Monday, February 2, 2026
Monday, February 2, 2026
Home Blog Page 1891

ಬೆಳೆ ನಾಶ, ಖೇದಕರ: ಕೃಷಿ ಸಚಿವ ಬಿ.ಸಿ. ಪಾಟೀಲ್

0

ಹೀರೆಕೆರೂರು, ರಟ್ಟಿಹಳ್ಳಿ ತಾಲೂಕಿನ ತಿಂಗಳಗೊಂದಿ ಗ್ರಾಮದಲ್ಲಿ ಬಸವರಾಜ್ ಎಂಬ ಕೃಷಿಕರ ಬಾಳೆತೋಟವನ್ನು ದುಷ್ಕರ್ಮಿಗಳು ಘಾಸಿಗೊಳಿಸಿದ್ದಾರೆ. ಮಾನ್ಯ ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಅವರು ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ, “ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕ್ರೂರ ಮನಸ್ಸು ಉಳ್ಳವರು, ಬೆಳೆಯನ್ನು ನಾಶ ಮಾಡಿರುವುದು ಬೇಸರದ ಸಂಗತಿಯಾಗಿದೆ”. ಈ ವಿಷಯದ ಬಗ್ಗೆ ಪೊಲೀಸರೊಂದಿಗೆ ಮಾತನಾಡಿದ್ದೇನೆ, ಈ ಕೃತ್ಯಕ್ಕೆ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ತಿಳಿಸಿದರು.

ಮಲೆನಾಡಿನಾದ್ಯಂತ ಸೀಗೆಹುಣ್ಣಿಮೆ ಸಂಭ್ರಮ

0

ತಾಳಗುಪ್ಪ: ಇಂದು ಭೂ‌ಮಾತೆಯ ಸೀಮಂತ ಹಬ್ಬವಾದ ಭೂಮಿ ಹುಣ್ಣಿಮೆ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ಹೋಬಳಿಯ ಎಲ್ಲೆಡೆ ರೈತರು ತಮ್ಮ ಜಮೀನಿನಲ್ಲಿ ಫಸಲು ಮೈ ತುಂಬಿದ ಈ ದಿನವನ್ನು ಪೂಜಿಸುವ ಪದ್ದತಿ ಹಿಂದಿನಿಂದಲೂ ನಡೆದು ಬಂದಿದೆ. ಹುಣ್ಣಿಮೆಯ ಈ ದಿನ ಮಲೆನಾಡಿನ ರೈತರು ನಸುಕಿನಲ್ಲಿ ಎದ್ದು ವಿವಿಧ ಎಲೆಗಳ ಸೊಪ್ಪನ್ನು ಬೇಯಿಸಿ ಅದನ್ನು ತಮ್ಮ ಜಮೀನಿನಲ್ಲಿ ಎಲ್ಲೆಡೆ ಹಾಕುತ್ತಾರೆ. ಇದಕ್ಕೆ ಅಚ್ಚು ಬೀರುವುದು ಎನ್ನುತ್ತಾರೆ. ನಂತರ ಜಮೀನಿನಲ್ಲಿ ದೇವರ ಪ್ರತಿಷ್ಠಾಪಿಸಿ ಪೂಜೆ ಮಾಡಿ ಕಡುಬು ನೈವೇದ್ಯ ಮಾಡಿ ಅಲ್ಲಿಯೇ ಊಟ ಮಾಡುವ ಪದ್ದತಿ ಆಚರಿಸುತ್ತಾರೆ. ಕೃಷಿಕ ಹೀರೆಮನೆ ಬಾಲಚಂದ್ರರವರ ತೋಟದಲ್ಲಿ ಭೂ ಹುಣ್ಣಿಮೆಯನ್ನು ಆಚರಿಸಲಾಯಿತು. ನಮಗೆ ಅನ್ನ ನೀಡುತ್ತಿರುವ ಭೂಮಿತಾಯಿಗೆ ಕೃತಜ಼ತೆ ಸಲ್ಲಿಸುವ ಪರಿ ಇದಾಗಿದೆ. ವರದಿ ಕೃಪೆ: ಶ್ರೀ. ರಾಘವೇಂದ್ರ ಶರ್ಮಾ ತಲವಾಟ. ನಿರೂಪಣಾ ಧ್ವನಿ: ರಚನಾ.ಕೆ.ಆರ್

ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ಬಿ.ಎಸ್. ಯಡಿಯೂರಪ್ಪನವರ ಶ್ಲಾಘನೆ

0

ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಗಳ ಬಗ್ಗೆ ಶ್ಲಾಘಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು ನೂರಕ್ಕೆ ನೂರು ಪ್ರಮಾಣದಷ್ಟು ಜನಸಾಮಾನ್ಯರಿಗೆ ಸಹಾಯಕವಾಗಿದೆ. ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಯಿ, ನೇತೃತ್ವದ ಸರ್ಕಾರವು ಅಭಿವೃದ್ಧಿ ಕಾರ್ಯಗಳ ಮೂಲಕ ಜನರಿಗೆ ನೆರವಾಗುತ್ತಿದೆ. ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳಲ್ಲಿ 200ರೂ. ಗಳನ್ನು ಹೆಚ್ಚಿಸಲಾಗಿದೆ, ಹಾಗೂ ಲಕ್ಷಾಂತರ ಹೆಣ್ಣು ಮಕ್ಕಳಿಗೆ ನೆರವಾಗುವಂತೆ “ಭಾಗ್ಯ ಲಕ್ಷ್ಮೀ ಯೋಜನೆಯನ್ನು” ಜಾರಿಗೊಳಿಸಲಾಗಿದೆ. ಇದರಿಂದ ಹೆಣ್ಣು ಮಕ್ಕಳಿಗೆ ಸಹಾಯಕವಾಗಿದೆ. ನಮ್ಮ ದೇಶಕ್ಕೆ ನರೇಂದ್ರ ಮೋದಿಯವರಂತಹ ಪ್ರಧಾನಿಯನ್ನು ಪಡೆಯಲು ನಾವು ಅದೃಷ್ಟವಂತರು ಎಂದು ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಎದುರು ಹಂಚಿಕೊಂಡರು.

ಮಲೆನಾಡಿನ ಅಮೂಲ್ಯ ಸಿರಿ:

0

ಶಿವಮೊಗ್ಗ ಲಕ್ಕಿನಕೊಪ್ಪ ಸರ್ಕಲ್ ನಲ್ಲಿರುವ ಒಂದು ಅಪರೂಪ ವಸ್ತು ಸಂಗ್ರಹಾಲಯ, ನಮ್ಮ ಗಮನ ಸೆಳೆಯುತ್ತದೆ ಅದೇ “ಅಮೂಲ್ಯ ಶೋಧ”. ಇದರ ಹಿನ್ನೆಲೆ ಅತ್ಯಂತ ಕುತೂಹಲ. ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ, ಶ್ರೀ.ಹೆಚ್. ಖಂಡೋಬರಾವ್- ಯಶೋಧಮ್ಮರವರ ಪ್ರೇಮ ಸೌಧ. ಶ್ರೀ.ಹೆಚ್. ಖಂಡೋಬರಾವ್ ರವರು ಗತಿಸಿದ ತಮ್ಮ ಪತ್ನಿಯ ಪ್ರೇಮದ ಸಂಕೇತವಾಗಿ ಈ ಸಂಗ್ರಹಾಲಯವನ್ನು ರೂಪುಗೊಳಿಸಿದ್ದಾರೆ. 2008ರಲ್ಲಿ ಆರಂಭವಾದ ಈ ಅಮೂಲ್ಯ ಶೋಧ ಮಲೆನಾಡಿನ, ಅಷ್ಟೇಕೆ ಇಡೀ ನಾಡಿನಾದ್ಯಂತ ಇರುವ ಪುರಾತನ ವಸ್ತುಗಳ ಪ್ರಿಯರನ್ನ ಕೈ ಬೀಸಿ ಕರೆಯುತ್ತಿದೆ. ನಾಣ್ಯ ಸಂಗ್ರಹಕಾರಿಯಾಗಿಯು ಅತ್ಯಂತ ಪ್ರಸಿದ್ಧರಾಗಿರುವ ಖಂಡೋಬರಾವ್ ರವರು ಬಹುಮುಖಿ ಆಸಕ್ತಿಯ ಕೇಂದ್ರವಾದ ಈ ಅಮೂಲ್ಯ ಶೋಧ, ನಮ್ಮ ಮಲೆನಾಡಿನ ಮುಕುಟಕ್ಕೆ ಇಟ್ಟ ಕೀರ್ತಿ ಕಳಸವಾಗಿದೆ. ಇವರ ಈ ಕೊಡುಗೆಯನ್ನ ನಮ್ಮ ಮಲೆನಾಡಿನ ಆಸಕ್ತ ಬಳಗ ಮೆಚ್ಚಿ ಶ್ರೀ. ಹೆಚ್. ಖಂಡೋಬರಾವ್ ರವರಿಗೆ ಹಾರ್ಧಿಕವಾಗಿ, ಸತ್ಕಾರ, ಸನ್ಮಾನ,ಅಭಿಮಾನವನ್ನು ಅರ್ಪಿಸಿದೆ.

ಈದ್ ಮಿಲಾದ್ ಶ್ರದ್ಧಾಪೂರ್ವಕ ಆಚರಣೆ

0

ದೇಶಾದ್ಯಂತ ಬಾಂಧವರು ಭಾವೈಕ್ಯತೆ ಸಂಕೇತದ ಮಿಲಾದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದಾರೆ. ಈದ್ ಮಿಲಾದ್ ಪ್ರಯುಕ್ತ ಶಿವಮೊಗ್ಗ ನಗರದ ಮುಸ್ಲಿಂ ಒಕ್ಕೂಟಗಳಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಹಬ್ಬವನ್ನು ಶ್ರದ್ಧಾಪೂರ್ವಕವಾಗಿ ಆಚರಿಸಿದ್ದಾರೆ

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಏಕಾಂಗಿ ಪ್ರತಿಭಟನೆ

0

ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿರುವುದನ್ನು ಖಂಡಿಸಿ ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್. ಎಸ್ ಗೌಡ ಅವರು ಶಿವಮೊಗ್ಗ ನಗರದ ಗಾಂಧಿ ಪಾರ್ಕ್ ನ ಗಾಂಧಿ ಪ್ರತಿಮೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು. ಪ್ರತಿದಿನದ ಅಗತ್ಯವಸ್ತುಗಳ ಬೆಲೆ ಏರಿಕೆ ಹಾಗೂ ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಇತರ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಇದರಿಂದ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದೆ ಹಾಗಾಗಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಲೆಕ್ಟ್ರಾನಿಕ್ ವಾಹನಗಳಿಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕು ಜೊತೆಗೆ ಬಿಪಿಎಲ್ ಕಾರ್ಡ್ ದಾರರಿಗೆ ಅಡಿಗೆ ಅನಿಲ, ಎಣ್ಣೆ, ಬೇಳೆಕಾಳುಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು ಎಂದು ಆಗ್ರಹಿಸಿ ಏಕಾಂಗಿ ಪ್ರತಿಭಟನೆ ನಡೆಸಿದರು.

ಸಾಗರದಲ್ಲಿ ಪ್ರವಾಸಿ ವಾಹನಗಳಿಂದ ಟ್ರಾಫಿಕ್ ಜಾಮ್

0

ದಸರಾ ಹಬ್ಬದ ಪ್ರಯುಕ್ತ ಸಾಲುಸಾಲಾಗಿ ರಜೆಗಳಿರುವುದರಿಂದ ಪ್ರವಾಸಿಗರು ಮಲೆನಾಡಿನತ್ತ ಮುಖ ಮಾಡಿದ್ದಾರೆ. ಮಲೆನಾಡಿನ ಪ್ರಮುಖ ಪ್ರವಾಸಿ ಸ್ಥಳಗಳಾದ ಸಿಗಂದೂರು ಹಾಗೂ ಜೋಗ ಜಲಪಾತವನ್ನು ವೀಕ್ಷಿಸಲು ಜನರು ಮುಗಿಬಿದ್ದಿದ್ದಾರೆ. ಹೀಗಾಗಿ ಹೆಚ್ಚಾದ ಪ್ರವಾಸಿಗರ ವಾಹನಗಳಿಂದಾಗಿ ಸಾಗರದ ಎಲ್ಲಾ ರಸ್ತೆಗಳಲ್ಲೂ 2 ಗಂಟೆ ಯಿಂದ ಟ್ರಾಫಿಕ್ ಜಾಮ್ ಆಗಿದು, ಪ್ರಯಾಣಿಕರು ಪರದಾಡುವಂತಾಗಿದೆ. ಸಾಗರ ಬಸ್ ನಿಲ್ದಾಣದ ಬಳಿಯಿಂದ ಐಬಿ ಸರ್ಕಲ್ ಅವರಿಗೆ ಮೂರು ಕಿಲೋಮೀಟರ್ ಟ್ರಾಫಿಕ್ ಜಾಮ್ ನಲ್ಲಿ ಸಾವಿರಾರು ವಾಹನಗಳು ಸಿಲುಕಿದು, ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಇಂದು ಆರಂಭ

0

ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಂದಾಯ ಇಲಾಖೆಯಿಂದ ಹೊಸ ಪರಿಕಲ್ಪನೆಯಡಿ ಪ್ರತಿ ತಿಂಗಳ 3ನೇ ಶನಿವಾರದಂದು ಜಿಲ್ಲಾಧಿಕಾರಿಗಳು ಗ್ರಾಮ ಭೇಟಿ ನೀಡಿ ವಾಸ್ತವ್ಯ ಮಾಡುವ ಕಾರ್ಯಕ್ರಮ ಕೊರೋನ ಕಾರಣದಿಂದಾಗಿ ಸ್ಥಗಿತಗೊಂಡಿತ್ತು. ಕೊರೋನ ಕಡಿಮೆಯಾದ ಬಳಿಕ ಮತ್ತೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಇಂದು ಪುನರಾರಂಭಗೊಂಡಿದೆ. ಗಾಜನೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಚಾಲನೆ ನೀಡಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದರು ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಭಾಗಿಯಾಗಿದ್ದರು.

ಕೋಟಿಗೊಬ್ಬ 3ಗೆ ಚಿತ್ರ ರಸಿಕರಿಂದ ಸಡಗರದ ಸ್ವಾಗತ

0

ಕೋವಿಡ್ ಎರಡನೇ ಅಲೆ ಬಳಿಕ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ಆಯುಧ ಪೂಜೆಯೆಂದು ತೆರೆಕಾಣಬೇಕಿತ್ತು. ಆದರೆ ಹಲವು ಕಾರಣದಿಂದ ಚಿತ್ರಪ್ರದರ್ಶನ ಗೊಳ್ಳದೆ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿತು. ವಿಜಯದಶಮಿಯಂದು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3 ಚಿತ್ರ ಅದ್ಧೂರಿಯಾಗಿ ತೆರೆಕಂಡಿದೆ. ಉತ್ತಮ ಪ್ರದರ್ಶನ ಕಾಣುತ್ತಿದೆ.

ಯೋಗ ದಸರಾ : ಹುರುಪಿನ ಆರಂಭ

0

ನಾಡ ಹಬ್ಬ ದಸರಾ ಪ್ರಯುಕ್ತ ಮಹಾನಗರ ಪಾಲಿಕೆ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿಂದಾಗಿ ಸ್ಥಗಿತಗೊಂಡಿದ್ದ ದಸರಾ ವೈಭವ ಈ ವರ್ಷ ಮತ್ತೆ ಮರುಕರಳಿಸಿದ್ದು ಇಂದು ದಸರಾ ಹಬ್ಬದ ಪ್ರಯುಕ್ತ ಯೋಗ ದಸರಾವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಷನ್ ಹಾಗೂ ಪ್ರಾಣಯಾಮ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಇವರ ಆಶ್ರಯದಲ್ಲಿ ಯೋಗ ಹಾಗೂ ಯೋಗ ನಡಿಗೆ ,ಚಂಡೆ,ಮದ್ದಳೆ ಹಾಗೂ ಮಲ್ಲಕಂಬ ಕಾರ್ಯಕ್ರಮವನ್ನು ಆಯೋಜಿಸಿ ಉತ್ತಮ ಆರೋಗ್ಯಕ್ಕಾಗಿ ಯೋಗ ಎನ್ನುವ ಮೂಲಕ ಯೋಗ ಮಾಡಲಾಯಿತು. ನಂತರ  ಯೋಗ ವಿದ್ಯಾರ್ಥಿಗಳಿಂದ ಟ್ರಾಕ್ಟರ್ ನಲ್ಲಿ  ಮಲ್ಲಕಂಬ ಪ್ರದರ್ಶನ  ನೋಡುಗರ ಗಮನ ಸೆಳೆಯಿತು ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ,ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.