Sunday, February 22, 2026
Sunday, February 22, 2026
Home Blog Page 225

Rotary Club Shimoga ರೋಟರಿ ಕ್ಲಬ್ ಇಮೇಜ್ ಉತ್ತೇಜಿಸುವ ವಿವಿಧ ಕಾರ್ಯಕ್ರಮಗಳು ಯಶಸ್ವಿ

0

Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಹಾಗೂ ಶಿವಮೊಗ್ಗದ ರಾಯಲ್ ಆರ್ಕಿಡ್ ಸೆಂಟ್ರಲ್ ಸಹಯೋಗದಲ್ಲಿ ಆಯೋಜಿಸಿದ್ದ ಸಮುದಾಯ ಬಾಂಧವ್ಯ ಮತ್ತು ಮನರಂಜನೆಯ ಮೂಲಕ ರೋಟರಿಯ ಸಾರ್ವಜನಿಕ ಇಮೇಜ್ ಉತ್ತೇಜಿಸುವ ರೋಮಾಂಚಕ ಮತ್ತು ಸ್ಮರಣೀಯ ಕುಟುಂಬ ಮೋಜಿನ ದಿನವನ್ನು ಯಶಸ್ವಿಯಾಗಿ ನಡೆಸಲಾಯಿತು.
ಪ್ರಭು ಮತ್ತು ಶಿವಮೊಗ್ಗದ ರಾಯಲ್ ಆರ್ಕಿಡ್ ಸೆಂಟ್ರಲ್‌ನ ಜನರಲ್ ಮ್ಯಾನೇಜರ್ ನರಸಿಂಹ ಮೂರ್ತಿ ಅವರ ಉಪಸ್ಥಿತಿಯಿಂದ ಕುಟುಂಬ ಮೋಜಿನ ದಿನ – ಫೆಲೋಶಿಪ್ ಮತ್ತು ಮೋಜಿನ ಆಚರಣೆ ನಡೆಸಲಾಯಿತು. ಕಾರ್ಯಕ್ರಮವನ್ನು ಅಧ್ಯಕ್ಷ ಪ್ರಕಾಶ್ ಮೂರ್ತಿ ಉದ್ಘಾಟಿಸಿದರು. ಕಾರ್ಯದರ್ಶಿ ರಶ್ಮಿ ಅವರ ಸಮರ್ಥ ನಾಯಕತ್ವದಲ್ಲಿ ಕಾರ್ಯಕ್ರಮ ಸಂಯೋಜಿಸಲಾಯಿತು.
ಆಟಗಳು, ಫ್ಯಾಷನ್ ಶೋಗಳು, ಡಿಜೆ ನೃತ್ಯ ಮತ್ತು ಸಂವಾದಾತ್ಮಕ ಮನರಂಜನಾ ವಿಭಾಗಗಳು ಸೇರಿದಂತೆ ವ್ಯಾಪಕವಾದ ಆಕರ್ಷಕ ಚಟುವಟಿಕೆಗಳಿಂದ ಕಾರ್ಯಕ್ರಮ ಕೂಡಿತ್ತು. ಗಾಯಕ ಪೃಥ್ವಿ ಗೌಡ, ಡಿಜೆ ನವೀನ್, ಚಿನ್ಮಯ ನಿರೂಪಣೆ ಮಾಡಿದರು.
Rotary Club Shimoga ರೋಟರಿ ಸದಸ್ಯರು, ಅವರ ಕುಟುಂಬಗಳು ಮತ್ತು ಅತಿಥಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಕಾರ್ಯಕ್ರಮ ಅದ್ಭುತ ಯಶಸ್ಸನ್ನು ಕಂಡಿತು. ಇದು ಒಗ್ಗಟ್ಟಿನ ಮನೋಭಾವ, ಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು ಅರ್ಥಪೂರ್ಣ ಸಹಭಾಗಿತ್ವದ ಮೂಲಕ ಸಾರ್ವಜನಿಕ ಉಪಸ್ಥಿತಿಯನ್ನು ಸೃಷ್ಟಿಸುವ ರೋಟರಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲು ಎಲ್ಲ ಪ್ರಾಯೋಜಕರು, ಭಾಗವಹಿಸಿದವರು, ಸ್ವಯಂಸೇವಕರು ಮತ್ತು ನಕ್ಷತ್ರ ಇವೆಂಟ್ಸ್ ಸಹಕರಿಸಿದ್ದಾರೆ.

Manipal Academy of Higher Education ಶಿವಮೊಗ್ಗದ ಡಾ.ಡಿ.ಆರ್.ಇಂಚರಾ ಅವರಿಗೆ ಪಿಎಚ್ ಡಿ ಪದವಿ

0

Manipal Academy of Higher Education ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಮಣಿಪಾಲನ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೌತಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿದ ಇಂಚರಾ ಡಿ.ಆರ್. ಅವರಿಗೆ ಪಿಎಚ್.ಡಿ. ಪದವಿ ಲಭಿಸಿದೆ.

ಅವರ ಸಂಶೋಧನಾ ಪ್ರಬಂಧದ ಶೀರ್ಷಿಕೆ = “Study of Structural, Optical, Multiferroic and Photo response properties of Hexagonal Manganites”. ಈ ಸಂಶೋಧನೆ, ಪ್ರಾಧ್ಯಾಪಕಿ ಡಾ. ಮಮತಾ ಡಿ. ದೈವಜ್ಞ ಅವರ ಮಾರ್ಗದರ್ಶನದಲ್ಲಿ ನಡೆದಿದೆ.

ಡಾ. ಇಂಚರಾ ಡಿ.ಆರ್. ಅವರು ಶಿವಮೊಗ್ಗದ ಎಟಿಎನ್ಸಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ. ಡಿ.ಜಿ. ರಾಮೇಶ್ ಹಾಗೂ ಗೃಹಿಣಿಯಾದ ಶ್ರೀಮತಿ ಅಂಬಿಕಾ ರಾಮೇಶ್ ಅವರ ಮಗಳು. ತಂದೆಯೆಂಬ ಬೆನ್ನೆಲುಬು ಶಕ್ತಿಯಾಗಿ, ತಾಯಿಯ ತ್ಯಾಗದ ನೆರಳಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಹೃದಯಂಗಮವಾಗಿ ತಿಳಿಸಿದ್ದಾರೆ.

Manipal Academy of Higher Education ನನ್ನ ತಂದೆ ನನಗೆ ಈ ದಾರಿಗೆ ದಿಕ್ಕು ತೋರಿಸಿದರು, ಆದರೆ ಅಂತಿಮ ಗುರಿ ನೋಡಿ ಹೆಮ್ಮೆಪಡುವ ಮೊದಲು ನಮ್ಮನ್ನೆಲ್ಲಾ ಬಿಟ್ಟುಹೋದರು. ಈ ಸಾಧನೆ ಅವರಿಗೆ ಅರ್ಪಣೆ,” ಎಂದು ಡಾ. ಇಂಚರಾ ತಮ್ಮ ಭಾವನೆಯನ್ನು ಹಂಚಿಕೊಂಡರು

Klive Special Article ಸಂಸ್ಕೃತ ಅಲಂಕಾರ ಪರಂಪರೆಯ ವಿಹಂಗಮ ನೋಟ ಒದಗಿಸುವ ಕೃತಿ ಅಲಂಕಾರಗಳು: ಐತಿಹಾಸಿಕ ಅಧ್ಯಯನ – ಡಾ.ಮೈತ್ರೇಯಿ ಆದಿತ್ಯ ಪ್ರಸಾದ್

0

Klive Special Article ಕರ್ನಾಟಕ ರಾಜ್ಯ ಸಂಸ್ಕೃತಪಾಠಶಾಲಾ ಶಿಕ್ಷಕರ ಸಂಘ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಸಂಸ್ಕೃತ ಪಾಠಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ವಾರ್ಷಿಕ ಮಹಾಧಿವೇಶನದಲ್ಲಿ ಸಂಸ್ಕೃತ ಕುರಿತಾದ ಡಾ. ದೀಪಶ್ರೀ ರಮೇಶ್ ಅವರ ಸಂಶೋಧಿತ ಪ್ರಬಂಧ “ಅಲಂಕಾರಗಳು: ಐತಿಹಾಸಿಕ ಅಧ್ಯಯನ” ಕೃತಿ ಬಿಡುಗಡೆ ಗೊಂಡಿತು.

ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರಘಾರಾಜೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಈ ಸಮಾರಂಭದಲ್ಲಿ ಶಾಸಕ ಚನ್ನಬಸಪ್ಪ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್ ಅಹಲ್ಯಾ, ಕುಲಸಚಿವ ಪ್ರೋ ವಿ. ಗಿರೀಶ್ ಚಂದ್ರ ಅವರುಗಳಿದ್ದರು.

ಸಂಸ್ಕೃತದಲ್ಲಿ ಪಿ ಹೆಚ್ ಡಿ ಗೌರವ ಪಡೆದಿರುವ ಡಾ. ದೀಪಶ್ರೀರಮೇಶ್ ಅವರ “ಅಲಂಕಾರಗಳು : ಐತಿಹಾಸಿಕ ಅಧ್ಯಯನ” ಸಂಶೋಧನ ಪ್ರಬಂಧವನ್ನು ಉಪನ್ಯಾಸಕಿ, ಲೇಖಕಿ ಡಾ. ಮೈತ್ರೇಯಿ ಆದಿತ್ಯಪ್ರಸಾದ್ ಅವರು ವಿಮರ್ಶಿಸುವ ಮೂಲಕ ಕೃತಿಯ ಮಹತ್ವವನ್ನು ಗುರುತಿಸಿದ್ದಾರೆ.

ಅಲಂಕಾರಗಳೇ ಕಾವ್ಯದ ಅಡಿಪಾಯ ಸ್ತೃತ ಪಡಿಸಿದ ‘ಅಲಂಕಾರಗಳು: ಐತಿಹಾಸಿಕ ಅಧ್ಯಯನ’

ನಾನು ಸಂಸ್ಕೃತ ಭಾರತೀಯ ಪ್ರಶಿಕ್ಷಣ ಪಡೆದ ಮೇಲೆ ನಾನು ಮತ್ತು ರಜನಿ ಮೇಡಂ ಸೇರಿ ಮೊದಲ ಸಂಭಾಷಣಾ ಶಿಬಿರ ಮಾಡಿದ್ದು, ಗುರುಪುರದ ಅವರ ಮನೆಯ ಮಹಡಿಯ ಮೇಲೆ. ಅಲ್ಲಿ ಸಂಸ್ಕೃತ ಕಲಿಯಲು ಬಂದವರಲ್ಲಿ ದೀಪಶ್ರೀ ಕೂಡ ಒಬ್ಬಳು. ಅಲ್ಲಿಂದ ಮೂಡಿದ ಸಂಸ್ಕೃತಆಸಕ್ತಿ ಸಂಸ್ಕೃತದಲ್ಲಿ ಪದವಿ, ಸ್ನಾತಕೋತ್ತರ ಅಧ್ಯಯನ ಹಾಗೂ ಸಂಸ್ಕೃತದಲ್ಲಿಯೇ ಸಂಶೋಧನೆಯನ್ನು ಮಾಡಿ ಡಾಕ್ಟರೇಟ್ ಪದವಿ ಪಡೆದು ತನ್ನ ಸಂಶೋಧಿತ ಪ್ರಬಂಧವನ್ನು ಒಂದು ಕೃತಿಯಾಗಿ ಪ್ರಕಟಿಸಿ ಹೊರತರುವ ಮಟ್ಟಿಗೆ ಬೆಳೆದು ಬಂದಿತೆನ್ನುವುದೇ ಒಂದು ರೀತಿಯ ಹೆಮ್ಮೆಯ ಭಾವ. ಅಲ್ಲದೇ ಆಕೆ ಈಗ ಕೆಲಸ ಮಾಡುತ್ತಿರುವುದೂ ಸಹ ಶ್ರೀ ಬೆಕ್ಕಿನ ಕಲ್ಮಠದ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿಯೇ.

ತನ್ನ ಶ್ರದ್ಧೆ ವಿನಯತೆಯ ಫಲವಾಗಿ ಈ ಎತ್ತರಕ್ಕೆ ಡಾ. ದೀಪಶ್ರೀ ಬೆಳೆದು ನಿಂತಿದ್ದಾಳೆಂದರೆ ಅದು ಅತಿಶಯೋಕ್ತಿಯಲ್ಲ. ಮೊದಲಿನಿಂದಲೂ-“ಮೇಡಂ ಒಂದು ಸಹಾಯ ಮಾಡ್ತೀರಾ” ಅಂತ ಕೇಳುತ್ತಿದ್ದ ಆಕೆ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ನಿರಂತರ ಪರಿಶ್ರಮದ ಹಾಗೂ ತಪಸ್ಸೆಂಬತೆ ಈ ಕಾರ್ಯ ಮಾಡಿ ಮುಗಿಸಿದ್ದಾಳೆ. ಎಲ್ಲರ ಪ್ರಶಂಸೆಗೂ ಪಾತ್ರಳಾಗಿದ್ದಾಳೆ. ಮೊನ್ನೆ ನಡೆದ ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕರ ಸಮ್ಮೇಳನದಲ್ಲಿ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶ್ರೀಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಶಿವಮೊಗ್ಗ ಶಾಸಕರಾದ ಶ್ರೀ ಚನ್ನಬಸಪ್ಪ, ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಅಹಲ್ಯಾ ಹಾಗೂ ಆಕೆಯ ಸಂಶೋಧನೆಗೆ ಮಾರ್ಗದರ್ಶನ ಮಾಡಿದ ಸಹ್ಯಾದ್ರಿ ಕಲಾ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ ಡಾ. ಸುಮಿತ್ರ ವಿ ಭಟ್ ಇವರುಗಳಿಂದ ಡಾ. ದೀಪಶ್ರೀ ರಮೇಶ್ ಪುಸ್ತಕ ಲೋಕಾರ್ಪಣೆಗೊಂಡಿದೆ. ಆ ಪುಸ್ತಕದ ಕುರಿತಾಗಿ ಒಂದಷ್ಟು ಬರೆಯಬೇಕೆನಿಸಿ ಬರೆದ ಲೇಖನ ಇದು.

Klive Special Article ಕಾವ್ಯ ಶೋಭಾಕರಾನ್ ಧರ್ಮಾನ್ ಅಲಂಕಾರಾನ್ ಪ್ರಚಕ್ಷತೇ ಎಂಬ ಮಾತಿನಂತೆ ಕಾವ್ಯಕ್ಕೆ ಶೋಭೆ ತರುವ ಅಲಂಕಾರಗಳ ಕುರಿತಾಗಿ “ಅಲಂಕಾರಗಳು : ಐತಿಹಾಸಿಕ ಅಧ್ಯಯನ” ಎಂಬ ಶೀರ್ಷಿಕೆ ಹೊಂದಿ ಬಿಡುಗಡೆಯಾದ ಪುಸ್ತಕ ಸಂಸ್ಕೃತ ಅಲಂಕಾರ ಪರಂಪರೆಯ ವಿಹಂಗಮ ನೋಟವನ್ನು ಒದಗಿಸುವ ಅತ್ಯುತ್ತಮ ಕೈಪಿಡಿಯಾಗಿದೆ.

ಶಬ್ದಾರ್ಥೌ ಸಹಿತೌ ಕಾವ್ಯಂ, ಅಲಂಕಾರೈಶ್ಚ ಶೋಭಿತಮ್ ಟ
ರಸಾತ್ಮಕಂ ಪರಂ ಬ್ರಹ್ಮ, ಪೃಥಕ್ಕಾರ್ಯಂ ನ ಯುಜ್ಯತೇ?
ಎಂಬ ಶ್ಲೋಕ ಶಬ್ದ ಮತ್ತು ಅರ್ಥ ಎರಡೂ ಸಹಿತವಾಗಿರುವ ಸಾಹಿತ್ಯವೇ ಕಾವ್ಯ. ಅದು ಅಲಂಕಾರಗಳಿಂದ ಶೋಭಿತವಾಗಿ ರಸಭರಿತವಾಗಿ ಪರಬ್ರಹ್ಮದಂತೆ ಆಗಿ ಇದರಿಂದ ಅವೆರಡನ್ನೂ ಬೇರ್ಪಡಿಸಲು ಸಾಧ್ಯವಿಲ್ಲ ಎನ್ನುವುದು ಅಲಂಕಾರಗಳೇ ಕಾವ್ಯದ ಅಡಿಪಾಯ, ಕಾವ್ಯವೇ ರಸಭೋದನೆ ದಿವ್ಯಸಾಧನವೆಂದು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕೃತಿ ಸಂಸ್ಕೃತ ಸಾಹಿತ್ಯದಲ್ಲಿ ಬರುವ ಅಲಂಕಾರ ಶಾಸ್ತ್ರದ ಹಿನ್ನೆಲೆಯನ್ನು ಸಮಗ್ರವಾಗಿ ಓದುಗರ ಮುಂದೆ ತೆರೆದಿಡುತ್ತದೆ. ಇದರಲ್ಲಿನ ಪ್ರಥಮ ಅಧ್ಯಾಯವು ಭರತನ ನಾಟ್ಯ ಶಾಸ್ತ್ರ ಹಾಗೂ ಭಾಮಹನ ಕಾವ್ಯಾಲಂಕಾರಗಳನ್ನು, ದ್ವಿತೀಯ ಅಧ್ಯಾಯವು ದಂಡಿಯ ಕಾವ್ಯಾದರ್ಶ ಹಾಗೂ ಆನಂದ ವರ್ಧನನ ದ್ವನ್ಯಾಲೋಕವನ್ನು, ತೃತೀಯ ಅಧ್ಯಾಯವು ಕುಂತಕನ ವಕ್ರೋಕ್ತಿ ಜೀವಿತ ಮತ್ತು ಕ್ಷೇಮೇಂದ್ರನ ಔಚಿತ್ಯ ವಿಚಾರ ಚರ್ಚೆಯನ್ನು, ಚತುರ್ಥಾಧ್ಯಾಯವು ಮಮ್ಮಟನ ಕಾವ್ಯ ಪ್ರಕಾಶ ಮತ್ತು ಅಪ್ಪಯ್ಯ ದೀಕ್ಷಿತರ ಕುವಲಯಾನಂದಗಳನ್ನು ಒಳಗೊಂಡಿದೆ. ಪಂಚಮ ಅಧ್ಯಾಯದಲ್ಲಿ ಪುಸ್ತಕದ ಸಂಪೂರ್ಣ ಸಾರವಿದೆ.

ಈ ಕೃತಿಯಲ್ಲಿ ವಿಷಯವು ಅಲಂಕಾರಗಳನ್ನು ಕೇವಲ ಶಬ್ದಾರ್ಥಗಳ ವಿಶಿಷ್ಟ ವಿನ್ಯಾಸವೇ ಅಲ್ಲದೇ ಅದು ಯಾವ ರೀತಿಯಲ್ಲಿ ಭಾರತೀಯ ಕಾವ್ಯ ಚಿಂತನೆಯ ಒಂದು ಪ್ರಮುಖ ಘಟಕವಾಗಿ ರೂಪುಗೊಂಡಿತು ಎಂಬುದನ್ನು ಅನ್ವೇಷಿಸಲಾಗಿದೆ. ಇದರಲ್ಲಿ ಐತಿಹಾಸಿಕ ಹಿನ್ನೆಲೆ ತಾತ್ವಿಕ ದೃಷ್ಟಿಕೋನಗಳು ಮತ್ತು ವಿಭಿನ್ನವಾದ ಸರಣಿಗಳ ಸಂಕ್ಷಿಪ್ತ ವಿಮರ್ಶಾತ್ಮಕ ವಿವರಣೆಗಳನ್ನು ಒಳಗೊಂಡಿದೆ. ಪ್ರತಿಯೊಂದು ಅಲಂಕಾರಕ್ಕೂ ಸಂಬAಧಿಸಿದ ವ್ಯಾಖ್ಯಾನಗಳನ್ನು ಬೇರೆ ಬೇರೆ ಶಾಸ್ತ್ರಕಾರರ ಅಭಿಪ್ರಾಯಗಳೊಂದಿಗೆ ಹೋಲಿಕೆ ಮಾಡುವ ಪ್ರಯತ್ನ ಇದರಲ್ಲಿ ಆಗಿದೆ.

ಅನೇಕ ಅಲಂಕಾರಗಳನ್ನು ಆಯ್ದು ಅವುಗಳ ವಿವರಣೆ ವ್ಯಾಖ್ಯಾನ ಉಪವಿಭಾಗ ತಾತ್ವಿಕ ಪರಿಕಲ್ಪನೆಗಳೊಂದಿಗೆ ಸ್ಪಷ್ಟವಾಗಿ ನಿರೂಪಿಸಲಾದ ಕೃತಿಯಾಗಿದೆ. ಉಪಮಾ, ರೂಪಕ, ಉತ್ಪ್ರೇಕ್ಷಾ,ಶ್ಲೇಷ, ಅತಿಶಯೋಕ್ತಿ ಇತ್ಯಾದಿಗಳ ತಾತ್ವಿಕ ವೈಶಿಷ್ಟ್ಯಗಳನ್ನು. ವ್ಯಾಪ್ತಿ ಮತ್ತು ಮಿತಿಗಳನ್ನು ವಿವೇಚಿಸುವ ರೀತಿ ಗಮನಾರ್ಹವಾಗಿದೆ. ಉಲ್ಲಿಖಿತ ಉದಾಹರಣೆಗಳು ತುಂಬಾ ಯೋಗ್ಯವಾಗಿದೆ. ಅಲಂಕಾರವು ಕಾವ್ಯದಲ್ಲಿ ಸ್ವತಂತ್ರವಾಗಿ ಬಿಲ್ಲು ಬಾಣದಂತಿರದೇ ಅದು ರಸ, ಧ್ವನಿ, ವಕ್ರೋಕ್ತಿ ಮೊದಲಾದ ಅಂಶಗಳೊಂದಿಗೆ ಗಾಢವಾಗಿ ಬೆಸೆದುಕೊಂಡಿದೆ ಎಂಬ ತತ್ವವನ್ನು ಲೇಖಕಿ ಇಲ್ಲಿ ಸ್ಪಷ್ಟಪಡಿಸಿದ್ದಾರೆ. “ಅಲಂಕರೋತಿ ರಸಂ” ಎಂಬ ನುಡಿಗಟ್ಟನ್ನು ಕೇವಲ ಔಪಚಾರಿಕವಾಗಿ ಉಲ್ಲೇಖಿಸುವ ಬದಲು ಅದರ ಅಂತರಾಳದ ತಾತ್ವಿಕತೆಯನ್ನು ಗಂಭೀರವಾಗಿ ನಿರೂಪಿಸುತ್ತಾರೆ ಎಂಬುದಾಗಿ ಮುನ್ನುಡಿ ಬರೆದ ಡಾ. ವಿ ಗಿರೀಶ್ ಚಂದ್ರರ ಮಾತು ಇಲ್ಲಿ ನಿಜವಾಗಿದೆ.

ಈ ಕೃತಿಯಲ್ಲಿ ಅಲಂಕಾರಗಳು ಕೇವಲ ಶಬ್ದ ಶೋಭೆಯ ಸಾಧನಗಳಾಗಿ ಅಲ್ಲ, ಅದು ಸಾಹಿತ್ಯದ ಅಂತರಂಗವನ್ನು ಹೇಗೆ ಶ್ರೀಮಂತಗೊಳಿಸುತ್ತವೆ ಎಂಬುದನ್ನು ವಿವರಿಸುತ್ತದೆ. ದಂಡಿ,ಕುತಕ, ಮಮ್ಮಟ ಮೊದಲಾದ ಆಚಾರ್ಯರ ವಿಷಯಗಳನ್ನು ಹೋಲಿಸಿ ಇದರಲ್ಲಿ ವಿವರಿಸಲಾಗಿದೆ. ಇದು ಅಲಂಕಾರ ಶಾಸ್ತçದ ಉಗಮದಿಂದ ಹಿಡಿದು ಇತ್ತೀಚಿನವರೆಗೆ ಸಮಗ್ರ ದೃಷ್ಟಿ ಕೋನವನ್ನು ನೀಡುತ್ತದೆ. ಸಾಹಿತ್ಯ ವಿಮರ್ಶೆಯ ಆಸಕ್ತರಿಗೂ, ಸಂಶೋಧಕರಿಗೂ ಬಹು ಉಪಯುಕ್ತವಾದ ಕೃತಿ ಇದಾಗಿದೆ. ಭಾಷೆಯೂ ಕೂಡ ಸೊಗಸಾಗಿ ಮೂಡಿಬಂದಿದೆ.

ದೀಪಶ್ರೀಯ ಮಾರ್ಗದರ್ಶಕರಾದ ಡಾ. ಸುಮಿತ್ರಾ ವಿ. ಭಟ್ ರವರ ಮೊದಲ ಮಾತಿನಲ್ಲಿ ಹೇಳಿದಂತೆ ಈ ಹೊತ್ತಿಗೆಯು ಸಾಹಿತ್ಯದ ಸಹೃದಯ ಓದುಗರಿಗೆ ಗಣನೀಯವಾಗಿ ಉಪಯುಕ್ತವಾಗುವುದರಲ್ಲಿ ಸಂದೇಹವಿಲ್ಲ. ವೈವಿಧ್ಯಮಯ ಶಬ್ದ ಅಲಂಕಾರ ಹಾಗೂ ಅರ್ಥ ಅಲಂಕಾರಗಳನ್ನು ವ್ಯವಸ್ಥಿತವಾಗಿ ಒಳಗೊಂಡಿರುವುದರಿಂದ ಕೇವಲ ಸಂಸ್ಕೃತ ಭಾಷೆಯಲ್ಲದೇ, ಹಿಂದಿ ಹಾಗೂ ಕನ್ನಡ ಭಾಷೆ ಓದುವರಿಗೂ ಈ ಪುಸ್ತಕ ಪ್ರಯೋಜನಕಾರಿ ಆಗುವುದು ಖಚಿತವೇ ಸರಿ.

ಅಲಂಕಾರೋ ಹಿ ಸಾಹಿತ್ಯೇ ರಸಬುದ್ಧಿಸುಖಾವಹಃ?
ಶೋಭಯತ್ಯೇಷ ವಾಗ್ವöಕ್ಷಂ ಪುಷ್ಪಭಾರ ಇವೋದ್ಧತಃ?
ಅಂದರೆ ಅಲಂಕಾರವು ಸಾಹಿತ್ಯದಲ್ಲಿ ಸದಾ ಅನುಭವ ನೀಡಿ ವಾಗ್ವöಕ್ಷ ( ಭಾಷೆಯ ಮರವನ್ನು) ಪುಷ್ಪಭಾರದಿಂದ ಶೋಭಿಸುವಂತೆ ಸುಂದರಗೊಳಿಸಿದ ಕೃತಿ ಇದಾಗಿದೆ. ಗುರುಗಳ ಶುಭಾಶಂಸನವಿರುವ ಈ ಕೃತಿ , ಸಿದ್ದಾರ್ಥ ಪ್ರಕಾಶನದ ಆದಿತ್ಯಪ್ರಸಾದ್ ಅವರಿಂದ ಬಹಳ ಚೆನ್ನಾಗಿ ಮೂಡಿಬಂದಿದೆ. ಈ ರೀತಿಯ ಇನ್ನಷ್ಟು ಅಧ್ಯಯನಗಳು ನಿರಂತರವಾಗಿ ಆಗಿ ಉತ್ತರೋತ್ತರ ಯಶಸ್ಸು ಲಭಿಸಲಿ. ಶಾರದೆಯ ಸೇವೆಗೈದ ಡಾ.ದೀಪಶ್ರೀಗೆ ಒಳಿತಾಗಲಿ. ೨೦೦ರೂ ಮುಖಬೆಲೆಯ ಈ ಪುಸ್ತಕವನ್ನು ಎಲ್ಲರೂ ಕೊಂಡು ಓದಿ ಜ್ಞಾನ ವೃದ್ಧಿಸಿಕೊಳ್ಳಲಿ.

ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು,
ಪೇಸ್ ಕಾಲೇಜು, ಶಿವಮೊಗ್ಗ.

Rotary Shimoga ಸಾಮಾನ್ಯ ಜ್ಞಾನ ವೃದ್ದಿಗೆ ನಿತ್ಯವೂ ದಿನಪತ್ರಿಕೆ ಓದಿರಿ. ಯುಪಿಎಸ್ಸಿ‌‌ ಪರೀಕ್ಷೆಯಲ್ಲಿ 615 ಶ್ರೇಣಿ ಪಡೆದ ಡಾ.ದಯಾನಂದ ಸಾಗರ್ ಹಿತನುಡಿ

0

Rotary Shimoga ಜ್ಞಾನದ ಜತೆಗೆ ಮಾನಸಿಕ ಸಿದ್ಧತೆಯು ತುಂಬಾ ಮುಖ್ಯ. ಸತತ ಪ್ರಯತ್ನ, ಸಿಲಬಸ್, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಸೇರಿದಂತೆ ಅನೇಕ ಅಂಶಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ತುಂಬಾ ಪ್ರಮುಖವಾದದ್ದು ಎಂದು ಸುಬ್ಬಯ್ಯ ಆಸ್ಪತ್ರೆ ಮನೋವೈದ್ಯಕೀಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ, ಯುಪಿಎಸ್‌ಸಿಯಲ್ಲಿ 615ನೇ ರ‍್ಯಾಂಕ್ ಪಡೆದಿರುವ ಡಾ. ದಯಾನಂದ್ ಸಾಗರ್ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ರೋಟರಿ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಅತ್ಯಂತ ಕಠಿಣವಾಗಿರುವ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮಾನಸಿಕ ಸಿದ್ಧತೆ, ಆತ್ಮವಿಶ್ವಾಸ, ಕಠಿಣ ಪ್ರಯತ್ನ, ಏಕಾಗ್ರತೆ, ಸತತ ಪರಿಶ್ರಮ ತುಂಬಾ ಮುಖ್ಯ. ಇಷ್ಟಪಟ್ಟು ಓದಬೇಕು. ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಲು ಪ್ರತಿ ದಿವಸ ದಿನಪತ್ರಿಕೆಯನ್ನು ಓದುವುದು ತುಂಬಾ ಮುಖ್ಯ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಅತ್ಯಂತ ಕಠಿಣವಾಗಿರುವ ಈ ಪರೀಕ್ಷೆಯಲ್ಲಿ ಕನ್ನಡ ಮೀಡಿಯಂನಲ್ಲಿ ಓದಿ ಯಶಸ್ವಿಯಾಗಿರುವ ಇವರ ಸಾಧನೆ ಅನೇಕ ಯುವಜನರಿಗೆ ಸ್ಪೂರ್ತಿ ಎಂದು ಹೇಳಿದರು.

Rotary Shimoga ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ನೆಪ್ಚೂನ್ ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ.ಬಿ.ಆರ್., ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಮಾಜಿ ಅಧ್ಯಕ್ಷ ಎಚ್.ಎಂ.ಮಧು, ಚಂದ್ರಹಾಸ ಪಿ.ರಾಯ್ಕರ್, ಕೆ.ಬಿ.ರವಿಶಂಕರ್, ಎಂ.ಎಲ್.ಪ್ರತಾಪ್, ಸತೀಶ್ ಚಂದ್ರ, ಮಂಜುನಾಥ್, ಡಾ. ಪರಮೇಶ್ವರ್, ಡಾ. ಪ್ರಜ್ವಲ್, ಅರುಣ್ ದೀಕ್ಷಿತ್, ಪದಾಧಿಕಾರಿಗಳು, ಕ್ಲಬ್ ಸದಸ್ಯರು ಮತ್ತಿತರು ಉಪಸ್ಥಿತರಿದ್ದರು.

Kargal Victory ಜವಾನ್- ಕಿಸಾನ್ ಈರ್ವರ ಮೇಲೆ ನಮ್ಮೆಲ್ಲರ ಜೀವನ ನಿಂತಿದೆ- ಸುಮಿತ್ರಮ್ಮ

0

Kargal Victory ನಾಗರೀಕರು ನೆಮ್ಮದಿಯಿಂದ ಜೀವನ ಸಾಗಿಸಬೇಕಾದರೆ, ಯೋಧ ಗಡಿರಕ್ಷಣೆ ಮಾಡಬೇಕು, ಜೀವನ ಸಾಗಿಸಲು ರೈತ ಬೆಳೆ ಬೆಳೆದಾಗ ಎಲ್ಲಾರು ನೆಮ್ಮದಿ ಬದುಕು ಸಾಗಿಸಲು ಸಾದ್ಯ ಎಂದು ಸುಮಿತ್ರಮ್ಮ ಹೇಳಿದರು.

ಅಭಿರುಚಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಕಾರ್ಗಲ್ ವಿಜಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೈನಿಕರನ್ನು ನೋಡುವುದೆ ಒಂದು ಸಂತೋಷ, ನಮ್ಮ ಅಂದಿನ ಪ್ರದಾನಿ ಲಾಲಬಹದ್ದೂರ್ ಶಾಸ್ತ್ರಿ ‘ಜೈಜವಾನ್- ಜೈಕಿಸಾನ್’ ಎಂಬ ಘೋಷ ವಾಕ್ಯ ಉಚ್ಚರಿಸಿದ್ದು ಎಲ್ಲರೂ ಇವರ ಸೇವೆಯನ್ನು ಗುರುತಿಸಿ ಗೌರವಿಸಬೇಕೆಂದು. ನಮ್ಮೆಲ್ಲರ ಜೀವನ ನಿಂತಿರುವುದು ಇವರಿಬ್ಬರ ಮೆಲೆ. ಯಾವುದೇ ಹವಗುಣವಿರಲಿ ಸ್ವಲ್ಪವೂ ವಿಚಲಿತರಾಗದೆ ಸೇವೆ ಸಲ್ಲಿಸುತ್ತಾರೆ. ಇವರ ಮತ್ತು ಇವರ ಕುಟುಂಬದವರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇವರ ಬೆನ್ನಲುಬಿನಲ್ಲಿ ನಾವು ಸ್ವರ್ಗಸುಖ ಅನುಭವಿಸುತ್ತಿದ್ದೇವೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುಭೇದಾರ್ ಮಂಜುನಾಥ್ ಮಾತನಾಡಿ, ಪ್ರಪಂಚಕ್ಕೆ ಮಾದರಿಯಾಗಿರುವವರು ನಮ್ಮ ಯೋದರು. ದೇಶದ ಗಡಿ ಕಾಯುವುದು ಎಷ್ಟು ಕಷ್ಟ ಎಂಬುವುದನ್ನು ವಿವರಿಸಲು ಸಾದ್ಯವೇ ಇಲ್ಲ. ನಮ್ಮ ಸೈನ್ಯದ ಕಾರ್ಯಾಚರಣೆಯನ್ನೆ ಅನುಮಾನದಿಂದ ನೋಡುವವರನ್ನು, ಒಂದು ತಿಂಗಳು ಗಡಿ ಕಾಯುವ ಕಾರ್ಯಕ್ಕೆ ಹಚ್ಚಬೇಕು. ನಮ್ಮ ಸೈನಿಕ ಶಿಕ್ಷಣ ಪ್ರಾರಂಭದಲ್ಲೆ ಕಲಿಸುವುದು ಎಂತಹ ಸಂದರ್ಭ ಬಂದರೂ ಮೊದಲ ಆದ್ಯತೆ ದೇಶಕ್ಕೆ ಜೀವ ಕೊಡುವಂತಿರಬೇಕು. ನಮ್ಮ ಮನೆಯ ಕಾರ್ಯದಲ್ಲಿ ತೊಡಕಾಗದಂತೆ ಕಾರ್ಯನಿರ್ವಹಿಸಬೇಕು. ರಜೆ ಮೇಲೆ ಬಂದಾಗ, ದೇಶಕ್ಕೆ ತೊಂದರೆಯಾದರೆ ತಕ್ಷಣ ಕಾರ್ಯಕ್ಕೆ ಹಾಜರಾಗಲೇಬೇಕು ಎಂದರು.

ಮತ್ತೋರ್ವ ಸುಭೇದಾರ್ ರಾಜೇಶ್ ಮಾತನಾಡಿ, ತುರ್ತು ಸಂದರ್ಭದಲ್ಲಿ ಆದೇಶ ಬಂದ ಒಂದು ಗಂಟೆಯೊಳಗಾಗಿ ಸನ್ನಧರಾಗಲೇಬೇಕು. ಮೈನಸ್ ಐವತ್ತು ಡಿಗ್ರಿ ಚಳಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅಂತಹ ಸ್ಥಳಗಳಲ್ಲಿ ಒಬ್ಬ ಯೋಧ ಆರು ತಿಂಗಳು ಮಾತ್ರ ಕಾರ್ಯನಿರ್ವಹಿಸಲು ಸಾಧ್ಯ. ಒಬ್ಬ ತಪ್ಪು ಮಾಡಿದರೆ, ಎಲ್ಲರಿಗೂ ಶಿಕ್ಷೆ ಶತಸಿದ್ಧ. ಈಶಾನ್ಯ ರಾಜ್ಯಗಳಲ್ಲಿ ಚೀನದ ಕುಮ್ಮಕಿನಿಂದ ಕಾರ್ಯನಿರ್ವಹಿಸುವುದು ಬಹಳ ಕಷ್ಡ, ಆದರೆ ಬೇರೆ ಬೇರೆ ದೇಶಗಳ ಯೋಧ ರೊಂದಿಗೆ ಹಾಗೂ ಅವರ ಶಸ್ತ್ರಗಳ ಪರಿಚಯ ಮಾಡಿಕೊಳ್ಳವ ಅವಕಾಶ ಕೆಲವೊಮ್ಮೆ ಸಿಗುತ್ತದೆ. ಇಂದು ವಿದ್ಯಾವಂತ ಯುವಕರು ನೇರವಾಗಿ ಅಧಿಕಾರಿಗಳಾಗಿ ಆಯ್ಕೆಯಾಗುವ ಅವಕಾಶ ಇದೆ. ಆಸಕ್ತ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಿ, ಉತ್ಸಹ ತೋರುವ ಯುವಕರನ್ನು ಕಳಿಸಿಕೊಡಿ ಎಂದರು.

Kargal Victory ನಾಗರತ್ನಮ್ಮ ಪ್ರಾರ್ಥಿಸಿ, ಮುರುಳಿ ಸ್ವಾಗತಿಸಿ, ಸ್ಮಿತಮೂರ್ತಿ ನಿರೂಪಿಸಿದರು. ವಂದನಾ ಮತ್ತು ಕಿಶೋರ್ ಅತಿಥಿ ಪರಿಚಯಿಸಿದರು. ಕಾರ್ಯದರ್ಶಿ ಕುಮಾರಶಾಸ್ತ್ರಿ ವಂದಿಸಿದರು. ನವೀನ್, ನಾಗಲಾಭಿಂಕ ರವಿಕುಮಾರ್, ಶ್ರೀನಾಥ್ ವಾಗೇಶ್, ಶರತ್ ಹಾಗೂ ಸದಸ್ಯರು ಭಾಗವಹಿಸಿದ್ದರು.

Shivamogga Police ಗುಡ್ ನ್ಯೂಸ್.! ₹ 16,35000 ಮೌಲ್ಯದ ವಿವಿಧ ಮೊಬೈಲ್ ಗಳ ಪತ್ತೆ ಮಾಡಿ ಮಾಲೀಕರಿಗೆ ಒಪ್ಪಿಸಿದ ಪೊಲೀಸ್ ಇಲಾಖೆ

0

Shivamogga Police ಶಿವಮೊಗ್ಗ ಪೋಲಿಸ್ ಕಳೆದ ಮೂರು ತಿಂಗಳಲ್ಲಿ ಅಂದಾಜು ಮೌಲ್ಯ 16,35,000/- ರೂ ಗಳ ಒಟ್ಟು 110 ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಿದ್ದರು.

ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಶ್ರೀ ಮಿಥುನ್ ಕುಮಾರ್ ಜಿ ಕೆ ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪತ್ತೆ ಮಾಡಲಾದ ಮೊಬೈಲ್ ಫೊನ್ ಗಳನ್ನು ಸಂಬಂಧಪಟ್ಟ ಮಾಲೀಕರುಗಳಿಗೆ ಹಿಂದಿರುಗಿಸಿದರು.

Nagara Panchami ಸೊರಬ ಪ್ರದೇಶದಲ್ಲಿ ಸಂಭ್ರಮದ ನಾಗರಪಂಚಮಿ ಆಚರಣೆ

0

Nagara Panchami ಸೊರಬ ಪಟ್ಟಣ ಸೇರಿ ತಾಲೂಕಿನಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಮಂಗಳವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಹಲವರು ಮನೆಯಲ್ಲಿಯೇ ನಾಗರ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರೆ, ಕೆಲವರು ದೇವಸ್ಥಾನದ ಆವರಣದಲ್ಲಿರುವ ಹುತ್ತ ಹಾಗೂ ನಾಗರ ಮೂರ್ತಿಗಳಿಗೆ ಹಾಲೆರೆದರು.
ಪಟ್ಟಣದ ಚಿಕ್ಕಪೇಟೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪಕ್ಕ, ಸೊಪ್ಪಿನ ಕೇರಿಯ ಶ್ರೀ ದುರ್ಗಾಂಬ ದೇವಸ್ಥಾನ ಹಿಂಭಾಗ, ಶ್ರೀ ರಂಗನಾಥ ದೇವಸ್ಥಾನ, ಮರೂರು ರಸ್ತೆ, ಹಿರೇಶಕುನದ ಸಾಗರ ರಸ್ತೆ, ಕಾನುಕೇರಿಯ ನಾಗರ ಕಟ್ಟೆ ಸೇರಿದಂತೆ ವಿವಿಧಡೆ ಇರುವ ಅರಳಿಮರದ ಅಡಿಯಲ್ಲಿರುವ ನಾಗರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಹಿಂದೂ-ಮುಸ್ಲಿಂ ದೇವರಾಧನೆಯ ಸ್ಥಳವಾದ ಉರಗನಹಳ್ಳಿಯ ಕಾಳಿಂಗೇಶ್ವರ ದೇವಾಲಯದಲ್ಲಿ ನಾಗರ ಪಂಚಮಿ ದಿನ ಅಂಗವಾಗಿ ಸಹಸ್ರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿ, ದೇವಸ್ಥಾನ ಹಿಂಭಾಗದ ನಾಗರ ಮೂರ್ತಿಗಳಿಗೆ ಹಾಲೆರೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಈ ಗ್ರಾಮದಲ್ಲಿ ಉರಗಗಳ ಸಂಖ್ಯೆ ಹೆಚ್ಚಿದ್ದು, ಗ್ರಾಮದ ಮನೆ, ಹೊಲ-ಗದ್ದೆ ಎನ್ನದೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಇದುವರೆಗೂ ಯಾರನ್ನು ಕಚ್ಚಿಲ್ಲ ಹಾಗೂ ಯಾರೂ ಹಾವನ್ನು ಕೊಂದಿಲ್ಲ. ಇಲ್ಲಿನ ದೇವರಿಗೆ ಹರಕೆ ಹೊತ್ತ ಸುತ್ತಲಿನ ತಾಲೂಕು, ಜಿಲ್ಲೆಗಳ ಭಕ್ತರು ನಾಗರ ಪಂಚಮಿಯಂದು ಹರಕೆ ಒಪ್ಪಿಸುವುದು ರೂಢಿಯಾಗಿದೆ. ಕಾಳಿಂಗೇಶ್ವರ ದೇವಸ್ಥಾನ ಮುಂಭಾಗ ಬೇವಿನ ಮರಕ್ಕೆ ಹಾಗೂ ಶ್ರೀ ಕಾಳಿಂಗೇಶ್ವರ ದೇವರಿಗೆ ಅರ್ಚನೆ ಮಾಡಿಸಿದರು. ನಂತರ ಇಬ್ರಾಹಿಂ ಸ್ವಾಮಿ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಹೊಸ ಉಡುಗೆ ತೊಟ್ಟ ಭಕ್ತರು, ದೇವರಿಗೆ ಹಾಲು, ಎಳ್ಳು ಉಂಡೆ, ಶೆಂಗಾ ಉಂಡೆ, ರವೆ ಉಂಡೆ, ಪಾಯಿಸ, ಕೇಸರಿ ಬಾತ್, ಚಿತ್ರನ್ನ ಸೇರಿದಂತೆ ಹಲವು ಭಕ್ಷ್ಯಗಳನ್ನು ನೈವೇದ್ಯ ಮಾಡಿದರು. ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೇ ಭಕ್ತರು ಮುಖ್ಯ ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ತುಂತುರು ಮಳೆಯಲ್ಲೆ 2 ಕಿ.ಮೀ. ನಡೆದು ಸಾಗಿದರು.

Karnataka State Government Employees Association ಆಗಸ್ಟ್ 3, ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ- ಸಿ‌.ಎಸ್.ಷಡಾಕ್ಷರಿ

0

Karnataka State Government Employees Association ಪ್ರತಿ ಜಿಲ್ಲೆಗಳಲ್ಲಿ ಸರಾಸರಿ 400ರಂತೆ ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳನ್ನೊಳಗೊಂಡು ಸರ್ಕಾರಿ ನೌಕರರ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿರುವ 12000+ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ನಗದು ಪುರಸ್ಕಾರ, ಸ್ಮರಣಿಕೆ ನೀಡಿ ಗೌರವಿಸುವ ಮೂಲಕ ಅವರ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿರುವಂತೆ ಪ್ರೋತ್ಸಾಹಿಸುವ ಕಾರ್ಯಕ್ರಮ ಕಳೆದ 5-6 ವರ್ಷಗಳಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೇಳಿದರು.
ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ 18ಜಿಲ್ಲೆಗಳಲ್ಲಿ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ನೌಕರರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಗೌರವಿಸುವ ಕಾರ್ಯಕ್ರಮವನ್ನು ಆಗಸ್ಟ್‌ರಂದು ಸಂಜೆ 4ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲೆಯ 1200ಕ್ಕೂ ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳು, ಅವರು ಪೋಷಕರು, ನೌಕರ ಬಾಂಧವರು ಭಾಗವಹಿಸುವ ನಿರೀಕ್ಷೆ ಇದೆ ಎಂದವರು ನುಡಿದರು.
ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಮತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಉದ್ಘಾಟಿಸುವರು. ಸಾಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮತ್ತು ಶ್ರೀಮತಿ ಶಾರದಾ ಪೂರ್ಯಾನಾಯ್ಕ್‌ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸುವರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಉಳಿದಂತೆ ಜಿಲ್ಲೆಯ ವಿಧಾನಪರಿಷತ್‌ಮತ್ತು ವಿಧಾನ ಸಭಾ ಕ್ಷೇತ್ರಗಳ ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು-ಉಪಾಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು, ನೌಕರರ ಸಂಘದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಈ ಕಾರ್ಯಕ್ರಮದಲ್ಲಿ ಪ್ರೇರಣಾ ನುಡಿಗಳನ್ನಾಡಲು ಟಿವಿ-9 ವಿದ್ಯುನ್ಮಾನ ವಾಹಿನಿಯ ಪ್ರಧಾನ ನಿರ್ಮಾಪಕ ಮತ್ತು ಹಿರಿಯ ನಿರೂಪಕ ರಂಗನಾಥ್‌ಭಾರದ್ವಾಜ್‌ಅವರು ಆಗಮಿಸಲಿರುವರು. ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್‌ಅವರು ಉಪಸ್ಥಿತರಿರುವರು.
Karnataka State Government Employees Association ಈ ಕಾರ್ಯಕ್ರಮಕ್ಕೆ ಪೋಷಕರು ತಮ್ಮ ಪ್ರತಿಭಾವಂತ ಮಕ್ಕಳೊಂದಿಗೆ ಸಕಾಲಕ್ಕೆ ಆಗಮಿಸಿ, ನಿಗಧಿಪಡಿಸಿದ ಕೌಂಟರಿನಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಹಾಗೂ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರು ಮತ್ತು ಅವರು ಕುಟುಂಬದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್‌, ಗೌರವಾಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ಆರ್.ಪಾಪಣ್ಣ, ಸತೀಶ್‌, ಆರ್.ಮಾರುತಿ, ಕೊಟ್ರೇಶ್‌, ಲಕ್ಷ್ಮಣ್‌, ಅಶೋಕ್‌ಮತ್ತಿತರರು ಉಪಸ್ಥಿತರಿದ್ದರು.

Santosh Lad ಕಾರ್ಮಿಕರು ಸರ್ಕಾರದ ಯೊಜನೆಗಳ ಲಾಭ ಪಡೆಯಬೇಕು- ಕಾರ್ಮಿಕ ಸಚಿವ ಸಂತೋಷ್ ಲಾಡ್.

0

Santosh Lad ಕಾರ್ಮಿಕರ ಏಳಿಗೆಗಾಗಿ ಕಾರ್ಮಿಕ ಇಲಾಖೆ ಕಟ್ಟಿಬದ್ಧವಾಗಿ ದುಡಿಯುತ್ತಿರೋದಾಗಿ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಸ್ಪಷ್ಟಪಡಿಸಿದರು.
ಇಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಕಾರ್ಮಿಕ ಇಲಾಖೆಯ ವಿವಿಧ ವಲಯಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂತೋಷ್ ಲಾಡ್ ಮಾತನಾಡಿದರು.
ರಾಜ್ಯದಲ್ಲಿ ಪ್ರಸಕ್ತ ಆಡಳಿತರೂಢ ಕಾಂಗ್ರೆಸ್ ಸರ್ಕಾರದಲ್ಲಿ ತಾವು ಕಾರ್ಮಿಕ
ಸಚಿವರಾದ ಬಳಿಕ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಏಳಿಗೆಗೆ ಹಲವು ಯೋಜನೆಗಳನ್ನು ತರಲಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಮಿಕ ಪರ ಇನ್ನಷ್ಟು ಯೋಜನೆಗಳು ಬರಲಿವೆ. ಕಾರ್ಮಿಕ ಇಲಾಖೆ ಮತ್ತು ಸರ್ಕಾರ ಕಾರ್ಮಿಕರ ಪರವಾಗಿದೆ ಎಂದು ಸ್ಪಷ್ಟಪಡಿಸಿದರು.
ಕಾರ್ಮಿಕ ಇಲಾಖೆಯ ಯೋಜನೆಗಳನ್ನು ಪ್ರಚುರಪಡಿಸುವ ಜೊತೆ ಕಾರ್ಮಿಕರು ಅದರ ಲಾಭವನ್ನು ಪಡೆದುಕೊಳ್ಳಬೇಕು. ಕಾರ್ಮಿಕ ಇಲಾಖೆ ಕಾರ್ಮಿಕರ ಪರ ಎಂಬುದನ್ನು ಅರಿಯಬೇಕು. ಇಲಾಖೆ ಯೋಜನೆಗಳನ್ನು ತಿಳಿಸುವ ಜೊತೆಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಕಾರ್ಮಿಕರ ಸ್ಥಿತಿಗತಿ ಕುರಿತು ತಿಳಿಯುವ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಲಾಖೆಯಡಿ ವಿವಿಧ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಸಚಿವರು ಒತ್ತಿ ಹೇಳಿದರು.

Santosh Lad ಕಳೆದೆರದು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸದಲ್ಲಿ ಧಾರವಾಡ ಉಸ್ತುವಾರಿ ಸಚಿವರೂ ಆಗಿರುವ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಇದಾರೆ.
ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ್ ಕೃಷ್ಣ ಸೈಲ್,
ಲಿಡ್ಕರ್ ನಿಗಮದ ಅಧ್ಯಕ್ಷ
ಮುಂಡರಗಿ ನಾಗರಾಜ್, ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯ , ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್, ಕಾರವಾರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಕಾರವಾರ ಡಿಸಿಸಿ ಅಧ್ಯಕ್ಷ ಸಾಯಿ ಕೇಶವ ಗಾಂವ್ಕರ್, ಗ್ಯಾರಂಟಿ ಅನುಷ್ಠಾನ ಜಿಲ್ಲಾಧ್ಯಕ್ಷ ರಾಣೆ ಹಾಗೂ ಸ್ಥಳೀಯ ಹಾಗೂ ಜಿಲ್ಲಾ ಜನಪ್ರತಿನಿಧಿಗಳು, ಕಾರ್ಮಿಕ ಇಲಾಖೆಧಿಕಾರಿಗಳು ಉಪಸ್ಥಿತರಿದ್ದರು.

Shivamogga ಶಿವಮೊಗ್ಗದಲ್ಲಿ ಸುಧಾರಿತ “ಕಾರ್ಡಿಯಾಕ್ ಇಮೇಜಿಂಗ್ ತಂತ್ರಗಳು” ಕುರಿತ ಉಪನ್ಯಾಸ ಕಾರ್ಯಕ್ರಮ

0

Shivamogga ಸಮೀಪದ ಮಲ್ನಾಡ್ ಶೈರ್‌ನಲ್ಲಿ ಐಆರ್‌ಐಎ ಶಿವಮೊಗ್ಗ ಉಪಶಾಖೆಯು ಐಆರ್‌ಐಎ ಶಕ್ತಿ ಬ್ಯಾನರ್‌ನಡಿ ಕಾರ್ಡಿಯಾಕ್ ಇಮೇಜಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಮಹಿಳಾ ರೇಡಿಯಾಲಜಿಸ್ಟ್ ಸ್ಪೀಕರ್ ಪ್ಯಾನೆಲ್ ಮೊದಲ ಬಾರಿ ಕರ್ನಾಟಕದಲ್ಲಿ ಆಯೋಜಿಸಿತ್ತು.
ಐಆರ್‌ಐಎ ಉಪವಿಭಾಗದ ಅಧ್ಯಕ್ಷೆ ಡಾ. ಉಮಾ ಪಾಂಡುರಂಗಿ ಮತ್ತು ಕಾರ್ಯದರ್ಶಿ ಡಾ. ಶ್ರೀಕಾಂತ್ ನೇತೃತ್ವದಲ್ಲಿ ಸಿಎಂಇ ನಡೆಯಿತು. ವಿಶೇಷ ವಿಕಿರಣಶಾಸ್ತ್ರಜ್ಞರು ಹಾಗೂ ಶಿವಮೊಗ್ಗದ ಹೃದ್ರೋಗ ಶಾಸ್ತ್ರಜ್ಞರ ದೊಡ್ಡ ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಿಎಂಇ ಗೌರವ ಕೋಶಾಧಿಕಾರಿ ಡಾ. ಅಖಿಲಾ ಅವರು ಸ್ವಾಗತಿಸಿದರು. ಐಆರ್‌ಐಎ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಪ್ರವೀಣ್ ಮತ್ತು ಡಿಎಚ್‌ಒ ಡಾ. ನಟರಾಜ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಐಆರ್‌ಐಎ ಶಕ್ತಿ ನಾಯಕ ಡಾ. ಫ್ಲೋರಾ ನೆಲ್ಸನ್, ಡಾ. ವರ್ಷಾ ಕಾಳೆ ಮತ್ತು ಡಾ. ಜಾನ್ಹವಿ ಶುಭ ಹಾರೈಸಿದರು.
ಆಧುನಿಕ ಮತ್ತು ಹೆಚ್ಚು ಸುಧಾರಿತ ಕಾರ್ಡಿಯಾಕ್ ಇಮೇಜಿಂಗ್ ತಂತ್ರಗಳ ಮೇಲೆ ವಿಶೇಷ ಉಪನ್ಯಾಸಗಳು ನಡೆದವು. ಮಹಿಳಾ ಭಾಷಣಕಾರರಾದ ಡಾ. ಮೇರಿ ವಾರುಣ್ಯ, ಡಾ. ಪ್ರಿಯದರ್ಶಿನಿ ಮತ್ತು ಡಾ. ಉಮಾ ಪಾಂಡುರಂಗಿ ಅವರಿಂದ ಉತ್ತಮ ಗುಣಮಟ್ಟದ ಉಪನ್ಯಾಸ ನಡೆಯಿತು.
Shivamogga ಹೃದ್ರೋಗ ತಜ್ಞರಾದ ಡಾ. ಶಿವಶಂಕರ್, ಡಾ. ಮಹೇಶಮೂರ್ತಿ, ಡಾ. ಪರಮೇಶ್ವರ, ಡಾ. ವಿಜೇತ್, ಡಾ ಶ್ರೀನಿವಾಸ, ಡಾ. ಕಿರಣ್ ಭೀಮೇಶ್ವರ್, ಡಾ. ಮಂಜುನಾಥ್, ಡಾ. ಆದಿತ್ಯ ಉಡುಪ, ಡಾ. ಅಶ್ವಲ್ ಮತ್ತು ಡಾ. ಶರತ್ ಭಾಗವಹಿಸಿದ್ದರು. ಡಾ ಉಮಾ ಪಾಂಡುರಂಗಿ ವಂದನಾರ್ಪಣೆ ನಡೆಸಿಕೊಟ್ಟರು.