Saturday, February 7, 2026
Saturday, February 7, 2026
Home Blog Page 1860

ಕೋವಿಡ್ ಸಂಕಷ್ಟದಲ್ಲಿ ಭಾರತ್ ಬಯೋಟೆಕ್ ಕೊಡುಗೆ

0

ಶಿವಮೊಗ್ಗದ ಪಿಇಎಸ್ ಕಾಲೇಜಿನಲ್ಲಿ ಇಂದು ನಡೆದ “ಮಕ್ಕಳಿಗೆ ಇನೋವೇಷನ್ ಅನು ಬೋಧನೆಯ ಸಮಯದಲ್ಲಿಯೇ ಅಳವಡಿಕೆ” ಎಂಬ ವಿಷಯವನ್ನು ಕುರಿತು ವಿಚಾರ ಸಂಕಿರಣ ನಡೆಯಿತು.

‘ಭಾರತ್ ಬಯೋಟೆಕ್ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೃಷ್ಣಮೂರ್ತಿ ಎಲ್ಲಾ’ ಅವರು ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
“ಕೊರೋನ ಸಂಕಷ್ಟದ ಸಮಯದಲ್ಲಿ ಇಡೀ ಪ್ರಪಂಚವು ನರಳುತ್ತಿತ್ತು. ಆ ಸನ್ನಿವೇಶದಲ್ಲಿ ಭಾರತ್ ಬಯೋಟೆಕ್ ಸಹಾಯದಿಂದ ಕೊವ್ಯಾಕ್ಸಿನ್ ಔಷಧವನ್ನು ಸಂಶೋಧಿಸಲಾಯಿತು. ಈ ಲಸಿಕೆಯನ್ನು ನಮ್ಮ ಜನತೆಗೆ ಕೊಡುವ ಜೊತೆಗೆ ವಿವಿಧ ದೇಶಗಳಿಗೆ ಕೂಡ ನೀಡಲಾಗಿದೆ” ಎಂದು ಡಾ.ಕೃಷ್ಣಮೂರ್ತಿಮೂರ್ತಿ ನುಡಿದರು.

ಇದೇ ಸಂದರ್ಭದಲ್ಲಿ ಸಂಸದ ಬಿವೈ ರಾಘವೇಂದ್ರ ಅವರು ಮಾತನಾಡಿದರು ಡಾ. ಕೃಷ್ಣಮೂರ್ತಿ ಎಲ್ಲಾ ಅವರು ನಮ್ಮ ಶಿವಮೊಗ್ಗಕ್ಕೆ ಆಗಮಿಸಿರುವುದು ಸಂತಸ ತಂದಿದೆ. ಡಾ. ಮೂರ್ತಿ ಅವರ ಜೊತೆ ಮಾತನಾಡಿದಾಗ ‘ಅಡಿಕೆ ಸಿಪ್ಪೆಯನ್ನು ಹಾಗೂ ಮಲೆನಾಡಿನ ಅಪ್ಪೆ ಮಿಡಿಯನ್ನು ಕೂಡ ಫುಡ್ ಪ್ರೊಸೆಸ್ ನಲ್ಲಿ ಬಳಸುವ ಮಾರ್ಗವಿದೆ’ ಎಂದು ತಿಳಿಸಿದರು. ನಮ್ಮ ಮಲೆನಾಡಿನ ಪ್ರದೇಶಗಳಿಗೆ ಡಾ.ಕೃಷ್ಣಮೂರ್ತಿ ಅವರ ಕೊಡುಗೆ ಇರಲಿ ಮತ್ತು ಇಲ್ಲಿನ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಸಿಗುವಂತಾಗಲಿ ಎಂದು ಹಾರೈಸಿದರು.

ವಿಜ್ಞಾನಿ ಡಾ.ರವಿ, ಪಿಇಎಸ್ ಟ್ರಸ್ಟ್ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಸುಭಾಷ್ ಬಿ.ಆರ್, ಕಾಲೇಜಿನ ಟ್ರಸ್ಟಿ ಬಿ.ವೈ.ಅರುಣಾದೇವಿ, ಪ್ರಾಂಶುಪಾಲರಾದ ಡಾ. ಚೈತನ್ಯ ಕುಮಾರ್, ಸಿಸಿಎ ಡಾ.ನಾಗರಾಜ್ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಅಧಿಕಾರಿಗಳ ಅಕ್ರಮ ಆಸ್ತಿ : ಎಸಿಬಿ ಜಪ್ತಿ

0

ಕೆಎಎಸ್ ಅಧಿಕಾರಿಗಳು ಸೇರಿದಂತೆ 15 ಮಂದಿ ಭ್ರಷ್ಟ ನೌಕರರ ಕಚೇರಿ ಹಾಗೂ ಮನೆಗಳ ಮೇಲೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ಇದರ ಜೊತೆಗೆ ಭಾರಿ ಪ್ರಮಾಣದ ಚಿನ್ನಾಭರಣಗಳು, ಬೆಳ್ಳಿ, ಕಂತೆ ಕಂತೆ ನೋಟುಗಳನ್ನು ಜಪ್ತಿ ಮಾಡಿದ್ದಾರೆ.
ಮನೆಯವರು ಮಾತ್ರವಲ್ಲದೆ, ಬೇರೆಯವರ ಹೆಸರಿನಲ್ಲಿ ನೊಂದಣಿಯಾದ ಕಾರುಗಳು, ಸೈಟು, ಬಾಡಿಗೆ ನೀಡಿದ ಮನೆಗಳು, ಕೃಷಿ ಭೂಮಿ ಹೊಂದಿರುವ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡುತನಿಖೆ ನಡೆಸಿದರು.
ಜೀವರ್ಗಿ ತಾಲೂಕಿನ ಪಿಡಬ್ಲ್ಯೂಡಿ ಜೆಇ ಶಾಂತಗೌಡ ಬಿರಾದಾರ್, ಸಕಾಲ ಮಿಷನ್ ಆಡಳಿತಾಧಿಕಾರಿ ಎಲ್. ಸಿ. ನಾಗರಾಜ್, ಗದಗದ ಜಂಟಿ ಕೃಷಿ ನಿರ್ದೇಶಕರು ಟಿ.ಎಸ್.ರುದ್ರೇಶಪ್ಪ, ಮಂಡ್ಯದ ಕಾರ್ಯ ನಿರ್ವಾಹಕ ಇಂಜಿನಿಯರ್ ಶ್ರೀನಿವಾಸ ಕೆ, ಹಾಗೂ ಮಂಗಳೂರಿನ ಸ್ಮಾರ್ಟ್ ಸಿಟಿ ಇಂಜಿನಿಯರ್ ಕೆ.ಎಸ್.ಲಿಂಗೇಗೌಡ, ಬೆಂಗಳೂರಿನ ಬಿಬಿಎಂಪಿ ಚಾಲಕ ಜಿ.ವಿ. ಗಿರಿ, ಬಳ್ಳಾರಿಯ ನಿವೃತ್ತ ಸಬ್ ರಿಜಿಸ್ಟ್ರಾರ್ ಕೆ.ಎಸ್‌. ಶಿವಾನಂದ್ ಸೇರಿದಂತೆ ಹಲವರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳ 15 ಅಧಿಕಾರಿಗಳಿಗೆ ಸಂಬಂಧಿಸಿದ 68 ಸ್ಥಳಗಳ ಮೇಲೆ 508 ಅಧಿಕಾರಿಗಳು ಮುಂಜಾನೆಯಿಂದಲೇ ಶೋಧ ನಡೆಸಿದ್ದಾರೆ. 15 ಅಧಿಕಾರಿಗಳ ಮನೆಯಲ್ಲಿ 26ಕೆಜಿ ಚಿನ್ನ, 1.20 ಕೋಟಿ ರೂಪಾಯಿಗಳ ನಗದು ಪತ್ತೆಯಾಗಿವೆ. ಆದಾಯ ಮೂಲಕ್ಕಿಂತ ನೂರಾರು ಪಟ್ಟು ಆಸ್ತಿ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿಯ ‘ಡಿ’ ಗ್ರೂಪ್ ನೌಕರ ಜಿ.ವಿ.ಗಿರಿ, ಎಫ್ ಡಿಎ ನೌಕರ ಮಾಯಣ್ಣ ಮತ್ತು ಹೆಸ್ಕಾಂನ ಎಫ್ ಡಿಸಿ ನೌಕರ ನಾಥಾಜಿ ಪಾಟೀಲ್ ಅವರ ಐಷಾರಾಮಿ ಮನೆ, ಜೀವನ ಶೈಲಿ ಕಂಡು ಸ್ವತಃ ಎಸಿಬಿ ಅಧಿಕಾರಿಗಳೇ ದಂಗಾಗಿದ್ದರು.
ಇದನ್ನು ಎಸಿಬಿ ಈ ನಡೆಸಿದ ದೊಡ್ಡ ದಾಳಿ ಎಂದೇ ಹೇಳಲಾಗುತ್ತಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಚಾಮುಂಡಿ ಬೆಟ್ಟ : ಪ್ರಧಾನಿಗೆ ಭೈರಪ್ಪನವರ ಪತ್ರ

0

ಚಾಮುಂಡಿ ಬೆಟ್ಟದ ಮೇಲಿನ ಅಭಿವೃದ್ಧಿ ಯೋಜನೆಗಳ ವಿರುದ್ಧ ಹಸಿರಿನಿಂದ ತೀವ್ರ ವಿರೋಧದ ನಡುವೆ, ಹೆಸರಾಂತ ಕಾದಂಬರಿಕಾರ ಎಸ್.ಎಲ್. ಬೈರಪ್ಪ ಅವರು ಪ್ರಸಾದ್ (ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ, ಹೆರಿಟೇಜ್ ಆಗ್ಮೆಂಟೇಶನ್ ಡ್ರೈವ್) ಯೋಜನೆಯಡಿ ಪ್ರಸ್ತಾಪಿಸಲಾದ ಯೋಜನೆಗಳನ್ನು ಕೈಬಿಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮೀಸಲು ಅರಣ್ಯಗಳಿಂದ ಆದಿವಾಸಿಗಳನ್ನು ಸ್ಥಳಾಂತರಿಸುವಂತೆ 9 ಸಚಿವರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ. ಈ ಪತ್ರವನ್ನು ನಗರದ ಕಾರ್ಯಕರ್ತೆ ಭಾಮಿ ಶೆಣೈ ಅವರು ಹಂಚಿಕೊಂಡಿದ್ದು, ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್. ಎಲ್.ಭೈರಪ್ಪ ಅವರ ಬೆಂಬಲವು ಗುಡ್ಡಗಳನ್ನು ಉಳಿಸಲು ಹೋರಾಡುತ್ತಿರುವ ಕಾರ್ಯಕರ್ತರ ತೋಳಿಗೆ ಗುಂಡು ಹಾರಿಸಿದೆ ಎಂದು ಹೇಳಿದ್ದಾರೆ.
ಸುಂದರವಾಗಿ ರೂಪಿಸಲಾದ ಪ್ರಸಾದ್ ಯೋಜನೆಯನ್ನು ನಿಜವಾದ ಉತ್ಸಾಹದಲ್ಲಿ ಅನುಷ್ಠಾನಗೊಳಿಸಲು ನೇರವಾಗಿ ಪ್ರವಾಸೋದ್ಯಮ ಸಚಿವಾಲಯಕ್ಕೆ ನೀಡಬೇಕು ಎಂದು ಭೈರಪ್ಪನವರು ಪ್ರಧಾನ ಮಂತ್ರಿಯನ್ನು ವಿನಂತಿಸಿದ್ದಾರೆ.
ನಾವು ಈಗಿರುವ ಕಾಂಕ್ರೀಟ್ ಕಾಡನ್ನು ಕೆಡವಿ ನೈಸರ್ಗಿಕ ಸೌಂದರ್ಯವನ್ನು ಮರುಸ್ಥಾಪಿಸಬೇಕು. ಹಸಿರು ಹೊದಿಕೆಯನ್ನು ಹೆಚ್ಚಿಸಲು ಬೃಹತ್ ನೆಡುತೋಪು ಅಭಿಯಾನವನ್ನು ಅಧಿಕಾರಿಗಳು ಕೈಗೊಳ್ಳಬೇಕೆಂದು ಕಾದಂಬರಿಕಾರರು ಸಲಹೆ ನೀಡಿದರು.
4000 ಕ್ಕೂ ಹೆಚ್ಚು ನಿವಾಸಿಗಳು ಬೆಟ್ಟದ ತುದಿಯಲ್ಲಿ ವಾಸಿಸುತ್ತಿದ್ದಾರೆ.ದೇವಾಲಯದ ಅರ್ಚಕರು ಮತ್ತು ಕಾರ್ಯನಿರತ ಸಿಬ್ಬಂದಿಗಳಿಗೆ ಮಾತ್ರ ಅಲ್ಲಿ ಉಳಿಯಲು ಅವಕಾಶ ನೀಡಬೇಕು. ಉಳಿದವರನ್ನು ನಗರ ಪ್ರದೇಶಗಳಿಗೆ ಸ್ಥಳಾಂತರಿಸಬೇಕು ಎಂದು ಅವರು ಹೇಳಿದರು.
ಇದರ ಹೊರತಾಗಿ, ವಿಐಪಿಗಳು ಸೇರಿದಂತೆ ಉಳಿದ ವಾಹನ ಸಂಚಾರವನ್ನು ನಿರ್ಬಂಧಿಸಬೇಕು ಮತ್ತು ಭಕ್ತರನ್ನು ಸಾಗಿಸಲು ವಿದ್ಯುತ್ ವಾಹನವನ್ನು ಮಾತ್ರ ಓಡಿಸಬೇಕು. ಎಲ್ಲಾ ಪೂಜಾ ಸಾಮಗ್ರಿಗಳನ್ನು ದೇವಸ್ಥಾನದ ಅಧಿಕಾರಿಗಳು ಮಾತ್ರ ಮಾರಾಟ ಮಾಡಬೇಕೇ ಹೊರತು ಖಾಸಗಿ ಮಾರಾಟಗಾರರಿಂದಲ್ಲ ಎಂದು ಭೈರಪ್ಪನವರು ಪತ್ರದಲ್ಲಿ ಬರೆದಿದ್ದಾರೆ.
ಹಿಂದಿನ ಸರ್ಕಾರವು ಬೆಟ್ಟದ ದೇಗುಲವನ್ನು ಬಹು ಹಂತದ ಪಾರ್ಕಿಂಗ್ ಸೌಲಭ್ಯಗಳು ಮತ್ತು ಅಂಗಡಿಗಳೊಂದಿಗೆ ವಾಣಿಜ್ಯ ಕೇಂದ್ರವಾಗಿ ಪರಿವರ್ತಿಸಿದೆ ಎಂದು ಅವರು ಹೇಳಿದರು. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಪ್ಯಾರಿಸ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಪ್ರಸ್ತಾಪಿಸಿದ್ದನ್ನು ಅವರ ಸಲಹೆಗಳು ಸಂಪೂರ್ಣ ಅನುಸರಣೆಯಲ್ಲಿವೆ ಎಂದು ಅವರು ಹೇಳಿದರು.

2022ರವರೆಗೆ ಗರೀಬ್ ಯೋಜನೆ ವಿಸ್ತರಣೆ

0

ಕೋವಿಡ್-19 ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಬಡವರನ್ನು ಬೆಂಬಲಿಸುವ ಪ್ರಯತ್ನದಲ್ಲಿ, ಪ್ರಧಾನ ಮಂತ್ರಿ ಗರೀಬ್ ಯೋಜನೆಯಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ತಿಂಗಳಿಗೆ ಉಚಿತ ಆಹಾರ ಧಾನ್ಯಗಳ ಪೂರೈಕೆಯನ್ನು ಮಾರ್ಚ್ 2022 ರಲ್ಲಿ 4 ತಿಂಗಳವರೆಗೆ ವಿಸ್ತರಿಸಲು ಕೇಂದ್ರವು ನಿರ್ಧರಿಸಿದೆ.ಈ ನಿರ್ಧಾರದಿಂದ ಕೇಂದ್ರದ ಬೊಕ್ಕಸಕ್ಕೆ ಹೆಚ್ಚುವರಿ 5,33,44 ರೂ ವೆಚ್ಚವಾಗಲಿದೆ. ಈ ನಿರ್ಧಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಒಳಗೊಂಡಿರುವ 80 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿದಾರರಿಗೆ ಪ್ರಯೋಜನವನ್ನು ನೀಡಲಿದೆ. ಪ್ರಧಾನ ಮಂತ್ರಿ ಗರೀಬ್ ಯೋಜನಾ ಯೋಜನೆಯಡಿಯಲ್ಲಿ ಉಚಿತ ಆಹಾರ ಧಾನ್ಯಗಳು, ವಿತರಣೆ ಬಡವರಿಗೆ ಪರಿಹಾರವನ್ನು ಒದಗಿಸುತ್ತದೆ .ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿಯಲ್ಲಿ ಒದಗಿಸಲಾದ ಸಾಮಾನ್ಯ ಕೋಟಾದ ಬಗ್ಗೆ ಪ್ರತಿ ಕೆಜಿಗೆ 2 ಅಥವಾ 3 ರೂಪಾಯಿಗಳ ಸಬ್ಸಿಡಿ ದರವಿದೆ. ಯೋಜನೆಯನ್ನು ಹಲವಾರು ಬಾರಿ ವಿಸ್ತರಿಸಲಾಗಿದೆ ಮತ್ತು ಹಿಂದಿನ ವಿಸ್ತರಣೆಯು ನವೆಂಬರ್ 30 ರವರೆಗೆ ಮಾನ್ಯವಾಗಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆನ್ ಲೈನ್ ಗೇಮ್; ವಿಚಾರಣೆ ಪ್ರಗತಿ.

0

ಗೊತ್ತಿಲ್ಲದ ಫಲಿತಾಂಶಕ್ಕಾಗಿ ಬೆಟ್ಟಿಂಗ್ ಮೂಲಕ ಹಣ ಅಥವಾ ಬಾಜಿ ಕಟ್ಟುವುದು ಕೂಡ ಕೌಶಲ್ಯದ ಕ್ರೀಡೆಯಾಗಿದೆ. ಇದೇ ತರ ಆನ್ಲೈನ್ ಗೇಮ್ ಗಳನ್ನು ನಿರ್ಬಂಧಿಸುವುದೇ ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿಯ ಉದ್ದೇಶವಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ನಲ್ಲಿ ವಾದ ಮಂಡಿಸಿದೆ.

ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು.

ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಇತರೆ ಕಂಪನಿಗಳು ಅರ್ಜಿಗಳನ್ನು ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ, ಎಸ್. ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆಯನ್ನು ಆಲಿಸಿತು. ನಂತರ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿತು.

“ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದ ಪಿಐಎಲ್ ನಲ್ಲಿ ಆನ್ಲೈನ್ ಗ್ಯಾಂಬ್ಲಿಂಗ್ ಹಲವು ಗೇಮ್ ಗಳಿಂದ ಸಮಾಜದಲ್ಲಿ ಎಷ್ಟೋ ಕುಟುಂಬಗಳು ನೆಮ್ಮದಿ ಹಾಳಾಗಿದೆ. ಇದಕ್ಕಾಗಿ ಆನ್ಲೈನ್ ಗೇಮ್ ಗಳನ್ನು ನಿಷೇಧಿಸಬೇಕೆಂದು ಕೋರಲಾಗಿತ್ತು. ವಿಚಾರಣೆ ನಡೆಯುವ ವೇಳೆ ನ್ಯಾಯಪೀಠ ಸರ್ಕಾರಕ್ಕೆ ನಿರ್ಧಾರ ಕೈಗೊಳ್ಳಲು ಸೂಚನೆ ನೀಡಿತು. ಅದರಂತೆ ಸರ್ಕಾರ ಆನ್ಲೈನ್ ಗೇಮ್ ನಿಷೇಧಿಸಲು ನಿರ್ಧಾರ ಕೈಗೊಂಡಿದೆ. ಆ ಅರ್ಜಿ ಇನ್ನೂ ಹೈಕೋರ್ಟ್ ನಲ್ಲಿ ಬಾಕಿಇದೆ ಎಂದು ಅಡ್ವೊಕೇಟ್ ಜನರಲ್ ತಿಳಿಸಿದರು.

ಅಡ್ವೊಕೇಟ್ ಜನರಲ್ ಅವರು ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯದ ಉದಾಹರಣೆಯನ್ನು ನೀಡಿದರು. ಇದು ಕೌಶಲ್ಯದ ಕ್ರೀಡೆ, ಅದರ ಬಗ್ಗೆ ಗೊತ್ತಿಲ್ಲದ ಫಲಿತಾಂಶಕ್ಕೆ ನಾವು ಬೇರೆಯವರಿಂದ ಹಣ ಸಂಗ್ರಹ ಮಾಡಿದರೆ ಅಥವಾ ಬೆಟ್ ಕಟ್ಟಿಸಿಕೊಂಡರೆ ಅದು ಅಪರಾಧವಾಗುತ್ತದೆ. ಆನ್ಲೈನ್ ಗೇಮ್ ಗಳ ಮೂಲಕ ಬೆಟ್ಟಿಂಗ್ ನಡೆಸಿದರೆ ಅದು ಶಿಕ್ಷಾರ್ಹ ಆಗುತ್ತದೆ ಎಂದು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಾಮೂಹಿಕ ಭೋಜನ : ಕಟ್ಟೆಚ್ಚರ ಮಾರ್ಗಸೂಚಿ

0

ಇತ್ತೀಚೆಗಷ್ಟೇ ಶಿವಮೊಗ್ಗ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಸಾಮೂಹಿಕ ಭೋಜನ ಸೇವಿಸಿದ್ದ ಸಾರ್ವಜನಿಕರು ಫುಡ್ ಪಾಯಿಸನ್ ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ವರದಿಯಾಗಿತ್ತು. ಈಗ ಈ ಘಟನೆಗೆ ಸಂಬಂಧಿಸಿದಂತೆ ಮಾನ್ಯ ಜಿಲ್ಲಾಧಿಕಾರಿ ಕೆ ಶಿವಕುಮಾರ್ ಅವರು ಸಾಮೂಹಿಕ ಭೋಜನ, ಅನ್ನಸಂತರ್ಪಣೆ, ಜಾತ್ರೆ ಉತ್ಸವದಂತಹ ಸಮಾರಂಭಗಳಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶ ಹೊರಡಿಸಿದ್ದಾರೆ.

ಸಾಮೂಹಿಕ ಭೋಜನ ನಡೆಸುವ ಪೂರ್ವದಲ್ಲಿ ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಡುಗೆ ಕೋಣೆಯಲ್ಲಿ ಅಪರಿಚಿತ ಅಥವಾ ಅನಧಿಕೃತ ವ್ಯಕ್ತಿಗಳು ಪ್ರವೇಶಿಸಿದಂತೆ ಮುಂಜಾಗ್ರತೆ ಕ್ರಮಗಳನ್ನು ವಹಿಸಬೇಕು. ಅಡುಗೆ ಕೋಣೆಯಲ್ಲಿ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಅಡುಗೆಗೆ ಬಳಸುವ ನೀರು ಶುದ್ಧವಾಗಿರುವುದನ್ನು ಖಾತ್ರಿಪಡಿಸಬೇಕು ಪ್ರತಿ ಎರಡು ತಿಂಗಳಿಗೊಮ್ಮೆ ನೀರನ್ನು ಆರೋಗ್ಯ ಇಲಾಖೆ ಸಹಕಾರದಿಂದ ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದ್ದಾರೆ.

ಅಡುಗೆ ಮಾಡುವವರನ್ನು, ಸಹಾಯಕರನ್ನು, ಬಡಿಸುವವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಿ ನೇಮಕ ಮಾಡಿಕೊಳ್ಳಬೇಕು. ಕೈಗವಸು/ ತಲೆಗೆ ಟೋಪಿಯನ್ನು ಬಳಸುವುದು ಕಡ್ಡಾಯ. ಪ್ರತಿ ಸಿಬ್ಬಂದಿಯನ್ನು ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಗೆ ಒಳಪಡಿಸುವುದು ಅವರಿಗೆ ಪ್ರತಿ ಆರು ತಿಂಗಳಿಗೊಮ್ಮೆ ಜಂತು ಹುಳು ನಿವಾರಣಾ ಮಾತ್ರ ನೀಡಬೇಕು. ಅಡುಗೆಭಟ್ಟರ ಮತ್ತು ಊಟ ಬಡಿಸುವವರ ಪೂರ್ಣ ವಿಳಾಸ ಮೊಬೈಲ್ ಸಂಖ್ಯೆಯನ್ನು ಕಲ್ಯಾಣ ಮಂಟಪದ ವ್ಯವಸ್ಥಾಪಕರು ಸ್ಥಳೀಯ ಸರ್ಕಾರಿ ವೈದ್ಯಾಧಿಕಾರಿಗಳಿಗೆ ಮೊದಲೇ ನೀಡಿರಬೇಕು.

ಅಡಿಗೆಗೆ ಬಳಸುವ ಪದಾರ್ಥಗಳ ತಯಾರಿಕೆ ದಿನಾಂಕ ಮತ್ತು ಮುಕ್ತಾಯ ದಿನಾಂಕ ಪರಿಶೀಲಿಸಬೇಕು. ಏನಾದರೂ ಅವಘಡ ಸಂಭವಿಸಿದರೆ ಆರೋಗ್ಯ ಅಧಿಕಾರಿಗಳಿಗೆ ನೀಡಬೇಕು. ದಾಸ್ತಾನು ಕೊಠಡಿ ಸ್ವಚ್ಛವಾಗಿರಬೇಕು. ಆಹಾರ ಪದಾರ್ಥಗಳ ಸರಬರಾಜು ಸಂದರ್ಭದಲ್ಲಿ ಕಲಬೆರಿಕೆ ಕಂಡುಬಂದಲ್ಲಿ ಅವುಗಳನ್ನು ಆಹಾರ ಸುರಕ್ಷತಾ ಇಲಾಖೆಯ ಮಾಹಿತಿ ನೀಡಬೇಕು. ಅಡುಗೆ ತಯಾರಿಸಿದ ನಂತರ ಪಾತ್ರೆಗಳಲ್ಲಿ ಹಲ್ಲಿ/ಜಿರಲೆ ಬೀಳದಂತೆ ಸುರಕ್ಷಿತವಾಗಿ ಮುಚ್ಚಿಡಬೇಕು.

ದೇವಸ್ಥಾನ, ಅಂಗನವಾಡಿ, ಶಾಲೆ, ವಸತಿ ಶಾಲೆ, ಹಾಸ್ಟೆಲ್, ಕ್ಯಾಂಟೀನ್, ಕಾರಾಗೃಹ ಮತ್ತು ಆಸ್ಪತ್ರೆ ಕ್ಯಾಂಟೀನ್ ಗಳಲ್ಲಿನ ಅಡುಗೆ ಕೊಠಡಿ ಮತ್ತು ಊಟದ ಕೊಠಡಿಗಳಲ್ಲಿ ಈ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭಿಕ್ಷಾಧನ ದಾನ,ಮಹಾದಾನ

0

ಈಗಿನ ಕಾಲದಲ್ಲಿ ಎಷ್ಟೇ ದೊಡ್ಡ ಹಣವಂತರಾದ್ರು, ನೂರು ರೂಪಾಯಿಗಳನ್ನು ಬಡವರಿಗೆ ದಾನ ಮಾಡಲು ಹಿಂದೆ ಮುಂದೆ ಯೋಚಿಸುತ್ತಾರೆ. ಒಂದು ವೇಳೆ ಅಧಿಕ ಮೊತ್ತವನ್ನು ದಾನ ಮಾಡಿದರೆ ಅದಕ್ಕೊಂದು ಬೋರ್ಡ್ ಹಾಕಿಸದೆ ಬಿಡುವುದಿಲ್ಲ. ಇಂಥವರ ನಡುವೆ ಅಲ್ಲೊಬ್ಬ ಮಹಾನ್ ವೃದ್ದೆ ಭಿಕ್ಷೆ ಬೇಡಿ ಸಂಗ್ರಹಿಸಿದ ದುಡ್ಡನ್ನು ದೇವಾಲಯದ ಕಾರ್ಯಕ್ಕೆ ನೀಡಿದ್ದಾರೆ.

ಕಡೂರಿನ ಕೋಟಿ ಸಾಲಿಗ್ರಾಮ ಆಂಜನೇಯ ದೇವಸ್ಥಾನದ ಎದುರು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು ಕೆಂಪಜ್ಜಿ. ಇವರು ಸಾಲಿಗ್ರಾಮ ಪರಿಸರದ ಅಜ್ಜಿ ಎಂದೇ ಜನ ಪ್ರಸಿದ್ಧರಾಗಿದ್ದರು. ಈಕೆ 80ರ ಹಿರಿಯ ಜೀವ. ಕೆಂಪಜ್ಜಿ ಒಬ್ಬಳು ಅನಾಥೆ. ಇವರಿಗೆ ದೇವಾಲಯವೇ ಮನೆ. ಹಲವು ವರ್ಷಗಳಿಂದ ಸಾಯಿಬಾಬಾ ಮಂದಿರದಲ್ಲಿ ಉಳಿದು ಅಲ್ಲಿಯೇ ಭಿಕ್ಷೆಬೇಡಿ ಹಣ ಗಳಿಸುತ್ತಾರೆ. ಮಂದಿರದ ಪಕ್ಕಕ್ಕೆ ವಿನಾಯಕ ಕೆಫೆ ಮಾಲಿಕ ಭಾಸ್ಕರ್ ಕೆಂಪಜ್ಜಿಗೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ನೀಡುತ್ತಾರೆ.

ಭಿಕ್ಷೆ ಬೇಡುವ ಅಜ್ಜಿ ದೇವರಿಗೆ ದೇಣಿಗೆ ನೀಡುವ ಮಹಾತ್ಕಾರ್ಯ ಮಾಡಿದ್ದಾರೆ. ದುಡ್ಡಿದ್ದವರು ಮನಸ್ಸು ಮಾಡಿಕೊಡಬಹುದು.ಆದರೆ ಬೇಡಿ ಬದುಕುವವರು ಹೇಗೆ ನೀಡುತ್ತಾರೆ? ಎಂಬ ಪ್ರಶ್ನೆಗೆ ನೇರಾನೇರ ಉತ್ತರ,ಕೆಂಪಜ್ಜಿ. “ಏನ ಬೇಡಲಿ ನಿನ್ನ ಬಳಿ ಬಂದು?” ಎಂದು ದಾಸರ ಪದವಿದೆ. ಆದರೆ ಅದಕ್ಕೆ ಮಾರ್ಮಿಕ ಅರ್ಥ ಬರುವಂತೆ ಹಳ್ಳಿಯ ಅಜ್ಜಿ ,ಹಣವಂತರಿಗೆ ದಾನದ ಪಾಠ ಹೇಳಿದ್ದಾರೆ .
ತಮ್ಮ ಭಿಕ್ಷೆಯ ಇಪ್ಪತ್ತು ಸಾವಿರ ರೂಗಳನ್ನ ದೇವನಿಗೆ ನೀಡೇಬಿಟ್ಟರು.

ಕೆಂಪಜ್ಜಿಯ ಭಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅಜ್ಜಿಯ ಜೀವನ ನಿರ್ವಹಣೆಯನ್ನು ದೇವಾಲಯ ಸಮಿತಿ ವಹಿಸಿಕೊಳ್ಳಲಿದೆ ಎಂದು ಶ್ರೀ ಪಾತಾಳ ಅಂಜನೇಯ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.

ಪಾತಾಳ ಆಂಜನೇಯಸ್ವಾಮಿ ನೂತನ ದೇವಾಲಯ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕೆಂಪಜ್ಜಿ ಸಂಪಾದಿಸಿದ 20ಸಾವಿರ ಹಣವನ್ನು ದೇವಾಲಯಕ್ಕೆ ನೀಡಿ ಸಂತೃಪ್ತಿ ಹೊಂದಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸುಸ್ತಿದಾರ ಎಲ್ಲೇ ಇರಲಿ, ಸಾಲ ವಸೂಲಿ ಖಂಡಿತ

0

ಸಾಲ ಸುಸ್ತಿದಾರರ ಪ್ರಕರಣಗಳನ್ನು ಸರ್ಕಾರ ಸಕ್ರಿಯವಾಗಿ ನಡೆಸುತ್ತಿರುವುದರಿಂದ ಅವರು ಭಾರತದಲ್ಲಿ ಅಥವಾ ದೇಶದ ಹೊರಗಿನವರೆಂಬುದನ್ನು ಲೆಕ್ಕಿಸದೆ ಬ್ಯಾಂಕ್‌ಗಳಿಂದ ತೆಗೆದುಕೊಂಡು ಹೋಗಿರುವ ಎಲ್ಲಾ ಹಣವನ್ನು ಹಿಂಪಡೆಯಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಬ್ಯಾಂಕ್‌ಗಳ ಎನ್‌ಪಿಎ ಆತಂಕಕ್ಕೆ ಕಾರಣವಾಗಿತ್ತು. ಎನ್‌ಪಿಎಗಳನ್ನು ತಗ್ಗಿಸುವ ಸಲುವಾಗಿ ನಿರ್ದಿಷ್ಟ ‘4ಆರ್’ ತಂತ್ರವು ಗುರುತಿಸುವಿಕೆ, ನಿರ್ಣಯ, ಮರುಬಂಡವಾಳೀಕರಣ ಮತ್ತು ಸುಧಾರಣೆಗಳನ್ನು ತೋರಿಸಲು ಸೂಕ್ತ ಪರಿಹಾರವಾಗಿದೆ ಎಂದು ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಆಡಳಿತದೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್ ಮಾತ್ರವಲ್ಲದೆ ಕೇಂದ್ರ ಪ್ರಾಯೋಜಿತ ಪ್ರತಿಯೊಂದು ಯೋಜನೆಯು ಕೇಂದ್ರಾಡಳಿತ ಪ್ರದೇಶದ ಪ್ರತಿಯೊಬ್ಬ ನಾಗರಿಕರಿಗೂ ಪ್ರಯೋಜನವನ್ನು ನೀಡುತ್ತದೆ. ಇದನ್ನು ಖಚಿತಪಡಿಸಿಕೊಳ್ಳಲು ದೇಶದ ಉಳಿದ ಭಾಗಗಳೊಂದಿಗೆ ಬೆಳವಣಿಗೆ ಅಗತ್ಯ ಎಂದರು. ಅವರು ಎರಡು ದಿನಗಳ ಪ್ರವಾಸದಲ್ಲಿ ಎರಡನೇ ದಿನ ಜಮ್ಮುವಿಗೆ ಭೇಟಿ ನೀಡಿದರು. ಸರ್ಕಾರದ ಯೋಜನೆಗಳ ವಿವಿಧ ಫಲಾನುಭವಿಗಳು ಹಾಕಿರುವ ವಿವಿಧ ಸ್ಟಾಲ್‌ಗಳನ್ನು ಸಹ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕೇಂದ್ರಾಡಳಿತ ಪ್ರದೇಶವನ್ನು “ವೇಗದ, ದಕ್ಷ ಮತ್ತು ಪಾರದರ್ಶಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವುದು ಬಗ್ಗೆ ಹಣಕಾಸು ಸಚಿವೆ ಶ್ಲಾಘಿಸಿದರು.
ಕೇಂದ್ರ ಸರ್ಕಾರವು ಸ್ಥಳೀಯ ಆಡಳಿತದೊಂದಿಗೆ ನಿಕಟ ಸಮನ್ವಯ ಹೊಂದಿದೆ. ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್ ಅನ್ನು ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು.ಆದರೆ ಪ್ರಾರಂಭಿಸಲಾದ ಪ್ರತಿಯೊಂದು ಯೋಜನೆಯನ್ನು ಕೇಂದ್ರಾಡಳಿತ ಪ್ರದೇಶಕ್ಕೆ ತರಲಾಗುತ್ತದೆ. ಸೇವೆಗೆ ಅರ್ಹರಾದ ಪ್ರತಿಯೊಬ್ಬ ಫಲಾನುಭವಿಗೆ ಪ್ರಯೋಜನವನ್ನು ನೀಡುತ್ತದೆ. “2019 ರ ನಂತರ (ಜಮ್ಮು ಮತ್ತು ಕಾಶ್ಮೀರದ ಮರುಸಂಘಟನೆ ) ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವು ಕ್ಷಿಪ್ರ ಪ್ರಗತಿಯ ಮೂಲಕ ಸಾಗುತ್ತಿರುವುದನ್ನು ನಾವು ನೋಡಿದ್ದೇವೆ. ಬಹಳ ದಿನಗಳಿಂದ ಕಾಯುತ್ತಿದ್ದ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ ಮತ್ತು ಸರ್ಕಾರದಿಂದ ಯಾವುದೇ ನೆರವು ಪಡೆಯುವ ಅವಕಾಶವಿಲ್ಲದ ಸಮಾಜದ ವರ್ಗಗಳು ಅದನ್ನು ಪಡೆಯುತ್ತಿವೆ. ಇದು ದೇಶದ ಪ್ರಗತಿಯತ್ತ ಮತ್ತೊಂದು ಹೆಜ್ಜೆ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಕ್ಕಳೇ ಪಾಠ ಕಲಿಸಿದ ಪ್ರಸಂಗ

0

ಸರ್ಕಾರಿ ಶಾಲೆ ದುರಸ್ತಿಗೆ ಆಗ್ರಹಿಸಿ ಶಿವಮೊಗ್ಗ ನಗರದ ನ್ಯೂ ಮಂಡ್ಲಿ ಮುಖ್ಯರಸ್ತೆಯಲ್ಲಿ ಮಕ್ಕಳು ಮತ್ತು ಪೋಷಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
50 ವರ್ಷಗಳಿಗೂ ಹಿಂದೆ ನಿರ್ಮಾಣವಾಗಿರುವ ಕಟ್ಟಡ. ಶಿಥಿಲಗೊಂಡು ಹತ್ತಾರು ವರ್ಷಗಳೇ ಕಳೆದಿವೆ. ಕಟ್ಟಡ ಯಾವಾಗ ಬೇಕಾದರೂ ಬೀಳಬಹುದು. ನಿತ್ಯವೂ ಆತಂಕದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾಗಿದೆ. ಶಿಕ್ಷಕರು ಸಹ ಆತಂಕದಲ್ಲೇ ಪಾಠ-ಪ್ರವಚನ ನಡೆಸಬೇಕಿದೆ ಎಂದು ಪೋಷಕರು ದೂರಿದ್ದಾರೆ.
ಶಾಲೆ ಮುರಿದು ಬೀಳುವ ಸ್ಥಿತಿಯಲ್ಲಿದ್ದು, ದುರಸ್ತಿ ಮಾಡಿಕೊಡುವಂತೆ ಐದು ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕಳೆದ ವಾರ ಸುರಿದ ಮಳೆಗೆ ಶಾಲೆ ಆವರಣ ಪೂರ್ತಿ ಜಲಾವೃತಗೊಂಡಿತ್ತು. ಪ್ರತಿಭಟನೆಯ ಸಂದರ್ಭದಲ್ಲಿ ಪೋಷಕರು ಹಾಗೂ ಮಕ್ಕಳು ಶಿವಮೊಗ್ಗ ನಗರದ ನ್ಯೂ ಮಂಡ್ಲಿಯಲ್ಲಿ ಧರಣಿ ನಡೆಸಿದರು.
ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಭೇಟಿ ನೀಡಿ ದುರಸ್ತಿ ಮಾಡಿಕೊಡುವ ಭರವಸೆ ನೀಡಿದ್ದಾರೆ ‌.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭಾರತದಲ್ಲಿ ಹೊಸ ವೈರಸ್ ಪತ್ತೆ!

0

ಭಾರತದಲ್ಲಿ ಮೊದಲ ಬಾರಿಗೆ ಆಸ್ಪೆರ್ ಗಿಲ್ಲಸ್ ಲೆಂಟುಲೂಸ್ ಎಂಬ ಹೊಸ ವೈರಸ್ ಪತ್ತೆಯಾಗಿದೆ. ಔಷಧಗಳಿಗೂ ಬಗ್ಗದ ಹೊಸ ಫಂಗಸ್ ಗೆ ಎರಡು ಬಲಿ ಪಡೆದುಕೊಂಡಿದೆ.

ಈ ಮಾರಣಾಂತಿಕ ಫಂಗಸ್ ನ ಹೆಸರು ಆಸ್ಪೆರ್ ಗಿಲ್ಲಸ್ ಲೆಂಟುಲೂಸ್. ಇದೊಂದು ಅಪರೂಪವಾದ ಫಂಗಸ್ ಆಗಿದೆ. ಇದಕ್ಕೆ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದಾರೆ.

ತೀವ್ರವಾದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ವ್ಯಕ್ತಿಗಳು ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಬ್ಬರು ವ್ಯಕ್ತಿಗಳು ಐವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇವರಿಗೆ ಸಾಮಾನ್ಯವಾಗಿ ಫಂಗಸ್ ಸೋಂಕು ನಿಯಂತ್ರಣಕ್ಕೆ ಆಂಪೊಟೆರಿಸಿನ್ ಬಿ ಮತ್ತು ವೊರಿಕೊನ್ಯಾಜೋಲ್ ಔಷಧಗಳನ್ನು ಸೋಂಕಿತರಿಗೆ ನೀಡಲಾಗುತ್ತಿತ್ತು. ಆದರೂ ಕೂಡ ಫಂಗಸ್ ಸಾಮರ್ಥ್ಯ ಕುಗಲಿಲ್ಲ ಎಂದು ಏಮ್ಸ್ ವೈದ್ಯರು ತಿಳಿಸಿದ್ದಾರೆ.

2005ರಲ್ಲಿ ಪತ್ತೆಯಾಗಿ ಇಲ್ಲಿಯವರೆಗೆ ವಿದೇಶಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಈ ವೈರಸ್ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಕಾಣಿಸಿಕೊಂಡಿದೆ. ಸೋಂಕಿಗೆ ಒಳಗಾಗಿರುವ ಇಬ್ಬರು ವ್ಯಕ್ತಿಗಳು ಹಲವು ವಾರಗಳಿಂದ ಉಸಿರಾಟ ಸಮಸ್ಯೆ, ಕೆಮ್ಮು ಮತ್ತು ತೀವ್ರ ಜ್ವರ ಕಾಣಿಸಿಕೊಂಡಿತ್ತು. ಇವುಗಳು ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.