Wednesday, May 14, 2025
Wednesday, May 14, 2025

B.Y.Vijayendra ಡಿಜಿಟಲ್ ಮೀಟರ್ ದುಬಾರಿ ಬೆಲೆ, ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಕೋರ್ಟ್ ತಡೆಯಾಜ್ಞೆ

Date:

B.Y.Vijayendra ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿಯ ಮೂಲಕ 200 ಯೂನಿಟ್‌ ವರೆಗೆ ಎಲ್ಲರಿಗೂ ಉಚಿತ ವಿದ್ಯುತ್‌ ನೀಡುತ್ತೇವೆ ಎಂದು ಅವಾಸ್ತವಿಕ ಗ್ಯಾರಂಟಿ ನೀಡಿ ಅದಕ್ಕೂ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು.

ಆದರೆ ಗ್ಯಾರಂಟಿ ಅನುಷ್ಠಾನದ ಬಳಿಕ ಇಂಧನ ಇಲಾಖೆ ದಿವಾಳಿಯಂಚಿಗೆ ಸಾಗಿದ ಬೆನ್ನಲ್ಲೇ ಗ್ರಾಹಕರ ಮೇಲೆ ಹೊರೆ ಹಾಕಿ ದಿನದಿಂದ ದಿನಕ್ಕೆ ವಿದ್ಯುತ್‌ ದರ ಏರಿಸುತ್ತಲೇ ಇದ್ದ ಈ ಸರ್ಕಾರ ಇದೀಗ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿ ಬರೋಬ್ಬರಿ ₹10,000 ರೂ. ನಿಗಧಿಪಡಿಸಿದ ನಿರ್ಧಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿ ತಡೆಯಾಜ್ಞೆ ನೀಡಿದೆ.

₹2000 ರೂ. ಇದ್ದ ಸ್ಮಾರ್ಟ್ ಮೀಟರ್ ಬೆಲೆಯನ್ನು ₹10000 ಕ್ಕೆ ಏರಿಸಿ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ ಕಾಂಗ್ರೆಸ್ ಕಾಂಗ್ರೆಸ್ ಸರ್ಕಾರಕ್ಕೆ ಉಚಿತ ವಿದ್ಯುತ್ ಕೊಡಿ ಎಂದು ಯಾರಾದರೂ ಕೇಳಿದ್ರಾ? ಬಡವರ ಸ್ಥಿತಿ ಏನಾಗಬೇಕು? ಎಂದು ಉಚ್ಛ ನ್ಯಾಯಾಲಯ ಮಂಗಳಾರತಿ ಎತ್ತಿದೆ.

B.Y.Vijayendra ಇನ್ನಾದರೂ ಈ ಸರ್ಕಾರ ಜನಪೀಡಕ ನಿರ್ಧಾರಗಳನ್ನು ಕೈಬಿಟ್ಟು ಜನಪರ ಕಾರ್ಯಕ್ರಮಗಳಿಗೆ ಮುಂದಾಗಲಿ ಎಂದು ಒತ್ತಾಯಿಸುತ್ತೇನೆ ಎಂದು ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಅಭಿಯಾನದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ
ಬಿ.ವೈ.ವಿಜಯೇಂದ್ರ ತಮ್ಮ ಅನಿಸಿಕೆಯನ್ನ
ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JNNC College ಮೇ 14. ಜೆಎನ್ ಎನ್ ಸಿ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

JNNC College ರಾಷ್ಟ್ರೀಯ ಶಿಕ್ಷಣ ಸಮಿತಿ, ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ,...