ದಸರಾ ಹಬ್ಬದ ಪ್ರಯುಕ್ತ ಸಾಲುಸಾಲಾಗಿ ರಜೆಗಳಿರುವುದರಿಂದ ಪ್ರವಾಸಿಗರು ಮಲೆನಾಡಿನತ್ತ ಮುಖ ಮಾಡಿದ್ದಾರೆ. ಮಲೆನಾಡಿನ ಪ್ರಮುಖ ಪ್ರವಾಸಿ ಸ್ಥಳಗಳಾದ ಸಿಗಂದೂರು ಹಾಗೂ ಜೋಗ ಜಲಪಾತವನ್ನು ವೀಕ್ಷಿಸಲು ಜನರು ಮುಗಿಬಿದ್ದಿದ್ದಾರೆ. ಹೀಗಾಗಿ ಹೆಚ್ಚಾದ ಪ್ರವಾಸಿಗರ ವಾಹನಗಳಿಂದಾಗಿ ಸಾಗರದ ಎಲ್ಲಾ ರಸ್ತೆಗಳಲ್ಲೂ 2 ಗಂಟೆ ಯಿಂದ ಟ್ರಾಫಿಕ್ ಜಾಮ್ ಆಗಿದು, ಪ್ರಯಾಣಿಕರು ಪರದಾಡುವಂತಾಗಿದೆ. ಸಾಗರ ಬಸ್ ನಿಲ್ದಾಣದ ಬಳಿಯಿಂದ ಐಬಿ ಸರ್ಕಲ್ ಅವರಿಗೆ ಮೂರು ಕಿಲೋಮೀಟರ್ ಟ್ರಾಫಿಕ್ ಜಾಮ್ ನಲ್ಲಿ ಸಾವಿರಾರು ವಾಹನಗಳು ಸಿಲುಕಿದು, ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಸಾಗರದಲ್ಲಿ ಪ್ರವಾಸಿ ವಾಹನಗಳಿಂದ ಟ್ರಾಫಿಕ್ ಜಾಮ್
Date: