನದ ಆರಂಭಿಕರಿಗಾಗಿ ಮಾಡುವಷ್ಟೇ ಮುಖ್ಯವಾಗಿದೆ. ವಾಣಿಜ್ಯ ನಾವೀನ್ಯತೆ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿ ಎರಡನ್ನೂ ರಕ್ಷಿಸುವ ಮೂಲಕ, ನಾವು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವುದಲ್ಲದೆ, ನಮ್ಮ ಪ್ರಾದೇಶಿಕ ಗುರುತನ್ನು ವ್ಯಾಖ್ಯಾನಿಸುವ ಶ್ರೀಮಂತ ಪರಂಪರೆಯನ್ನು ಸಹ ಸಂರಕ್ಷಿಸುತ್ತೇವೆ.
2025 ರ ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಆಚರಿಸುತ್ತಿರುವಾಗ, ಐಪಿಆರ್ ಜ್ಞಾನ ಮತ್ತು ಪ್ರವೇಶವನ್ನು ನಿಜವಾಗಿಯೂ ಎಲ್ಲರನ್ನೂ ಒಳಗೊಳ್ಳುವಂತೆ ಮಾಡಲು ನಾವು ಬದ್ಧರಾಗೋಣ. ಶಿವಮೊಗ್ಗ ಮತ್ತು ಅದರಂತಹ ನಗರಗಳಿಗೆ, ಇದರರ್ಥ ಸ್ಥಳೀಯ ನಾವೀನ್ಯಕಾರರು, ಉದ್ಯಮಿಗಳು ಮತ್ತು ಕಲಾವಿದರನ್ನು ಸಮಾನವಾಗಿ ಸಬಲೀಕರಣಗೊಳಿಸುವುದು, ಅವರು ರಚಿಸುವುದನ್ನು ರಕ್ಷಿಸಲು, ಅವರು ನಿರ್ಮಿಸುವುದನ್ನು ಬೆಳೆಸಲು ಮತ್ತು ಅವರು ವ್ಯಕ್ತಪಡಿಸುವುದನ್ನು ಹಂಚಿಕೊಳ್ಳಲು ಸಹಾಯ ಮಾಡುವುದು.
ಶಿವಮೊಗ್ಗ ನಾವೀನ್ಯತೆ ಮತ್ತು ಸಂಪ್ರದಾಯದ ವಿಶಿಷ್ಟ ಛೇದಕದಲ್ಲಿ ನಿಂತಿದೆ. ಐಪಿ ಶಿಕ್ಷಣ, ಬೆಂಬಲ ಮೂಲಸೌಕರ್ಯ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯಲ್ಲಿ ಸರಿಯಾದ ಉತ್ತೇಜನದೊಂದಿಗೆ, ಸಣ್ಣ ನಗರಗಳು ಸೃಜನಾತ್ಮಕವಾಗಿ, ಸುಸ್ಥಿರವಾಗಿ ಮತ್ತು ಕಾನೂನುಬದ್ದವಾಗಿ ಗಣನೀಯ ಬದಲಾವಣೆಯನ್ನು ಹೇಗೆ ಉಂಟುಮಾಡಬಹುದು ಎಂಬುದಕ್ಕೆ ಇದು ಮಾದರಿಯಾಗುವ ಸಾಮರ್ಥ್ಯವನ್ನು ಹೊಂದಿದೆ.
ನಿಮ್ಮೆಲ್ಲರಿಗೂ “2025 ರ ಸೃಜನಾತ್ಮಕ ವಿಶ್ವ ಬೌದ್ಧಿಕ ಆಸ್ತಿ ದಿನ” ದ ಶುಭಾಶಯಗಳು.
ಲೇಖಕರು,
ಸಾಧ್ವಿ ಸಿ ಕಾಂತ್
IP Attorney
SCK & ಅಸೋಸಿಯೇಟ್ಸ್
Digital library ಹೊಸ ವಿಷಯ ಕಲಿಕೆ ಸಂಗಡ ಮಕ್ಕಳು ದೈಹಿಕ & ಮಾನಸಿಕ ದೃಢತೆ ಸಾಧಿಸಬೇಕು- ವೀರೇಶ್ ಕ್ಯಾತನಕೊಪ್ಪ
Digital library ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ ಎಂದು ಸೂಗುರು ಗ್ರಾಮ ಪಂಚಾಯಿತಿಯ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವೀರೇಶ್ ಕ್ಯಾತನಕೊಪ್ಪ ಹೇಳಿದರು.
ಅವರು ಸೂಗುರು ಗ್ರಾಮ ಪಂಚಾಯತಿಯ ಡಿಜಿಟಲ್ ಗ್ರಂಥಾಲಯ ಮಾಹಿತಿ ಅರಿವು ಕೆಂದ್ರದಲ್ಲಿ ಆಯೋಜಿಸಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಾತನಾಡುತ್ತಾ, ಬೇಸಿಗೆ ಶಿಬಿರಗಳಲ್ಲಿ ಗ್ರಾಮೀಣ ಮಕ್ಕಳು ಭಾಗವಹಿಸುವುದರಿಂದ ಕ್ರಿಯಾಶೀಲ ಹಾಗೂ ಸೃಜನಶೀಲ ವ್ಯಕ್ತಿತ್ವ ವೃದ್ಧಿಸುತ್ತದೆ ಎಂದರು.
ಹೊಸ ಹೊಸ ವಿಷಯಗಳನ್ನು ಮಕ್ಕಳು ಕಲಿಯುವುದರ ಜತೆಯಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು. ಗುರು ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಭಾಗ್ಯಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಹೊಸ ಹೊಸ ಚಟುವಟಿಕೆಗಳನ್ನು ಕಲಿಯಲು ಸೃಜನಶೀಲತೆಯನ್ನು ಮತ್ತು ಕ್ರಿಯಾತ್ಮಕ ಆಲೋಚನೆಗಳನ್ನ ಬೆಳೆಸಿಕೊಳ್ಳಲು ಇಂತಹ ಬೇಸಿಗೆ ಶಿಬಿರಗಳು ಫಲಕಾರಿಯಾಗುತ್ತವೆ ಎಂದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಜಿ ಮಲ್ಲಿಕಾರ್ಜುನ್ ಮಾತನಾಡುತ್ತಾ, ರಜೆ ವೇಳೆ ಮಕ್ಕಳು ಕೇವಲ ಮೊಬೈಲ್ ಮತ್ತು ಇನ್ನಿತರ ಯಾಂತ್ರಿಕ ಯುಗಕ್ಕೆ ಮಾರು ಹೋಗದೆ, ಇಂತಹ ಬೇಸಿಗೆ ಶಿಬಿರಗಳಿಂದ ಹೆಚ್ಚು ಹೆಚ್ಚು ಕಲಿಯಲು ಅವರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮಧು, ಮಾಜಿ ಅಧ್ಯಕ್ಷ ಕೆ ಪಿ ಲೋಹಿತ್, ಓಂಕಾರಪ್ಪ ಎಸ್ ಜಿ, ಮಲ್ಲಿಕಾರ್ಜುನ್, ಸದಸ್ಯರಾದ ರೋಹಿಣಿ, ಪ್ರತಿಭಾ ರಂಗನಾಥ್, ನೇತ್ರಾವತಿ, ಪಂಚಾಯತಿಯ ಪಿಡಿಒ ವಿಜಯಮ್ಮ, ರಮೇಶ್, ಸಿದ್ದೇಶ್, ರಾಘವೇಂದ್ರ, ಕಾರ್ಯದರ್ಶಿ ಪರಶುರಾಮ್, ಅಶ್ವಿನಿ, ಗ್ರಂಥಾಲಯ ಮೇಲ್ವಿಚರಕಜಯಪ್ಪ ಚೇತನ್ ಸೇರಿದಂತೆ ಮತ್ತಿತರರಿದ್ದರು.
Karnataka Secondary Education Examination Board ತೀರ್ಥಹಳ್ಳಿಯ ಕು.ದೀಕ್ಷಾಗೆ ಮರು ಮೌಲ್ಯಮಾಪನದಲ್ಲಿ 600/600
ಮರುಮೌಲ್ಯಮಾಪನದಲ್ಲಿ 600ಕ್ಕೆ 600 ಅಂಕ ಪಡೆದ ತೀರ್ಥಹಳ್ಳಿಯ ವಾಗ್ದೇವಿ ಪಿಯು ಕಾಲೇಜಿನ ದೀಕ್ಷಾ..
ಕೆಮಿಸ್ಟ್ರಿ ಯಲ್ಲಿ ಈ ಮೊದಲು 100ಕ್ಕೆ 99 ಅಂಕ ನೀಡಲಾಗಿತ್ತು ರಿವ್ಯಾಲ್ಯೂವೇಶನ್ ನಲ್ಲಿ 100ಕ್ಕೆ 100 ಸಿಕ್ಕಿದೆ…
Karnataka Secondary Education Examination Board ದೀಕ್ಷಾ ಈ ಬಾರಿಯ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ Rank ಪಡೆದ ಪ್ರತಿಭಾವಂತ ವಿದ್ಯಾರ್ಥಿನಿ…
ತೀರ್ಥಹಳ್ಳಿಗೆ ಹೆಮ್ಮೆ ತಂದ ವಿದ್ಯಾರ್ಥಿನಿ ದೀಕ್ಷಾಗೆ ಅಭಿನಂದನೆಗಳು.
