Friday, February 6, 2026
Friday, February 6, 2026
Home Blog Page 1871

ಎಂ-ಸ್ಯಾಂಡ್ ಬಂತು : ನದಿ ಮರಳಿಗೆ ಬೆಲೆ ಇಲ್ಲ

0

ರಾಜ್ಯದಲ್ಲಿ ಮರಳಿನ ಬೇಡಿಕೆ ಮತ್ತು ಪೂರೈಕೆ ವ್ಯವಸ್ಥೆಗಳೇ ಕೃತಕ ಅಭಾವ ಸೃಷ್ಟಿಸಿ ವ್ಯವಹಾರ ಕುದುರಿಸುವ ಕಾರಣದಿಂದ ದರ ಗಗನಕ್ಕೇರಿದೆ. ಈ ವ್ಯಾಪಾರ ದಂದೆಯಾಗಿ ಮಾರ್ಪಟ್ಟಿದೆ. ನಿರ್ಮಾಣ ವಲಯ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ನದಿ ಮರಳಿನಿಂದ ಬೇಡಿಕೆ ನೀಗಿಸಲು ಎಂ-ಸ್ಯಾಂಡ್ ಪರ್ಯಾಯ ಆಯ್ಕೆಯಾಗಿದೆ. ನಿರ್ಮಾಣ ವಲಯ ಈಗ ನದಿ ಮರಳು ಆಶ್ರಯಿಸಿಲ್ಲ ಎಂದು ಭಾರತೀಯ ಬಿಲ್ಡರ್ ಗಳ ಒಕ್ಕೂಟದ ಅಧ್ಯಕ್ಷರಾಗಿರುವ ಜಿ.ಎಂ.ರವೀಂದ್ರ ಅವರು ತಿಳಿಸಿದ್ದಾರೆ.
2018ರಲ್ಲಿ 11 ಕೋಟಿ ರೂಪಾಯಿ ಹೂಡಿಕೆ ಮಾಡಿ ಮಲೇಷಿಯಾದಿಂದ 56,400 ಟನ್ ಮರಳನ್ನು ನವ ಮಂಗಳೂರು ಬಂದರಿಗೆ ತರಿಸಿದ್ದೆವು. ಟನ್ ಗೆ 2,200ರೂ. ವೆಚ್ಚವಾಗಿದೆ. ಬೇಡಿಕೆ ಇಲ್ಲದ್ದರಿಂದ ಟನ್ ಗೆ 1,400ಕ್ಕೆ ಮಾರಿದೆವು. ಅಷ್ಟೂ ಮರಳು ಖಾಲಿ ಮಾಡಲು ಎರಡು ವರ್ಷ ಬೇಕಾಯಿತು. 5ಕೋಟಿ ರೂ. ನಷ್ಟ ಆಗಿದೆ ಎಂದು ಮರಳು ಆಮದು ಮಾಡಿದ್ದ ಚೆನ್ನೈನ ಇಂಟಿಗ್ರೇಟೆಡ್ ಸರ್ವಿಸ್ ಪಾಯಿಂಟ್ ಕಂಪನಿಯ ನಿರ್ದೇಶಕರೊಬ್ಬರು ತಿಳಿಸಿದ್ದಾರೆ.
ರಾಜ್ಯದಲ್ಲಿ ಗುರುತಿಸಿದ ನೈಸರ್ಗಿಕ ಮರುಳು ನಿಕ್ಷೇಪಗಳ ಪೈಕಿ 251ನ್ನು ಹರಾಜು ಮಾಡಲಾಗಿದೆ. ಉಳಿದ 102 ನಿಕ್ಷೇಪಗಳನ್ನು ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ (ಎಚ್ ಜಿಎಂಲ್) ಮತ್ತು ಕರ್ನಾಟಕ ರಾಜ್ಯ ಖನಿಜ ನಿಗಮಕ್ಕೆ ವಹಿಸಿ ಗ್ರಾಹಕರಿಗೆ ಪೂರೈಸಲು ಹೊಸ ಮರಳು ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.
ಮರಳು ಗಣಿಗಾರಿಕೆಗೆ ಗುತ್ತಿಗೆ ಪಡೆದ ಸಂಸ್ಥೆಗಳ ಅವಧಿ ಮುಗಿದ ಬಳಿಕ ಆ ನಿಕ್ಷೇಪಗಳಲ್ಲಿ ಮರಳು ಗಣಿಗಾರಿಕೆ ಮತ್ತು ಸಾಗಣೆ ಹೊಣೆಯನ್ನು ಈ ಸಂಸ್ಥೆಗಳೇ ವಹಿಸಿಕೊಳ್ಳಲಿದೆ ಎಂಬ ಮಾಹಿತಿ ದೊರೆತಿದೆ.

ರಾಜ್ಯದ ಹಲವು ಜಿಲ್ಲೆಯಲ್ಲಿ ಮಳೆಯ ಅವಾಂತರ

0

ರಾಜ್ಯದಲ್ಲಿ ಕೆಲವೆಡೆ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಇದರಿಂದ ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಶಿವಮೊಗ್ಗದ ನ್ಯೂ ಮಂಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಒಂದು ಅಡಿ ನೀರು ನಿಂತಿದೆ. ಇದರಿಂದ ಮಕ್ಕಳಿಗೆ ಶಾಲೆಗೆ ತೆರಳು ಕಷ್ಟಕರವಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ರೈತರು ಬೆಳೆದ ರಾಗಿ ಬೆಳೆಯು ನೆಲಕ್ಕುರುಳಿದ. ಇದರಿಂದ ಅನ್ನದಾತರು ಕಂಗಾಲಾಗಿದ್ದಾರೆ.

ಹಾಸನ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಗೊರವನಹಳ್ಳಿಯಲ್ಲಿ ಮನೆಯ ಗೋಡೆ ಕುಸಿದಿದೆ. ಜೋಳ ,ರಾಗಿ ಬೆಳೆಗಳ ಕಟಾವಿಗೆ ಅಡ್ಡಿ ಉಂಟಾಗಿದೆ.

ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಜೋರು ಮಳೆ ಯಾಗಿದೆ. ಭಟ್ಕಳ, ಹೊನ್ನಾವರ, ಶಿರಸಿ ವಿವಿಧೆಡೆ ಸಾಧಾರಣ ಮಳೆಯಾಗಿದೆ.
ರಾಜ್ಯದ ಕರಾವಳಿ ಹಾಗೂ ಮಳೆನಾಡಿನ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನವೆಂಬರ್ 16 ರಿಂದ 18ರವರೆಗೆ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತೀಯ ಕ್ರಿಕೆಟಿಗರಿಲ್ಲದ ವಿಶ್ವತಂಡ

0

ಕ್ರೀಡೆಯಲ್ಲಿ ಯಾವುದೇ ಪೂರ್ವಗ್ರಹ ಇರಬಾರದೆಂದು ಎಲ್ಲರೂ ನಿರೀಕ್ಷಿಸುತ್ತಾರೆ. ಆದರೆ ಕ್ರಿಕೆಟ್ ಕ್ಷೇತ್ರದಲ್ಲಿ ಈ ಪೂರ್ವಗ್ರಹ ಮತ್ತೆ ಸ್ಥಾಪಿತವಾಗಿದೆಯೇನೋ ಅನಿಸುವಂತಾಗಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಟಿ – 20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ನಿರಾಶೆ ಹೊಂದಿದ್ದು ಎಲ್ಲರೂ ತಿಳಿದ ಸಂಗತಿ. ಭಾರತ ತಂಡದಲ್ಲಿ ಸಮರ್ಥ ಆಟಗಾರರು ಇದ್ದಾರೆ ಅವರಲ್ಲಿ ವಿಶ್ವ ತಂಡಕ್ಕೆ ಆಯ್ಕೆ ಆಗುವ ಸಾಮರ್ಥ್ಯ ಇಲ್ಲ ಎಂದು ಹೇಳಲಾಗದು. ಇದು ಎಲ್ಲರಿಗೂ ತಿಳಿದ ವಿಷಯ ಪ್ರಸ್ತುತ ವಿಶ್ವಕಪ್ ತಂಡ ಘೋಷಿಸಲಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಈ ತಂಡವನ್ನು ಆಯ್ಕೆ ಮಾಡಿದೆ. ಇದರ ನಾಯಕನಾಗಿ ಬಾಬರ್ ಅಜಂ ಪಾಕಿಸ್ತಾನ. ಆಯ್ಕೆ ಆಗಿದ್ದಾರೆ. ಮಿಕ್ಕಂತೇ ಶ್ರೀಲಂಕಾ. ಮತ್ತು ದಕ್ಷಿಣ ಆಫ್ರಿಕಾ ಮತ್ತು ಇತರ 6 ರಾಷ್ಟ್ರಗಳ ಆಟಗಾರರಿದ್ದಾರೆ. ಕೇವಲ ಸೆಮಿಫೈನಲ್ ಗೆ ಅರ್ಹತೆ ಪಡೆಯಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಭಾರತದ ಆಟಗಾರರನ್ನು ಅಸಡ್ಡೆ ಮಾಡಲಾಗಿದೆ.
ಸೂಪರ್ – 12 ರ ಮತ್ತು ನಂತರದ ಹಂತದ ಪಂದ್ಯಗಳ ಅಧಾರದಲ್ಲಿ ಆಯ್ಕೆ ಮಾಡಲಾಗಿದೆ.ಯಾವುದೇ ತಂಡದ ಆಯ್ಕೆಯಂತೆ ಈ ತಂಡವನ್ನು ಕೂಡ ಸಾಕಷ್ಟು ಚರ್ಚೆಯ ನಂತರ ಅನೇಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಆರಿಸಲಾಗಿದೆ ಇದು ಭಾರಿ ಸಾವಲಿನ ಕಾರ್ಯವಾಗಿತ್ತು. ಎಂದು ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ವೆಸ್ಟ್ ಇಂಡೋ ಸನ್ ಮಾಜಿ ವೇಗದ ಬೌಲರ್ ಇಯಾನ್ ಬಿಷಪ್ ಅಭಿಪ್ರಾಯಪಟ್ಟಿದ್ದಾರೆ.
ಇವರ ಅಭಿಪ್ರಾಯವನ್ನು ನಾವುಗಳು ನೋಡಿದಾಗ ಎಷ್ಟು ಸತ್ಯ ಮತ್ತು ಎಷ್ಟು ಸುಳ್ಳು ಎಂಬುವುದನ್ನು ಸಂಶಯಪಡುವಂತಾಗಿದೆ.
ಆಯ್ಕೆಯಾದ ವಿಶ್ವಕಪ್ ತಂಡಗಳ ಆಟಗಾರರ ಪಟ್ಟಿ ಇಂತಿದೆ
ಡೇವಿಡ್ ವಾರ್ನರ್ ಆಸ್ಟ್ರೇಲಿಯಾ. ಜೋಸ್ ಬಟ್ಲರ್ ವಿಕೆಟ್ ಕೀಪರ್ . ಇಂಗ್ಲೆಂಡ್. ಬಾಬರ್ ಅಜಂ. ನಾಯಕ . ಪಾಕಿಸ್ತಾನ . ಚರಿತ್ ಆಸಲಂಕಾ ಶ್ರೀಲಂಕಾ. ಏಡನ್ ಮರ್ಕಾಮ್ ದಕ್ಷಿಣ ಆಫ್ರಿಕಾ. ಮೋಯಿನ್ ಅಲಿ ಇಂಗ್ಲೆಂಡ್ . ವಾಣಿಂದು ಹಸರಂಗ ಶ್ರೀಲಂಕಾ. ಯಾಡಾo ಜಂಪಾ ಆಸ್ಟ್ರೇಲಿಯಾ. ಜೋಶ್ ಕ್ರೀಡೆಯಲ್ಲಿ ಯಾವುದೇ ಪೂರ್ವಗ್ರಹ ಇರಬಾರದೆಂದು ಎಲ್ಲರೂ ನಿರೀಕ್ಷಿಸುತ್ತಾರೆ. ಆದರೆ ಕ್ರಿಕೆಟ್ ಕ್ಷೇತ್ರದಲ್ಲಿ ಈ ಪೂರ್ವಗ್ರಹ ಮತ್ತೆ ಸ್ಥಾಪಿತವಾಗಿದೆಯೇನೋ ಅನಿಸುವಂತಾಗಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಟಿ – 20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ನಿರಾಶೆ ಹೊಂದಿದ್ದು ಎಲ್ಲರೂ ತಿಳಿದ ಸಂಗತಿ. ಭಾರತ ತಂಡದಲ್ಲಿ ಸಮರ್ಥ ಆಟಗಾರರು ಇದ್ದಾರೆ ಅವರಲ್ಲಿ ವಿಶ್ವ ತಂಡಕ್ಕೆ ಆಯ್ಕೆ ಆಗುವ ಸಾಮರ್ಥ್ಯ ಇಲ್ಲ ಎಂದು ಹೇಳಲಾಗದು. ಇದು ಎಲ್ಲರಿಗೂ ತಿಳಿದ ವಿಷಯ ಪ್ರಸ್ತುತ ವಿಶ್ವಕಪ್ ತಂಡ ಘೋಷಿಸಲಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಈ ತಂಡವನ್ನು ಆಯ್ಕೆ ಮಾಡಿದೆ. ಇದರ ನಾಯಕನಾಗಿ ಬಾಬರ್ ಅಜಂ ಪಾಕಿಸ್ತಾನ. ಆಯ್ಕೆ ಆಗಿದ್ದಾರೆ. ಮಿಕ್ಕಂತೇ ಶ್ರೀಲಂಕಾ. ಮತ್ತು ದಕ್ಷಿಣ ಆಫ್ರಿಕಾ ಮತ್ತು ಇತರ 6 ರಾಷ್ಟ್ರಗಳ ಆಟಗಾರರಿದ್ದಾರೆ. ಕೇವಲ ಸೆಮಿಫೈನಲ್ ಗೆ ಅರ್ಹತೆ ಪಡೆಯಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಭಾರತದ ಆಟಗಾರರನ್ನು ಅಸಡ್ಡೆ ಮಾಡಲಾಗಿದೆ.
ಸೂಪರ್ – 12 ರ ಮತ್ತು ನಂತರದ ಹಂತದ ಪಂದ್ಯಗಳ ಅಧಾರದಲ್ಲಿ ಆಯ್ಕೆ ಮಾಡಲಾಗಿದೆ.ಯಾವುದೇ ತಂಡದ ಆಯ್ಕೆಯಂತೆ ಈ ತಂಡವನ್ನು ಕೂಡ ಸಾಕಷ್ಟು ಚರ್ಚೆಯ ನಂತರ ಅನೇಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಆರಿಸಲಾಗಿದೆ ಇದು ಭಾರಿ ಸಾವಲಿನ ಕಾರ್ಯವಾಗಿತ್ತು. ಎಂದು ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ವೆಸ್ಟ್ ಇಂಡೋ ಸನ್ ಮಾಜಿ ವೇಗದ ಬೌಲರ್ ಇಯಾನ್ ಬಿಷಪ್ ಅಭಿಪ್ರಾಯಪಟ್ಟಿದ್ದಾರೆ.
ಇವರ ಅಭಿಪ್ರಾಯವನ್ನು ನಾವುಗಳು ನೋಡಿದಾಗ ಎಷ್ಟು ಸತ್ಯ ಮತ್ತು ಎಷ್ಟು ಸುಳ್ಳು ಎಂಬುವುದನ್ನು ಸಂಶಯಪಡುವಂತಾಗಿದೆ.
ಆಯ್ಕೆಯಾದ ವಿಶ್ವಕಪ್ ತಂಡಗಳ ಆಟಗಾರರ ಪಟ್ಟಿ ಇಂತಿದೆ
ಡೇವಿಡ್ ವಾರ್ನರ್ ಆಸ್ಟ್ರೇಲಿಯಾ. ಜೋಸ್ ಬಟ್ಲರ್ ವಿಕೆಟ್ ಕೀಪರ್ . ಇಂಗ್ಲೆಂಡ್. ಬಾಬರ್ ಅಜಂ. ನಾಯಕ . ಪಾಕಿಸ್ತಾನ . ಚರಿತ್ ಆಸಲಂಕಾ ಶ್ರೀಲಂಕಾ. ಏಡನ್ ಮರ್ಕಾಮ್ ದಕ್ಷಿಣ ಆಫ್ರಿಕಾ. ಮೋಯಿನ್ ಅಲಿ ಇಂಗ್ಲೆಂಡ್ . ವಾಣಿಂದು ಹಸರಂಗ ಶ್ರೀಲಂಕಾ. ಯಾಡಾo ಜಂಪಾ ಆಸ್ಟ್ರೇಲಿಯಾ. ಜೋಶ್ ಹ್ಯಾಜಿಲ್ ವುಡ್ ಆಸ್ಟ್ರೇಲಿಯಾ. ಟೆಂಪ್ ಬೌಲ್ಟ್ ನ್ಯೂಜಿಲೆಂಡ್. ಎನ್ರಿಚ್ ನಾರ್ಕಿಯಾ ದಕ್ಷಿಣಾ ಆಫ್ರಕಾ . ಶಹಿಬ್ ಶಾ ಅಫ್ರಿದ್ ಪಾಕಿಸ್ತಾನ.ಹ್ಯಾಜಿಲ್ ವುಡ್ ಆಸ್ಟ್ರೇಲಿಯಾ. ಟೆಂಪ್ ಬೌಲ್ಟ್ ನ್ಯೂಜಿಲೆಂಡ್. ಎನ್ರಿಚ್ ನಾರ್ಕಿಯಾ ದಕ್ಷಿಣಾ ಆಫ್ರಕಾ . ಶಹಿಬ್ ಶಾ ಅಫ್ರಿದ್ ಪಾಕಿಸ್ತಾನ.

ವಿಶ್ವಕಪ್ : ಭಾರತೀಯ ಹಾಕಿ ಜೂನಿಯರ್ ಮಹಿಳಾ ತಂಡ

0

ವಿಶ್ವಕಪ್ ಹಾಕಿ ಮಹಿಳಾ ಟೂರ್ನಿಯು ದಕ್ಷಿಣಾ ಆಫ್ರಿಕಾದಲ್ಲಿ ಡಿಸೆಂಬರ್ 5 ರಿಂದ ಆರಂಭವಾಗಲಿದೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತದ 18 ಆಟಗಾರ್ತಿಯರಿರುವ ತಂಡವನ್ನು ಪ್ರಕಟಿಸಲಾಗಿದೆ
ಆಟಗಾರ್ತಿಯರ ಪಟ್ಟಿ ಪ್ರಕಟ.
ಲಾಲ್ ರೆಮ್ಸಿಯಾಮಿ ನಾಯಕಿ. ಇಶಿಕಾ ಚೌಧರಿ ಉಪನಾಯಕಿ. ಬಿಚು ದೇವಿ ಖರಿಬಮ್. ಮತ್ತು ಖುಷ್ಟು ಇವರಿಬ್ಬರೂ ಗೋಲ್ ಕೀಪರ್. ಅಕ್ಷತಾ ಅಬಾಸೊ ಧೇಖಾಲೆ. ಪ್ರಿಯಾಂಕ. ಮರೀನಾ ಲಾಲ್ ರಮಘಾಕಿ. ಅಜ್ಮಿನಾ ಕುಜೂರ್. ಬಲ್ಜಿತ್ ಕೌರ್ . ರೀತ್. ವೈಷ್ಣವಿ ವಿಟ್ಕಲ್ ಫಾಲ್ಮೆ. ಸಲೀಮಾ ಟೆಟೇ. ಶರ್ಮೀಳಾ ದೇವಿ. ಬ್ಯೂಟಿ ಡoಗ್ ಡoಗ್. ದೀಪಿಕಾ. ಮುಮ್ತಾಜ್ ಖಾನ್. ಸಂಗೀತಾ ಕುಮಾರಿ. ಜೀವನ್ ಕಿಶೋರ್ ಟೂಪ್ಪೂ.
ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಸೀನಿಯರ್ ಮಹಿಳಾ ಹಾಕಿ ತಂಡದಲ್ಲಿ ಅಡಿದ್ದ ಲಾಲ್ ರೆಮ್ಸಿಯಾಮಿ ಅವರು ಎಫ್ ಐ ಎಚ್ ವಿಶ್ವಕಪ್ ನಲ್ಲಿ ದೇಶದ ಜೂನಿಯರ್ ತಂಡವನ್ನು ಮುನ್ನಡೆಸಲಿದ್ದಾರೆ.
21 ವರ್ಷದ ಲಾಲ್ ರೆಮ್ಸಿಯಾಮಿ ತಂಡದ ನಾಯಕತ್ವ ವಹಿಸಿದ್ದರೆ. ಇಶೀಕಾ ಚೌಧರಿ ಉಪನಾಯಕಿಯ ಜವಾಬ್ದಾರಿ ನಿಭಾಯಿಸಲಿದ್ದಾರೆ. ಟೋಕಿಯೋ ಕೂಟದಲ್ಲಿ ಆಡಿದ್ದ ಸಲೀಮಾ ಟೆಟೆ ಹಾಗೂ ಶರ್ಮಿಳಾ ದೇವಿ ಕೂಡ ಜೂನಿಯರ್ ತಂಡದ ಪರಕಣಕ್ಕಿಳಿಯಲ್ಲಿದ್ದಾರೆ.
ಪ್ರೀತಿ ಮತ್ತು ಪ್ರಭಾಲಿಟ್ ಕೌರ್ ಅವರನ್ನು ಕಾಯ್ದಿರಿಸಿದ ಆಟಗಾರ್ತಿಯರಾಗಿ ತಂಡದೊಂದಿಗೆ ತೆರಳಲಿದ್ದಾರೆ.
ವಿಶ್ವದ ಪ್ರಮುಖ 16 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು 2016 ರ ಟೂರ್ನಿಯಲ್ಲಿ ಅರ್ಜೆಂಟೀನಾ ಚಾಂಪಿಯನ್ ಆಗಿತ್ತು.
2013 ರ ಅವೃತ್ತಿಯಲ್ಲಿ ಇಂಗ್ಲೆಂಡ್ ಅನ್ನು ಮಣಿಸಿ ಕಂಚಿನ ಪದಕ ಗೆದ್ದಿದ್ದು ಭಾರತ ಜೂನಿಯರ್ ತಂಡದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಈ ಭಾರಿ ತಂಡವು .ಸಿ. ಗುಂಪಿನಲ್ಲಿ ಸ್ಥಾನ ಪಡೆದಿದ್ದು ಡಿಸೆಂಬರ್ 6 ರಂದು ಮೊದಲ ಪಂದ್ಯದಲ್ಲಿ ರಷ್ಯಾ ತಂಡವನ್ನು ಎದುರಿಸಲಿದೆ.

ಸಗಟು ಹಣದುಬ್ಬರಕ್ಕೆ ಇಂಧನ ಬೆಲೆ ಆಧಾರ

0

ಸಗಟು ಹಣದುಬ್ಬರವು ಏಪ್ರಿಲ್ ನಿಂದ ಈವರೆಗೆ ಸತತ ಏಳನೇ ತಿಂಗಳಿನಲ್ಲಿಯೂ ಎರಡಂಕಿ ಮಟ್ಟದಲ್ಲಿಯೇ ಇದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಶೇಕಡ 10.66ರಷ್ಟು ಇತ್ತು. ಇದಕ್ಕೆ ಹೋಲಿಸಿದರೆ ಶೇ. 1.88 ರಷ್ಟು ಹೆಚ್ಚಾಗಿದೆ. 2020 ರ ಅಕ್ಟೋಬರ್ ನಲ್ಲಿ ಇದ್ದ ಶೇಕಡ 1.31ಕ್ಕೆ ಹೋಲಿಸಿದರೆ ಶೇ.11. 23ರಷ್ಟು ಏರಿಕೆಯಾಗಿದೆ.
ತಯಾರಿಕಾ ಉತ್ಪನ್ನಗಳು ಮತ್ತು ಕಚ್ಚಾ ಪೆಟ್ರೋಲಿಯಂ ಬೆಲೆಯಲ್ಲಿ ಏರಿಕೆ ಆಗಿರುವುದೇ ಅಕ್ಟೋಬರ್ ನಲ್ಲಿ ಸಗಟು ಹಣದುಬ್ಬರವು ಈ ಪ್ರಮಾಣದಲ್ಲಿ ಏರಿಕೆ ಆಗಲು ಕಾರಣ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವಾರ ಸರ್ಕಾರವು ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಗ್ರಾಹಕ ದರ ಸೂಚ್ಯಂಕ ಆಧರಿಸಿ ( ಸಿಪಿಐ) ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ನಲ್ಲಿ ಶೇಕಡ 4.48ರಷ್ಟಾಗಿದೆ. ಸೆಪ್ಟೆಂಬರ್ ನಲ್ಲಿ ಇದು ಶೇ. 4.35ರಷ್ಟು ಇತ್ತು. ತಯಾರಿಕಾ ವೆಚ್ಚ, ಇಂಧನ ಮತ್ತು ಸರಕುಗಳ ಬೆಲೆ ಏರಿಕೆಯಿಂದಾಗಿ ಆಹಾರ ವಸ್ತುಗಳ ಬೆಲೆ ಹೆಚ್ಚಾಗಿದೆ.
ಇದರಿಂದಾಗಿ ಚಿಲ್ಲರೆ ಹಣದುಬ್ಬರವೂ ಹೆಚ್ಚಾಗಿದೆ ಎಂಬ ಮಾಹಿತಿ ದೊರೆತಿದೆ.
ಬೇಡಿಕೆಯು ಸುಧಾರಿಸುತ್ತಿದೆ. ಇಂಧನಗಳ ಮೇಲಿನ ತೆರಿಗೆ ಕಡಿತವು ತುಸು ಸಮಾಧಾನ ನೀಡಿದ್ದರೂ, ಕಂಪನಿಗಳು ತಮ್ಮ ತಯಾರಿಕೆ ಮತ್ತು ಸಾಗಣೆಗಳನ್ನು ವರ್ಗಾಯಿಸಲು ಆರಂಭಿಸಿವೆ. ಮುಂಬರುವ ತಿಂಗಳುಗಳಲ್ಲಿ ಸಗಟು ಹಣದುಬ್ಬರವು ತಗ್ಗುವ ನಿರೀಕ್ಷೆ ಇದೆ.
2021 ರ ಮಾರ್ಚ್ ವೇಳೆಗೆ ಶೇ.7.5 ರಿಂದ ಶೇ.8.5 ರ ಮಟ್ಟ ದಲ್ಲಿ ಇರುವ ಅಂದಾಜು ಮಾಡಲಾಗಿದೆ ಎಂದು ಐಸಿಆರ್ ಎ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ದೆಹಲಿ ಮಾಲಿನ್ಯ ನಿರ್ವಹಣೆ, ಸುಪ್ರೀಂ ಅತೃಪ್ತಿ.

0

ದೆಹಲಿಯಲ್ಲಿ ವಾಯು ಮಾಲಿನ್ಯವು ಕೃಷಿ ತ್ಯಾಜ್ಯ ಸುಡುವಿಕೆ ಯಿಂದ ಶೇಕಡ 10 ಪ್ರಮಾಣದಷ್ಟಿದೆ ಎಂದು ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಈ ಹೇಳಿಕೆ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರು ಅಸಮಧಾನ ವ್ಯಕ್ತಪಡಿಸಿದರು. ಶ್ರೀ ರಮಣ ಅವರ ನೇತೃತ್ವದ ನ್ಯಾಯಪೀಠವು ದೆಹಲಿ ವಾಯುಮಾಲಿನ್ಯದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಪ್ರಮಾಣ ಗಂಭೀರವಾಗಿದೆ ಎಂದು ತಿಳಿಸಿತು. ಇದಕ್ಕೆ ಕೇಂದ್ರ ಸರ್ಕಾರದ ಪರವಾಗಿ ಉತ್ತರಿಸಿದ ಸಾಲಿಸಿಟರ್ ತುಷಾರ್ ಮೆಹ್ತಾ”ವೈಜ್ಞಾನಿಕ ವರದಿ ಪ್ರಕಾರ ದೆಹಲಿಯ ವಾಯುಮಾಲಿನ್ಯದಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಪ್ರಮಾಣ ಶೇ.4 ರಷ್ಟಿದೆ. ಬೇಸಿಗೆಯ ಕಾಲದಲ್ಲಿ ಇದು ಶೇ.7 ರಷ್ಟಿರುತ್ತದೆ. ರೈತರನ್ನು ದೂಷಿಸುವುದಕ್ಕಾಗಿಯೇ ದೆಹಲಿ ಸರ್ಕಾರ ಅಫಿಡವಿಟ್ ಸಲ್ಲಿಸಿದೆ ಎಂದು ತಿಳಿಸಿದರು.

ಯಾವುದೇ ಆಧಾರವಿಲ್ಲದೆ ಮಾತನಾಡಬೇಡಿ. ದಿಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ನಿಮ್ಮ ಬಳಿ ಯಾವ ವೈಜ್ಞಾನಿಕ ಆಧಾರವಿದೆ ಎನ್ನುವುದು ತಿಳಿಸಿ ಎಂದು ನ್ಯಾಯಪೀಠ ಕೇಳಿದೆ.

ದೆಹಲಿ ಮಾಲಿನ್ಯಕ್ಕೆ ವಾಹನಗಳ ಧೂಳು, ಉದ್ಯಮಗಳೇ ಕಾರಣ ಎಂದು ಕೇಂದ್ರ ಸರ್ಕಾರ ಅಫಿಡವಿಟ್ ನೀಡಿದೆ. ಆದರೆ ಗಾಳಿ ಗುಣಮಟ್ಟ ನಿರ್ವಹಣೆ ಸಮಿತಿಯು ಮಾಲಿನ್ಯದ ಪ್ರಮುಖ ಕಾರಣ ತಿಳಿಸಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರವು ತುರ್ತು ಸಭೆ ನಡೆಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಕೊರೊನಾ ನಂತರ ಹೊಸ ಸೋಂಕು?

0

ಕೊರೊನಾ ನಂತರ ಹೊಸ ಸೋಂಕು?
ವಿ.ಆ. ಸಂ ಎಚ್ಚರಿಕೆ…

ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲೇ ಮತ್ತೊಂದು ವೈರಸ್ ಭಾರತಕ್ಕೆ ಪ್ರವೇಶಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಕೊರೊನಾ ನಂತರ ಎ ಎಂ ಆರ್ ( ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ) ಎಂಬ ಸೋಂಕು ಅತ್ಯಂತ ವೇಗವಾಗಿ ಎಲ್ಲೆಡೆ ಹರಡುತ್ತಿದೆ. ಆದ್ದರಿಂದ ರಾಜ್ಯಗಳು ಎಎಂಆರ್ ವಿರುದ್ಧ ಹೋರಾಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿ.ಆ.ಸಂ ನಲ್ಲಿ ಭಾರತೀಯ ಅಧಿಕಾರಿಯಾಗಿರುವ ಡಾ. ಅನುಜ್ ಶರ್ಮಾ ಈ ಸಲಹೆಯನ್ನು ನೀಡಿದ್ದಾರೆ.

ಕೊರೊನಾದಂತೆ ಎ ಎಂ ಆರ್ ವೈರಸ್ ತಡೆಯಲು ಜನ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಮತ್ತು ಆಗಾಗ ಕೈ ತೊಳೆದುಕೊಳ್ಳಬೇಕು. ಇದರ ಜೊತೆಗೆ ಕಡ್ಡಾಯವಾಗಿ ಕೊರೊನಾ ನಿರೋಧಕ ಲಸಿಕೆ ಪಡೆಯಬೇಕು ಎಂದು ಡಾ. ಅನುಜ್ ಶರ್ಮಾ ಎಚ್ಚರಿಸಿದ್ದಾರೆ.

ಈ ಹೊಸ ಸೋಂಕು (ಎಎಂಆರ್ ) ಬ್ಯಾಕ್ಟೀರಿಯ ಮತ್ತು ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಒಬ್ಬ ವ್ಯಕ್ತಿಯಲ್ಲಿ ಎ.ಎಂ.ಆರ್ ಕಾಣಿಸಿಕೊಂಡರೆ ಆಂಟಿಬಯೋಟಿಕ್ ಸೇರಿದಂತೆ ಯಾವುದೇ ಮಾತ್ರೆ ,ಔಷಧಿಗಳು ಸಹ ಕೆಲಸ ಮಾಡುವುದಿಲ್ಲ. ಹೀಗಾಗಿ ಎಎಂಆರ್ ನಿಂದ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಡಬ್ಲ್ಯೂ ಎಚ್ಒ ತಿಳಿಸಿದೆ.

ಕೊರೊನಾ
ಸೋಂಕಿತರಿಗೆ, ಅದರಲ್ಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಅತಿ ವೇಗವಾಗಿ ಎ ಎಂ ಆರ್ ತಗಲುವ ಸಾಧ್ಯತೆ ಇದೆ ಎಂದು ಅಮೆರಿಕಾದ ರೋಗ ನಿಯಂತ್ರಣ ಕೇಂದ್ರ(ಸಿಡಿಸಿ) ವೈದ್ಯರು ತಿಳಿಸಿದ್ದಾರೆ.

“ಕೊರೊನಾ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಲ್ಲದೆ, ವೈದ್ಯರು ಅವರಿಗೆ ಅತಿಯಾದ ಆಂಟಿಬಯೋಟಿಕ್ಸ್ ನೀಡುವುದರಿಂದ ವ್ಯಕ್ತಿಯ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇದರ ಜೊತೆಗೆ ಗಂಭೀರವಾಗಿ ಅನಾರೋಗ್ಯಕ್ಕೊಳಗಾದ ವ್ಯಕ್ತಿಯಿಂದ ಪರ್ಯಾಯ ವೈರಸ್ ಸೃಷ್ಟಿಯಾಗುತ್ತದೆ. ಈ ವೈರಾಣುವೇ ಎಎಂಆರ್ ಆಗುವ ಸಾಧ್ಯತೆ ಇದೆ ಎಂದು ಮಾಹಿತಿ ತಿಳಿಸುತ್ತದೆ.

ಗ್ರಾಮೀಣ ವಸತಿ ಯೋಜನೆ : ಫಲಾನುಭವಿಗಳು ಅತಂತ್ರ

0

ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಸರ್ವರಿಗೂ ಸೂರು, ಈ ನಾಡನ್ನು ಗುಡಿಸಲು ಮುಕ್ತ ಮಾಡುತ್ತವೆ ಎಂದು ಘೋಷಣೆ ಯನ್ನು ಮೂಡಿಸುತ್ತವೆ. ಆದರೆ, ಕಳೆದ ಮೂರು ವರ್ಷಗಳಿಂದ ರಾಜ್ಯದ ಗ್ರಾಮೀಣ ವಸತಿ ಯೋಜನೆಗಳು ಸ್ಥಗಿತಗೊಂಡಿದೆ. ಗ್ರಾಮೀಣ ವಸತಿಯನ್ನೆ ನಂಬಿಕೊಂಡು ಕೂತ ಅದೆಷ್ಟೋ ಕುಟುಂಬಗಳು ಇಂದಿಗೂ ಸರ್ಕಾರದ ವಸತಿ ಮನೆಗಳ ನಿರ್ಮಾಣಕ್ಕಾಗಿ ಕಾದು ಕುಳಿತಿವೆ.
ರಾಜ್ಯ ಸರ್ಕಾರ 2018- 19 ನೇ ಸಾಲಿನಿಂದ ಗ್ರಾಮೀಣ ವಸತಿ ಯೋಜನೆಗಳಿಗೆ ಅನುದಾನ ಹಂಚಿಕೆಯನ್ನೇ ನಿಲ್ಲಿಸಿದೆ. 2016-17, 2017-18ನೇ ಸಾಲಿನ ಫಲಾನುಭವಿಗಳಿಗೆ 2-3 ಬಿಲ್ ಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ಮನೆಗಳು ಅರೆಬರೆ ನಿರ್ಮಾಣದ ಸ್ಥಿತಿಯಲ್ಲಿವೆ.
ರಾಜೀವ್ ಗಾಂಧಿ ವಸತಿ ನಿಗಮವು ಗ್ರಾಮೀಣ ಭಾಗದಲ್ಲಿ ಪಂಚಾಯಿತಿಗಳ ಮೂಲಕ ಪ್ರಧಾನ ಮಂತ್ರಿ ಅವಾಸ್ ಯೋಜನೆ, ಅಂಬೇಡ್ಕರ್, ಬಸವ ವಸತಿ ಯೋಜನೆ, ಮತ್ಸ್ಯಾಶ್ರಯ ವಸತಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳ ಹಂಚಿಕೆ ಪಂಚಾಯಿತಿಗಳ ಮೂಲಕ ನಡೆಯುತ್ತದೆ. ಹಲವು ಪಂಚಾಯಿತಿ ಸದಸ್ಯರು ಮನೆ ನೀಡುವ ಭರವಸೆಯೊಂದಿಗೆ ಚುನಾವಣೆ ಎದುರಿಸುತ್ತಾರೆ. ಈಗ ಸರ್ಕಾರವೇ ಅನುದಾನವನ್ನೇ ನಿಲ್ಲಿಸಿರುವುದರಿಂದ ಮನೆಗಳ ನಿರ್ಮಾಣ ಪ್ರಕ್ರಿಯೆಯು ಸಂಪೂರ್ಣವಾಗಿ ನಿಂತಂತಾಗಿದೆ.
2018- 19 ರಲ್ಲಿ ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರಿಗೆ ರಾಜ್ಯ ಸರಕಾರ 5 ಲಕ್ಷ ರೂ. ಪರಿಹಾರ ಘೋಷಿಸಿತ್ತು.
ರಾಜೀವ್ ಗಾಂಧಿ ವಸತಿ ನಿಗಮದ ಮೂಲಕವೇ ಪರಿಹಾರ ಹಂಚಿಕೆ ಮಾಡಿದ್ದರಿಂದಾಗಿ ವಸತಿ ಯೋಜನೆಗಳಿಗೆ ಅನುದಾನ ಹಂಚಿಕೆ ಸ್ಥಗಿತಗೊಂಡಿತೆಂಬ ಮಾತುಗಳು ಸರ್ಕಾರಿ ವಲಯದಿಂದ ಕೇಳಿಬಂದಿವೆ.
ಈಗ ವಸತಿ ಯೋಜನೆ ಮನೆಗಳ ಹಂಚಿಕೆಗೂ ಹಣ ಇಲ್ಲ. ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೂ ಪರಿಹಾರ ಇಲ್ಲ ಎಂಬಂತಾಗಿದೆ.
ಇದರಿಂದಾಗಿ ಸರ್ಕಾರದಿಂದ ಕೇವಲ ಎರಡು ಅಥವಾ ಮೂರು ಬಿಲ್ಲುಗಳು ಸ್ವಿಕೃತಗೊಂಡ ಪರಿಣಾಮ ಮಿಕ್ಕ ಹಣ ಬಾಕಿಯಾಗಿ ಫಲಾನುಭವಿಗಳು ಅತಂತ್ರರಾಗಿದ್ದಾರೆ. ಫಲಾನುಭವಿಗಳ ಹಿತಾಸಕ್ತಿ ಮತ್ತು ಸದ್ಯದ ಮಳೆಗಾಲದ ಸಂಕಷ್ಟ ಪರಿಸ್ಥಿತಿಯನ್ನು ಸಹಾನುಭೂತಿಯಿಂದ ಸರ್ಕಾರ ಗಮನಿಸಬೇಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ದೀಪದ ಬೆಳಕಿನಲ್ಲಿ, ಕೋಲಾಟದ ಬೆಡಗು

0

ದೀಪಾವಳಿ ಸಿಡಿಮದ್ದು ಹಾಗೂ ಸುಂದರ ದೀಪಗಳನ್ನು ಬೆಳಗಿಸುವ ಹಬ್ಬ. ಮನದ ಕತ್ತಲೆಯನ್ನು ಕಳೆದು ಜೀವನದಲ್ಲಿ ಬೆಳಕು ಕಾಣುವ ಹಬ್ಬ. ಅದನ್ನೇ ತಮಸೋಮ ಜ್ಯೋತಿರ್ಗಮಯ ಎಂದಿದ್ದಾರೆ ಹಿರಿಯರು. ಹಬ್ಬಗಳಲ್ಲಿ ಊಟ, ಉಡುಗೆ ಅಲ್ಲದೆ ಹಾಡು-ಕುಣಿತ ಎಲ್ಲವೂ ಸೇರಿರುತ್ತದೆ. ಮಲೆನಾಡಿನ ದೀಪಾವಳಿ ಕೂಡ ಅತ್ಯಂತ ವಿಶಿಷ್ಟವಾದದ್ದು ದೀಪ ಬೆಳಗುವ ಜೊತೆಗೆ ಅಂಟಿಗೆ-ಪಿಂಟಿಗೆ ಒಂದು ವಿಶೇಷ ಗಮನ ಸೆಳೆಯುವ ಆಚರಣೆಯಾಗಿದೆ. ಇದರೊಂದಿಗೆ ಇನ್ನೊಂದು ವಿಶೇಷ ಆಕರ್ಷಣೆ ಎಂದರೆ ರಾತ್ರಿ ವೇಳೆ ದೀಪದ ಬೆಳಕಿನ ಮುಂದೆ ಕೋಲಾಟ ಪ್ರದರ್ಶನ ನಡೆಯುತ್ತದೆ. ಮನೆ ಅಂಗಳದಲ್ಲಿ ರಾತ್ರಿ ಹಣತೆ ಬೆಳಗಿ ಅದರ ಬೆಳಕಿನಲ್ಲಿ ಕೋಲಾಟ ಆಡುವುದು ಒಂದು ವಿಶೇಷ. ಗ್ರಾಮೀಣ ಯುವಕರು ವಿವಿಧ ರೀತಿಯ ಹೆಜ್ಜೆಹಾಕಿ ಕೋಲು ಹಾಕುತ್ತಾ ಕುಣಿಯುತ್ತಾರೆ. ಕೋಲು ಪದಕ್ಕೆ ಲಯಬದ್ಧವಾಗಿ ಕುಣಿಯುವ ಅವರ ವಿವಿಧ ಭಂಗಿಗಳನ್ನು ನೋಡುವುದೇ ಒಂದು ಆನಂದ. ಈಗ ನೀವು ನೋಡುತ್ತಿರುವುದು ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಸುತ್ತಮುತ್ತಲಿನ ಗ್ರಾಮದ ಯುವಕರ ಕೋಲಾಟ.

ಸಿಬಿಐ, ಇ.ಡಿ ನಿರ್ದೇಶಕರ ಸೇವಾವಧಿ ವಿಸ್ತರಣೆ

0

ಕೇಂದ್ರ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ತನಿಖಾ ದಳದ ನಿರ್ದೇಶಕರ ಸೇವಾವಧಿಯನ್ನ ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ. ಈ ಎರಡು ಸುಗ್ರಿವಾಜ್ಞೆಗಳಿಗೆ ರಾಷ್ಟ್ರಪತಿಯವರ ಅಂಕಿತವಷ್ಟೇ ಬಾಕಿ ಇದೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿಯೇ ತಿದ್ದುಪಡಿ ವಿಧೇಯಕಗಳನ್ನು ಮಂಡಿಸುವುದು ಸರ್ಕಾರದ ಉದ್ದೇಶವಾಗಿದೆ.
ಪ್ರತಿಪಕ್ಷಗಳನ್ನು ಬೆದರಿಸಲು ಮಾತ್ರವೇ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಪ್ರತಿಪಕ್ಷದ ಆರೋಪ ಮಾಡುತ್ತಿವೆ.
ಸದ್ಯ ಈ ಸಂಸ್ಥೆಗಳ ಮುಖ್ಯಸ್ಥರ ಅವಧಿ ಎರಡು ವರ್ಷ ಇದೆ. ಸಿಬಿಐ, ಇ.ಡಿ ನಿರ್ದೇಶಕರ ಸೇವಾವಧಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಹಾಗೂ ಪ್ರತಿಪಕ್ಷ ನಾಯಕರನ್ನು ಒಳಗೊಂಡ ವಿಶೇಷ ಸಮಿತಿಯ ಶಿಫಾರಸ್ಸಿನ ಅನ್ವಯ ಒಂದು ವರ್ಷ ವಿಸ್ತರಿಸಬಹುದು. ಸುಗ್ರಿವಾಜ್ಞೆ ಪ್ರಕಾರ, ಎರಡು ಸಂಸ್ಥೆಗಳ ನಿರ್ದೇಶಕರ ಸೇವಾವಧಿಯನ್ನು ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.