Monday, February 9, 2026
Monday, February 9, 2026
Home Blog Page 1825

ಸೆಮಿ ಕಂಡಕ್ಟರ್ ಘಟಕಗಳಿಗೆ ಪ್ರೋತ್ಸಾಹ

0

ದೇಶದಲ್ಲಿ ಸೆಮಿಕಂಡಕ್ಟರ್ ಚಿಪ್ ಗಳ ವಿನ್ಯಾಸ ಮತ್ತು ಉತ್ಪಾದನೆ ಹೆಚ್ಚಿಸಲು 76 ಸಾವಿರ ಕೋಟಿ ರೂಪಾಯಿಗಳ ನೂತನ ಸೆಮಿಕಂಡಕ್ಟರ್ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಎಲೆಕ್ಟ್ರಾನಿಕ್ಸ್ ಗಳು ದಿನನಿತ್ಯದ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಸೆಮಿಕಂಡಕ್ಟರ್ ಚಿಪ್ ಗಳು ಇದಕ್ಕೆ ನಿರ್ಣಾಯಕವಾಗಿದೆ. ಇದರಿಂದಾಗಿ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಹೊಸಯುಗ ಆರಂಭವಾಗಲಿದೆ. ಸೆಮಿಕಂಡಕ್ಟರ್ ವಲಯದ ಕಂಪನಿಗಳಿಗೆ ಭಾರತ ಆಕರ್ಷಕ ತಾಣ ವೆನಿಸಲಿದೆ ಎಂದು ಐಟಿ ಮತ್ತು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸುವ ಅರ್ಹ ಕಂಪನಿಗಳಿಗೆ ಯೋಜನೆಯ ವೆಚ್ಚದಲ್ಲಿ ಅರ್ಧ ಮೊತ್ತವನ್ನು ಸರ್ಕಾರ ಭರಿಸಲಿದೆ. ಹೈಟೆಕ್ ಕ್ಲಸ್ಟರ್ ಗಳನ್ನು ರೂಪಿಸಲು ಕೇಂದ್ರ ಸರ್ಕಾರವು ರಾಜ್ಯಗಳ ಜೊತೆಗೆ ಸಂಪರ್ಕದಲ್ಲಿದೆ. ಕನಿಷ್ಠ ಎರಡು ಗ್ರೀನ್ ಫೀಲ್ಡ್ ಸೆಮಿಕಂಡಕ್ಟರ್ ಗಳನ್ನು ಮತ್ತು ಡಿಸ್ ಪ್ಲೇ ಸರ್ ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳ ಜೊತೆಗೆ ಕೇಂದ್ರ ಸಮಾಲೋಚಿಸಿದೆ.
ಕನಿಷ್ಠ 15 ಘಟಕಗಳ ಸ್ಥಾಪನೆಗೆ ಸರಕಾರ ಮುಂದಾಗಲಿದೆ. ಮುಂದಿನ ಐದು ವರ್ಷಗಳಲ್ಲಿ 1,500 ಕೋಟಿ ರೂಪಾಯಿ ವಹಿವಾಟು ನಡೆಸಬಲ್ಲ ಸಾಮರ್ಥ್ಯ ಇರುವ ಸೆಮಿಕಂಡಕ್ಟರ್ ಕಂಪನಿಗಳಿಗೆ ನೆರವು ಸಿಗಲಿದೆ. ಒಟ್ಟಾರೆಯಾಗಿ ಭಾರತದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆ ಮತ್ತು ಸೆಮಿಕಂಡಕ್ಟರ್ ಚಿಪ್ ಅಭಿವೃದ್ಧಿಯ ಪ್ರಮುಖ ತಾಣವನ್ನಾಗಿಸಲು 2.30 ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಲು ಕೇಂದ್ರಸರ್ಕಾರ ಬದ್ಧವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮನಸೂರ ರಾಷ್ಟ್ರೀಯ ಪ್ರಶಸ್ತಿ ಘೋಷಣೆ

0

ಹಿಂದೂಸ್ತಾನಿ ಗಾಯಕ ಡಾ. ಮಲ್ಲಿಕಾರ್ಜುನ ಮನಸೂರ ನೆನಪಿನ ರಾಷ್ಟ್ರೀಯ ಪ್ರಶಸ್ತಿಗೆ ಮುಂಬೈನ ಕೊಳಲು ವಾದಕ ಪಂಡಿತ್ ನಿತ್ಯಾನಂದ ಹಳದಿಪುರ ಅವರು ಭಾಜನರಾಗಿದ್ದಾರೆ.

ಜಿಲ್ಲಾಧಿಕಾರಿ ನಿತೇಶ್.ಕೆ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಸಾಮಾನ್ಯ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.

ಡಾ.ಮನಸೂರ ಅವರ 111ನೇ ಜನ್ಮದಿನದ ಅಂಗವಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಯುವ ಪುರಸ್ಕಾರವನ್ನು ವನ್ನು ಧಾರವಾಡದ ಹಿಂದೂಸ್ತಾನಿ ಗಾಯಕಿ ಶಿವಾನಿ ಮೀರಜಕರ ಅವರಿಗೆ ನೀಡಲು ಸಭೆ ನಿರ್ಧರಿಸಿತು.

ರಾಷ್ಟ್ರೀಯ ಪ್ರಶಸ್ತಿಯು 1 ಲಕ್ಷ ಹಾಗೂ ಯುವ ಪುರಸ್ಕಾರವನ್ನು ಪ್ರಶಸ್ತಿ 25 ಸಾವಿರ ನಗದು ಪುರಸ್ಕಾರ ಹಾಗೂ ಫಲಕವನ್ನು ಒಳಗೊಂಡಿದೆ. ಜನವರಿ 1ರಂದು ಪ್ರಶಸ್ತಿ ಪ್ರದಾನ ಸಮಾರಂಭವು ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಡೆಯಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಜ್ಯದಲ್ಲಿ ಐದುಲಕ್ಷ ಗೃಹ ನಿರ್ಮಾಣದ ಗುರಿ

0

ವಸತಿ ಯೋಜನೆಗಳಡಿ ರಾಜ್ಯದಲ್ಲಿ 5 ಲಕ್ಷ ಮನೆಗಳ ನಿರ್ಮಾಣದ ಗುರಿ ಸರ್ಕಾರ ಹೊಂದಿದ್ದು ಶೀಘ್ರದಲ್ಲೇ ಪಂಚಾಯಿತಿವಾರು ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಅಧಿವೇಶನದಲ್ಲಿ ಸಚಿವ ವಿ.ಸೋಮಣ್ಣ ಅವರು ಹೇಳಿದರು.

ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ನ ಕೆ ಹರೀಶ್ ಕುಮಾರ್ ಅವರು ಕೇಳಿದ ಪ್ರಶ್ನೆಗೆ ವಸತಿ ಸಚಿವ ವಿ ಸೋಮಣ್ಣ ಅವರು “ಎಸ್.ಸಿ, ಎಸ್.ಟಿ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಮನೆ ಹಂಚಿಕೆಗೆ ಸರ್ಕಾರ ನಿರ್ಧಾರ ಕೈಗೊಂಡಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಮಾತುಕತೆ ನಡೆಸಿದ್ದೇನೆ” ಎಂದು ಉತ್ತರಿಸಿದ್ದಾರೆ.

ಬುಡಕಟ್ಟು ಸಮುದಾಯದ ಸದಸ್ಯರಿಗೆ ಸೂರು ಅಥವಾ ಇನ್ನಿತರೆ ಸೌಲಭ್ಯಕ್ಕಾಗಿ ವಿಶೇಷ ಅನುದಾನದಡಿ ನೀಡುವ ಮೊತ್ತವನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಂಜನ್ ಗೊಗೋಯ್ ವಿರುದ್ಧ ಹಕ್ಕು ಚ್ಯುತಿ

0

ನಿವೃತ್ತಿ ಸಿಜೆಐ ಹಾಗೂ ರಾಜ್ಯಸಭಾ ಸದಸ್ಯ ರಂಜನ್ ಗೊಗೋಯ್ ಅವರು ರಾಜ್ಯಸಭೆ ಕಲಾಪದಲ್ಲಿ ತಾವು ಬಯಸಿದಾಗ ಭಾಗಿಯಾಗುವುದಾಗಿ ನೀಡಿರುವ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ರಂಜನ್ ಗೊಗೋಯ್ ವಿರುದ್ಧ ಪ್ರತಿಪಕ್ಷಗಳಾದ ಕಾಂಗ್ರೆಸ್, ಸಿಪಿಐ, ಎಸ್ ಪಿ, ಶಿವಸೇನೆ ಸೇರಿದಂತೆ 10 ಸದಸ್ಯರು ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.

ಈ ನಡುವೆ ಹಕ್ಕುಚ್ಯುತಿ ನೋಟಿಸ್ ಕುರಿತಂತೆ ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಗೊಗೋಯ್ ಪ್ರತಿಕ್ರಿಯಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಲೋಕಸಭೆಯಲ್ಲಿ ಗದ್ದಲ. ಲಿಖಿಂಪುರ- ಖೇರಿ ಪ್ರಕರಣ.

0

ಲಿಖೀಂಪುರ -ಖೇರಿಯಲ್ಲಿ ರೈತರ ಮೇಲೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ್ ಮಿಶ್ರಾ ವರಪುತ್ರ ಕಾರು ಹರಿಸಿದ ಘಟನೆಯು ಪೂರ್ವಯೋಜಿತ ಎಂದು ವಿಶೇಷ ತನಿಖಾ ತಂಡವು ತಿಳಿಸಿದೆ. ಈ ವರದಿ ಕೋರ್ಟ್ ಗೆ ಸಲ್ಲಿಸಿದ ನಂತರ ಲೋಕಸಭೆಯಲ್ಲಿ ಬಿರುಗಾಳಿ ಎಬ್ಬಿಸಿತು.
ಈ ಕಾರಣದಿಂದ ಅಜಯ್ ಮಿಶ್ರಾ ರವರ ರಾಜೀನಾಮೆಗೆ ಒತ್ತಡ ಹೆಚ್ಚಾಗಿದೆ.
ಸಚಿವ ಅಜಯ್ ಮಿಶ್ರಾ ಪುತ್ರ ಬಂಧನದಲ್ಲಿದ್ದಾರೆ. ಲಿಖೀಂಪುರ -ಖೇರಿ ಘಟನೆಯು ಪೂರ್ವಯೋಜಿತ ಸಂಚು ಎಂದು ತನಿಖಾ ತಂಡವೇ ಹೇಳುತ್ತಿದೆ. ಸಚಿವರು ಪುತ್ರನ ತಪ್ಪಿಗೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎನ್ನುವುದು ನಮ್ಮ ವಾದ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಿಳಿಸಿದ್ದಾರೆ.
ಪ್ರತಿಪಕ್ಷಗಳ ಬೇಡಿಕೆಯಂತೆ ಓಮಿಕ್ರಾನ್ ಮತ್ತು ಹಣದುಬ್ಬರದ ಕುರಿತು ಉಭಯ ಸದನಗಳಲ್ಲಿಯೂ ಚರ್ಚಿಸಲು ಸರ್ಕಾರ ಸಿದ್ಧವಿತ್ತು. ಆದರೆ ಅವರೇ ಚರ್ಚೆ ನಡೆಸದೆ ನಿರ್ಗಮಿಸಿದರು. ಚರ್ಚೆ ಮಾಡುವ ಮನಸ್ಸಿಲ್ಲದಿದ್ದರೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದ್ದಾದರೂ ಏಕೆ? ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಯವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವಿಶ್ವದ ಅಗ್ರ10 ರಲ್ಲಿ ಒಬ್ಬರು. ನಮ್ಮ ಪ್ರಧಾನಿ ಮೋದೀಜಿ.

0

ಜಾಗತಿಕ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳ ಪೈಕಿ ಒಬ್ಬರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರೀಗ ಜಗತ್ತಿನಲ್ಲಿ ಅಚ್ಚುಮೆಚ್ಚಿನ 10 ಪುರುಷರ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.
ಬ್ರಿಟನ್ ನ ಇಂಟರ್ನೆಟ್ ಆಧುನಿಕ ಅಂತರಾಷ್ಟ್ರೀಯ ಮಾರುಕಟ್ಟೆ ಸಂಶೋಧನೆ ಹಾಗೂ ದತ್ತಾಂಶ ವಿಶ್ಲೇಷಣೆ ಸಂಸ್ಥೆ YouGov ಪಟ್ಟಿ ಬಿಡುಗಡೆ ಮಾಡಿದೆ. ಅಗ್ರ 10 ಅಚ್ಚುಮೆಚ್ಚಿನ ಪುರುಷರ ಪಟ್ಟಿಯಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಸತತ ಎರಡನೇ ಬಾರಿಗೆ ಅಗ್ರಸ್ಥಾನ ಗಳಿಸಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದ್ದಾರೆ.
ಈ ಸಂಸ್ಥೆಯು ಪ್ರತಿವರ್ಷ ವಿಶ್ವದಲ್ಲಿ ಅಚ್ಚುಮೆಚ್ಚಿನ ಅಗ್ರ 20 ಪುರುಷರು ಹಾಗೂ 20 ಮಹಿಳೆಯರ ಪಟ್ಟಿ ತಯಾರಿಸುತ್ತದೆ. ಈ ಬಾರಿ ಪಟ್ಟಿ ತಯಾರಿಸಲು 8 ರಾಷ್ಟ್ರಗಳ 42 ಸಾವಿರ ಜನರನ್ನು ಸಂಪರ್ಕಿಸಿದೆ.
ಕನ್ನಡತಿ, ಲೇಖಕಿ ಸಮಾಜಸೇವಕಿ ಸುಧಾಮೂರ್ತಿಯವರು ಸಹ ಜಗತ್ತಿನಲ್ಲಿ ಅಚ್ಚುಮೆಚ್ಚಿನ 20 ಮಹಿಳೆಯರಲ್ಲಿ 14 ನೇ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿಯೂ ಸುಧಾಮೂರ್ತಿಯವರು ಸ್ಥಾನ ಪಡೆದಿದ್ದರು. ಅಲ್ಲದೆ, ನಟಿ ಐಶ್ವರ್ಯ ರೈ 13 ನೇ ಸ್ಥಾನ ಪಡೆದಿದ್ದಾರೆ. ಐಶ್ವರ್ಯ ರೈ ಸಹ ಕರ್ನಾಟಕ ಮೂಲದವರು ಎನ್ನುವುದು ಗಮನಾರ್ಹ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಏಷ್ಯನ್ ಚಾಂಪಿಯನ್ ಹಾಕಿ ಪಂದ್ಯ : ಭಾರತಕ್ಕೆ ಜಯ

0

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ 2ನೇ ಪಂದ್ಯವು ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನಡೆಯಿತು. ಬಾಂಗ್ಲಾದೇಶ ತಂಡವು ಭಾರತ ತಂಡಕ್ಕೆ ಸುಲಭವಾಗಿ ಸೋತಿದೆ.
ಹಾಲಿ ಚಾಂಪಿಯನ್ ಮತ್ತು ಟೋಕಿಯೋ ಒಲಂಪಿಕ್ಸ್ ನಲ್ಲಿ ‘ಕಂಚಿನ ಪದಕ’ ಗೆದ್ದಿರುವ ಭಾರತ ಮೊದಲ ಪಂದ್ಯವನ್ನು ಕೋರಿಯಾ ಜೊತೆ 2-2 ರಲ್ಲಿ ಡ್ರಾ ಮಾಡಿಕೊಂಡಿತ್ತು.
ಏಷ್ಯಾನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ 2ನೇ ಪಂದ್ಯವು ಬುಧವಾರ ನಡೆಯಿತು. ಪಂದ್ಯದ ಆರಂಭದಲ್ಲೇ ಭಾರತ ತಂಡ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು. ಸ್ಟ್ರೈಕರ್ ದಿಲ್ – ಪ್ರೀತ್ ಸಿಂಗ್ ಅವರ ಹ್ಯಾಟ್ರಿಕ್ ಮತ್ತು ಜರ್ಮನ್ ಪ್ರೀತ್ ಗಳಿಸಿದ 2 ಗೋಲುಗಳು ಭಾರತ ತಂಡದ ಸುಲಭ ಜಯಕ್ಕೆ ಕಾರಣವಾದವು.
ಭಾರೀ ಅಂತರದ ಜಯ ಸಾಧಿಸಿದರೂ, ಭಾರತ ತಂಡ ಕೆಲವು ಅವಕಾಶಗಳನ್ನು ಕೈ ಚೆಲ್ಲಿತು. ಕಾದು ನೋಡುವ ತಂತ್ರಕ್ಕೆ ಒತ್ತುನೀಡಿದ ಬಾಂಗ್ಲಾದೇಶ, ಕೆಲವು ಸಂದರ್ಭಗಳಲ್ಲಿ ಪ್ರತಿರೋಧ ಒಡ್ಡುವಲ್ಲಿ ಯಶಸ್ವಿಯಾಯಿತು. ‘ಸೆಟ್ ಪೀಸ್’ ಸಂದರ್ಭದಲ್ಲಿ ಗೋಲ್ಕೀಪರ್ ಅಬೌಟ್ ನಿಪಾನ್ ಅಮೋಘ ಸಾಮರ್ಥ್ಯ ಪ್ರದರ್ಶಿಸಿದರು. ಮೊದಲ 12 ನಿಮಿಷಗಳಲ್ಲಿ 8 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದ ಭಾರತಕ್ಕೆ ಎದುರಾಳಿ ತಂಡದ ರಕ್ಷಣಾ ಗೋಡೆ ಕೆಡವಲು ಸಾಧ್ಯವಾಗಲಿಲ್ಲ.
12ನೇ ನಿಮಿಷದಲ್ಲಿ ದಿಲ್ – ಪ್ರೀತ್ ಗಳಿಸಿದ ಗೋಲಿನ ಮೂಲಕ ಭಾರತ ಮುನ್ನಡೆ ಗಳಿಸಿತು, 22ನೇ ನಿಮಿಷ ಮತ್ತು 45ನೇ ನಿಮಿಷದಲ್ಲಿ ದಿಲ್ – ಪ್ರೀತ್ ಮತ್ತೆರಡು ಗೋಲುಗಳನ್ನು ದಾಖಲಿಸಿದರು. 33 ಮತ್ತು 43 ನಿಮಿಷಗಳಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಹರ್ಮನ್ ಪ್ರೀತ್ ಸಿಂಗ್ ಚೆಂಡನ್ನು ಗುರಿ ಸೇರಿಸಿದರು.
ಉಪನಾಯಕ ಹರ್ಮನ್ ಪ್ರೀತ್ ಸಿಂಗ್ ಅವರ
ಪ್ಲಿಕ್ ನಲ್ಲಿ ಲಭಿಸಿದ ಚೆಂಡನ್ನು ಲಲಿತ್ ಉಪಾಧ್ಯಾಯ ಗುರಿ ಮುಟ್ಟಿಸಿದರೆ, ಮನ್ – ದೀಪ್ ಮೊರೆ ಚೊಚ್ಚಲ ಅಂತರರಾಷ್ಟ್ರೀಯ ಗೋಲಿನ ಸಂಭ್ರಮದಲ್ಲಿ ತೇಲಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಗಾಂಜಾ ವ್ಯಸನಿಗಳ ಬಗ್ಗೆ ಸೂಕ್ತ ಕ್ರಮಕ್ಕೆ ಅಸಗ್ರಹ

0

ಸಾಗರ ನಗರದಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಜಾಲ ವ್ಯಾಪಕವಾಗಿದೆ. ಗಾಂಜಾ ಸೇವಿಸಿದವರು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ಪ್ರತಿಭಟನೆ ನಡೆಸಿ ಬಳಿಕ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಪರಮೇಶ್ವರ ದೂಗೂರು ಅವರು “ಸಾಗರ ಪಟ್ಟಣದಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣಗಳು ಹೆಚ್ಚಾಗುತ್ತಿದೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಗಾಂಜಾ ವ್ಯಸನಿಗಳಾಗುತ್ತಿದ್ದಾರೆ. ಗಾಂಜಾ ಸೇವಿಸಿ ಅಪಘಾತ ಅಪರಾಧ ಕೃತ್ಯಗಳಲ್ಲಿ ತೊಡಗಿಸಿ ಕೊಳ್ಳುತ್ತಿದ್ದಾರೆ. ಗಾಂಜಾ ಅಕ್ರಮದ ಬಗ್ಗೆ ದೂರು ನೀಡಿದವರ ವಿವರಗಳನ್ನು ಪೊಲೀಸರು ಗಾಂಜಾ ವ್ಯಸನಿಗಳಿಗೆ ನೀಡುತ್ತಿದ್ದಾರೆ. ಹಾಗಾಗಿ ಗಾಂಜಾ ವ್ಯಸನಿಗಳು ಪುನಃ ದೂರುದಾರರ ಮೇಲೆ ಹಲ್ಲೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಸಾಗರ ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಗಾಂಜಾ ಮಾರಾಟ ಜಾಲ ಮತ್ತು ಗಾಂಜಾ ವ್ಯಸನಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮವನ್ನು ಪೊಲೀಸ್ ಇಲಾಖೆಯ ತೆಗೆದುಕೊಳ್ಳಬೇಕು. ಗಾಂಜಾ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಈ ವೇಳೆ ಒತ್ತಾಯಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಅನುದಾನಕ್ಕೆ ಕಾಯದೇ ರೈತರ ಹಿತಸಾಧಿಸಿ

0

ರಾಜ್ಯ ಸರ್ಕಾರ ಕೇಂದ್ರದಿಂದ ಅನುದಾನ ಬಿಡುಗಡೆಯಾಗುವವರೆಗೂ ಕಾಯ್ದೆ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಲಹೆ ಮಾಡಿದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ, ಎಂಎನ್ ಆರ್ ಇಜಿ ಯೋಜನೆಯಡಿ ಕಳೆದ ಎರಡು ತಿಂಗಳ ಕೂಲಿ ಹಣ ಬಿಡುಗಡೆ ಬಾಕಿ ಇತ್ತು. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಗೆ ಮನವಿ ಸಲ್ಲಿಸಿದಾಗ ತಕ್ಷಣ 1000 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದಾರೆ. ಕೂಲಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ.ಆದರೆ, ಆರೇಳು ತಿಂಗಳ ನರೇಗಾ ಕೂಲಿ ಬಾಕಿ ಉಳಿದಿಲ್ಲ ಎಂದು ಸ್ಪಷ್ಟನೆ ನೀಡಿದರು.
40-50 ವರ್ಷಗಳಲ್ಲಿ ಕಾಣದಷ್ಟು ರಾಜ್ಯದಲ್ಲಿ ಅತಿವೃಷ್ಟಿಯಿಂದ ಕೈಗೆ ಬರಬೇಕಾಗಿದ್ದ ಬೆಳೆ ನಷ್ಟ ಕ್ಕೀಡಾಗಿ ರೈತರು ಸಂಕಷ್ಟ ಎದುರಿಸುತ್ತಿರುವ ಕುರಿತು ವಿಧಾನ ಸಭೆಯಲ್ಲಿ ಚರ್ಚೆ ವೇಳೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ಮಧ್ಯೆ ಪ್ರವೇಶಿಸಿದರು.
ಮುಂದಿನ ಹಂಗಾಮಿನಲ್ಲಿ ಬಿತ್ತನೆ ಬೀಜ ಖರೀದಿಸುವುದಕ್ಕೂ ರೈತರ ಬಳಿ ಹಣವಿಲ್ಲದಂತಾಗಿದೆ. ಕೇಂದ್ರದ ಅನುದಾನಕ್ಕೆ ಕಾಯದೆ ರಾಜ್ಯದ ಬೊಕ್ಕಸದಿಂದಲೇ ಹಣ ಖರ್ಚು ಮಾಡುವ ಮೂಲಕ ರೈತರ, ಕೂಲಿ ಕಾರ್ಮಿಕರ ರಕ್ಷಣೆಗೆ ಮುಂದಾಗಬೇಕು ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಾಧ್ಯಮದ ಮೇಲೆ ಕೇಂದ್ರ ಗೃಹ ಸಚಿವರ ಮುನಿಸು

0

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಮಿಶ್ರಾ ಅವರು ಸುದ್ದಿಗಾರರೊಂದಿಗೆ ಸಲ್ಲದ ನಡವಳಿಕೆ ತೋರಿದ ಪ್ರಸಂಗ ವರದಿಯಾಗಿದೆ. ಲಖಿಂಪುರ್ ಖೇರಿ ಈ ಪ್ರಕರಣದಲ್ಲಿ ದೋಷಿಯಾಗಿರುವ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಕುರಿತು ಪ್ರಶ್ನಿಸಿದಾಗ ಗೃಹಮಂತ್ರಿ ವ್ಯಗ್ರರಾಗಿದ್ದಾರೆ.

ಸುದ್ದಿ ಸಂಸ್ಥೆಯೊಂದರ ಪರವಾಗಿ ಟಿವಿ ಪತ್ರಕರ್ತ ನವೀನ್ ಅವಸ್ಥಿ ಅವರು ಕೇಳಿದ ಪ್ರಶ್ನೆಗೆ ಗೃಹಮಂತ್ರಿಗಳು ತಾಳ್ಮೆ ಕಳೆದುಕೊಂಡರು ಎಂದು ತಿಳಿದುಬಂದಿದೆ.

ಸಚಿವರು ಲಖಿಪುರ್ ಖೇರಿಯ ಓಎಲ್ ಟೌನ್ ನಲ್ಲಿ ಆಮ್ಲಜನಕ ಸ್ಥಾವರವನ್ನು ಉದ್ಘಾಟಿಸಲು ಬಂದಿದ್ದರು. ಸಂದರ್ಭದಲ್ಲಿ ಪತ್ರಕರ್ತರು ಸಚಿವರ ಪುತ್ರನಾ ಮೇಲಿನ ಆರೋಪದ ಬಗ್ಗೆ ಪ್ರಶ್ನಿಸಿದರು. ಆಗ ತಮ್ಮ ಕೈಯಲ್ಲಿದ್ದ ಧ್ವನಿವರ್ಧಕ ಕಿತ್ತುಕೊಂಡು ಜೊತೆಗೆ ಸಂಗಡಿಗ ಪತ್ರಕರ್ತರ ಮೊಬೈಲ್ ಕಸಿಯುವ ಪ್ರಯತ್ನ ಮಾಡಿದರು ಎಂದು ಪತ್ರಕರ್ತರು ಹೇಳಿದ್ದಾರೆ. ಈ ಘಟನೆಯ ಸಂಪೂರ್ಣ ವೀಡಿಯೋ ಚಿತ್ರೀಕರಣವಾಗಿದೆ.

ಸಚಿವರು ಅವಸ್ಥಿ ಅವರಿಗೆ ‘ಮೂರ್ಖ ಪ್ರಶ್ನೆಗಳನ್ನು ಕೇಳಬೇಡಿ, ನಿಮಗೆ ಬುದ್ಧಿ ಸರಿಯಾಗಿದೆಯೇ’ ಎಂದು ಕೂಗಾಡಿದ್ದಾರೆ. ಅಲ್ಲದೆ ‘ಪತ್ರಕರ್ತರಿಗೆ ಹೋಗಿ ಎಸ್ಐಟಿ ಯನ್ನು ಚಾರ್ಜ್ಶೀಟ್ ಬಗ್ಗೆ ನೀವೇ ವಿಚಾರಿಸಿ ಹಾಗೂ ನೀವು ಮಾಧ್ಯಮದವರು ಚೋರರು. ಒಬ್ಬ ನಿರ್ದೋಷಿ ವ್ಯಕ್ತಿಯ ಬಗ್ಗೆ ಏನೆಲ್ಲಾ ಹೇಳಿದ್ದೀರಿ ನಿಮಗೆ ನಾಚಿಕೆ ಆಗಲ್ವೇ’ ಎಂದು ಸಿಟ್ಟಿನಿಂದ ಕೇಳಿದ್ದಾರೆ.

ಪತ್ರಕರ್ತರ ಸಮೂಹ ಅಲ್ಲಿನ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿ ಅದನ್ನ ರಾಷ್ಟ್ರಪತಿಯವರಿಗೆ ಕಳಿಸಲು ಕೋರಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.