Tuesday, May 5, 2026
Tuesday, May 5, 2026
Home Blog Page 1974

ದಡ್ಡನೆಂದು ಕರೆದುಕೊಂಡ ದೊಡ್ಡ ಕವಿ

0

ಯುಗಧರ್ಮ ರಾಮಣ್ಣ ಇವರು ಯುಗಧರ್ಮ ಎಂಬ ಅಂಕಿತದಿಂದ ಸಾವಿರಾರು ತ್ರಿಪದಿಗಳು ಹಾಗೂ ಲಾವಣಿಗಳನ್ನು ಬರೆದಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಸಿದ್ದನಮಠ ಗ್ರಾಮದವರಾದ ರಾಮಣ್ಣ ಅನಕ್ಷರಸ್ಥ ಕವಿ. ಇವರು ಅನಕ್ಷರಸ್ಥರಾದರೂ ಸರಸ್ವತಿ ಇವರ ನಾಲಿಗೆ ಮೇಲೆ ನಲಿದಾಡುತ್ತಿದ್ದಾಳೆ. ಬಾಲ್ಯದಲ್ಲಿ ಎಮ್ಮೆ ಕಾಯಲು ಹೋಗುತ್ತಿದ್ದರು.ರಾಮಣ್ಣನಿಗೆ ನಾಟಕದ ಹುಚ್ಚು. ನಾಟಕದಲ್ಲಿ ಅಭಿನಯ ಮಾಡುತ್ತಿದ್ದರೆ ಇವರ ಪಾತ್ರವನ್ನು ನೋಡಲು ಜನರೆಲ್ಲಾ ಕಾತರದಿಂದ ಕಾಯುತ್ತಿದ್ದರು. ಅದೊಂದು ದಿನ ರಾಮಣ್ಣ ಗೆಳೆಯರ ಜೊತೆ ಮರದ ಕೆಳಗೆ ಕೂತು ಮಾತನಾಡುತ್ತಿದ್ದರು.ಆಗ ಅದೇನೋ ಮಿಂಚಿನ ಹಾಗೆ ಪ್ರಭೆಯೊಂದು ಬಂದು ಅವರ ತಲೆ ಒಳಗೆ ಹೋದಂತೆ ಆಯ್ತಂತೆ. ಆಗ ರಾಮಣ್ಣನ ತಲೆಯಲ್ಲಿ ಕೂಡಲೇ ಒಂದು ತ್ರಿಪದಿ ಬಂತಂತೆ. ಅದು ಅವರ ಮೊದಲ ತ್ರಿಪದಿ. “ರಾಜಕೀಯಕ್ಕೆ ಇಳಿಯದೆ ಸೋಜಾಗಿ ಇರುವವನು ಗೀಜಗದ ಗೂಡು ಇದ್ದಂತೆ ಅವನ ಬಾಳು ಮೋಜಾಗಿ ಇರುವುದೋ ಯುಗಧರ್ಮ” ಯುಗಧರ್ಮ, ಯುಗಧರ್ಮನ ತ್ರಿಪದಿಗಳು, ತೋಚಿದ್ಗೀಚು, ವಚನ ಧರ್ಮ ಎಂಬ ಪುಸ್ತಕಗಳು ಹೊರಬಂದಿದೆ. ಇವರ ಲಾವಣಿ ಸಂಗ್ರಹಿಸಿ ಶಿವಮೊಗ್ಗದ ಯುವರಾಜ್ ಕ್ಯಾಸೆಟ್ ಕೂಡ ಮಾಡಿದ್ದಾರೆ. ದಡ್ಡರ ಪದ ವಿಶ್ವವಿದ್ಯಾಲಯ ಎಂಬ ಯೋಜನೆಯನ್ನು ಹಾಕಿಕೊಂಡಿದ್ದಾರೆ.ಅಲ್ಲಿ ನಮ್ಮ ಗ್ರಾಮೀಣ ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಯೋಜನೆ ಅವರದ್ದು. ರಾಮಣ್ಣ ಯಾವತ್ತೂ ತನ್ನನ್ನು ತಾನು ಎಂದೂ ಹೊಗಳಿಕೊಳ್ಳುವುದಿಲ್ಲ. ತನ್ನನ್ನೇ ತಾನು ಮಂಗ ಎಂದು ಹೇಳಿಕೊಳ್ಳುತ್ತಾರೆ. ಈ ಮಂಗ ಒಮ್ಮೆ ಬೆಂಗಳೂರಿಗೆ ಹೋಗಿತ್ತು, ಕಳ್ಳಿ ಸಾಲಲ್ಲಿ, ಕೊಳ್ಳಿ ಬೆಳಕಲ್ಲಿ, ತೆಳ್ಳನೆ ರಾಗಿ ಅಂಬಲಿ ಕುಡಿದು ಬೆಳೆದ ಮಂಗ ಇದು….. ಹೀಗೆ ತಮ್ಮ ಬಗ್ಗೆ ತಾವು ಹೇಳಿಕೊಳ್ಳುತ್ತಾರೆ. ಇವರು ಈ ಹಿಂದೆ ಚನ್ನಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅನಕ್ಷರಸ್ಥ ಕವಿಯೊಬ್ಬ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆಗಿರುವ ಇತಿಹಾಸ ರಾಜ್ಯದಲ್ಲಿ ಇದೇ ಮೊದಲು. ಕನ್ನಡದ ತೇರ ಕಟ್ಟೋಣ ಬನ್ನಿ ಎಂಬ ರಚನೆ ಬಹಳ ವೈಶಿಷ್ಟ್ಯದಿಂದ ಕೂಡಿದೆ‌‌. ಜಾತ್ರೆಯ ತೇರನ್ನ ವಿವಿಧವಾಗಿ ಅಲಂಕರಿಸಿ ಆನಂದಿಸುತ್ತೆವೆ. ತೇರಿನ ಪ್ರತಿ ವಿನ್ಯಾಸಕ್ಕೂ ಬಹುತೇಕ ಕನ್ನಡದ ಎಲ್ಲಾ ಕವಿಗಳ ಹೆಸರನ್ನ ಸಮೀಕರಿಸಿ ಪದ ಕಟ್ಟಿರುವ ಜಾಣ್ಮೆ ರಾಮಣ್ಣ ಅವರದ್ದು. ಅವರೇ ಹಾಡಿರುವ ತೇರ ಕಟ್ಟೊಣ ಬನ್ನಿ ಎಂಬ ಹಾಡಿನಲ್ಲಿ ಜಾನಪದ ಸೊಗಡಿದೆ. ( ಪರಿಚಯ ಮಾಹಿತಿ : ಶ್ರೀ ರಾಮಚಂದ್ರ ನಾಡಿಗ್ . ಪತ್ರಕರ್ತರು , ಶಿವಮೊಗ್ಗ)SHOW LESS

ದರ ಏರಿಕೆ ಕಂಡ ಕಾಳು ಮೆಣಸು

0

ಕಾಳು ಮೆಣಸು ದರ ಒಂದೇ ತಿಂಗಳಲ್ಲಿ ಕೆಜಿಗೆ 100 ರೂಪಾಯಿ ಹೆಚ್ಚಳವಾಗುವ ಮೂಲಕ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.
2013 14 ನಲ್ಲಿ ಇನ್ನೂರು ರೂಪಾಯಿ ಗಡಿದಾಟಿದ ಕಾಳುಮೆಣಸು ಧಾರಣೆ ದಿಢೀರ್ ಕುಸಿದು 270 ರೂಪಾಯಿವರೆಗೂ ಇಳಿದಿತ್ತು. ಆದರೆ ಈಗ ದಿಢೀರ್ 500ರ ಗಡಿ ದಾಟಿದ ಕಾಳುಮೆಣಸು ದರ ಕೃಷಿಕರಲ್ಲಿ ಸಂತಸ ಮೂಡಿಸಿದೆ.
ಕರಿಮೆಣಸು ಮಾರುಕಟ್ಟೆಯಲ್ಲಿ ಧಾರಣೆ ಏರುಗತಿಯಲ್ಲಿದ್ದು, ಇದು ಕೃಷಿಕರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಆದರೆ ಅಕಾಲಿಕ ಮಳೆಯಿಂದಾಗಿ ಈ ಬಾರಿ ಭಾರಿ ಪ್ರಮಾಣದಲ್ಲಿ ಬೆಳೆ ನಷ್ಟ ಆಗಿರುವ ಕಾರಣ ಬೆಲೆ ಏರಿಕೆಯಾಗಿದ್ದರೂ ಕೃಷಿಕರಿಗೆ ಇದರಿಂದ ದೊಡ್ಡಮಟ್ಟದ ಲಾಭವಾಗುವುದಿಲ್ಲ. ಮಾರುಕಟ್ಟೆ ಧಾರಣೆ ಇನ್ನಷ್ಟು ಏರಿಕೆ ಕಾಣುವ ಮುನ್ಸೂಚನೆ ಕಂಡುಬರುತ್ತಿದೆ ಎಂದು ಕೊಡಗು ಮುಖಂಡ, ಕರಿಮೆಣಸು ಬಳಕೆದಾರರ ಸಮನ್ವಯ ಸಮಿತಿಯ ವಿಶ್ವನಾಥ್ ಅವರು ತಿಳಿಸಿದ್ದಾರೆ.

ಕೈ ಸುಡುವಂತಿದೆ ಹಸಿರು ಪಟಾಕಿ ಬೆಲೆ

0

ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಪ್ರಾರಂಭವಾಗಿದೆ. ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸುಪ್ರೀಂ ಕೋರ್ಟ್ ಹಸಿರು ಪಟಾಕಿ ಬಳಸಲು ಅನುಮತಿ ನೀಡಿದೆ. ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಈ ಅನುಮತಿಯ ಹಿನ್ನೆಲೆಯಲ್ಲಿದೆ. ಯಾವುದೇ ಜನಾಂಗದ ವಿರುದ್ಧವು ಕೂಡ ಈ ಸೂಚನೆ ಹೊರಡಿಸಿಲ್ಲ. ಇಡೀ ಸಮುದಾಯದ ಕ್ಷೇಮ ನ್ಯಾಯಾಂಗದ ಹೊಣೆ ಎಂದು ಸ್ಪಷ್ಟೀಕರಿಸಿದೆ.

ದೀಪಾವಳಿ ಹಬ್ಬದಲ್ಲಿ ಮಕ್ಕಳಿಂದ ಹಿಡಿದು ಹಿರಿಯರು ಸೇರಿ ಪಟಾಕಿ ಸಿಡಿಸುವುದು ವಾಡಿಕೆಯಾಗಿದೆ. ಆದರೆ ಹಸಿರು ಪಟಾಕಿ ಗ್ರಾಹಕರ ಕೈಗೆ ನಿಲುಕಲಾರದಷ್ಟು ದುಬಾರಿಯಾಗಿದೆ. ಸಾಗಾಣಿಕೆ ವೆಚ್ಚ, ರಾಸಾಯನಿಕ ಕಚ್ಚಾ ಪದಾರ್ಥಗಳ ಬೆಲೆ ಏರಿಕೆಯಿಂದ ಈ ಬಾರಿ ಹಸಿರು ಪಟಾಕಿ ಬೆಲೆ ಶೇ.30 ರಷ್ಟು ಏರಿಕೆಯಾಗಿದೆ.

ದೇಶದಲ್ಲಿ ಪಟಾಕಿ ತಯಾರಿಕೆಗೆ ತಮಿಳುನಾಡಿನ ಶಿವಕಾಶಿಯು ಹೆಸರುವಾಸಿಯಾಗಿದೆ. ಇಲ್ಲಿಂದ ರಾಜ್ಯದ ಬೆಂಗಳೂರು ಮೈಸೂರು ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಡೀಲರ್ ಗಳ ಮೂಲಕ ಪಟಾಕಿ ಹಂಚಿಕೆಯಾಗುತ್ತದೆ. ಹೋಲ್ಸೇಲ್ ದರದಲ್ಲಿ ಸಿಗುವ ಪಟಾಕಿಗಳ ಸಾಗಾಣಿಕೆ ವೆಚ್ಚ ಹೊರೆಯಾಗಿದ್ದು, ಶೇ. 8.5 ರಷ್ಟು ಶೇ. 12 ರಷ್ಟು ಬೆಲೆ ಏರಿಕೆ ಮಾಡಿದ್ದಾರೆ.

ಸಾಮಾನ್ಯ ಹೂಕುಂಡದ ಪಟಾಕಿ ಬಾಕ್ಸ್ ಗೆ 100-200 ರೂಪಾಯಿ, ಹಸಿರು ಪಟಾಕಿ ಹೂಕುಂಡದ ಬಾಕ್ಸ್ ಗೆ 500-550 ರೂಪಾಯಿ ಹೆಚ್ಚಳವಾಗಿದೆ. ಸಾಮಾನ್ಯ ಪಟಾಕಿ ಬಾಕ್ಸ್ 20-100 ರೂಪಾಯಿ, ಹಸಿರು ಪಟಾಕಿ ಬಾಕ್ಸ್ 200-400 ರೂಪಾಯಿ ಏರಿಕೆಯಾಗಿದೆ. ಸಾಮಾನ್ಯ ಭೂ ಚಕ್ರದ ಬಾಕ್ಸ್ 50-100 ರೂಪಾಯಿ, ಹಸಿರು ಪಟಾಕಿಯ ಭೂ ಚಕ್ರದ ಬಾಕ್ಸ್ 120-250 ರೂಪಾಯಿಗಳಷ್ಟು ಹೆಚ್ಚಳವಾಗಿದೆ ಮತ್ತು ಸಾಮಾನ್ಯ ಆಟಂ ಬಾಂಬ್ 100-110 ರೂಪಾಯಿ ಏರಿಕೆಯಾದರೆ, ಹಸಿರು ಪಟಾಕಿಯ ಆಟಂ ಬಾಂಬ್ 120-150 ರೂಪಾಯಿಗಳಷ್ಟು ದುಬಾರಿಯಾಗಿದೆ.

ಈ ಬಾರಿಯ ದೀಪಾವಳಿ ಹಬ್ಬದ ಪಟಾಕಿ ದರ ಸಾಮಾನ್ಯ ವರ್ಗದವರ ಮೇಲೆ ಹೊರೆಯಾಗಿ ಪರಿಣಮಿಸಿದೆ.

ಕೋವಿಡ್ 19: ಜಾಗತಿಕ ಸಾವಿನ ಸಂಖ್ಯೆ 50 ಲಕ್ಷ

0

ಬಹುತೇಕ ರಾಷ್ಟ್ರಗಳಲ್ಲಿ ಕೊರೋನಾ ನಿರೋಧಕ ಲಸಿಕೆ ಅಭಿಯಾನ ನಡೆಯುತ್ತಿದ್ದರೂ ಜಗತ್ತಿನಾದ್ಯಂತ ಕೊರೋನಾಗೆ ಬಲಿಯಾಗುತ್ತಿರುವ ವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಭಾರತ ಸೇರಿ ಇತ್ತೀಚಿಗೆ ಕೆಲವು ರಾಷ್ಟ್ರಗಳಲ್ಲಿ ನಿತ್ಯ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 12,514 ಕೊರೋನಾ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,58,817ಕ್ಕೆ ಇಳಿಕೆಯಾಗಿದೆ. ಇದು ಎರಡು 248 ದಿನಗಳಲ್ಲಿಯೇ ಕನಿಷ್ಠವಾಗಿದೆ. ಇನ್ನು ದೇಶದಲ್ಲಿ ಕೊರೋನಾ ಸೋಂಕಿನಿಂದ ಒಂದೇ ದಿನ 151 ಮೃತ ಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ.
ಕೊರೋನಾ ನಿರೋಧಕ ಲಸಿಕೆ, ಜನ ಜಾಗೃತಿ ಸೇರಿ ಹಲವು ಕಾರಣಗಳಿಂದಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಸೋಂಕಿನ ವೇತಿ ತಗ್ಗಿದ್ದರೂ, ಇತ್ತೀಚಿಗೆ ರಷ್ಯಾ, ಉಕ್ರೇನ್, ಪೂರ್ವ ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಮತ್ತೊಂದೆಡೆ ಲಸಿಕೆಯ ಶೀಘ್ರ ವಿತರಣೆಯಾಗದಿರುವುದು ಹಲವು ರಾಷ್ಟ್ರಗಳಿಗೆ ಮಾರಕವಾಗಿದೆ.
ಲಸಿಕೆಯ ಬಲವಿದ್ದರೂ ಜಗತ್ತಿನ ಅತ್ಯಂತ ಕೊರೊನಾ ವಿರುದ್ಧದ ಹೋರಾಟಕ್ಕೆ ಹಲವಾರು ಸವಾಲುಗಳಿವೆ. ಲಸಿಕೆ ವಿತರಣೆ, ಬೂಸ್ಟರ್ ಡೋಸ್, ಮಕ್ಕಳಿಗೆ ಲಸಿಕೆ ನೀಡಿಕೆ ಜೊತೆಗೆ ರೂಪಾಂತರಗಳ ಹಾವಳಿಯ ಭೀತಿ ಹೆಚ್ಚಿಸಿದೆ. ಇತ್ತೀಚಿಗಷ್ಟೇ ವ್ಯಾಪಿಸಿದ ₹2 ಇದಕ್ಕೆ ನಿದರ್ಶನವಾಗಿದೆ. ‌
ಅಮೇರಿಕ, ಐರೋಪ್ಯ ಒಕ್ಕೂಟ, ಬ್ರಿಟನ್, ಬ್ರೆಜಿಲ್ ನಂತಹ ಮುಂದುವರೆದ ರಾಷ್ಟ್ರಗಳಲ್ಲಿ ಜಗತ್ತಿನ ಒಟ್ಟು ಸಾವಿನ ಪ್ರಮಾಣದಲ್ಲಿ 8ನೇ ಒಂದರಷ್ಟು ಪಾಲು ಹೊಂದಿವೆ. ಭಾರತವು ವಿಶ್ವದಲ್ಲಿ ಹೆಚ್ಚು ಸಾವು ಸಂಭವಿಸಿದ ರಾಷ್ಟ್ರಗಳ ಸಾಲಿನಲ್ಲಿದೆ.
ಚೀನಾದಲ್ಲಿ 2019ರ ನವೆಂಬರ್ ನಲ್ಲಿ ಕೊರೋನಾ ಮೊದಲ ಪ್ರಕರಣ ದಾಖಲಾಗಿತ್ತಲ್ಲದೆ, ಆ ದೇಶದಲ್ಲಿಯೇ 2020 ರ ಜನವರಿ 11 ರಂದು ಮೊದಲ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದರು. ಇದಾದ ಬಳಿಕ ಜಗತ್ತಿನಾದ್ಯಂತ ವಿಸ್ತರಿಸಿದ ಸೋಂಕಿನಿಂದ ಬಲಿಯಾದವರ ಸಂಖ್ಯೆ 50 ಲಕ್ಷ ದಾಟಿದೆ. ಭಾರತದಲ್ಲಿ ಮೊದಲ ಪ್ರಕರಣ 2020 ರ ಜನವರಿ 27ರಂದು ಕೇರಳದಲ್ಲಿ ದಾಖಲಾಗಿದೆ. ಅಲ್ಲದೆ, ದೇಶದಲ್ಲಿಯೇ ಕರ್ನಾಟಕದಲ್ಲಿ ಮೊದಲ ಸಾವು ದಾಖಲಾಗಿದೆ. ಕಲಬುರ್ಗಿಯಲ್ಲಿ ಮಾರ್ಚ್ 10ರಂದು 76 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಮ್ಮ ಸರ್ಕಾರಕ್ಕೆ ಮನ್ನಣೆ ನೀಡಿ : ಜಬಿಯುಲ್ಲಾ ಮುಜಾಹಿದ್

0

ಅಫ್ಘಾನಿಸ್ತಾನದ ಸದ್ಯದ ಸರ್ಕಾರಕ್ಕೆ ಅಂತರಾಷ್ಟ್ರೀಯ ಮನ್ನಣೆ ನೀಡಬೇಕು. ಇಲ್ಲದಿದ್ದರೆ ಆಫ್ಘಾನ್ ನಿಂದ ತೊಂದರೆಗಳು ಮುಂದುವರೆಯುತ್ತವೆ. ಇದು ಪ್ರಾದೇಶಿಕವಾದ ಸಮಸ್ಯೆ ಮತ್ತು ಕ್ರಮೇಣ ಜಾಗತಿಕ ಸಂಕಷ್ಟವಾಗಿ ಪರಿವರ್ತಿತವಾಗಬಹುದು ಎಂದು ಅಫ್ಘಾನಿಸ್ತಾನ್ ಸರ್ಕಾರದ ಪರವಾಗಿ ಅಮೇರಿಕಾಗೆ ಜಬಿಯುಲ್ಲಾ ಮುಜಾಹಿದ್ ಎಚ್ಚರಿಸಿದ್ದಾರೆ. ಆದ್ದರಿಂದ ಜಾಗತಿಕ ಶಕ್ತಿಗಳಾದ ಅಮೇರಿಕಾದ ಸಂಯುಕ್ತ ಸಂಸ್ಥಾನ ಮತ್ತು ಇತರೆ ದೇಶಗಳು ಸಮಯ ವ್ಯರ್ಥ ಮಾಡದೆ ಸರ್ಕಾರಕ್ಕೆ ಮನ್ನಣೆ ನೀಡಬೇಕೆಂದು ಕಡಕ್ ಸಂದೇಶ ರವಾನಿಸಿದ್ದಾರೆ.

ಮನುಜ ಕುಲ ಸಂರಕ್ಷಣೆಗೆ ಕರೆ

0

ಇಂಗಾಲ ಹೊರಸೂಸುವಿಕೆಯ ಕಡಿತದ ಬದ್ಧತೆಗೆ ರಾಷ್ಟ್ರಗಳು ವಿಫಲವಾದರೆ, ಪ್ರತಿ ದೇಶವೂ ತಮ್ಮ ಹವಾಮಾನ ವೈಪರೀತ್ಯ ತಡೆ ಯೋಜನೆ ಮತ್ತು ನೀತಿಯನ್ನು ಪರಿಷ್ಕರಿಸುತ್ತಲೇ ಇರಬೇಕು. ಇದು ಐದು ವರ್ಷಕ್ಕೆ ಒಮ್ಮೆ ಆದರೆ ಸಾಲದು, ಪ್ರತಿವರ್ಷವೂ ಮಾಡಲೇಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಹೇಳಿದ್ದಾರೆ.
ಹವಾಮಾನ ವೈಪರೀತ್ಯವನ್ನು ತಡೆಗಟ್ಟುವ ಮೂಲಕ ಮಾನವ ಕುಲವನ್ನು ರಕ್ಷಿಸಬೇಕು ಎಂದು ಜಾಗತಿಕ ನಾಯಕರಿಗೆ ಗ್ಲಾಸ್ಕೋ ಹವಾಮಾನ ವೈಪರಿತ್ಯ ತಡೆ ಶೃಂಗಸಭೆಯು ಕರೆ ಕೊಟ್ಟಿದೆ.
ಶೃಂಗಸಭೆಯು ವಿಫಲವಾದರೆ ,ಜನರ ಆಕ್ರೋಶವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮುಂದಿನ ತಲೆಮಾರುಗಳು ‘ನಮ್ಮನ್ನು ಕ್ಷಮಿಸದು’ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಎಚ್ಚರಿಕೆ ಕೊಟ್ಟಿದ್ದಾರೆ.
ಭಾರತದ ಹಾಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಕೃಷಿಗೂ ಹವಾಮಾನ ಬದಲಾವಣೆಯು ಬಹುದೊಡ್ಡ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕುಡಿಯುವ ನೀರಿನಿಂದ ಕೈಗೆಟುಕುವ ದರದವರೆಗೆ ಎಲ್ಲವೂ ಹವಾಮಾನ ಬದಲಾವಣೆ ತಡೆಗೆ ಪೂರಕವಾಗಿರಬೇಕು ಎಂದು ಅವರು ಹೇಳಿದರು.
ಶ್ರೀಮಂತ ರಾಷ್ಟ್ರಗಳು ಇಂಗಾಲ ಹೊರಸೂಸುವಿಕೆಯನ್ನು ಈಗಿನ ಮಟ್ಟಕ್ಕೆ ಸ್ಥಗಿತಗೊಳಿಸಬೇಕು. ಆ ಮೂಲಕ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಇಂಗಾಲ ಹೊರಸೂಸುವಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಭಾರತವು ಒತ್ತಾಯಿಸಿದೆ.

ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಬದಲಾಗಲಿದೆ : ಸಿ.ಎಂ. ಬೊಮ್ಮಾಯಿ

0

66ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ 2021 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹಲವು ಕ್ಷೇತ್ರಗಳ ಸಾಧನೆಗಾಗಿ 66 ಜನ ಸಾಧಕರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ರಾಜ್ಯೋತ್ಸವ ಪ್ರಶಸ್ತಿಗೆ ಆಹ್ವಾನಿಸುವ ಸಂಪ್ರದಾಯ ಸರಿಯಲ್ಲ. ಕ್ಷೇತ್ರದ ತಜ್ಞರೇ ಮುಂದಿನ ವರ್ಷದಿಂದ ಸಾಧಕರನ್ನು ಶೋಧಿಸಲಿದ್ದಾರೆ ಎಂದರು.ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರ ಆಯ್ಕೆ ಕನಿಷ್ಠ ವಯೋಮಿತಿ 60 ವರ್ಷ ತುಂಬಿರ ಬೇಕೆಂಬ ನಿಯಮವನ್ನು ಮುಂದಿನ ವರ್ಷದಿಂದ ಸಡಿಲಿಸುವ ಜೊತೆಗೆ, ಪ್ರಶಸ್ತಿ ಮೊತ್ತವನ್ನು 1 ಲಕ್ಷ ದಿಂದ 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಈ ಸಮಾರಂಭದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಹಿರಿಯ ಸಾಹಿತಿ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಂತರ್ಜಾಲ ಗುಣಮಟ್ಟ ಸೇವೆ : ಸರ್ಕಾರ ಬದ್ಧ

0

ಸರ್ಕಾರವು ಗ್ರಾಹಕರಿಗೆ ಸ್ಥಿರ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಹೊಣೆಗಾರಿಕೆಯುಳ್ಳ ಅಂತರ್ಜಾಲ ಸಂಪರ್ಕ ವ್ಯವಸ್ಥೆ ನೀಡುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಇಲಾಖೆ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ಅವರು ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಪ್ರಥಮ ಅಂತರ್ಜಾಲ ವಿನಿಮಯ ಕೇಂದ್ರವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು. ಈ ಕೇಂದ್ರವು ಉತ್ತರಾಖಂಡದಲ್ಲಿ ಅಂತರ್ಜಾಲ ಸೇವೆಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಲಿದೆ ಎಂದರು.

ನೇತ್ರದಾನ : ಪುನೀತರಾದ ಪುನೀತ್

0

ಪವರ್ ಸ್ಟಾರ್ ನಟ ಪುನೀತ್ ರಾಜಕುಮಾರ್ ಅವರ ಕಣ್ಣು ನಾಲ್ವರಿಗೆ ಜಗದ ಬೆಳಕು ತೋರಿದೆ. ಸಾವಿನ ಬಳಿಕ ಮಣ್ಣಿನಲ್ಲಿ ಮಣ್ಣಾಗುತ್ತಿದ್ದವು.ಅಂತಹ ಅಮೂಲ್ಯ ಕಣ್ಣಗಳನ್ನು ಪುನೀತ್ ಕುಟುಂಬದವರು ದಾನ ಮಾಡಿದ್ದಾರೆ. ನಾಲ್ವರ ಬಾಳಿನಲ್ಲಿ ಇಲ್ಲಿಯವರೆಗಿದ್ದ ಅಂದಕಾರ ದೂರವಾಗಿ ಹೊರಜಗತ್ತನ್ನು ನೋಡುವ ಸೌಭಾಗ್ಯ ಒದಗಿದೆ ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ ತಿಳಿಸಿದ್ದಾರೆ.
ಪುನೀತ್ ರಾಜಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲು ನಾರಾಯಣ ನೇತ್ರಾಲಯದಲ್ಲಿ “ನಿಮಗಿದೋ ವಂದನೆ” ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅವರ ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
” ಈವರೆಗೂ ಯಾವುದೇ ದಾನಿಗಳಿಂದ ಎರಡು ಕಣ್ಣುಗಳನ್ನು ಪಡೆದರೆ ಮತ್ತಿಬ್ಬರಿಗೆ ಮಾತ್ರ ಕಸಿ ಮಾಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಪುನೀತ್ ಅವರಿಂದ ಪಡೆದ ಎರಡು ಕಣ್ಣುಗಳನ್ನು ಆಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ನುರಿತ ತಜ್ಞರ ತಂಡವು ಯಶಸ್ವಿಯಾಗಿ ನಾಲ್ವರಿಗೆ ದೃಷ್ಟಿ ಭಾಗ್ಯ ನೀಡಿದೆ ಎಂದರು.
ಪುನೀತ್ ಅವರ ಮರಣದ ಮಾರನೇ ದಿನವೆ ನಾಲ್ಕು ಜನರಿಗೆ ಕಸಿ ಮಾಡಲಾಗಿದೆ. ಎಲ್ಲರಿಗೂ ದೃಷ್ಟಿ ಸ್ಪಷ್ಟವಾಗಿದೆ. ಒಂದೇ ದಿನ ಒಬ್ಬರ ಕಣ್ಣನ್ನು ನಾಲ್ವರಿಗೆ ಕಸಿ ಮಾಡಿರುವುದು ರಾಜ್ಯದಲ್ಲಿ ಇದೇ ಮೊದಲು. ಇವರಲ್ಲಿ ಒಬ್ಬ ಯುವತಿ ಹಾಗೂ ಮೂವರು ಯುವಕರು ಸೇರಿದ್ದಾರೆ ಎಂದರು.
“ದಾನ ಪಡೆದ ಕಣ್ಣುಗಳು ಆರೋಗ್ಯಕರವಾಗಿದ್ದರೆ ಕಾರ್ನಿಯಾವನ್ನು ಎರಡು ಭಾಗಗಳನ್ನಾಗಿ ಮಾಡಿ ಇಬ್ಬರಿಗೆ ಕಸಿ ಮಾಡಬಹುದು. ಆದರೆ ನಾವು ದಾನಿಗಳಿಂದ ಪಡೆದ ಬಹುತೇಕರ ಕಣ್ಣುಗಳಲ್ಲಿ ಕಾರ್ನಿಯಾದ ಮುಂಬಾಗ ಚೆನ್ನಾಗಿದ್ದರೆ, ಹಿಂಭಾಗದಲ್ಲಿ ತೊಂದರೆ ಇರುತ್ತದೆ, ಅಥವಾ ಹಿಂಭಾಗದಲ್ಲಿ ಚೆನ್ನಾಗಿದ್ದರೆ ಮುಂಭಾಗದಲ್ಲಿ ಸಮಸ್ಯೆ ಇರುತ್ತಿತ್ತು. ನಟ ಪುನೀತ್ ಅವರ ಎರಡು ಕಣ್ಣುಗಳಲ್ಲೂ ಯಾವುದೇ ಸಮಸ್ಯೆ ಇರಲಿಲ್ಲ. ಹಾಗಾಗಿ ಕಣ್ಣಿನ ಕಾರ್ನಿಯಾದ ಮುಂದಿನ ಮತ್ತು ಹಿಂದಿನ ಪದರಗಳನ್ನು ಬೇರ್ಪಡಿಸುವ ಮೂಲಕ ಪ್ರತಿ ಕಣ್ಣಿನಿಂದ ತಲಾ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ಬಳಸಿದ್ದೇವೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಣ್ಣಿನ ದಾನ ಮಾಡಿದ ಡಾ. ರಾಜಕುಮಾರ್ ಕುಟುಂಬ ವರ್ಗಕ್ಕೆ ನಾವು ತುಂಬಾ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದರು.

ಮನೆ ಬಾಗಿಲಿಗೆ ಸರ್ಕಾರಿ ಸೇವೆ

0

ವಿಧಾನಸೌಧದ ಮುಂಭಾಗದಲ್ಲಿ ಎರಡು ಸಾರ್ವಜನಿಕ ಸೇವೆಗಳ ಜೊತೆ, ಸಾರಿಗೆ ಇಲಾಖೆಯ 30 ಸಂಪರ್ಕರಹಿತ ಆನ್ಲೈನ್ ಸೇವೆಗಳನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದರು.
ಈ ಯೋಜನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜನಸೇವಕ ಮತ್ತು ಜನಸ್ಪಂದನೆ ಯೋಜನೆಗಳಿಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿ, “ಆಳುವವರು ಹಾಗೂ ಆಡಳಿತ ನಡೆಸುವವರ ಜವಾಬ್ದಾರಿಯಾಗಿದೆ. ಉತ್ತರದಾಯಿತ್ವದ ಬಗ್ಗೆ ಸ್ಪಷ್ಟತೆ ಇಲ್ಲ.ಆದ್ದರಿಂದ ತಳಹಂತದಲ್ಲಿ ನಾಗರಿಕ ಸೇವೆ ಮತ್ತು ಸರಕಾರದ ನಡುವೆ ಗೋಡೆ ಎದ್ದು ನಿಂತಿದೆ. ಸೇವೆಗಳನ್ನು ಹಣ ಕೊಟ್ಟು ಪಡೆಯುವ ಸ್ಥಿತಿ ನಿರ್ಮಾಣವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ಅಧಿಕಾರಶಾಹಿ ವಿಳಂಬ ಧೋರಣೆ ಅನುಸರಿಸುತ್ತಿದೆ.ಇದರಿಂದ ನಾಗರಿಕ ಸೇವೆಗಳಿಂದ ವಂಚಿತರಾಗುತ್ತಿರುವ ಜನರ ಮನೆ ಬಾಗಿಲಿಗೆ ಸೌಕರ್ಯ ಒದಗಿಸುವ ಮಹತ್ವಾಕಾಂಕ್ಷೆಯ ಉದ್ದೇಶವನ್ನು ಈ ಯೋಜನೆ ಹೊಂದಿವೆ ಎಂದು ತಿಳಿಸಿದರು.
ಜನಸೇವಕ ಯೋಜನೆಯಡಿಯಲ್ಲಿ, ಆಧಾರ್ ನವೀಕರಣ, ವಿಧವಾ ವೇತನ,ಆದಾಯ ಅಥವಾ ಜಾತಿ ಪ್ರಮಾಣಪತ್ರ, ಪಿಂಚಣಿ ಇತ್ಯಾದಿ ಸೇವೆಗಳು ಸುಲಭವಾಗಿ ಲಭ್ಯವಾಗಲಿವೆ.
ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ ಫೋರ್ಟಲ್ ನಲ್ಲಿ ಲಾಗಿನ್ ಆಗುವ ಮೂಲಕ ಅಥವಾ 1902 ಸಹಾಯವಾಣಿಗೆ ಕರೆ ಮಾಡಿ 33 ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಿ ಆನ್ ಲೈನ್ ಸೇವೆ ಪಡೆಯಬಹುದು. ಆರೋಗ್ಯ , ನೀರು ಮತ್ತು ವಿದ್ಯುದ್ಛಕ್ತಿ ವಲಯ ಹೊರತುಪಡಿಸಿ ಇತರೆ ದೂರುಗಳಿಗೆ ಪರಿಹಾರ ಪಡೆದುಕೊಳ್ಳುವ ವ್ಯವಸ್ಥೆ ಯೇ ಜನಸ್ಪಂದನ ಯೋಜನೆ ಎಂದು ತಿಳಿಸಿದರು.
ಸದ್ಯ ಬೆಂಗಳೂರು ನಗರದಲ್ಲಿ ಈ ಸೇವೆ ಜಾರಿಗೊಳಿಸಲಾಗಿದೆ. ಇಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಲೋಪದೋಷಗಳಿದ್ದರೆ ಸರಿಪಡಿಸಿ ಜ.26 ಕ್ಕೆ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಜನರು ಇಲಾಖೆಗಳ ಬಳಿ ಬರುವ ಬದಲಿಗೆ ಆಡಳಿತವೇ ಜನರ ಬಳಿ ಹೋಗುವ ಈ ವ್ಯವಸ್ಥೆಯು ಕ್ರಾಂತಿಕಾರಿ ಎಂದು ಬೊಮ್ಮಾಯಿ ಹೇಳಿದರು.
ಸಚಿವರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ, ಬಿ.ಸಿ. ನಾಗೇಶ್, ಶಾಸಕರಾದ ರಿಜ್ವಾನ್ ಅರ್ಷದ್,
ಸುರೇಶ್ ಕುಮಾರ್, ಮಹಾಂತೇಶ್ ಕವಟಗಿಮಠ ಇನ್ನಿತರರು ಉಪಸ್ಥಿತರಿದ್ದರು.