ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ ನಲ್ಲಿ ಮೂರು ವಾರಗಳ ಸೆರೆವಾಸದ ಬಳಿಕ ಕೊನೆಗೂ ಬೇಲ್ ಸಿಕ್ಕಿದೆ.
ಮುಂಬೈ ಕಡಲಿನಲ್ಲಿ ಐಷರಾಮಿ ಹಡಗಿನಲ್ಲಿ ರೇವ್ ಪಾರ್ಟಿ ಮಾಡುತ್ತಾ ಡ್ರಗ್ಸ್ ಬಳಸುವ ವೇಳೆ ಎನ್ ಸಿಬಿ ದಾಳಿಗೆ ಒಳಗಾಗಿ ಸಿಕ್ಕಿಬಿದ್ದ ಆರ್ಯನ್ ಖಾನ್ ಮತ್ತು ಇತರೆ ಇಬ್ಬರು ವ್ಯಕ್ತಿಗಳು ಅಕ್ಟೋಬರ್ 3 ರಿಂದ ಎನ್ ಸಿಬಿ ವಶದಲ್ಲಿದ್ದರು.
ಸುಧೀರ್ಘ ಮೂರು ದಿನಗಳ ಕಾಲ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎನ್. ಡಬ್ಲ್ಯೂ ಸಾಂಬ್ರೆ ಅವರು ಮೂವರು ಆರೋಪಿಗಳಿಗೆ ಜಾಮೀನು ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.
ಆರೋಪಿಗಳನ್ನು ಸದ್ಯ ಮುಂಬೈನ ಆರ್ಥರ್ ರಸ್ತೆ ಜೈಲಿನಲ್ಲಿ ಇರಿಸಲಾಗಿದೆ. ಜಾಮೀನು ಸಿಕ್ಕಿರುವ ವಿಷಯವನ್ನು ಜೈಲು ಸಿಬ್ಬಂದಿ ತಿಳಿಸುತ್ತಿದ್ದಂತೆಯೇ ಮಂದಹಾಸ ಬೀರಿದ ಆರ್ಯನ್, ಜೈಲು ಸಿಬ್ಬಂದಿಗೆ ಧನ್ಯವಾದ ತಿಳಿಸಿದರು ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಗಳಿಗೆ ಜಾಮೀನು ನೀಡಬೇಕಾದರೆ ಅವರಿಗೆ ಶರ್ಟು ವಿಧಿಸಬೇಕೆಂದು ಕೋರ್ಟ್ ಗೆ ಎನ್ ಸಿಬಿ ಮನವಿ ಮಾಡಿದೆ.
ಆರ್ಯನ್ : ಬೇಲ್ ಸಿಕ್ಕ ನಿಟ್ಟುಸಿರು
Date: