Tuesday, May 5, 2026
Tuesday, May 5, 2026
Home Blog Page 1976

ಸಾವಿನಲ್ಲೂ ಸಾರ್ಥಕತೆ ಮೆರೆದ “ಅಪ್ಪು”

ತಮ್ಮ ಮುಗ್ಧ ನಗುವಿನ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ನಟ ಪುನೀತ್ ರಾಜ್ ಕುಮಾರ್ ರವರು ನಿನ್ನೆ ಅಸುನೀಗಿದ್ದಾರೆ.
ಅವರಿಗೆ 46 ವರ್ಷ ವಯಸ್ಸಾಗಿತ್ತು. ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ನಟ ಪುನೀತ್ ರಾಜಕುಮಾರ್ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕವನ್ನು ತ್ಯಜಿಸಿದ್ದಾರೆ.
ಪುನೀತ್ ರಾಜಕುಮಾರ್ ಅವರು ಬೆಳಿಗ್ಗೆಯಿಂದ ಜಿಮ್ ಗೆ ತೆರಳಿ, ಅಲ್ಲಿ ಎರಡು ಗಂಟೆ ವ್ಯಾಯಾಮ ಮಾಡಿದ್ದರು. ಆಗ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬದ ವೈದ್ಯರ ಬಳಿ ಹೋಗಿದ್ದರು.ಇಸಿಜಿ ಪರೀಕ್ಷೆ ನಡೆಸಿದಾಗ ಹೃದಯಘಾತ ಆಗಿರುವುದು ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗೆ ವಿಕ್ರಂ ಆಸ್ಪತ್ರೆಗೆ ಬರುವಾಗ ಮಾರ್ಗ ಮಧ್ಯದಲ್ಲಿಯೇ ಹೃದಯದ ಚುಟುವಟಿಕೆಗೆ ಸ್ತಬ್ಧವಾಗಿತ್ತು. ಹೃದಯವು ತುಂಬಾ ದುರ್ಬಲವಾಗಿತ್ತು. ಮೂರು ಗಂಟೆಗಳು ತಜ್ಞ ವೈದ್ಯರು ಚಿಕಿತ್ಸೆ ನೀಡಿದರೂ ಅವರ ದೇಹ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವಿಕ್ರಮ್ ಆಸ್ಪತ್ರೆ ಹೃದ್ರೋಗ ತನ್ನ ಡಾಕ್ಟರ್ ರಂಗನಾಥ್ ನಾಯಕ್ ತಿಳಿಸಿದ್ದಾರೆ.
ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ಕನ್ನಡ ಸಿನಿಮಾ ಲೋಕಕ್ಕೆ ಮಾತ್ರವಲ್ಲದೆ ಇಡೀ ಭಾರತೀಯ ಸಿನಿಮಾರಂಗಕ್ಕೆ ಆದ ನಷ್ಟವಾಗಿದೆ.
ಕುಟುಂಬದವರು, ಕೋಟ್ಯಾಂತರ ಅಭಿಮಾನಿಗಳು, ಬಂಧು ಮಿತ್ರರು, ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ತಂದೆಯ ಹಾದಿಯಲ್ಲಿ ಸಾಗಿರುವ ಪುನೀತ್, ನೇತ್ರದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಗಣ್ಯರು, ಚಿತ್ರರಂಗದವರು, ಕೋಟ್ಯಾಂತರ ಅಭಿಮಾನಿ ಬಳಗದವರು ಶೋಕದಲ್ಲಿ ಮುಳುಗಿದ್ದು, ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಅಂತ್ಯಸಂಸ್ಕಾರ ಕ್ರಿಯೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಅಭಿಮಾನಿಗಳು ಶಾಂತ ರೀತಿಯಿಂದ ಪುನೀತ್ ಅವರನ್ನು ಕಳುಹಿಸಿ ಕೊಡಬೇಕೆಂದು ರಾಘವೇಂದ್ರ ರಾಜಕುಮಾರ್, ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವರು ವಿನಂತಿ ಮಾಡಿದ್ದಾರೆ.

ಹಳ್ಳಿ ಹೃದಯದ ‘ಬಂಗಾರ’

0

ಶೀ ಎಸ್.ಕೆ ಶೇಷಚಂದ್ರಿಕ ಅವರು ನಾಡಿನ ಹಿರಿಯ ಮಾಧ್ಯಮ ತಜ್ಞರಲ್ಲಿ ಒಬ್ಬರಾಗಿದ್ದಾರೆ. ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ಇಲಾಖೆ, ಆಕಾಶವಾಣಿ , ದೂರದರ್ಶನ, ಇಂತಹ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿದ್ದಾರೆ. ಹಿರಿಯ ಪತ್ರಕರ್ತರಾಗಿ ನಾಡಿನ ಪ್ರಮುಖ ದಿನ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿಯೂ ಖ್ಯಾತಿಯನ್ನು ಪಡೆದಿದ್ದಾರೆ. ಆಕಾಶವಾಣಿಯಲ್ಲಿ ಬಾತ್ಮೀದಾರರಾಗಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಭಾರತ ಸರ್ಕಾರವು ನೀಡುವ ಎಲ್.ಕೆ. ಶರ್ಮಾ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಪ್ರಸ್ತುತ ಈ ವರ್ಷ ಅವರಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪಾಟೀಲ ಪುಟ್ಟಪ್ಪ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಿಗೆ ರಾಜ್ಯೋತ್ಸವ ಮತ್ತು ಮಾಧ್ಯಮ ಪ್ರಶಸ್ತಿಗಳನ್ನೂ ಸಹ ನೀಡಿ ಗೌರವಿಸಲಾಗಿದೆ. ಸಾರೆಕೊಪ್ಪ ಬಂಗಾರಪ್ಪ ನವರು ಮುಖ್ಯಮಂತ್ರಿಯವರಾಗಿದ್ದಾಗ ಇವರು ಮಾಧ್ಯಮ ಕಾರ್ಯಾದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಲೇಖನದಲ್ಲಿ ಬಂಗಾರಪ್ಪನವರೊಂದಿಗಿನ ಮಾನವೀಯ ಪ್ರಸಂಗದ ನೆನಪನ್ನು ಹಂಚಿಕೊಂಡಿದ್ದಾರೆ.

ಹಳ್ಳಿ ಹೃದಯದ ‘ಬಂಗಾರ’

ನಾಡಿನ ಜನತೆ ದಿವಂಗತ ಬಂಗಾರಪ್ಪ ನವರನ್ನು ಎಂದಿಗೂ ಮರೆಯುವಂತಿಲ್ಲ. ಕೃಷಿಕ ಸಮುದಾಯ ಅವರು ಕೈಗೊಂಡ ದಿಟ್ಟ ನಿರ್ಧಾರಕ್ಕೆ ಖುಣಿಯಾಗಿದೆ. ಇವರಂತಹ ಮಾನವೀಯ ಗುಣಗಳ ನಾಯಕ ಪುನಃ ಸಿಗುವುದು ಅಪರೂಪ. ನಾನು ಮುಖ್ಯಮಂತ್ರಿ ಬಂಗಾರಪ್ಪನವರ ಆಪ್ತ ಸಹಾಯಕರಲ್ಲಿ ಒಬ್ಬನಾಗಿದ್ದೆ. ಅವರ ಮಾಧ್ಯಮ ಕಾರ್ಯದರ್ಶಿಯಾಗಿದ್ದವನು. ಹೀಗಾಗಿ ಅವರ ಗುಣದೋಷಗಳನ್ನು ತಿಳಿದವನು. ಹೃದಯ ವೈಶಾಲ್ಯತೆಯಲ್ಲಿ ಬಂಗಾರಪ್ಪನವರು ಸಾಕ್ಷಾತ್ ದಾನಶೂರ ಕರ್ಣ. ಆದರೆ, ಅವರಲ್ಲಿದ್ದ ದೌರ್ಬಲ್ಯವೆಂದರೆ ಶೀಘ್ರಕೋಪ, ತಾಳ್ಮೆ ಕಡಿಮೆ. ಬೇರೆಯವರ ಮಾತು ಹಿಡಿಸದಿದ್ದರೆ ಕೂಡಲೇ ತಾಳ್ಮೆಗೆಡುವ ಸ್ವಭಾವ ಅವರದ್ದು.
ಬಂಗಾರಪ್ಪನವರು ಒಮ್ಮೆ ತಾಳ್ಮೆ ಕಳೆದುಕೊಂಡು ಮರುಘಳಿಗೆಯಲ್ಲೇ ಹೃದಯ ಶ್ರೀಮಂತಿಕೆ ತೋರಿದ ಪ್ರಸಂಗವನ್ನು ಹೇಳಬಯಸುತ್ತೇನೆ.
ಬಂಗಾರಪ್ಪನವರು ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಸುಮಾರು ಐದು ತಿಂಗಳಾಗಿತ್ತು. ಒಂದು ದಿನ ಸಂಜೆ ನಡೆದ ಘಟನೆ ಇದು. ಕರ್ನಾಟಕದ ಮುಖ್ಯಮಂತ್ರಿಯ ಅಧಿಕೃತ ನಿವಾಸ “ಕಾವೇರಿ”ಯಲ್ಲಿ ನಡೆದ ಪ್ರಸಂಗ.
ಮುಖ್ಯಮಂತ್ರಿಯಾದರು ರಾಜಧಾನಿಯಲ್ಲಿ ಇದ್ದಾಗ ಸಂಜೆಯವರೆಗೂ ಬ್ಯಾಡ್ಮಿಂಟನ್ ಆಟ ಆಡುವುದು ಬಂಗಾರಪ್ಪನವರ ಖಾಯಂ ಹವ್ಯಾಸ. ಉತ್ತಮ ಕ್ರೀಡಾಪಟು ಅವರು.
ಅಂದೊಂದು ದಿನ ಬಂಗಾರಪ್ಪನವರ ಸ್ವಕ್ಷೇತ್ರ ಸೊರಬ ತಾಲೂಕಿನ ಕೆಲವು ಗ್ರಾಮಗಳ ಎರಡು ಬಸ್ ಜನ “ಕಾವೇರಿ” ಬಾಗಿಲಿಗೆ ಬಂದಿಳಿದರು. ಮುಂಚಿತವಾಗಿ ಮುನ್ಸೂಚನೆ ಕೊಡದೇ ತಮ್ಮ ಪ್ರೀತಿಯ ಬಂಗಾರಣ್ಣನನ್ನು ನೋಡಲು ಬೆಂಗಳೂರಿಗೆ ದಿಡೀರ್ ಬಂದಿಳಿದಿದ್ದರು. ಆಗಿನ್ನೂ ಮೊಬೈಲ್ ಇರಲಿಲ್ಲ. ಕನಿಷ್ಠ ಟೆಲಿಫೋನ್ ನಲ್ಲಿ ಕರೆ ಮಾಡಿ ಬರಬೇಕಿತ್ತು, ಮಲೆನಾಡಿನ ಮುಗ್ಧರು. ಮುಖ್ಯಮಂತ್ರಿಯನ್ನು ಕಾಣುವ ಉತ್ಸಾಹವೇ ಹೊರತು ‘ಶಿಷ್ಟಾಚಾರ’ ಏನೇನು ತಿಳಿಯದ ಅಮಾಯಕರು.
ಮುಖ್ಯಮಂತ್ರಿ ನಿವಾಸ ಕಾವೇರಿಯಲ್ಲಿ ಎಂದರೆ ಮುಂಭಾಗ ಹಾಗೂ ಎಡಬಲದಲ್ಲಿ ವ್ಯವಸ್ಥಿತವಾಗಿ ಬೆಳೆಸಿರುವ ಕೈತೋಟ. ವರ್ಷವಿಡಿ ಹಸಿರು ಕಂಗೊಳಿಸುವ ಪೊದೆಯಂತಹ ಗಿಡಗಳ ಉದ್ಯಾನ ಈ ಸದನ. ಮಲೆನಾಡಿಗರಿಗೆ ಇದು ಸಾಗರ -ಸೊರಬವಿದ್ದಂತೆ.
ಸಾಮಾನ್ಯವಾಗಿ ಸಂಜೆಯವರೆಗೂ ಆಟವಾಡಿ ಬಳಲಿ ಬೆವರು ಸುರಿಸಿದರೂ ಲವಲವಿಕೆ ಮತ್ತು ಹುರುಪಿನಿಂದ ಮನೆಗೆ ಹಿಂದಿರುಗುತ್ತಿದ್ದರು ಬಂಗಾರಪ್ಪ.
ಅವರ ಕ್ಷೇತ್ರದ ಜನ ಎರಡು ಬಸ್ಸುಗಳಿಂದ ಕಾವೇರಿಯಲ್ಲಿ ಇಳಿದಾಗ ಮುಖ್ಯಮಂತ್ರಿ ಇನ್ನೂ ಬಂದಿರಲಿಲ್ಲ. ಕಾಗದ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲು ಪತ್ರಿಕಾ ಕಾರ್ಯದರ್ಶಿಯಾದ ನಾನು ಮತ್ತು ನನ್ನ ಸಹೋದ್ಯೋಗಿ ನಟರಾಜ್ ಸಾಹೇಬರಿಗಾಗಿ ಕಾಯುತ್ತಿದ್ದೆವು.

Sarekoppa Bangarappa


ಆಗಷ್ಟೇ ಕಾವೇರಿ ಭವನದ ಒಳಗೆ ಬಂದಿದ್ದರು ಮುಖ್ಯಮಂತ್ರಿಯವರ ಕ್ಷೇತ್ರದ ಎರಡು ಬಸ್ ಜನ. ದೂರದಿಂದ ಬಂದವರು ಪ್ರಯಾಣದ ಆಯಾಸ. ಬಸ್ ಇಳಿದ ಕೂಡಲೇ ಕೈಕಾಲು ಝಾಡಿಸಿ ವಿಶ್ರಮಿಸಿ ಕೊಳ್ಳುವ ಮನಸ್ಸು. ಮಹಿಳೆಯರಿಗಂತೂ ಮಕ್ಕಳ ಮೂತ್ರ ವಿಸರ್ಜನೆ ಮಾಡಿಸುವ ಕಾತುರ. ಜೊತೆಗೆ ಜಲಭಾದೆ ಅವಸರ.
ಇದೇ ಸಮಯಕ್ಕೆ ಮುಖ್ಯಮಂತ್ರಿಯವರ ಕಾರು ಕಾವೇರಿ ಪ್ರವೇಶಿಸಿತ್ತು. ಗಿಡಗಳ ಮತ್ತೆ ಪ್ರಕೃತಿ ಕರೆಗಾಗಿ ನಿಂತ ಕುಳಿತ ಹಳ್ಳಿಗರು. ಯಾರನ್ನು ತಡೆಯುವಂತಿಲ್ಲ. ತಡೆದರೂ ನಡೆಯುವಂತಿಲ್ಲ.
ಬಂಗಾರಪ್ಪನವರಿಗೆ ಈ ದೃಶ್ಯ ಕಂಡು ಎಲ್ಲಿಲ್ಲದ ಕೋಪ ಉಕ್ಕಿ ಬಂತು. ಅವರದ್ದು ತಪ್ಪಿಲ್ಲ ಮುಖ್ಯಮಂತ್ರಿಯ ಮನೆಯ ಮುಂದೆ ನಡೆಯಬಾರದ ಘಟನೆ ನಡೆದಿದ್ದೆಲ್ಲ ಕಂಡು ಬಂಗಾರಪ್ಪನವರು ಸಿಂಹ ಆವಾಹನೆಯಾದಂತೆ ಗರ್ಜಿಸಿದ್ದರು. ಕೆಂಡವಾದರು ಅವರು ಯಾರೂ ಏನೂ ಹೇಳುವಂತಿಲ್ಲ. ಸೊರಬದ ಬಂಧುಗಳಂತೂ ತಲೆತಗ್ಗಿಸಿ ನಿಂತಿದ್ದರು. ತಮ್ಮ ನೆಚ್ಚಿನ ನಾಯಕನ ಕೋಪ ಅವರನ್ನು ಕಂಗೆಡಿಸಿತ್ತು.
ಬಹುಶಃ ದಿಗ್ಬ್ರಾಂತ ಗೊಂಡ ಗ್ರಾಮ ನಿವಾಸಿಗಳು ತಲೆತಗ್ಗಿಸಿ ಬಸ್ಸಿನತ್ತ ಹೊರಡುತ್ತಿದ್ದಂತೆ ಕಂಡಿತು. ಬಂಗಾರಪ್ಪನವರು ಕೋಪದಿಂದ ಮಹಡಿ ಹತ್ತಿ ಹೊರಟು ಹೋಗಿದ್ದರು. ಇದ್ದ ಎರಡು ಮೃದು ಸೆಕ್ಯೂರಿಟಿ ಸಿಬ್ಬಂದಿಗೂ ದಿಕ್ಕು ತೋಚಲಿಲ್ಲ.
ಮಾನ್ಯ ಬಂಗಾರಪ್ಪನವರ ನಡೆನುಡಿ ತಿಳಿದಿದ್ದ ನಾನು ಮತ್ತು ನಟರಾಜನಿಗೆ ಇದು ಕ್ಷಣಮಾತ್ರದ ಕೋಪ ಎಂಬ ಅರಿವಿತ್ತು. ಕೂಡಲೇ ಬಸ್ ಕಡೆ ಹೊರಟ ಮಂದಿಗೆ ಸಮಾಧಾನ ಹೇಳಿ ತಾಳ್ಮೆಯಿಂದ ಬಸ್ಸಿನಲ್ಲಿಯೇ ಇರಲು ವ್ಯವಸ್ಥೆ ಮಾಡಿದೆವು. ಪರಸ್ಥಳದಿಂದ ಬಂದ ಬಂಗಾರಪ್ಪನವರ ಹಿತೈಷಿಗಳ ಯೋಗಕ್ಷೇಮ, ಊಟ-ತಿಂಡಿ ,ವಾಸ್ತವ್ಯ ಇವು ನಮ್ಮ ಆರೈಕೆಯಾಗಿತ್ತು.
ನಾವು ನಿರೀಕ್ಷಿಸಿದಂತೆಯೇ ಆಯಿತು. ಆಟವಾಡಿ ಬಂದ ಬಂಗಾರಪ್ಪ ತಣ್ಣನೆ ನೀರಿನ ಸ್ನಾನ ಮುಗಿಸಿ ಕೆಳಗಿಳಿದು ಬಂದಾಗ ಶಾಂತ ಮೂರ್ತಿಯಾಗಿದ್ದರು.
ನಮಗೆ ಸ್ಪಷ್ಟವಾಗಿ ಗೊತ್ತಿತ್ತು ಪಶ್ಚಾತ್ತಾಪದಿಂದ ನೊಂದಿದ್ದರು ಬಂಗಾರಪ್ಪ. ಅಂತೆಯೇ ಕರ್ತವ್ಯದ ಕಡೆಯಿಂದ ಎಚ್ಚರವಾಗಿದ್ದರು ಇದೆಲ್ಲ ನಡೆದಾಗ 9:30. ಇಷ್ಟರೊಳಗಾಗಿ ನಾನು ಮತ್ತು ನಟರಾಜ್ ಪಕ್ಕದಲ್ಲಿದ್ದ ಅಶೋಕ ಹೋಟೆಲ್ ನ ಮ್ಯಾನೇಜರ್ ಸಾಮ್ರಾಟ್ ನನ್ನು ಕಂಡು ಪರಿಸ್ಥಿತಿ ವಿವರಿಸಿ ಮುಖ್ಯಮಂತ್ರಿ ಅವರನ್ನು ಕಾಣಲು ಬಂದ ಗ್ರಾಮಸ್ಥರಿಗೆ ಊಟದ ವ್ಯವಸ್ಥೆ ಮಾಡಲು ಮನವಿ ಮಾಡಿಕೊಂಡಿದ್ದೆವು.ಆತ ಒಪ್ಪಿದ್ದ.
ಇತ್ತ ಬಂಗಾರಪ್ಪನವರ ‘ತಾಯಿಯ ಕರುಳು’ ಸ್ಪಷ್ಟವಾಗಿ ಅವರ ಮುಖ ಮಾತಿನಲ್ಲಿ ಪ್ರತ್ಯಕ್ಷವಾಗಿತ್ತು.”ಅವರೆಲ್ಲರ ರಾತ್ರಿ ಊಟ ವಸತಿ ಸೌಕರ್ಯ ಇದು ಮುಖ್ಯ” ಎಂದರು ಬಂಗಾರಪ್ಪ. ಮುಖ್ಯಮಂತ್ರಿಯ ಮಾತು ಎಂದರೆ ಆಜ್ಞೆ -ಇದ್ದಂತೆ ಎಲ್ಲಾ ವ್ಯವಸ್ಥೆ ಆಗಿತ್ತು.
ಇಲ್ಲಿ ನಾವು ಗುರುತಿಸಬೇಕಾದ ಗುಣವೆಂದರೆ, ಬಂಗಾರಪ್ಪನವರಿಗೆ ಇದ್ದ ಹೃದಯ ವೈಶಾಲ್ಯತೆ. ಬಡವರು, ಅಶಕ್ತರು, ದೀನರು, ದಲಿತರು – ಹೀಗೆ ಬಡವರನ್ನು ಕಂಡರೆ ಅವರಲ್ಲಿದ್ದ ಅಕ್ಕರೆ ಮತ್ತು ದಾನ-ಧರ್ಮ ಮನೋಭಾವ ಅಪಾರವಾಗಿತ್ತು.
ಬಂಗಾರಪ್ಪನವರ ದಾನ ಹೇಗಿತ್ತೆಂದರೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗುತ್ತಿರಲಿಲ್ಲ. ನನ್ನನ್ನು ಸೇರಿ ಆಪ್ತರಿಗೆ ಜೇಬಿನಲ್ಲಿದ್ದುದನ್ನೆಲ್ಲ ಸುರಿದು ಪ್ರವಾಸ ಸಮಯದಲ್ಲಿ ದಾನ ಮಾಡುತ್ತಿದ್ದ ಕಲಿಯುಗ ಕರ್ಣ ಇವರು.
ಅಂದು ಸಂಜೆ ನಡೆದಿದ್ದೆ ಹೀಗೆಯೇ. ರಾತ್ರಿ ಸುಮಾರು 10.30 ಸಮಯದಲ್ಲಿ ಅಶೋಕ ಐಷಾರಾಮಿ ಹೋಟೆಲ್ ನ ಸ್ವಿಮಿಂಗ್ ಫೂಲ್ ಸುತ್ತ ಕುಳಿತ ಸೊರಬ ದ ಹಿತೈಷಿಗಳಿಗೆ ಕೈಯಾರೆ ಊಟ ಬಡಿಸಿ ತಮ್ಮ ತಾಳ್ಮೆ ತಪ್ಪಿದ ನಡವಳಿಕೆಗಾಗಿ ಕೈಮುಗಿದು ಕ್ಷಮೆಯಾಚಿಸಿದ್ದರು, ಕರ್ನಾಟಕದ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ.

ಸತತ ಮೂರನೇ ಬಾರಿಯೂ ಗೆದ್ದ ಪಾಕ್

0

ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ B ಗುಂಪಿನ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯಿತು. ಅಫ್ಘಾನಿಸ್ತಾನ ತಂಡದ ವಿರುದ್ಧ ಪಾಕಿಸ್ತಾನ ಜಯ ಗಳಿಸಿತು.
ದುಬೈ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು.
ಪಾಕ್ ತಂಡದ ಉತ್ತಮ ಬೌಲರ್ ಗಳಿಂದ ಅಫ್ಘಾನಿಸ್ತಾನ ತಂಡದ ಆರಂಭದಲ್ಲಿಯೇ ಪೆಟ್ಟುಕೊಟ್ಟಿತು. ಇನ್ನಿಂಗ್ಸ್ 2 ನೇ ಓವರ್ ನಲ್ಲಿ ಇಮದ್ ವಾಸಿಂ ಎಸೆತದಲ್ಲಿ ಹಜರತ್ ಉಲ್ಲಾ ಜಜೈ ಔಟಾದರು. 76 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡ ತಂಡವು ಬೇಗನೆ ಕುಸಿಯುವ ಹಾದಿ ಹತ್ತಿತು. ಆದರೆ, ಅಷ್ಟರಲ್ಲೇ 13 ನೇ ಓವರ್ ನಲ್ಲಿ ಜೊತೆಗೂಡಿದ ನಾಯಕ ನಬಿ 32 ಎಸೆತಕ್ಕೆ 35 ರನ್ ಗಳಿಸಿ, 5 ಬೌಂಡರಿ ಸಿಡಿಸಿ ಮತ್ತು ನೈಟ್ 25 ಎಸೆತಕ್ಕೆ 4 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 35 ರನ್ ಗಳಿಸಿದರು. ಇವರ ಜೊತೆಯಾಟದಿಂದ ಇನ್ನಿಂಗ್ಸಿನಲ್ಲಿ ಚಿತ್ರಣವೇ ಬದಲಾಯಿಸಿದರು. ನಂತರ 7 ನೇ ವಿಕೆಟ್ ಜೊತೆಯಾಟದಲ್ಲಿ 71 ರನ್ ಗಳನ್ನ ಕಲೆ ಹಾಕಿದ್ದು ಈ ರನ್ ಗಳು ಬಂದಿದ್ದು ಕೊನೆಯ 7 ಓವರ್ ಗಳಲ್ಲಿ ಎಂಬುದು ಸಂಕ್ಷಿಪ್ತವಾಗಿ ಕಂಡಿತು.
147 ರನ್ ಗಳ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ಪಾಕಿಸ್ತಾನ ಕೇವಲ 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಬಾರಿಸಿ ಭರ್ಜರಿ ಗೆಲುವು ಸಾಧಿಸಿತು.

“ಅಪ್ಪು”ಗೆ ಸ್ಪಂದನೆ ಹಾರ

0

ಅಭಿನಯ ಸರಸ್ವತಿಯ ಕೃಪಾಕಟಾಕ್ಷಕ್ಕೆ ಒಳಗಾಗಿದ್ದ ಪ್ರತಿಭಾವಂತನ ಕಣ್ಮರೆ ಊಹಾತೀತ.
ಪುನೀತ್ ಅಭಿನಯದ
ಚಿತ್ರಗಳು ಒಂದಲ್ಲ ಒಂದು ಸಾಮಾಜಿಕ ಸಂದೇಶ ಹೊತ್ತಿದ್ದವು.
ಅದಲ್ಲದೆ ಇತ್ತೀಚೆಗೆ
ಸ್ಪರ್ಧಾತ್ಮಕ ಪರೀಕ್ಷೆಗೆ
ವಿದ್ಯಾರ್ಥಿಗಳನ್ನ ತರಬೇತಿಗೊಳಿಸಲು
ಕೇಂದ್ರವನ್ನೂ ಆರಂಭಿಸಿದ್ದರು. ಸಾಮಾಜಿಕ ಸೇವೆಗೆ
ದೊಡ್ಮನೆಯನ್ನ ಅಣಿಗೊಳಿಸಿದ್ದರು.
ಅವರಲ್ಲಿ ಅನೇಕ ಸೇವಾಕಲ್ಪನೆಗಳಿದ್ದವು.ಅವು ಮೂರ್ತರೂಪಕ್ಕೆ ಬರುವ ಮುನ್ನವೇ
ಮೃತ್ಯು ಅವರನ್ನ ಸೆಳೆದದ್ದು.ಅತ್ಯಂತ
ದುದೃಷ್ಟಕರ.
ಪುನೀತ್ ನಟನೆಯೇ ಅಲ್ಲದೆ ನಮ್ಮ ಹೃದಯವನ್ನ ಗೆದ್ದ
ವರ್ಣಮಯ ಕಾರ್ಯಕ್ರಮ, ಕನ್ನಡದ ಕೋಟ್ಯಾಧಿಪತಿ
ನಿಜಕ್ಕೂ ಸ್ನೇಹ,ಪ್ರೀತಿ,ಮಮತೆ,ಅಭಿಮಾನ ತುಂಬಿ
ಈ ಕಾರ್ಯಕ್ರಮ
ನಡೆಸಿಕೊಟ್ಟಿರುವುದು
ಕನ್ನಡಿಗರು ಮರೆಯುವಂತಿಲ್ಲ.
ನಡೆಸಿದ ಖಾಸಗಿ ಚಾನಲ್ ಕೋಟಿ ಗಳಿಸಿತೋ ಗೊತ್ತಿಲ್ಲ.
ಆದರೆ ನಮ್ಮಂತಹ
ಕೋಟಿ ಹೃದಯಗಳನ್ನ ಗೆದ್ದ
ಅಭಿಮಾನದ ಅಧಿಪತಿ ,ಪುನೀತ್.
ಇದು ಅನನ್ಯ, ಅಪರೂಪ.
ಪುನೀತ್, ಮತ್ತೊಮ್ಮೆ ಹುಟ್ಟಿ ಬಾ…
ಎಂದು ದಯಾಮಯನಲ್ಲಿ
ನಮ್ಮದೆಲ್ಲರದ್ದೂ
ಹೃದಯದುಂಬಿದ
ಕೋರಿಕೆ.
ಪುನೀತ್ ನಿಮ್ಮ ಹಠಾತ್ ಅಗಲಿಕೆಗೆ
ಕೆ-ಲೈವ್ ಮೀಡಿಯ
ಕಂಬನಿಗೆರೆಯುತ್ತದೆ.

ನಾಡ ಪ್ರೇಮ ಹೊಮ್ಮಿಸಿದ ಗೀತ ಗಾಯನ

0

ಕನ್ನಡದ ಅಭಿಮಾನವನ್ನ ನಾಡಿನಾದ್ಯಂತ ಪ್ರವಹಿಸುವ ಸಲುವಾಗಿ ಎಲ್ಲೆಡೆ ಕನ್ನಡ ಗೀತೆಗಳ ಗಾಯನವನ್ನು ಏರ್ಪಡಿಸಲಾಗುತ್ತಿದೆ. ಕನ್ನಡ ಪ್ರೀತಿ, ಅಭಿಮಾನ ನಾಡಪ್ರೇಮ ಸ್ಫುರಿಸುವ ನಿಟ್ಟಿನಲ್ಲಿ ಈ ಗೀತಗಾಯನ ಪ್ರಮುಖ ಪಾತ್ರವಹಿಸಲಿದೆ. ಅಂತೇ ಶಿವಮೊಗ್ಗದಲ್ಲಿ ಗಮನ ಸೆಳೆದ ವಿಶೇಷ ಗೀತ ಗಾಯನ..

ಕರ್ನಾಟಕ ರಾಜೋತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಬೆಳಿಗ್ಗೆ ಆಯೋಜಿಸಲಾಗಿದ್ದ ವಿಶೇಷ ಗೀತ ಗಾಯನ ಕಾರ್ಯಕ್ರಮವು ನಾಗರೀಕರ ಗಮನ ಸೆಳೆಯಿತು.
ನೂರಾರು ಜನರು ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ‘ಬಾರಿಸು ಕನ್ನಡ ಡಿಂಡಿಮ’, ‘ಜೋಗದ ಸಿರಿ ಬೆಳಕಿನಲಿ’ ಹಾಗೂ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಗೀತೆಗಳನ್ನು ಹಾಡಿದರು. ಅರುಣ್ ಕುಮಾರ್ ನೇತೃತ್ವದ ತಂಡ ಗೀತಾ ಗಾಯನ ನಡೆಸಿಕೊಟ್ಟಿತು.

ಈ ಸಂದರ್ಭದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ, ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಸೇರಿದಂತೆ ಅಧಿಕಾರಿಗಳು, ಉಪಸ್ಥಿತರಿದ್ದರು

ರಜನಿಕಾಂತ್ ಆರೋಗ್ಯ ವ್ಯತ್ಯಯ

0

ಸೂಪರ್ ಸ್ಟಾರ್ ನಟ ರಜನಿಕಾಂತ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೈದರಾಬಾದ್ ನಲ್ಲಿರುವ ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿದೆ. ಅನಾರೋಗ್ಯದ ನಿಮಿತ್ತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅವರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಿಂದ ಪತ್ರಿಕಾ ಪ್ರಕಟಣೆ ಹೊರಡಿಲಾಗಿದ್ದು, ರಜನಿಕಾಂತ್ ಅವರಿಗೆ ಕೋರೊನಾ ಪರೀಕ್ಷೆ ಸಹ ಮಾಡಿದ್ದಾರೆ. ಅವರ ರಿಪೋರ್ಟ್ ನೆಗೆಟಿವ್ ಬಂದಿರುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ನ.5ಕ್ಕೆ ಪ್ರಧಾನಿ ಕೇದಾರನಾಥ್ ಭೇಟಿ

0

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನವೆಂಬರ್ 5ರಂದು ಕೇದಾರನಾಥಕ್ಕೆ ಭೇಟಿ ನೀಡುವರು. ಅಲ್ಲಿ ಶ್ರೀ ಆದಿ ಶಂಕರಾಚಾರ್ಯರ ಸಮಾಧಿಯನ್ನು ಉದ್ಘಾಟಿಸಲಿದ್ದಾರೆ.
ಅದರೊಂದಿಗೆ ಶ್ರೀ ಆದಿಶಂಕರಾಚಾರ್ಯ ಪ್ರತಿಮೆಯನ್ನು ಸಹ ಅನಾವರಣ ಮಾಡಲಿರುವ ಪ್ರಧಾನಿ,ಅನೇಕ ಪ್ರಮುಖ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
2013ರ ಪ್ರವಾಹದಲ್ಲಿ ಹಾನಿಗೊಳಗಾಗಿದ್ದ ಸಮಾಧಿಯನ್ನು ಮರುನಿರ್ಮಾಣ ಮಾಡಲಾಗಿದೆ. ಯೋಜನೆಯ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ ಮೇಲ್ವಿಚಾರಣೆ ನಡೆಸುತ್ತಿರುವ ಪ್ರಧಾನಿಯವರ ಮಾರ್ಗದರ್ಶನದಲ್ಲಿ ಸಂಪೂರ್ಣ ಪುನರ್ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಸರಸ್ವತಿ ಅಷ್ಟಪಥ್ ನಲ್ಲಿ ಪೂರ್ಣಗೊಂಡ ಮತ್ತು ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಪ್ರಧಾನಮಂತ್ರಿಯವರು ಪರಿಶೀಲಿಸಲಿದ್ದಾರೆ.
ಪ್ರಧಾನಮಂತ್ರಿಯವರು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಷ್ಟಪಥದ ಸರಸ್ವತಿ ರಿಟೇರಿಂಗ್ ವಾಲ್ ಮತ್ತು ಘಾಟ್ ಗಳು, ತೀರ್ಥ ಪುರೋಹಿತ್ ಮನೆಗಳು ಹಾಗೂ ಮಂದಾಕಿನಿ ನದಿಯ ಶೆಟ್ಟಿ ಸೇತುವೆ ಸೇರಿದಂತೆ ಪೂರ್ಣಗೊಂಡ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ.
ಸುಮಾರು 130 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಯೋಜನೆ ಗಳನ್ನು ಪೂರ್ಣಗೊಳಿಸಲಾಗಿದೆ. ಸಂಗಮ್ ಘಾಟ್, ಪ್ರಥಮ ಚಿಕಿತ್ಸೆ ಮತ್ತು ಪ್ರವಾಸಿ ಸೌಲಭ್ಯ ಕೇಂದ್ರ, ಆಡಳಿತ ಕಚೇರಿ ಮತ್ತು ಆಸ್ಪತ್ರೆ, ಎರಡು ಅತಿಥಿ ಗೃಹಗಳು, ಪೊಲೀಸ್ ಠಾಣೆ, ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್, ಮಂದಾಕಿನಿ ಅಷ್ಟಪಥ ಕ್ಯೂ ನಿರ್ವಹಣೆ ಮತ್ತು ಮಳೆ ಆಶ್ರಯ ಕೇಂದ್ರ, ಹಾಗೂ ಸರಸ್ವತಿ ನಾಗರಿಕ ಸೌಲಭ್ಯ ಕಟ್ಟಡ ಸೇರಿದಂತೆ 180 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅನೇಕ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪವರ್ ಸ್ಟಾರ್, ಆರೋಗ್ಯ ಸ್ಥಿತಿ ಗಂಭೀರ

ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಹೃದಯಾಘಾತ ಸಂಭವಿಸಿದ್ದು ಅವರನ್ನು ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅವರು ಬೇಗ ಗುಣಮುಖರಾಗಲಿ ಎಂಬುದು ನಮ್ಮ ಆಶಯ.

ಆರ್ಯನ್ : ಬೇಲ್ ಸಿಕ್ಕ ನಿಟ್ಟುಸಿರು

0

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ ನಲ್ಲಿ ಮೂರು ವಾರಗಳ ಸೆರೆವಾಸದ ಬಳಿಕ ಕೊನೆಗೂ ಬೇಲ್ ಸಿಕ್ಕಿದೆ.
ಮುಂಬೈ ಕಡಲಿನಲ್ಲಿ ಐಷರಾಮಿ ಹಡಗಿನಲ್ಲಿ ರೇವ್ ಪಾರ್ಟಿ ಮಾಡುತ್ತಾ ಡ್ರಗ್ಸ್ ಬಳಸುವ ವೇಳೆ ಎನ್ ಸಿಬಿ ದಾಳಿಗೆ ಒಳಗಾಗಿ ಸಿಕ್ಕಿಬಿದ್ದ ಆರ್ಯನ್ ಖಾನ್ ಮತ್ತು ಇತರೆ ಇಬ್ಬರು ವ್ಯಕ್ತಿಗಳು ಅಕ್ಟೋಬರ್ 3 ರಿಂದ ಎನ್ ಸಿಬಿ ವಶದಲ್ಲಿದ್ದರು.
ಸುಧೀರ್ಘ ಮೂರು ದಿನಗಳ ಕಾಲ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎನ್. ಡಬ್ಲ್ಯೂ ಸಾಂಬ್ರೆ ಅವರು ಮೂವರು ಆರೋಪಿಗಳಿಗೆ ಜಾಮೀನು ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಆರೋಪಿಗಳನ್ನು ಸದ್ಯ ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿ ಇರಿಸಲಾಗಿದೆ. ಜಾಮೀನು ಸಿಕ್ಕಿರುವ ವಿಷಯವನ್ನು ಜೈಲು ಸಿಬ್ಬಂದಿ ತಿಳಿಸುತ್ತಿದ್ದಂತೆಯೇ ಮಂದಹಾಸ ಬೀರಿದ ಆರ್ಯನ್, ಜೈಲು ಸಿಬ್ಬಂದಿಗೆ ಧನ್ಯವಾದ ತಿಳಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಗಳಿಗೆ ಜಾಮೀನು ನೀಡಬೇಕಾದರೆ ಅವರಿಗೆ ಶರ್ಟು ವಿಧಿಸಬೇಕೆಂದು ಕೋರ್ಟ್ ಗೆ ಎನ್ ಸಿಬಿ ಮನವಿ ಮಾಡಿದೆ.

ಸೆಮಿಫೈನಲ್ ನತ್ತ ವೆಸ್ಟ್ ಇಂಡೀಸ್

0

ಟಿ-20 ವಿಶ್ವ ಕಪ್ ಟೂರ್ನಿಯ ಸೂಪರ್ -12 ರ A- ಗುಂಪಿನ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾ ದೇಶದ ನಡುವೆ ಪಂದ್ಯ ನಡೆಯಿತು. ವೆಸ್ಟ್ ಇಂಡೀಸ್ ತಂಡ ಬಾಂಗ್ಲಾ ದೇಶದ ವಿರುದ್ಧ ಭರ್ಜರಿ ಜಯ ಗಳಿಸಿತು.
ಶಾರ್ಜಾ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು.
ಕ್ರಿಸ್ ಗೇಲ್, ಎವಿನ್ ಲೂಯಿಸ್, ಶಿಮ್ರಾನ್ ಹೆಟ್ಮಿಯರ್ ಮತ್ತು ಆಂಡ್ರೆ ರಸೆಲ್ ಮುಂತಾದ ದಿಗ್ಗಜರ ಬೌಲಿಂಗ್ ವೈಫಲ್ಯದಿಂದ ವೆಸ್ಟ್ ಇಂಡೀಸ್ ತಂಡದ ರನ್ ರೇಟ್ ಕುಸಿತ ಕಂಡಿತ್ತು. ಈ ಸಂದರ್ಭದಲ್ಲಿ ಕೈ ಹಿಡಿದವರು ನಿಕೋಲಸ್ ಪೂರನ್ 22 ಎಸೆತ ಗಳಲ್ಲಿ 40 ರನ್ ಗಳಿಸಿದ ಪೂರನ್ ಅವರ ರೋಚಕ ಬ್ಯಾಟಿಂಗ್ ನಿಂದ ಸವಾಲಿನ ಮೊತ್ತ ಕಲೆ ಹಾಕಿದರು.
ಕ್ರಿಸ್ ಗೇಲ್ ಮತ್ತು ಎವಿನ್ ಲೂಯಿಸ್ ಅವರನ್ನ ಬಾಂಗ್ಲಾದೇಶದ ಬೌಲರ್ ಎರಡಂಕಿ ಮೊತ್ತ ಗಳಿಸುವಷ್ಟರ ಮೊದಲೇ ವಿಕೆಟ್ ತೆಗೆದು ವಾಪಸ್ ಕಳುಹಿಸಿದರು. ನಾಯಕ ಮಹಮ್ಮದ್ದುಲ್ಲ ಅವರ ನಿರ್ಧಾರ ಸಮರ್ಥಿಸಿಕೊಂಡು 3 ನೇ ಕ್ರಮಾಂಕದ ಬ್ಯಾಟಿಂಗ್ ಗೆ ಇಳಿದ ಕಾಸ್ಮಸ್ ಚೀಸ್ ಪಾದಾರ್ಪಣೆ ಪಂದ್ಯದಲ್ಲಿ ಬಹಳ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ತಂಡದ ಗೆಲುವಿಗೆ ಆಸರೆಯಾದರು.
143 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ಬಾಂಗ್ಲಾದೇಶ ಒಂದು ಹಂತದಲ್ಲಿ ಜಯ ಸಾಧಿಸುತ್ತ ಹೆಜ್ಜೆ ಹಾಕಿತ್ತು. ಆದರೆ, ನಂತರ ವೆಸ್ಟ್ ಇಂಡೀಸ್ ತಂಡದ ಬೌಲರ್ ಗಳ ಪ್ರಾಬಲ್ಯದಿಂದಾಗಿ ಕೊನೆಯ ಓವರ್ ನಲ್ಲಿ ಬಾಂಗ್ಲಾದೇಶದ ಗೆಲುವಿಗೆ 13 ರನ್ ಬೇಕಾಗಿತ್ತು. ಆದರೆ ವೆಸ್ಟ್ ಇಂಡೀಸ್ ತಂಡದ ಪ್ರಭಾವಶಾಲಿ ಬೌಲರ್ ಆದ ಆಂಡ್ರೆ ರಸಲ್, ಅವರ ರೋಮಾಂಚಕ ಬೌಲಿಂಗ್ ನಿಂದ ನಿಯಂತ್ರಿಸಿದರು.
ವೆಸ್ಟ್ ಇಂಡೀಸ್ ತಂಡದ ಎಲ್ಲಾ ಆಟಗಾರರಿಂದ ಉತ್ತಮ ಪ್ರದರ್ಶನದ ಪ್ರತಿಫಲವಾಗಿ ಬಾಂಗ್ಲಾದೇಶದ ವಿರುದ್ಧ 3 ರನ್ ಗಳಿಂದ ಜಯ ಸಾಧಿಸಿ ಸತತ ಎರಡು ಸೋಲಿನ ನಂತರ ಚೇತರಿಸಿಕೊಂಡು ಹಾಲಿ ಚಾಂಪಿಯನ್ ಶಿಪ್ ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.