Tuesday, February 17, 2026
Tuesday, February 17, 2026
Home Blog Page 161

CM Siddharamaiah ದುರ್ಬಲ ವರ್ಗದವರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ. ಸರ್ಕಾರದ ಜನಪರ ವಿಚಾರಗಳನ್ನ ಜನರಿಗೆ ತಿಳಿಸಿ- ಸಿದ್ಧರಾಮಯ್ಯ

0

CM Siddharamaiah ಸಮಾಜದಲ್ಲಿನ ಅಸಮಾನತೆಗೆ ಕಾರಣಗಳು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಮಾಧ್ಯಮಗಳು ತೊಡಗಬೇಕು. ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸಬೇಕು. ಹಾಗೆಯೇ ದುರ್ಬಲ ವರ್ಗದವರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, 2024 ನೇ ಕ್ಯಾಲೆಂಡರ್ ವರ್ಷದ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ 2017 ರಿಂದ 2023 ನೇ ಕ್ಯಾಲೆಂಡರ್ ವರ್ಷದ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು ಮಾಧ್ಯಮಗಳು ಸತ್ಯ ಅಸತ್ಯದ ಶೋಧನೆ ನಡೆಸಬೇಕು. ವರದಿಗಳಾಗಲಿ ಅಥವಾ ಅಭಿಪ್ರಾಯಗಳಾಗಲಿ ವಸ್ತುಸ್ಥಿತಿಯಿಂದ ಕೂಡಿರಬೇಕು. ಕಲ್ಪನೆಯ ವರದಿ ಆಗಬಾರದು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಊಹಾ ಪತ್ರಿಕೋದ್ಯಮ ಜೋತುಬೀಳುತ್ತಿವೆ. ಅದು ಆಗಬಾರದು. ಸತ್ಯ ಅಸತ್ಯಗಳನ್ನು ಪತ್ತೆ ಹಚ್ಚಿ, ಸತ್ಯವನ್ನು ಶೋಧನೆ ಮಾಡುವ ಕಾರ್ಯವನ್ನು ಪತ್ರಿಕೋದ್ಯಮ ಮಾಡಬೇಕು ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಒಬ್ಬ ವ್ಯಕ್ತಿಯು ತಪ್ಪು ಮಾಡದಿದ್ದರೂ, ಸುಮ್ಮನೆ ಆರೋಪಗಳನ್ನು ಮಾಡಬಾರದು. ಸರ್ಕಾರದಲ್ಲಿ ಎಲ್ಲವೂ ಸರಿಯಾಗಿರುವುದಿಲ್ಲ ನಿಜ, ಆದರೆ ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನ ವಿರೋಧಿ ಕಾರ್ಯವನ್ನು ಸರ್ಕಾರ ಮಾಡಿದರೆ ಅದನ್ನೂ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು.

ಅಸಮಾನತೆ ಹೋದರೆ ಮಾತ್ರ ಜಾತಿ ವ್ಯವಸ್ಥೆ ನಿಲ್ಲುವುದು :

ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸಮಾನತೆ ಇದೆ. ಸಾಮಾಜಿಕ ಅಸಮಾನತೆ ಬಗ್ಗೆ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಬಹುಸಂಖ್ಯಾತರಾಗಿರುವ ಜನ ಅಕ್ಷರ ಸಂಸ್ಕøತಿಯಿಂದ ವಂಚಿತರಾಗಿರುವುದು ಅಸಮಾನತೆಗೆ ಪ್ರಮುಖ ಕಾರಣ. ಇದನ್ನು ನೇರವಾಗಿ ಜನರಿಗೆ ತಿಳಿಸುವ ಪ್ರಯತ್ನವಾಗಬೇಕು. ಯಾವುದೇ ರಾಜಿ ಇಲ್ಲದೆ, ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಕ್ಕಿದೆಯೇ, ಇಲ್ಲವೇ, ಸಮಬಾಳು, ಸಮಪಾಲು ಅನುಷ್ಠಾನಕ್ಕೆ ಬಂದಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಾಮಾಜಿಕ ನ್ಯಾಯ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿರಬೇಕಾದ ವಿಚಾರವಲ್ಲ. ಎಲ್ಲರಿಗೂ ದೇಶದ ವ್ಯವಸ್ಥೆಯಲ್ಲಿ ಇನ್ನೂ ಸಹ ಸಮಾನವಾದ ಅವಕಾಶ ಸಿಗದಿರಲು ಕಾರಣಗಳೇನು ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಧ್ಯಮ ಮಾಡಬೇಕು ಎಂದರು

ದಸರಾ- ಸಾಂಸ್ಕøತಿಕ ನಾಡ ಹಬ್ಬ:

CM Siddharamaiah ಇತ್ತೀಚಿಗೆ ಟಿವಿ ಚಾನೆಲ್‍ಗಳು ಇನ್ನೊಬ್ಬರ ಹೇಳಿಕೆ ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿ ಸುದ್ದಿ ಮಾಡುತ್ತವೆ. ಅದರಲ್ಲಿ ಅನೇಕ ವಿಚಾರಗಳು ಸಮಾಜಕ್ಕೆ ಸಂಬಂಧವೇ ಪಟ್ಟಿರುವುದಿಲ್ಲ. ಸಮಾಜಕ್ಕೆ ಸಂಬಂಧಪಟ್ಟಂತಹ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ. ಬಾನು ಮುಷ್ತಾಕ್ ದಸರಾ ಉದ್ಘಾಟನೆಯನ್ನು ವಿಷಯವನ್ನಾಗಿಸಲು ಹೊರಟರು. ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ಸಹ ಇದನ್ನು ವಜಾಗೊಳಿಸಿದೆ. ದಸರಾ ಹಬ್ಬ ಧಾರ್ಮಿಕ ವಿಚಾರವಲ್ಲ, ಅದು ನಾಡ ಹಬ್ಬವಾಗಿದ್ದು, ಸಾಂಸ್ಕೃತಿಕ ವಿಚಾರವಾಗಿದೆ. ನಮ್ಮಲ್ಲಿ ಸಹಬಾಳ್ವೆ ಇರಬೇಕು. ಸಮಾಜದಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ನಿರ್ಮಾಣ ಮಾಡಬೇಕು. ಅಂಬೇಡ್ಕರ್ ಅವರು ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ನಾವು ವೈರುಧ್ಯಗಳಿಂದ ಕೂಡಿದ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಸಮಾಜದ ದುರ್ಬಲ ವರ್ಗದವರ ಅಭಿವೃದ್ಧಿಯಾದರೆ ಮಾತ್ರ ನಿಜವಾದ ಅಭಿವೃದ್ಧಿ ಎಂದು ಹೇಳಿದ್ದರು. ಆ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಬೇಕು. ದುರ್ಬಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಸಮಸಮಾಜದ ಕನಸು ಕಂಡ ಪರ್ತಕರ್ತ – ರಘುರಾಮ ಶೆಟ್ಟಿ :

ವಡ್ಡರ್ಸೆ ರಘುರಾಮ ಶೆಟ್ಟರು ಸಮ ಸಮಾಜ ನಿರ್ಮಾಣದ ಕನಸು ಕಂಡ ಪತ್ರಕರ್ತರು. ಜಾತಿ ಸಮಸ್ಯೆಗಳ ವಿರುದ್ಧ ಬರೆದವರು. ಬದ್ದತೆಯುಳ್ಳ, ಯಾವುದೇ ಪ್ರಶಸ್ತಿ, ಪ್ರಚಾರ ಬಯಸದ ವ್ಯಕ್ತಿ. ಮಾಧ್ಯಮ ರಂಗವು ಓದುಗರನ್ನೇ ಇಡಯರನ್ನಾಗಿ ಅವಲಂಬಿಸಬೇಕು ಹಾಗಾದಾಗ ಮಾತ್ರ ನಿಷ್ಠುರ ಮತ್ತು ವಸ್ತುನಿಷ್ಠ, ಜನಪರ ಪತ್ರಿಕೋದ್ಯಮ ಸಾಧ್ಯ ಎಂದು ಬಲವಾಗಿ ನಂಬಿ ಆ ನಿಟ್ಟಿನಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ಸಾಮಾಜಿಕ ನ್ಯಾಯದ ಸ್ಪಷ್ಟ ಧ್ವನಿಯಾಗಿ ಹೊಸ ಮಾರ್ಗದಲ್ಲಿ ನೆಡೆದ ವ್ಯಕ್ತಿ ಎಂದು ರಘುರಾಮ ಶೆಟ್ಟಿಯವರನ್ನು ಸ್ಮರಿಸಿದರು.

ಪತ್ರಕರ್ತರು ಪರಿಸರ ನ್ಯಾಯಕ್ಕೆ ಬದ್ಧವಾಗಿರಬೇಕು :

ಪರಿಸರ ಅಭಿವೃದ್ಧಿ ಸಂರಕ್ಷಣೆಗೆ ಮಾಧ್ಯಮಗಳು ಹೆಚ್ಚು ಒತ್ತು ನೀಡಬೇಕು. ಪತ್ರಕರ್ತರು ಪರಿಸರ ನ್ಯಾಯಕ್ಕೆ ಬದ್ಧವಾಗಿರಬೇಕು. ಸ್ವಾತಂತ್ರ್ಯ ಪೂರ್ವದ ಮಾಧ್ಯಮ ರಂಗಕ್ಕೂ ಇಂದಿನ ಮಾಧ್ಯಮ ರಂಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಸ್ವಾತಂತ್ರ್ಯೋತ್ತರ ಪತ್ರಿಕೋದ್ಯಮ ಶ್ರೀಮಂತರ ಕೈಗಳಿಗೆ ಸಿಕ್ಕಿಹಾಕಿಕೊಂಡಿದೆ. ಪತ್ರಕರ್ತರು ಇದನ್ನು ಅರ್ಥ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕಿದೆ ಎಂದರು.

ಮಹಿಳೆಯರಿಗೂ ಸಮಾನತೆ :
ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಹೇಗೆ ಬೇರು ಬಿಟ್ಟಿದೆ ಎಂದರೆ ಐದಾರು ವರ್ಷಗಳಲ್ಲಿ, ಹತ್ತಿಪ್ಪತ್ತು ವರ್ಷಗಳಲ್ಲಿ ಹೋಗುವಂತದ್ದಲ್ಲ. ಆದರೆ ಅಸಮಾನತೆಯ ಮಟ್ಟವನ್ನು ಕಡಿಮೆ ಮಾಡಿ ಸಮ ಸಮಾಜ ನಿರ್ಮಾಣಕ್ಕೆ ನಮ್ಮ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಮಹಿಳೆಯರಿಗೂ ಸಮಾನತೆ ಬರಬೇಕು ಎನ್ನುವ ನಿಟ್ಟಿನಲ್ಲಿ ಮಹಿಳಾ ಸಬಲೀಕರಣಕ್ಕೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಲ್ಲರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ , ದುರ್ಬಲ ವರ್ಗದವರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ ಎಂದರು.

ಶಾಲಾ – ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ :

ಬಹಳಷ್ಟು ಜನರು ಸಂವಿಧಾನವನ್ನೇ ಓದಿರುವುದಿಲ್ಲ ಇದೇ ಕಾರಣಕ್ಕೆ ನಮ್ಮ ಸರ್ಕಾರ, ಶಾಲಾ – ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವಂತಹ ಕಾರ್ಯಕ್ರಮ ಹಮ್ಮಿಕೊಂಡಿತು ಸಂವಿಧಾನದ ಕರ್ತವ್ಯಗಳನ್ನು, ಹಕ್ಕುಗಳನ್ನು ತಿಳಿದುಕೊಂಡಲ್ಲಿ ಜನರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯಕವಾಗುತ್ತದೆ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡಿದರೆ ಸಮಾಜ, ನಾಡು ದೇಶ ಎಲ್ಲಕ್ಕೂ ಒಳ್ಳೆಯದಾಗುತ್ತದೆ ಎಂದರು.

ಸುಮಾರು 2017ರಿಂದ ಬಾಕಿ ಇದ್ದ ಪ್ರಶಸ್ತಿಗಳನ್ನು ಇಂದು ಪ್ರದಾನ ಮಾಡಲಾಗಿದೆ ಆಯಾ ವರ್ಷದ ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡಿದರೆ ಉತ್ತಮ. ಅನೇಕ ವರ್ಷಗಳ ಪ್ರಶಸ್ತಿಗಳನ್ನು ಒಟ್ಟಿಗೆ ನೀಡುವುದು ಒಳ್ಳೆಯ ಪದ್ಧತಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾ ಇನ್ನು ಮುಂದೆ ಯಾವುದೇ ಪ್ರಶಸ್ತಿಗಳಿರಲಿ ಆಯಾ ವರ್ಷವೇ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರು ಪ್ರಾಸ್ತಾವಿಕ ಮಾತನಾಡುತ್ತಾ, ಪ್ರಸಕ್ತ ವರ್ಷ ವಡ್ಡರ್ಸೆ ರಘುರಾಮಶೆಟ್ಟಿ ಅವರ ಸ್ಮರಣಾರ್ಥವಾಗಿ 2024ನೇ ಕ್ಯಾಲೆಂಡರ್ ವರ್ಷದ ವಡ್ಡರ್ಸೆ ರಘುರಾಮಶೆಟ್ಟಿ “ಸಾಮಾಜಿಕ ನ್ಯಾಯ ಪತ್ರಿಕೋದ್ಯಮ” ವಿಶೇಷ ಪ್ರಶಸ್ತಿ ಹಾಗೂ 2017 ರಿಂದ 2023ನೇ ಕ್ಯಾಲೆಂಡರ್ ವರ್ಷದ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪ್ರದಾನ ಮಾಡಲಾಗುತ್ತಿದೆ ಎಂದರು.
ಸರ್ಕಾರವು 2017 ರಿಂದ ಬಾಕಿ ಇದ್ದ ಪರಿಸರ ಮತ್ತು ಅಭಿವೃದ್ಧಿ ಪ್ರಶಸ್ತಿ ಹಾಗೂ 5 ವರ್ಷಗಳಿಂದ ಬಾಕಿ ಇದ್ದ ಮೊಹರೆ ಹಣಮಂತರಾಯ ಹಾಗೂ ಟಿಯೇಸ್ಸಾರ್ ಪ್ರಶಸ್ತಿ ನೀಡಲು ಸಮಿತಿಯನ್ನು ರಚಿಸಿ, ಪ್ರಶಸ್ತಿ ನೀಡುವ ಮೂಲಕ ಪತ್ರಕರ್ತರಿಗೆÉ ಶಬ್ಬಾಷ್ ಎಂದು ಸರ್ಕಾರ ಹೇಳಿದೆ. ಅಲ್ಲದೆ ಸರ್ಕಾರವು ಕಳೆದ ಎರಡು ವರ್ಷಗಳಿಂದ ಪತ್ರಕರ್ತರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್, ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದೆ. ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ, ಕುಟುಂಬ ಮಾಸಾಶನವನ್ನು ಸಹ ನೀಡಿದೆ. ಪತ್ರಕರ್ತರಿಗಾಗಿ ಮೀಡಿಯಾ ಫೆಸ್ಟ್, ಕಾರ್ಯಾಗಾರಗಳು ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಕ್ಯಾಮೆರಾ, ಲ್ಯಾಪ್ ಟಾಪ್ ಹಾಗೂ ಇನ್ನಿತರ ಉಪಕರಣಗಳನ್ನೊಳಗೊಂಡ ಮಾಧ್ಯಮ ಕಿಟ್‍ಗಳನ್ನು ಸಹ ವಿತರಿಸುವುದರ ಮೂಲಕ ಸರ್ಕಾರ ಪತ್ರಕರ್ತರಿಗೆ ಶಬ್ಬಾಷ್ ಹೇಳುವಂತಹ ಕೆಲಸ ಮಾಡುತ್ತಿದೆ.

ಕನ್ನಡ ಚಿತ್ರರಂಗಕ್ಕೆ ಶಕ್ತಿ ತುಂಬಲು ಕಲಾವಿದರಿಗೂ ಅನುಕೂಲ ಕಲ್ಪಿಸಿಕೊಟ್ಟಿದೆ. ಚಿತ್ರರಂಗದಲ್ಲಿ 25 ವರ್ಷಗಳ ಸೇವೆ ಪೂರೈಸಿದ ಮಹಿಳಾ ಕಲಾವಿದರಿಗೆ ಪ್ರಶಸ್ತಿ ನೀಡಲು ಹಿರಿಯ ನಟಿ, ಬಿ.ಸರೋಜದೇವಿ ಅವರ ಹೆಸರಿನಲ್ಲಿ ಜೀವಮಾನ ಸಾಧನೆಗಾಗಿ ಅಭಿನಯ ಸರಸ್ವತಿ ಪ್ರಶಸ್ತಿಯನ್ನು ಪ್ರದಾನ ಮಾಡಲು ಸರ್ಕಾರವು ಆದೇಶ ಹೊರಡಿಸಿದೆ. ಈ ಪ್ರಶಸ್ತಿಯು 2025 ನೇ ಸಾಲಿನಿಂದಲೇ ನೀಡಲಾಗುವುದು. ಬಡಜನರು ಚಲನಚಿತ್ರ ನೋಡಲು ಅನುಕೂಲವಾಗುವಂತೆ ಟಿಕೆಟ್ ದರವನ್ನು ರೂ.200 ಗಳಿಗೆ ನಿಗಧಿ ಮಾಡಿದೆ. ಮೈಸೂರಿನಲ್ಲಿ 160 ಎಕರೆ ಪ್ರದೇಶದಲ್ಲಿ ಫಿಲಂಸಿಟಿ ನಿರ್ಮಿಸಲು ಕ್ರಮವಹಿಸಿದೆ. ಸರ್ಕಾರ ತಾವು ಮಾಡಿರುವ ಕೆಲಸಕ್ಕೆ ಪುರಸ್ಕಾರ ನೀಡಿ ಶ್ಲಾಘಿಸುತ್ತಿದೆ. ಪತ್ರಕರ್ತರ ಹಿತಕ್ಕಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.

ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕøತ ಡಿ.ಉಮಾಪತಿ ಅವರು ಮಾತನಾಡುತ್ತಾ, ಸಮಾಜದ ಅಭಿವೃದ್ಧಿಯಾಗಬೇಕೆಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ತಲುಪಬೇಕು. ಇದು ಸರ್ಕಾರ, ಸಮಾಜ ಹಾಗೂ ಪತ್ರಿಕೆಗಳ ಸಾಮೂಹಿಕ ಜವಾಬ್ದಾರಿಯಾಗಿದೆ. ಜನಪರ ಆಶಯಗಳನ್ನಿಟ್ಟುಕೊಂಡು ಪತ್ರಿಕೆಗಳು, ಮಾಧ್ಯಮಗಳು ಜನಪರ ಆಶಯಗಳನ್ನಿಟುಕೊಂಡು ಕೆಲಸ ನಿರ್ವಹಿಸಬೇಕು. ದೀನ ದಲಿತರ, ದಮನಿತರ ಧ್ವನಿಯಾಗಬೇಕು ಎಂದರು.

ವಡ್ಡರ್ಸೆ ರಘುರಾಮಶೆಟ್ಟಿ ಅವರು “ಮುಂಗಾರು” ಪತ್ರಿಕೆಯನ್ನು ಹೊರತಂದು ಶೋಷಿತರ ಧ್ವನಿಗಳಿಗೆ ಸ್ಪಂದಿಸಿ ಸಾಮಾಜಿಕ ಚಿಂತನೆಗಳು ಹಾಗೂ ತಮ್ಮ ಬರಹಗಳ ಮೂಲಕ ಗಟ್ಟಿ ಪತ್ರಿಕೋದ್ಯಮವನ್ನು ಕಟ್ಟಿದವರು. ಜನರ ದನಿಯಾಗಿ ಹೊರಹೊಮ್ಮಿದ ಅವರ ಪತ್ರಿಕೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಎತ್ತು ಹಿಡಿಯುವಲ್ಲಿ ಯಶಸ್ವಿಯಾಯಿತು. ಆದರೆ ಈಗಿನ ಕೆಲವು ಮಾಧ್ಯಮಗಳು ಸತ್ಯ, ನ್ಯಾಯವನ್ನು ಮರೆಮಾಚಿ ವರದಿಗಳನ್ನು ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ. ಯಾವುದೇ ಮಾಧ್ಯಮಗಳಿರಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾದ ಶ್ರೀಮತಿ ಬಿ.ಬಿ.ಕಾವೇರಿ ಅವರು ಸ್ವಾಗತ ಕೋರಿದರು.

ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ 2017ನೇ ಸಾಲಿಗೆ, ಶ್ರೀಮತಿ ವಿಜಯಲಕ್ಷ್ಮಿ ಶಿಬರೂರು, 2018 ನೇ ಸಾಲಿಗೆ ಶ್ರೀ ಬಿ.ಟಿ.ಎಂ. ರಾಜೀವ್, 2019ನೇ ಸಾಲಿಗೆ ಶ್ರೀ ವಿನೋದ ಕುಮಾರ್ ನಾಯ್ಕ್, 2020ನೇ ಸಾಲಿಗೆ ಶ್ರೀ ಮಾಲತೇಶ ಅಂಗೂರ, 2021ನೇ ಸಾಲಿಗೆ ಶ್ರೀ ಸುಧೀರ್ ಶೆಟ್ಟಿ, 2022ನೇ ಸಾಲಿಗೆ ಶ್ರೀ ಮಲ್ಲಿಕಾರ್ಜುನ ಹೊಸಪಾಳ್ಯ ಹಾಗೂ 2023ನೇ ಸಾಲಿಗೆ ಆರ್. ಮಂಜುನಾಥ್ ಅವರು ಭಾಜನರಾಗಿದ್ದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಅಭಿವೃದ್ಧಿ ಪತ್ರಿಕೋದ್ಯಮಕ್ಕೆ 2017ನೇ ಸಾಲಿಗೆ ಶ್ರೀ ಚೀ.ಜ. ರಾಜೀವ್, 2018ನೇ ಸಾಲಿಗೆ ಶ್ರೀ ದೇವಯ್ಯ ಗುತ್ತೇದಾರ್, 2019ನೇ ಸಾಲಿಗೆ ಶ್ರೀ ಗಿರೀಶ್ ಲಿಂಗಣ್ಣ, 2020ನೇ ಸಾಲಿಗೆ ಶ್ರೀ ಯೋಗೀಶ್ ಎಂ.ಎನ್., 2021ನೇ ಸಾಲಿಗೆ ಶ್ರೀ ನೌಶಾದ್ ಬಿಜಾಪುರ, 2022ನೇ ಸಾಲಿಗೆ ಶ್ರೀ ಸತೀಶ್ ಜಿ.ಟಿ ಮತ್ತು 2023ನೇ ಸಾಲಿಗೆ ಶ್ರೀ ಗಿರೀಶ್ ಬಾಬು ಅವರು ಭಾಜನರಾಗಿದ್ದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

2024 ನೇ ಕ್ಯಾಲೆಂಡರ್ ವರ್ಷದ ಶ್ರೀ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಯನ್ನು ಹಿರಿಯ ಪತ್ರಕರ್ತರಾದ ಡಿ.ಉಮಾಪತಿ ಅವರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವರಾದ ಬಿ.ಎಸ್.ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮದ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಸಲೀಂ ಅಹಮದ್, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕಾನೂನು ಆಯೋಗದ ಅಧ್ಯಕ್ಷರು ಮತ್ತು 2024 ನೇ ಕ್ಯಾಲೆಂಡರ್ ವರ್ಷದ ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಅಶೋಕ್ ಬಿ ಹಿಂಚಿಗೇರಿ, ವಿಧಾನ ಪರಿಷತ್ ಸದಸ್ಯರು ಹಾಗೂ ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರೂ ಆದ ಕೆ.ಶಿವಕುಮಾರ್, ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಂ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸಾಧು ಕೋಕಿಲ, ಶ್ರೀ ಕಂಠೀರವ ಸ್ಟುಡಿಯೋಸ್ ಅಧ್ಯಕ್ಷರಾದ ಮೆಹಬೂಬ್ ಪಾಷಾ ಸೇರಿದಂತೆ ಹಿರಿಯ ಪತ್ರಕರ್ತರು, ಪ್ರಶಸ್ತಿ ಪುರಸ್ಕೃತರ ಕುಟುಂಬದವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಮಾಧ್ಯಮದವರು ಉಪಸ್ಥಿತರಿದ್ದರು.

Shivamogga Municipal Corporation ಜಿಲ್ಲೆಯ ಜನತೆಯ ಸಡಗರದ ದಸರಾ ಉತ್ಸವಕ್ಕೆ ಎಲ್ಲರೂ ಆಗಮಿಸಿ,ಪಾಲ್ಗೊಳ್ಳಿ- ಎಸ್.ಎನ್.ಚನ್ನಬಸಪ್ಪ

0

Shivamogga Municipal Corporation ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 02ರವರೆಗೆ ಅದ್ದೂರಿಯಾಗಿ ನಡೆಯಲಿರುವ ನಮ್ಮೂರ ನಾಡಹಬ್ಬ ”ಶಿವಮೊಗ್ಗ ದಸರಾ – 2025”ಕ್ಕೆ ಸಂಬಂಧಿಸಿದಂತೆ ಇಂದು ಮಹಾನಗರ ಪಾಲಿಕೆಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಾಯಿತು.

ಈ ಬಾರಿ ಒಟ್ಟು 11 ದಿನಗಳ ಕಾಲ ನಡೆಯಲಿರುವ ಈ ದಸರಾ ಮಹೋತ್ಸವವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಂಶಗಳನ್ನು ಒಳಗೊಂಡ ಹಬ್ಬವಾಗಿದ್ದು, ನಾಗರೀಕರ ಉತ್ಸಾಹಪೂರ್ಣ ಭಾಗವಹಿಸುವಿಕೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಮಹಾನಗರ ಪಾಲಿಕೆಯು ಉತ್ಸವದ ಯಶಸ್ಸಿಗಾಗಿ ಅಗತ್ಯ ಕ್ರಮಗಳನ್ನೂ ಕೈಗೆತ್ತಿಕೊಂಡಿದೆ.

ವಿಶೇಷತೆಗಳು:

  • ಸೆಪ್ಟೆಂಬರ್ 22, 2025: ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯ ಪ್ರತಿಷ್ಠಾಪನೆಯ ಮೂಲಕ ದಸರಾ ಮಹೋತ್ಸವಕ್ಕೆ ವೈಭವಯುತವಾಗಿ ಚಾಲನೆ ನೀಡಲಾಗುವುದು.
  • ⁠ಈ ವರ್ಷದ ಶಿವಮೊಗ್ಗ ದಸರಾ ಕಾರ್ಯಕ್ರಮಗಳಿಗೆ ಪ್ರಸಿದ್ಧ ಚಲನಚಿತ್ರ ನಟ-ನಟಿಯರು ಹಾಗೂ ಧಾರ್ಮಿಕ,ಸಾಮಾಜಿಕ,ರಾಜಕೀಯ ಮತ್ತು ವಿವಿಧಕ್ಷೇತ್ರಗಳಲ್ಲಿನ ಸಾಧಕರು ಹಾಗೂ ಗಣ್ಯರು ಭಾಗವಹಿಸುವರು.
  • ಪ್ರತಿದಿನ ನಗರದ ವಿವಿಧ ವೇದಿಕೆಗಳಲ್ಲಿ ನಗರ, ಜಿಲ್ಲೆಯ ಹಾಗೂ ರಾಜ್ಯದ ಖ್ಯಾತ ಕಲಾವಿದರಿಂದ ಕಲೆ,ಸಾಹಿತ್ಯ,ಸಂಗೀತ, ನೃತ್ಯ, ನಾಟಕ ಮತ್ತು ಜನಪದ ಕಲೆಗಳ ಮನಮೋಹಕ ಪ್ರದರ್ಶನ.
  • ಅಕ್ಟೋಬರ್ 2, 2025: ಬೆಳ್ಳಿ ಮಂಟಪದಲ್ಲಿ “ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿಯ ವಿಗ್ರಹದ ಅಂಬಾರಿ ಮೆರವಣಿಗೆಯೊಂದಿಗೆ” ಅಲ್ಲಮ ಪ್ರಭು ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಲಿದೆ.

Shivamogga Municipal Corporation ಈ ಬಾರಿಯ “ಶಿವಮೊಗ್ಗ ದಸರಾ-2025” ರಲ್ಲಿ 15 ವಿವಿಧ ರೀತಿಯ ದಸರಾಗಳನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ! •ಕಲಾ ದಸರಾ •ಚಲನಚಿತ್ರ ದಸರಾ
•ಪರಿಸರ ದಸರಾ •ಜ್ಞಾನ ದಸರಾ •ಪೌರಕಾರ್ಮಿಕರ ದಸರಾ •ಪತ್ರಿಕಾ ದಸರಾ •ಮಹಿಳಾ ದಸರಾ •ಆಹಾರ ದಸರಾ •ರೈತ ದಸರಾ •ಮಕ್ಕಳ ದಸರಾ •ಗಮಕ ದಸರಾ •ರಂಗ ದಸರಾ •ಯೋಗ ದಸರಾ •ಯುವ ದಸರಾ •ಸಾಂಸ್ಕೃತಿಕ ದಸರಾ, ಹೀಗೆ ವಿಜೃಂಭಣೆಯಾಗಿ ನಗರದ ವಿವಿಧ ಭಾಗಗಳಲ್ಲಿ ದಸರಾ ಕಾರ್ಯಕ್ರಮಗಳನ್ನು ನಡೆಸಲುದ್ದೇಶಿಸಿದ್ದು, ಇದು ಕೇವಲ ನಗರದ ನಾಗರೀಕರಿಗೆ ಮಾತ್ರವಲ್ಲದೆ, ಸಂಪೂರ್ಣ ಜಿಲ್ಲೆಯ ಜನತೆಗೆ ಸಡಗರದ ಸಂಭ್ರಮವನ್ನು ನೀಡುವಂತಹ ನಾಡಹಬ್ಬವಾಗಲಿದೆ. ಎಲ್ಲರೂ ಆಗಮಿಸಿ ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳಬೇಕೆಂದು ಪತ್ರಿಕಾಗೋಷ್ಠಿಯ ಮೂಲಕ ತಿಳಿಸಲಾಯಿತು.

University of Agricultural and Horticultural Sciences ಸೆ.23. ಶಿವಪ್ಪನಾಯಕ ಕೃಷಿ ವಿವಿಯಲ್ಲಿ 13 ನೇ ಸಂಸ್ಥಾಪನಾ ದಿನಾಚರಣೆ

0

University of Agricultural and Horticultural Sciences ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 13 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಸೆ.23 ಬೆಳಿಗ್ಗೆ 10.30ಕ್ಕೆ ಇರುವಕ್ಕಿಯ ಮುಖ್ಯ ಆವಣರದಲ್ಲಿ ಏರ್ಪಡಿಸಲಾಗಿದೆ.

ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸುವರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ ಜಗದೀಶ ಅಧ್ಯಕ್ಷತೆ ವಹಿಸಲಿದ್ದು, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಾಧನೆಗೈದ ಸಂಶೋಧಕರಿಗೆ ಹಾಗೂ ನೌಕರರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವರು.

ಕಾರ್ಯಕ್ರಮದಲ್ಲಿ ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ, ವಿಶ್ವವಿದ್ಯಾಲಯ ವ್ಯವಸ್ಥಾಪನ ಮಂಡಳಿಯ ಸದಸ್ಯರುಗಳು, ವಿಶ್ವವಿದ್ಯಾಲಯದ ಸಂಶೋಧಕರು ಹಾಗೂ ಅಧಿಕಾರಿ ವರ್ಗದವರು ಪಾಲ್ಗೊಳ್ಳುವರು.

Dr. H. B. Manjunatha ಅಲೌಕಿಕ ಸತ್ಯಗಳನ್ನ ಅರಿಯಲು ಆಧ್ಯಾತ್ಮದಿಂದ ಮಾತ್ರ ಸಾಧ್ಯ- ಡಾ.ಹೆಚ್.ಬಿ.ಮಂಜುನಾಥ್

0

Dr. H. B. Manjunatha ಜೀವ ಜಗತ್ತಿನ ಹಾಗೂ ಬ್ರಹ್ಮಾಂಡದ ಅದೆಷ್ಟೋ ರಹಸ್ಯ ಸತ್ಯ ಗಳನ್ನು ವಿಜ್ಞಾನ ಎಳೆ ಎಳೆಯಾಗಿ ಬಿಡಿಸಿ ತೋರಿಸಿದರೂ ಅಲೌಕಿಕವಾದ ಅನೇಕ ಸತ್ಯಗಳನ್ನು ಅರಿಯಲು ಅಧ್ಯಾತ್ಮದಿಂದ ಮಾತ್ರ ಸಾಧ್ಯ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.

ದಾವಣಗೆರೆ ನಗರ ಸಮೀಪದ ಹೊಸಕೊಂದುವಾಡದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಏರ್ಪಾಡಾಗಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಉಪನ್ಯಾಸ ನೀಡುತ್ತಾ ಭಾರತದ ಸನಾತನ ಆಧ್ಯಾತ್ಮಿಕ ಧಾರ್ಮಿಕ ಪರಂಪರೆಯ ಸಾಮೂಹಿಕ ಆಚರಣೆಗಳು ‘ನಾನು’ ಎನ್ನುವ ಅಹಂ ಭಾವವಿಲ್ಲದೆ ‘ನಾವು’ ಎನ್ನುವ ಹೃದಯ ವೈಶಾಲ್ಯವನ್ನು ಎತ್ತಿ ಹಿಡಿಯುವುದಾಗಿವೆ.

ವಿಶ್ವದ ಎಲ್ಲ ಮತಗಳಿಗೂ ಬದುಕಿನ ಸಮಾನ ಅವಕಾಶ ಕೊಟ್ಟಿರುವ ಭಾರತದ ಔದಾರ್ಯತೆಯ ನಮ್ಮ ಸನಾತನ ಮೌಲ್ಯಗಳು ವಿಶ್ವದಲ್ಲಿ ಶ್ರೇಷ್ಠವಾಗಿದೆ ಎಂದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಹೆಬ್ಬಾಳಿನ ವಿರಕ್ತಮಠದ ಶ್ರೀ ಮಹಾಂತರುದ್ರೇಶ್ವರ ಮಹಾ ಸ್ವಾಮಿಗಳು ಸತ್ಯನಿಷ್ಠತೆಗೆ ಪ್ರೇರಣೆ ನೀಡುವುದೇ ಶ್ರೀ ಸತ್ಯನಾರಾಯಣ ಪೂಜೆ, ಹೃದಯ ಶ್ರೀಮಂತಿಕೆಯು ಆರ್ಥಿಕ ಶ್ರೀಮಂತಿಕೆಗಿಂತ ಶ್ರೇಷ್ಠ, ಮಾನವ ಕುಲ ಕೋಟಿಗೆ ಒಳಿತು ಮಾಡುವ ಸನಾತನ ಧರ್ಮ ಉಳಿಯಬೇಕು. ಹಿಂದೂ ಧರ್ಮವು ಭಾರತ ದೇಶದ ಮಹಾನ್ ವೃಕ್ಷ, ಅದರ ರೆಂಬೆಕೊಂಬೆ ಕತ್ತರಿಸುವ ಹುನ್ನಾರಕ್ಕೆ ಯಾರೂ ಅವಕಾಶ ಕೊಡಬಾರದು, ಧರ್ಮರಕ್ಷಣೆ ಅವಶ್ಯ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಟ್ರಸ್ಟಿನ ಜಿಲ್ಲಾ ನಿರ್ದೇಶಕ ಎಂ ಲಕ್ಷ್ಮಣ್ ದುಶ್ಚಟ ದುರಭ್ಯಾಸಗಳೇ ಕುಟುಂಬಗಳ ಅವನತಿಗೆ ಕಾರಣ, ಹಣ ಇಲ್ಲದವ ಬಡವನಲ್ಲ, ಗುರಿ ಇಲ್ಲದವ ಬಡವನಾಗುತ್ತಾನೆ, ಒಳ್ಳೆಯ ಗುರಿಗಳು ಈಡೇರಲು ಪೂಜೆ ಪುನಸ್ಕಾರಗಳು ಅವಶ್ಯ ಎಂದರು.

ಧರ್ಮಸ್ಥಳ ಟ್ರಸ್ಟ್ ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಮಂಜೂರಾತಿ ಪತ್ರ ವಿಸ್ತರಿಸಲಾಯಿತು. ಪೂಜಾ ಸಮಿತಿ ಅಧ್ಯಕ್ಷ ಶಿವಕುಮಾರ ಅರುಂಡಿ ಅಧ್ಯಕ್ಷೀಯ ನುಡಿಗಳನಾಡಿದರು.

Dr. H. B. Manjunatha ಶಿವಲೀಲಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಅನ್ನಪೂರ್ಣ ಹಾಡಿದರೆ ಸ್ವಾಗತವನ್ನು ನವೀನ್ ಕೋರಿದರು. ದಾವಣಗೆರೆ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಅಣಬೇರು ಮಂಜಣ್ಣ, ಸದಸ್ಯರುಗಳಾದ ಹಾಲೇಶ್, ಜಯಪ್ರಕಾಶ್ ಮಾಗಿ, ಮುಖ್ಯೋಪಾಧ್ಯಾಯ ಸಿದ್ದಪ್ಪ, ಗ್ರಾಮದ ಮಹೇಶ್ವರಪ್ಪ, ಹನುಮಂತಪ್ಪ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಸಹಾಯ ಸಂಘದ ರೇಖಾ ಮಮತಾ ರೇಣುಕಾ ರಾಧಾ ಅಮೃತ ಪಾರ್ವತಿ ಮುಂತಾದವರು ಭಾಗವಹಿಸಿದ್ದು ತಿಮ್ಮಪ್ಪ ವಂದನೆ ಸಲ್ಲಿಸಿದರು.

Chamber Of Commerce Shivamogga ಸಣ್ಣ & ಮಧ್ಯಮ ಕೈಗಾರಿಕಾ ಕ್ಷೇತ್ರವು ಕೃತಕ ಬುದ್ಧಿಮತ್ತೆಯನ್ನು ಬದಲಿಸುವಂತಾಗಬೇಕು- ವಿ.ಅಭಿಷೇಕ್

0

Chamber Of Commerce Shivamogga ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರವು ದೊಡ್ಡ ಮಟ್ಟದಲ್ಲಿ ಬೆಳೆಯುವ ಮೂಲಕ ಇಂದಿನ ಎಐ ತಂತ್ರಜ್ಞಾನದ ಜಗತ್ತನ್ನು ಬದಲಾಯಿಸುವಂತಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ ತಿಳಿಸಿದರು.
ಅವರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕೆಸಿಟಿಯು, ಟೆಕ್ಸಾಕ್ ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಆರ್‌ಎಎಂಪಿ ಯೋಜನೆಯಡಿ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಶಾಂತಲಾ ಸ್ಪೆರೋಕ್ಯಾಸ್ಟ್ ಲರ್ನಿಂಗ್ ಸೆಂಟರ್‌ನಲ್ಲಿ ಆಯೋಜಿಸಿದ್ದ TReDS ಯೋಜನೆ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯು ಈ ದೇಶದ ಬೆನ್ನೆಲುಬಾಗಿದ್ದು, ಆಹಾರ ಉತ್ಪಾದನೆಗಳಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಿದೆ. ಆದರೆ ಈಗ ಕೃಷಿಯೊಂದಿಗೆ ಕೈಗಾರಿಕಾ ಉತ್ಪಾದನೆಯು ವಿಲೀನವಾಗಿ ದೇಶಕ್ಕೆ ತಾಂತ್ರಿಕವಾಗಿ ಸಹಕಾರಿಯಾಗುತ್ತಾ ಮುಂದೆ ಸಾಗುತ್ತಿದೆ. ಅದರಂತೆ ಎಂಎಸ್‌ಎಂಇ ಸಂಸ್ಥೆಯು ಶೇ.30 ರಷ್ಟು ಜಿಡಿಪಿಯನ್ನು ದೇಶಕ್ಕೆ ನೀಡುತ್ತಿದ್ದು, ದೇಶದಲ್ಲಿ ಕೈಗಾರಿಕಾ ಉದ್ಯಮಗಳು ಶೇ.40 ರಷ್ಟು ಉತ್ಪಾಧನೆಯನ್ನು ರಫ್ತು ಮಾಡಲಾಗುತ್ತಿದೆ. ಇದರಿಂದ ಕೃಷಿಯಂತೆ ಕೈಗಾರಿಕೆ ಕ್ಷೇತ್ರದಲ್ಲಿ ಉದ್ಯೋಗಿಗಳು ಹೆಚ್ಚಾಗುತ್ತಿದ್ದಾರೆ ಎಂದರು.
Chamber Of Commerce Shivamogga ಹಣಕಾಸು ಬಿಕ್ಕಟ್ಟಿನಿಂದ ಎಂಎಸ್‌ಎಂಇ ಉತ್ಪಾದನೆ ಘಟಕಕ್ಕೆ ದೊಡ್ಡ ಮಟ್ಟದ ಬಂಡವಾಳ ಹೂಡಿಕೆಗೆ ಸಮಸ್ಯೆಯಾಗುತ್ತಿದೆ. ಆದರಿಂದ ಟೆಕ್ಸಾಕ್ ಕಡಿಮೆ ಬಂಡವಾಳ ಹೂಡಿಕೆಗೆ ಬೇಕಾದ ಸಹಕಾರವನ್ನು ನೀಡಲು ಮುಂದಾಗಿದ್ದು, ಬ್ಯಾಂಕಿನಿಂದಲೂ ಕೂಡ ಸಾಲ ದೊರೆಯುತ್ತದೆ. ಇದನ್ನು ಸದುಪಯೋಗ ಪಡಿಸಿಕೊಂಡು ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕಾ ಉದ್ಯಮಗಳು ದೊಡ್ಡದಾಗಿ ಬೆಳೆಯಬೇಕು. ಇದಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ ಎಂದರು.
ಮಾಚೇನಹಳ್ಳಿ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ ಮಾತನಾಡಿ, ಉದ್ಯಮಗಳು ಯಶಸ್ವಿಯಾಗಲು ಹಣ ಮುಖ್ಯವಾಗಿದೆ. ಮಾರುವವರ ಮತ್ತು ಕೊಳ್ಳುವವರ ಕಾರ್ಯವನ್ನು ಸರಿಯಾಗಿ ಅರಿತುಕೊಂಡು ಹಣವನ್ನು ಹೂಡಿಕೆ ಮಾಡಬೇಕು. ಆಗ ಮಾತ್ರ ಹೂಡಿಕೆ ಮಾಡಿದ ಹಣ ಸರಿಯಾದ ಕ್ರಮದಲ್ಲಿ ಲಾಭದಾಯಕವಾಗಿ ಸಿಗುತ್ತದೆ ಎಂದರು.
ಸರ್ಕಾರವು ಎಂಎಸ್‌ಎಂಇಗೆ ಸಾಕಷ್ಟು ಯೋಜನೆಯನ್ನು ನೀಡಿದೆ. ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಯಾವುದೇ ಸಂಕುಚಿತ ಮನೋಭಾವನೆಗೆ ಒಳಗಾಗದೆ ವಿಶಾಲ ಮನಸ್ಸಿನಿಂದ ಅವಕಾಶಗಳನ್ನು ಬಳಸಿಕೊಂಡು ಕೆಲಸ ಮಾಡಬೇಕು ಎಂದರು.
ಟೆಕ್ಸಾಕ್ ಸಿಇಒ ಹಾಗೂ ಮುಖ್ಯ ಸಲಹೆಗಾರ ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡಿ, 2019-20 ರಲ್ಲಿ ಕೋವಿಡ್‌ನಿಂದಾಗಿ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಾಕಷ್ಟು ಸಮಸ್ಯೆ ಅನುಭವಿಸಿದೆ. ಬಂಡಾವಳ ಹೂಡಿಕೆ ಕಡಿಮೆಯಾಗಿ ಉತ್ಪಾದನ ಘಟಕಗಳು ನಿಂತು ಹೋಗುವ ಸ್ಥಿತಿ ಬಂದಿದ್ದವು. ಇದನ್ನು ಮನಗಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶ್ವ ಬ್ಯಾಂಕ್ ಸಹಾಯದಿಂದ ಆರ್‌ಎಎಂಪಿ ಅಡಿಯಲ್ಲಿ ಉತ್ಪಾದನಾ ಘಟಕಕ್ಕೆ ಹೂಡಿಕೆ ಮಾಡಲು ಮುಂದಾದವು. ಕೈಗಾರಿಕಾ ಘಟಕಗಳು ಮಾರುವವರು ಮತ್ತು ಕೊಳ್ಳುವವರ ಒಗ್ಗೂಡಿಸಿಕೊಂಡು ಹಣವನ್ನು ಹೂಡಿಕೆ ಮಾಡಬೇಕು. ಅದರಿಂದ ಕೈಗಾರಿಕಾ ಘಟಕವನ್ನು ನಿರಂತವಾಗಿ ನಡೆಸಲು ಸಾಧ್ಯವಾಗುತ್ತದೆ ಎಂದರು.
ಕೈಗಾರಿಕೆ ಘಟಕಗಳು ಉತ್ಪಾದನೆಯ ಜೊತೆಗೆ ಪರಿಸರದ ಬಗ್ಗೆ ಅರಿವು ಹೊಂದಿದ್ದು, ಮುಂದಿನ ದಿನಗಳಲ್ಲಿ ಸಾಮಾಜಿಕ ವ್ಯವಹಾರದ ಬಗ್ಗೆ ಅರಿವು ಮೂಡಿಸುವಲ್ಲಿ ಕಾರ್ಯ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರ್‌ಎಎಂಪಿ ಕಾರ್ಯಕ್ರಮದಲ್ಲಿ ಹೊಸ ತಾಂತ್ರಿಕತೆ ಬಳಸುವ ಬಗ್ಗೆ ತಿಳಿಸಲಾಗುತ್ತಿದ್ದು, ಇದಕ್ಕೆ ಸಂಬಂಧಪಟ್ಟಂತೆ ಕಾಲೇಜು ವಿದ್ಯಾರ್ಥಿಗಳಿಗಾಗಿ 8 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್, ಕಾಸಿಯಾ ಪ್ರತಿನಿಧಿ ಸದಸ್ಯ ಎಸ್.ವಿಶ್ವೇಶ್ವರಯ್ಯ, ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪಿ.ಹನುಮಂತಪ್ಪ, ಕೆಎಸ್‌ಎಫ್‌ಸಿ ಶಾಖಾ ವ್ಯವಸ್ಥಾಪಕ ದತ್ತಾತ್ರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಹೆಚ್.ಸುರೇಶ್, ಗ್ರಾಮೀಣ ಕೈಗಾರಿಕಾ ಉಪ ನಿರ್ದೇಶಕ ಎಸ್.ಪಿ ರವೀಂದ್ರ ಹಾಜರಿದ್ದರು.

Department of Youth Empowerment and Sports ರಾಜ್ಯಮಟ್ಟದ ದಸರಾ ವುಷು ಸ್ಪರ್ಧೆಗೆ ಶಿವಮೊಗ್ಗ ನ್ಯಾಷನಲ್ ಶಾಲಾ ವಿದ್ಯಾರ್ಥಿಗಳ ಆಯ್ಕೆ

0

Department of Youth Empowerment and Sports ಚಿತ್ರದುರ್ಗ ಜಿಲ್ಲಾಡಳಿತ ಜಿ.ಪಂ. ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಚಿತ್ರದುರ್ಗದ ಒನಕೆ ಓಬವ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ವುಷು ಆಯ್ಕೆಯಲ್ಲಿ ಭಾಗವಹಿಸಿದ್ದ ಶಿವಮೊಗ್ಗ ನಗರದ ರವೀಂದ್ರ ನಗರದ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯ ಕ್ರೀಡಾಪಟುಗಳು ಬಂಗಾರದ ಪದಕವನ್ನು ಗೆಲ್ಲುವ ಮೂಲಕ ರಾಜ್ಯಮಟ್ಟದ ದಸರಾ ಪಂದ್ಯಾವಳಿ ಗೆ ಆಯ್ಕೆಯಾಗಿದ್ದಾರೆ.
ಚಾರ್ವಿ ಟಿ – 52 ಕೆಜಿ ವಿಭಾಗ, ದಾಕ್ಷಾಯಿಣಿ -೪೨ ಕೆಜಿ, ಭುವನ -೩೯ ಕೆಜಿ, ತೇಜಸ್ -೪೫ ಕೆಜಿ, ಚಂದನ -೪೬ ಕೆಜಿ ಹಾಗೂ ಅಮೃತ -೪೮ ಕೆಜಿ ವಿಭಾಗಗಳಲ್ಲಿ ಆಯ್ಕೆ ಯಾಗಿ ಮೈಸೂರಿನಲ್ಲಿ ನಡೆಯ ಲಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಪಡೆದಿದ್ದಾರೆ.
Department of Youth Empowerment and Sports ಆಯ್ಕೆಯಾದ ಕ್ರೀಡಾಪಟುಗಳಿಗೆ ಶಾಲೆಯ ಅಧ್ಯಕ್ಷ ಅನೂಪ್ ಎನ್. ಪಟೇಲ್, ಉಪಾಧ್ಯಕ್ಷೆ ರಾಗಿನಿ ಸಿಂಗ್ ಮತ್ತು ಶಾಲಾ ಮುಖ್ಯೋಪಾಧ್ಯಾ ಯಿನಿ ರೂಪಶ್ರೀ, ಪೂರ್ಣಿಮಾ, ತರಬೇತುದಾರರಾದ ಮುಕೆಬ್ ಅಹಮದ್, ದರ್ವೇಶ್ ಹಾಗೂ ಶಿಕ್ಷಕ ವೃಂದದವರು, ಸಿಬ್ಬಂಧಿಗಳು ಅಭಿನಂದಿಸಿದ್ದಾರೆ.

Rotary Club Shimoga ನಿಯಮಿತವಾಗಿ ಸ್ರ್ತೀರೋಗ ತಪಾಸಣೆ & ಸ್ಕ್ರೀನಿಂಗ್ ಮೂಲಕ ಮಹಿಳೆಯರು ಆರೋಗ್ಯ ರಕ್ಷಿಸಿಕೊಳ್ಳಿ- ಡಾ.ಸೀಮಾ ಧನಂಜಯ್

0

Rotary Club Shimoga ಉತ್ತಮ ಜೀವನಶೈಲಿಯು ಆರೋಗ್ಯಕರ ಜೀವನದ ಅಡಿಪಾಯವಾಗಿದ್ದು, ಆರೋಗ್ಯ ಅಮೂಲ್ಯ ಸಂಪತ್ತು ಎಂದು ವೈದ್ಯೆ ಡಾ. ಸೀಮಾ ಧನಂಜಯ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ಮಹಿಳೆಯರಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಒಳ್ಳೆಯ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ದೈನಂದಿನ ವ್ಯಾಯಾಮ ಮತ್ತು ಅಗತ್ಯ ಇರುವಷ್ಟು ನಿದ್ರೆಯು ಆರೋಗ್ಯಕರ ಜೀವನದ ಅಡಿಪಾಯವಾಗಿದೆ ಎಂದು ತಿಳಿಸಿದರು.

ಮಹಿಳೆಯರ ಪಾತ್ರಗಳು ಮತ್ತು ಜವಾಬ್ದಾರಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಅತ್ಯುನ್ನತವಾಗಿದೆ. ನಿಯಮಿತ ಸ್ತ್ರೀರೋಗ ತಪಾಸಣೆ ಮತ್ತು ಸ್ಕ್ರೀನಿಂಗ್‌ಗಳು ಮಹಿಳೆಯರ ಆರೋಗ್ಯಕ್ಕೆ ಮೂಲವಾಗಿದೆ. ಆರಂಭಿಕದಲ್ಲೇ ಆರೋಗ್ಯ ಸಮಸ್ಯೆಯನ್ನು ಪತ್ತೆಹಚ್ಚಬೇಕು. ಆರೋಗ್ಯ ಸರಿ ಇದ್ದರೆ ಎಲ್ಲವನ್ನು ಸಾಧಿಸಬಹುದು ಎಂದು ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ ಬಸವರಾಜ್ ಬಿ ಮಾತನಾಡಿ, ರೋಟರಿ ಸಂಸ್ಥೆಯು ಅನೇಕ ಆರೋಗ್ಯ ಜಾಗೃತಿ ಶಿಬಿರಗಳನ್ನು ಹಮ್ಮಿಕೊಂಡಿದ್ದು, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಶ್ರಮಿಸುತ್ತಿದೆ. ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.

Rotary Club Shimoga ಸಂತೋಷ ಬಿ ಎ, ತರಬೇತುದಾರರಾದ ಲತಾ ಮತ್ತು ರಂಜಿತಾ, ರಾಧಾ, ವಲಯ ಸೇನಾನಿ ಕಿರಣ್ ಕುಮಾರ್ ಜಿ, ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಮೋಹನ್, ಸಂತೋಷ್, ಧರ್ಮೇಂದ್ರ ಸಿಂಗ್, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಜಯಶೀಲಶೆಟ್ಟಿ ಹಾಗೂ ಆನ್ಸ್ ಕ್ಲಬ್ ಅಧ್ಯಕ್ಷೆ ರಾಜಶ್ರೀ ಬಸವರಾಜ್, ಮಥುರಾ ಧನಂಜಯ್ ಹಾಗೂ ತರಬೇತಿ ಪಡೆಯುತ್ತಿರುವ ಎಲ್ಲ ಮಹಿಳೆಯರು ಭಾಗವಹಿಸಿದ್ದರು.

Honda Showroom ಕಳೆದ ಹತ್ತು ವರ್ಷಗಳಿಂದ ಹೋಂಡಾ ಶೋ ರೂಂಗ್ರಾಹಕರಿಗೆ ನಿರಂತರ ಸೇವೆಸಲ್ಲಿಸುತ್ತಿದೆ – ನಟರಾಜ್ ಹೆಚ್ .ನಾಗರಹಳ್ಳಿ

0

Honda Showroom ಶಿವಮೊಗ್ಗ ನಗರದ ಎನ್‌ಟಿ ರಸ್ತೆಯಲ್ಲಿರುವ ನಾಗರಹಳ್ಳಿ ಹೋಂಡಾ ಶೋರೂಂನಲ್ಲಿ ಹೋಂಡಾ ಶೈನ್ 100 ಡಿಎಕ್ಸ್ – ಹಾರ್‌ನೆಟ್ 125 ಸಿಸಿ ಬೈಕ್‌ಗಳು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರಹಳ್ಳಿ ಹೋಂಡಾ ಶೋರೂಂನ ವ್ಯವಸ್ಥಾಪಕ ನಿರ್ದೇಶಕ ನಟರಾಜ್ ಹೆಚ್ ನಾಗರಹಳ್ಳಿ, ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಶಿವಮೊಗ್ಗ ನಗರದಲ್ಲಿ ನಾವುಗಳು ಗ್ರಾಹಕರಿಗಾಗಿ ಸೇವೆ ಸಲ್ಲಿಸುತ್ತಾ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
Honda Showroom ಈ ಭಾಗದ ಜನತೆಗೆ ಉತ್ತಮ ಸೇವೆ ಕೊಡುವ ನಿಟ್ಟಿನಲ್ಲಿ ನಮ್ಮ ಶೋರೂಂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಗ್ರಾಹಕರ ತೃಪ್ತಿಯೇ ನಮ್ಮ ತೃಪ್ತಿಯಾಗಿದೆ. ನಮ್ಮ ಶೋರೂಂ ವತಿಯಿಂದ ವಿಶೇಷ ಕೊಡುಗೆಗಳನ್ನು ನೀಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಝೋನಲ್ ಮ್ಯಾನೇಜರ್ ಶೇಷಾದ್ರಿ ನಾರಾಯಣನ್, ರಾಹುಲ್, ಶಿವಕುಮಾರ್ ಶೇಟಕರ್, ಸಂಚಾರಿ ಠಾಣೆಯ ಬಿ.ಹೆಚ್. ಭಾರತಿ, ಸೇಲ್ಸ್ ಏರಿಯಾ ಇನ್‌ಚಾರ್ಜ್ ವೀರೇಂದ್ರ ಪಾಟೀಲ್, ಶೋರೂಮ್‌ನ ಜನರಲ್ ಮ್ಯಾನೇಜರ್ ಪ್ರೀತಿ ಭಟ್ಟಾಚಾರ್ಯ, ಸರ್ವಿಸ್ ಏರಿಯಾ ಇನ್‌ಚಾರ್ಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೊಸಮನೆ & ಶರಾವತಿ ಬಡಾವಣೆಗಳ ಮುಖ್ಯರಸ್ತೆಗಳಿಗೆ “ಹಂಪ್ಸ್” ನಿರ್ಮಿಸಲು ಮನವಿ

0

ಹೊಸಮನೆ ಹಾಗೂ ಶರಾವತಿನಗರ ಬಡಾವಣೆಯ ರಸ್ತೆಗಳಿಗೆ ಹಂಪ್ಸ್ ಗಳನ್ನು ನಿರ್ಮಿಸುವುದು ಅತ್ಯವಶ್ಯಕವಾಗಿದ್ದು, ಸುಮಾರು ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಈಗಾಗಲೇ ಕಳೆದ ಕೆಲವು ತಿಂಗಳ ಹಿಂದೆ ಹೊಸಮನೆ ಮತ್ತು ಶರಾವತಿ ನಗರಕ್ಕೆ ಹಾದು ಹೋಗುವ ಚಾನೆಲ್ ಪಕ್ಕದ ರಸ್ತೆ ನಾಗಪ್ಪ ದೇವಸ್ಥಾನದ ಹತ್ತಿರ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿ ಓರ್ವ ವಿದ್ಯಾರ್ಥಿಯು ಮರಣ ಹೊಂದಿದ್ದು, ಮತ್ತೊಬ್ಬ ಯುವಕನು ಚಿಂತಾಜನಕ ಸ್ಥಿತಿಯಲ್ಲಿ ಇಂದಿಗೂ ಇದ್ದು ಹೊಸಮನೆ ಹಾಗೂ ಶರಾವತಿ ನಗರ ಬಡಾವಣೆಯ ರಸ್ತೆಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು. ಈ ರಸ್ತೆಗಳಲ್ಲಿ ಕೆಲ ವಾಹನ ಸವಾರರು ರಭಸವಾಗಿ ವಾಹನಗಳನ್ನು ಚಲಿಸುತ್ತಿದ್ದು, ಅಪಘಾತಗಳು ಸಂಭವಿಸಿ, ಶಾಲಾ ಮಕ್ಕಳು ಹಿರಿಯ ನಾಗರಿಕರು ರಸ್ತೆಯಲ್ಲಿ ಓಡಾಡುವುದಕ್ಕೆ ಭಯಪಡುತ್ತಿದ್ದು, ಇದರಿಂದ ಈ ಭಾಗದ ನಾಗರಿಕರು ದಿನನಿತ್ಯ ತೊಂದರೆಯನ್ನು ಅನುಭವಿಸುತ್ತಿದ್ದುಹಲವು ಬಾರಿ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದು ಮನವಿ ಮಾಡಿದರು.

ಸ್ಮಾರ್ಟ್ ಸಿಟಿ ಅಧಿಕಾರಿಗಳು ನಮ್ಮ ಯೋಜನೆಯಲ್ಲಿ ರಸ್ತೆಗಳಿಗೆ ಹಂಪ್ಸ್ ಗಳನ್ನು ಹಾಕಿಸಲು ನಿರ್ದೇಶನ ಇರುವುದಿಲ್ಲ ಎಂದು ಸಬೂಬು ಹೇಳಿದ್ದು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣವಾದ ಈ ರಸ್ತೆಗಳು ಮಹಾನಗರ ಪಾಲಿಕೆಯ ಸರ್ಪದಿಗೆ ಒಳಪಟ್ಟಿದ್ದು. ಈಗಾಗಲೇ ಮಹಾನಗರ ಪಾಲಿಕೆಯಿಂದ ನಗರದ ಕೆಲವು ಮುಖ್ಯ ರಸ್ತೆಗಳಲ್ಲಿ ವೈಜ್ಞಾನಿಕವಾಗಿ ಹಂಪ್ಸ್ ಗಳನ್ನು ನಿರ್ಮಿಸಿದ್ದು. ಅದರಂತೆ ಹೊಸಮನೆ ಮತ್ತು ಶರಾವತಿ ನಗರ ಬಡಾವಣೆಯಲ್ಲಿ ಹಾದು ಹೋಗುವ ಮುಖ್ಯರಸ್ತೆಗಳಿಗೆ ಅಂದರೆ ಹೊಸಮನೆ ಬಡಾವಣೆಯ ಮೊದಲನೇ ಮುಖ್ಯ ರಸ್ತೆಯಿಂದ – ಆರನೇ ಮುಖ್ಯರಸ್ತೆವರೆಗೆ , ಪ್ರಮುಖವಾಗಿ ಲಕ್ಷ್ಮಿ ಟಾಕೀಸ್ ಚಿತ್ರಮಂದಿರದ ಹತ್ತಿರ ಚಾನೆಲ್ ಬಲಭಾಗದಿಂದ ಶರಾವತಿ ನಗರ ಚಾನಲ್ ಬ್ರಿಡ್ಜ್ ವರೆಗೆ ಇರುವ ರಸ್ತೆಗೆ ಹಾಗೂ ಶರಾವತಿ ನಗರ ಆದಿಚುಂಚನಗಿರಿ ಶಾಲೆ ಹತ್ತಿರ , ಎ ಮತ್ತು ಬಿ ಬ್ಲಾಕ್ ನಲ್ಲಿ ಹಾದು ಹೋಗುವ ಮುಖ್ಯ ರಸ್ತೆಗಳಿಗೆ ಕೂಡಲೇ ಮಹಾನಗರ ಪಾಲಿಕೆಯಿಂದ ವೈಜ್ಞಾನಿಕವಾಗಿ ಹಂಪ್ಸ್ ಗಳನ್ನು ನಿರ್ಮಿಸಿ ಅಪಘಾತಗಳನ್ನು ತಡೆಗಟ್ಟಬೇಕೆಂದು ಪಾಲಿಕೆಯ ಆಯುಕ್ತರಿಗೆ ಮಾಜಿ ವಿರೋಧ ಪಕ್ಷದ ನಾಯಕರಾದ ರೇಖಾ ರಂಗನಾಥ್ ಅವರ ನೇತೃತ್ವದಲ್ಲಿ ಸ್ಥಳೀಯರು ಮನವಿ ಮಾಡಿದರು.

ಮನವಿ ಸಂದರ್ಭದಲ್ಲಿ ಹೊಸಮನೆ ವಾರ್ಡಿನ ಅಧ್ಯಕ್ಷ ರಾಜೇಶ್ ಮಂದಾರ, ಪಂಚ ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಬಸವರಾಜ್, ಸ್ಥಳೀಯರಾದ ಕೆ ಎಲ್ ಪವನ್, ರಾಘವೇಂದ್ರ ರಾವ್, ಶ್ರೀಕಾಂತ್, ಹರೀಶ್ ಹಾಗೂ ಇತರರು ಇದ್ದರು

Klive Special Article ನಿಮ್ಮೂರಿನ ಇತಿಹಾಸ ನಿಮಗೆಷ್ಟು ಗೊತ್ತು? ಮಾಹಿತಿ ಸರಣಿ

0

ಭಾಗ 6

ಕೆಳದಿ ಅರಸರ ಕಾಲದ ಸಾಹಿತ್ಯ..

Klive Special Article ಕೆಳದಿ, ಬಿದನೂರು, ಇಕ್ಕೇರಿ ಸಂಸ್ಥಾನದ ನಾಯಕರು ಶೃಂಗೇರಿ ಸಂಸ್ಥಾನದ ಗುರುಗಳನ್ನು ಮಾರ್ಗದರ್ಶಕರ ನ್ನಾಗಿಸಿಕೊಂಡಿದ್ದರು.
ಹಾಗೆಯೇ ಕೆಳದಿ ಅರಸರಿಗೆ ಹಲವು ಬಿರುದುಗಳು ಇದ್ದು, ಪರಯಡವಮುರಾರಿ ಕೋಟೆಕೋಲಾಹಲೇನ ಪ್ರವಿಚಲಿತವಿಶುದ್ಧಾದ್ವೈತಸಿದ್ಧಾಂತಭೂಮ್ನಾ|ಅಸಿಯುಗಲಭೃತಾ ಚ ವೈರಿಸಪ್ತಾಂಗ ಲಕ್ಷ್ಮೀ, ಹರಹರಿತ ಪಟೋದ್ಯತ್ಕೇತನಶ್ರೀಯುತೇನ||೨||ಚೌಡಪ್ಪನಾಯಕ ಸಮುನ್ಮಿಷಿತಾನ್ವವಾಯ ದುಗ್ದಾಬ್ಧಿವೃದ್ಧಿಕರಕೈರವಬಾಂಧವೇನ| ಏಕಾಂಗವೀರರಣರಂಗವಿಹಾರಧೀರ, ದೋನೇಜ ಪಶ್ಚಿಮ ಸರಸ್ವದಿಧೀಶ್ವರೇಣ||೩| | ಸಾಮಾನ್ಯವಾಗಿ ಈ ಎಲ್ಲಾ ಬಿರುದುಗಳು ಕೆಳದಿಯನ್ನು ಆಳಿದ ಎಲ್ಲಾ ಅರಸರಿಗೂ ಅನ್ವಯವಾಗುತ್ತದೆ. ‌

ಕೆಳದಿ ಅರಸರ ಕಾಲದಲ್ಲಿ ಸಂಸ್ಕೃತ ಮಾತ್ರವಲ್ಲದೆ ಕನ್ನಡ ಸಾಹಿತ್ಯದ ಉತ್ತಮ ಕೃತಿಗಳೂ ಬೆಳಕು ಕಂಡಿವೆ. ಕೆಳದಿಯನ್ನಾಳಿದ ಅರಸರಲ್ಲಿ ಮೂರು ಅರಸರು ಸ್ವಯಂ ವಿದ್ವಾಂಸರೇ ಆಗಿದ್ದರು. ಹಿರಿಯ ವೆಂಕಟಪ್ಪ ನಾಯಕರು “ಶಿವಗೀತಾವ್ಯಾಖ್ಯಾ” ಎಂಬ ಭಾಷಾಕೃತಿಯನ್ನು, “ವೀರಮಾಹೇಶ್ವರ ಸುಧಾವರ್ಧಿ” ಹಾಗೂ “ತತ್ವಾಧಿಕಾರನಿರ್ಣಯ” ಎಂಬ ಧಾರ್ಮಿಕ ಗ್ರಂಥ ವನ್ನು ರಚಿಸಿದ್ದಾನೆ. ಬಸಪ್ಪನಾಯಕನು “ಶ್ರೀ ಶಿವತತ್ವರತ್ನಾಕರ,” ಎಂಬ ವಿಶ್ವಕೋಶ ವನ್ನೂ, “ಸುಭಾಷಿತ ಸುರದ್ರುಮ” ಎಂಬ ನೀತಿಗ್ರಂಥವನ್ನು, “ಸೂಕ್ತಿ ಸುಧಾಕರ” ಎಂಬ ಕೃತಿಯನ್ನು ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಸಂಕಲಿಸಿದ್ದಾನೆ. ಜೊತೆಗೆ “ಶೈವ ಸಂಜೀವಿನಿ” ಅಥವಾ “ಪಂಚಶ್ಲೋಕೀವ್ಯಾಖ್ಯಾ” ಎಂಬ ಕೃತಿಯನ್ನು ರಚಿಸಿದ್ದಾನೆ. ಕೆಳದಿ ಅರಸರ ಕಾಲದಲ್ಲಿ ಮೂವತ್ತಕ್ಕೂ ಹೆಚ್ಚು ಸಾಹಿತ್ಯ ಕೃತಿಗಳು ರಚಿತವಾಗಿದೆ‌.

ಭಟ್ಟೋಜಿ ಧೀಕ್ಷಿತ, ರಂಗನಾಥ ಧೀಕ್ಷಿತ, ರಂಗೋಜಿ ಭಟ್ಟ, ಅಶ್ವಪಂಡಿತ, ಕೊಂಡಭಟ್ಟ, ಮಾನಪ್ಪ ಪಂಡಿತ, ನಿರ್ವಾಣಮಂತ್ರಿ, ಮರಿತೋಂಟದಾರ್ಯ, ಸಂಗಮೇಶ್ವರಯ್ಯ, ಚೊಕ್ಕನಾಥ ಮುಂತಾದ ಪಂಡಿತರು ಇದ್ದರೆಂದು ಮಾಹಿತಿಇದೆ. ಚೊಕ್ಕನಾಥನು ಸಂಸ್ಕೃತ, ಕನ್ನಡ, ತೆಲುಗು ಬಲ್ಲವನಾಗಿದ್ದನು.

ಪ್ರವರ್ಧಮಾನಕ್ಕೆ ಬಂದ ಕೆಳದಿ ಅರಸರ ಸಾಹಿತ್ಯ ಪ್ರೇಮವನ್ನು ಕಂಡು ಕೆಲವು ವಿದ್ವಾಂಸರು, ಕವಿಗಳು ಕೆಳದಿಗೆ ವಲಸೆಬಂದರು, ಅವರಲ್ಲಿ ಭಟ್ಟೋಜಿ ದೀಕ್ಷಿತರು ವಾರಣಾಸಿಯಿಂದಲೂ, ಬಿಲ್ಹಣನು ಕಾಶ್ಮೀರದಿಂದಲೂ ಬಂದಿದ್ದರೆಂಬ ಉಲ್ಲೇಖವಿದೆ. ಭಟ್ಟೋಜಿ ದೀಕ್ಷಿತರು ೧೬೦೦ರಲ್ಲಿ ಕೆಳದಿಗೆ ಬಂದು ಆಸ್ಥಾನ ವಿದ್ವಾನ್ ಆಗಿದ್ದು, ಇವನು “ತತ್ವಕೌಸ್ತುಭ ಸಿದ್ಧಾಂತ”, ” ಸಿದ್ಧಾಂತ ಕೌಮುದೀ”, “ಶಬ್ಧ ಕೌಸ್ತುಭ” ಎಂಬ ವ್ಯಾಕರಣ ಗ್ರಂಥವನ್ನು, “ಪ್ರೌಢಮನೋರಮ” ಎಂಬ ವ್ಯಾಖ್ಯಾನ ಗ್ರಂಥ ವನ್ನು, “ತಂತ್ರಾಧಿಕಾರ ನಿರ್ಣಯ” ವೆಂಬ ಆಗಮಿಕ ಗ್ರಂಥ ವನ್ನು, “ವೇದಭಾಷ್ಯಾಸಾರ”, ” ಜಾತಿ ವಿವೇಕ”, ಹಾಗೂ “ಸ್ಮೃತಿ ದರ್ಪಣ” ಎಂಬೆರಡು ಧರ್ಮಗ್ರಂಥಗಳ ನ್ನು ಗ್ರಂಥಗಳನ್ನು ರಚಿಸಿದ್ದಾನೆ.

Klive Special Article ಭಟ್ಟೋಜಿ ದೀಕ್ಷಿತರ ಸಹೋದರ ರಂಗೋಜಿ ಭಟ್ಟ, ಇವನ ಮಗ ಕೊಂಡ ಭಟ್ಟ ಇಬ್ಬರೂ ಕೆಳದಿ ಆಸ್ಥಾನ ವಿದ್ವಾಂಸರಾಗಿದ್ದು ಸಂಸ್ಕೃತ ‌ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಹೀಗೆ ಕೆಳದಿಯಲ್ಲಿ ವಿದ್ವಾಂಸರ ಸಮೂಹವೇ ಇತ್ತು. ನಮ್ಮ ಹೆಮ್ಮೆ ನಮ್ಮ ಇತಿಹಾಸ ನಮ್ಮ‌ಹೆಮ್ಮೆ ನಮ್ಮ ಕೆಳದಿ,ನಮ್ಮ ಹೆಮ್ಮೆ ನಮ್ಮ ಬಿದನೂರು ನಮ್ಮ ಹೆಮ್ಮೆ ನಮ್ಮದೇ ನಗರ

ಚಿತ್ರಕೃಪೆ:
ಆದಿತ್ಯ ಪ್ರಸಾದ್,
ರಾಯಲ್ ಕಾಫೀ ವರ್ಕ್ಸ್,
ಶಿವಮೊಗ್ಗ.

ದಿಲೀಪ್ ನಾಡಿಗ್,
6361124316