Sunday, August 9, 2026
Sunday, August 9, 2026
Home Blog Page 158

S. N. Channabasappa ಕೊಳಚೆ ಪ್ರದೇಶ ವಾಸಿಗಳಿಗೆ ಇರುವ ತಾಂತ್ರಿಕ ಅಡೆತಡೆ ನಿವಾರಿಸಿ,ಹಕ್ಕುಪತ್ರ ವಿತರಿಸಿ- ಎಸ್.ಎನ್.ಚನ್ನಬಸಪ್ಪ.

0

S. N. Channabasappa ಶಿವಮೊಗ್ಗ ನಗರದ 6 ಘೋಷಿತ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಇರುವ ತಾಂತ್ರಿಕ ಅಡೆತಡೆಗಳನ್ನು ತಕ್ಷಣ ನಿವಾರಿಸುವಂತೆ ಶಾಸಕ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ವಸತಿ ಸಚಿವರಿಗೆ ಒತ್ತಾಯಿಸಿದರು.

ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಶಾಸಕರು ಈ ವಿಷಯದ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷರ ಸೂಚನೆಯಂತೆ ಇಂದು ವಿಧಾನಸೌಧದಲ್ಲಿ ವಸತಿ ಸಚಿವ ಶ್ರೀ ಜಮೀರ್ ಅಹ್ಮದ್ ಖಾನ್ ಅವರ ನೇತೃತ್ವದಲ್ಲಿ ವಿಶೇಷ ಸಭೆ ನಡೆಯಿತು. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಖಾರಾಬು ಕಟ್ಟೆ, ಕೆರೆ ಅಂಗಳ ಹಾಗೂ ಸರ್ಕಾರಿ ಜಮೀನುಗಳಲ್ಲಿ ದಶಕಗಳಿಂದ ನೆಲೆಸಿರುವ ಕುಟುಂಬಗಳಿಗೆ ಕಾನೂನುಬದ್ಧ ಭದ್ರತೆ ಒದಗಿಸುವ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು.

S. N. Channabasappa ಸಭೆಯಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಜಿಲ್ಲಾಧಿಕಾರಿ ಶ್ರೀ ಪ್ರಭುಲಿಂಗ ಕವಲಿಕಟ್ಟಿ ಅವರು, ಜಮೀನು ಲಭ್ಯತೆ ಮತ್ತು ವರ್ಗಾವಣೆ ಪ್ರಕ್ರಿಯೆಯಲ್ಲಿರುವ ಕಾನೂನು ತೊಡಕುಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣ ಮತ್ತು ಹಕ್ಕುಪತ್ರ ವಿತರಣೆಗೆ ಆದ್ಯತೆ ನೀಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ವಸತಿ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳು ಹಾಗೂ ಕೊಳಗೇರಿ ಮಂಡಳಿಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಬಡವರಿಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿರಬೇಕು ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.

ಎಸ್ಎಸ್ಎಲ್ ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ 22429 ವಿದ್ಯಾರ್ಥಿಗಳ ಹಾಜರಾತಿ- ಮಂಜುನಾಥ್.ಡಿಡಿಪಿಐ.

0

ದಿನಾಂಕ :18-03-2026 ರ ಇಂದು ಜಿಲ್ಲೆಯಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಒಟ್ಟು 22621ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 22429 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರುತ್ತಾರೆ.
ಒಟ್ಟು 192 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ ಎಂದು ಡಿಡಿಪಿಐ ಮಂಜುನಾಥ್ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಅಲ್ಲಮಪ್ರಭು ಜಯಂತಿ ಆಚರಣೆ

0

ನಮ್ಮೂರ ಬಳಗ – ಶಿವಮೊಗ್ಗ ವತಿಯಿಂದ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್ ನಲ್ಲಿ) ಶಿವಶರಣ, ವಚನ ಶ್ರೇಷ್ಠ, 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರ ಸಂಸತ್ ಪರಿಕಲ್ಪನೆಯ ಅನುಭವ ಮಂಟಪದ ಶೂನ್ಯಸಿಂಹಾಸನದ ಪ್ರಥಮ ಅಧ್ಯಕ್ಷರಾದ “ಶ್ರೀ ಅಲ್ಲಮಪ್ರಭು ದೇವರು ಅವರ ಜಯಂತಿಯ” ಅಂಗವಾಗಿ ಶರಣರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ. ರಂಗನಾಥ್, ಗೌರವ ಸಂಚಾಲಕರಾದ ನಾಗರಾಜ್ ಕಂಕಾರಿ, ಹೆಚ್, ಪಾಲಾಕ್ಷಿ ,ಸಿ ರವಿ ಸಂಚಾಲಕರುಗಳಾದ ಕೆ.ಆರ್ .ಸುರೇಶ್, ಹೆಚ್ ಪಿ ಗಿರೀಶ್, ಆರ್ ಕಿರಣ್, ವಿನಯ್, ರಾಜೇಶ್ ಮಂದಾರ, ಟಿ ಗುರುಪ್ರಸಾದ್, ರಜನಿಕಾಂತ್, ಆಚಾರಿ ಗೋಪಿ, ರಾಘವೇಂದ್ರ, ಎಸ್ ಶಿವು, ದಿವಾಕರ್, ಕೆ ಎಲ್ ಪವನ್, ಕೇಬಲ್ ಲೋಕೇಶ್ , ರಾಜೀವ್ ರಾಯ್ಕರ್, ಸುಬ್ರಮಣಿ,ಶರತ್ ಚಂದ್ರ, ದಿನೇಶ್, ಮಂಜುನಾಥ್, ಮನ್ವಿಕ್ ಜೈನ್, ಕಿರಣ್, ಸುಹಾಸ್, ಇತರರು ಇದ್ದರು.

ರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ಶಿವಮೊಗ್ಗದ ಯು.ದೀಕ್ಷಾ ಆಯ್ಕೆ

0

ಉಮೇಶ್ ಎಸ್. ಈ. (ಡಿ.ಎ.ಆರ್ ಎ. ಆರ್. ಎಸ್ ಐ) ಹಾಗೂ ಶೀಲಾವತಿ ಇವರ ಮಗಳಾದ ದೀಕ್ಷಾ ಯು ರವರು ” CBR ರಾಷ್ಟ್ರೀಯ ಕಾನೂನು ಕಾಲೇಜು” ಶಿವಮೊಗ್ಗ ಮೂರನೇ ವರ್ಷದ ಪದವಿ ಪಡೆಯುತ್ತಿದ್ದು. ಮತ್ತು “ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ಗರಡಿಯಲ್ಲಿ ಕರಾಟೆ ಅಭ್ಯಾಸ ಪಡೆದು ದೀಕ್ಷಾ ಯು ರವರು ಮಾರ್ಚ್ 10 ರಂದು ನಡೆದ ಧಾರವಾಡ ಕಾನೂನು ವಿಶ್ವವಿದ್ಯಾಲಯದಲ್ಲಿ ಇಂಟರ್ ಯುನಿವರ್ಸಿಟಿ ಕರಾಟೆ ಪಂದ್ಯಾವಳಿಯಲ್ಲಿ ಮೈನಸ್ 68 ಕೆಜಿ ಕಮಿಟೆ ವಿಭಾಗದಲ್ಲಿ ಆಯ್ಕೆಯಾಗಿ, “ಮಾರ್ಚ್ 17 ಮತ್ತು 18 ರಂದು ಭೂಪಾಲ್ (M P) ನಲ್ಲಿ ನಡೆದ ಸೇಜ್ ವಿಶ್ವವಿದ್ಯಾನಿಲಯ ಸೌತ್- ವೆಸ್ಟ್ ಇಂಟೆರ್ ಯೂನಿವರ್ಸಿಟಿ ಕರಾಟೆ ಪಂದ್ಯಾವಳಿಯಲ್ಲಿ ಟಾಪ್ 08 ನೇ ಸ್ಥಾನದಲ್ಲಿ ಆಯ್ಕೆಯಾಗಿ ಮತ್ತು ಅಸ್ಸಾಂನಲ್ಲಿ ನಡೆಯಲಿರುವ ಆಲ್ ಇಂಡಿಯಾ ಯೂನಿವರ್ಸಿಟಿ ಬಾಲಕಿಯರ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿ ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಆಯ್ಕೆಯಾದಂತಹ ಕ್ರೀಡಾಪಟುವಿಗೆ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ,
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದಂತಹ ಸನ್ ಸೈ ನವೀನ್, ಜಿಲ್ಲಾ ಉಪಾಧ್ಯಕ್ಷರಾದಂತಹ ಸನ್ ಸೈ ಸಾದಿಕ್ ತರಬೇತಿದಾರರ,
ಸನ್ ಸೈ ಮಂಜುನಾಥ್ ಮತ್ತು ಅಪೂರ್ವ, ಮಹಮ್ಮದ್ ಗೌಸ್ ಸಂಸ್ಥೆಯ ಸದಸ್ಯರು ಅಭಿನಂದಿಸಿದ್ದಾರೆ.

District Health and Family Welfare Department ಪ್ರಯೋಗಶಾಲಾ ತಂತ್ರಜ್ಞರು/ ತಜ್ಞವೈದ್ಯರ ಹುದ್ದೆಗೆ ಆಯ್ಕೆ ಪಟ್ಟಿ ಪ್ರಕಟ. ಆಕ್ಷೇಪಣೆಗಳಿಗೆ ಆಹ್ವಾನ.

0

District Health and Family Welfare Department ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಅಧೀನದಲ್ಲಿ ಬರುವ ಎನ್.ಪಿ.ಎನ್.ಸಿ.ಡಿ. ಕಾರ್ಯಕ್ರಮದಲ್ಲಿ ಖಾಲಿ ಇರುವ ಪ್ರಯೋಗಶಾಲಾ ತಂತ್ರಜ್ಞರ ಮತ್ತು ಎನ್.ಪಿ.ಹೆಚ್.ಸಿ.ಇ. ಕಾರ್ಯಕ್ರಮದಡಿಯಲ್ಲಿ ತಜ್ಞ ವೈದ್ಯರುಗಳ ಹುದ್ದೆಗಳಿಗೆ ನೇರ ಸಂದರ್ಶನದಲ್ಲಿ ತಾತ್ಕಾಲಿಕ ಆಯ್ಕೆಯಾದವರ ಪಟ್ಟಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಮಾ. 26 ರೊಳಗಾಗಿ ಲಿಖಿತವಾಗಿ ಸಲ್ಲಿಸುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Shivamogga News ಶಿವಮೊಗ್ಗದಿಂದ ದಂಪತಿ ನಾಪತ್ತೆ. ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆಮ

0

Shivamogga News ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿ ಕಾಲೋನಿ 2ನೇ ಕ್ರಾಸ್, ಎನ್.ಟಿ.ರಸ್ತೆ ವಾಸಿ ಶ್ರೀನಿವಾಸ ಮತ್ತು ಜಯಮ್ಮ ದಂಪತಿಗಳು ಜುಲೈ 2024 ರಿಂದ ಕಾಣೆಯಾದವರು ಈತನಕ ವಾಪಾಸ್ಸಾಗಿರುವುದಿಲ್ಲ.

ಶ್ರೀನಿವಾಸರ ಚಹರೆ 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಬಲಗೈ ಮೇಲೆ ಜಯಮ್ಮ ಎಂಬ ಹಚ್ಚೆ ಗುರುತು ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾರೆ. ಜಯಮ್ಮ ಎಂಬುವವರ ಚಹರೆ 5.1 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲಗೈ ಮೇಲೆ ಶ್ರೀನಿವಾಸ ಎಂಬ ಹಚ್ಚೆ ಗುರುತು ಇರುತ್ತದೆ.

Shivamogga News ಈ ದಂಪತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9480803345/ 08182-261413 ಹಾಗೂ ಕಂಟ್ರೋಲ್ ರೂಂ. ನಂ.: 100/112 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shivamogga News ಪಂಚಾಂಗ ಶ್ರವಣವು ಪುಣ್ಯಪ್ರದ. ಕೆಟ್ಟಸ್ವಪ್ನವನ್ನು ದೂರಮಾಡುತ್ತದೆ- “ಕಗ್ಗ” ಜಿ.ಎಸ್.ನಟೇಶ್.

0

Shivamogga News ಪಂಚಾಂಗ ಶ್ರವಣದಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ನಮ್ಮ ಎಲ್ಲಾ ಕಾರ್ಯಗಳು ಶ್ರವಣದಿಂದ ಆಗುವುದು, ಪಂಚಾಂಗ ಕೇಳುವುದರಿಂದ ನಮ್ಮ ಶತ್ರುಗಳನ್ನು ದೂರ ಮಾಡುತ್ತದೆ. ಗಂಗಾ ಸ್ನಾನ ಮಾಡಿದಷ್ಟು ಮತ್ತು ಗೋ ದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ ಎಂದು ನಿವೃತ್ತ ಉಪನ್ಯಾಸಕರಾದ ವಿದ್ವಾನ್ ಜಿ.ಎಸ್.ನಟೇಶ್ ಅಭಿಮತ ವ್ಯಕ್ತಪಡಿಸಿದರು.

ಗುರುವಾರ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಯುಗಾದಿ ಹೊಸ ವರ್ಷದ ಅಂಗವಾಗಿ ಹಮ್ಮಿಕೊಳ್ಳಲಾದ ವರ್ಷದ ಫಲ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಅವರು, ಪಂಚಾಂಗ ಶ್ರವಣದಿಂದ ಪುಣ್ಯ ಲಭಿಸುತ್ತದೆ. ಅಲ್ಲದೆ, ಪಂಚಾಂಗ ಶ್ರವಣ ಪುಣ್ಯ ಪ್ರದ, ಕೆಟ್ಟ ಸ್ವಪ್ನಗಳನ್ನು ದೂರ ಮಾಡುತ್ತದೆ, ಆಯುಷ್ಯ ಹೆಚ್ಚಾಗುತ್ತದೆ. ಈ ರೀತಿ ಹಲವಾರು ಸತ್ ಕಾರ್ಯಗಳು ನಡೆಯುವುದರ ಜೊತೆಗೆ ನಮಗೆ ಎಲ್ಲಾ ಫಲ ಲಭಿಸುತ್ತದೆ ಎಂದು ತಿಳಿಸಿದರು.

ಪಂಚಾಂಗವನ್ನು ಕೇವಲ ಈ ಯುಗಾದಿಯಲ್ಲಿ ಶ್ರವಣ ಮಾಡುವುದರ ಜೊತೆಯಲ್ಲಿ ಹಿರಿಯರು ತಿಳಿಸಿದ ಹಾಗೆ ನಿತ್ಯ ಪಂಚಾಂಗ ಶ್ರವಣದಿಂದ ನಮಗೆ ಸನ್ಮಾರ್ಗ ಹಾಗೂ ಸರಿಯಾದ ಮಾಹಿತಿ ದೊರಕುತ್ತದೆ ಎಂದು ತಿಳಿಸಿದರು.

ಜೊತೆಗೆ ರಾಶಿ ಫಲಗಳು ಹಾಗೂ ಮಳೆ ಬೆಳೆ ಹಾಗೂ ಸಾಮಾಜಿಕ ಲೆಕ್ಕಾಚಾರಗಳು ಪಂಚಾಂಗದ ಪ್ರಕಾರ ಮುಂದೆ ಆಗಬಹುದಾದ ಆಗುಹೋಗುಗಳ ಬಗ್ಗೆ ತಿಳಿಸಿದರು.

Shivamogga News ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರಾದ ರಾಮಲಿಂಗಪ್ಪನವರು ಮಾತನಾಡಿ, ನಮ್ಮ ದೇವಸ್ಥಾನದಲ್ಲಿ ಪ್ರತಿಯೊಂದು ಹಬ್ಬ, ಹರಿದಿನಗಳು ವಿಶೇಷ ದಿನಗಳಲ್ಲಿ ಎಲ್ಲಾ ಧಾರ್ಮಿಕ ಕಾರ್ಯಗಳು, ವಿಧಿ ವಿಧಾನಗಳು ಕ್ರಮಬದ್ಧವಾಗಿ ಭಕ್ತರಿಗೆ ದೊರಕುತ್ತದೆ ಎಂದರು.

ಜಿ.ಎಸ್.ನಟೇಶ್ ರವರ ಉಪನ್ಯಾಸ ನಮಗೆ ಆತ್ಮಶಕ್ತಿ, ಸ್ಪೂರ್ತಿ ಹೆಚ್ಚಿಸುತ್ತದೆ. ಈ ವಿಶ್ವಾಸ ಹಾಗೂ ಮಹಾ ಪೂಜೆಯಲ್ಲಿ ಪಾಲ್ಗೊಂಡ ಎಲ್ಲಾ ಭಕ್ತರಿಗೆ ದೇವಸ್ಥಾನದ ಸಮಿತಿಯ ಎಲ್ಲಾ ಪದಾಧಿಕಾರಿಗಳು ಧನ್ಯವಾದ ತಿಳಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ಸಂದೇಶ ಉಪಾಧ್ಯ ಅವರು ಯುಗಾದಿ ಹಬ್ಬದ ಮಹತ್ವ ತಿಳಿಸಿದರು. ಕಾರ್ಯಕ್ರಮದ ನಂತರ ಎಲ್ಲರಿಗೂ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ನಿರ್ದೇಶಕ ಮಂಜುನಾಥ, ಆಡಳಿತ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Rangayana, Shivamogga ಚಿಣ್ಣರ ಸಿಹಿಮೊಗೆ ಬೇಸಿಗೆ ಶಿಬಿರದಲ್ಲಿ ನಾಟಕ ನಿರ್ದೇಶಕ ಮತ್ತು ಜನಸಹಾಯಕ ನಿರ್ದೇಶಕರ ಆಯ್ಕೆ ಪ್ರಕ್ರಿಯೆಗೆ ಅರ್ಜಿಗಳ ಆಹ್ವಾನ.

0

Rangayana ಶಿವಮೊಗ್ಗ ರಂಗಾಯಣವು ಏ.14 ರಿಂದ ಮೇ.03ರವರೆಗೆ ಆಯೋಜಿಸುತ್ತಿರುವ ಚಿಣ್ಣರ ಸಿಹಿಮೊಗ್ಗೆ-ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ರಂಗತರಬೇತಿ, ನಾಟಕ ನಿರ್ದೇಶನ ಮಾಡಲು ರಂಗಭೂಮಿಯ ಹಿನ್ನೆಲೆಯುಳ್ಳ 06 ನಾಟಕ ನಿರ್ದೇಶಕರು ಮತ್ತು 06 ಜನ ಸಹಾಯಕ ನಿರ್ದೇಶಕರ ಆಯ್ಕೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮಾ. 16 ರಿಂದ ಮಾ. 30ರವರೆಗೆ ವಿಸ್ತರಿಸಲಾಗಿದೆ ಎಂದು ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Rangayana ಹೆಚ್ಚಿನ ಮಾಹಿತಿಗಾಗಿ ರಂಗಾಯಣ, ಶಿವಮೊಗ್ಗ ಕಛೇರಿ, ದೂರವಾಣಿ ಸಂಖ್ಯೆ 08182-256353, 7975229166 ಯನ್ನು ಸಂಪರ್ಕಿಸಬಹುದಾಗಿದೆ.

Breaking News ಮೃಗಾಲಯದಲ್ಲಿ ನೀರಾನೆ ದಾಳಿಗೆ ಡಾ.ಸಮೀಕ್ಷಾ ರೆಡ್ಡಿ‌ ಬಲಿ. ಶಾಸಕ ಚೆನ್ನಿ ಸಂತಾಪ.

0

Breaking News ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಕರ್ತವ್ಯನಿರತರಾಗಿದ್ದ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ನೀರಾನೆ ದಾಳಿಯಿಂದ ಮೃತಪಟ್ಟ ಸುದ್ದಿ ಕೇಳಿ ಅತೀವ ನೋವುಂಟಾಗಿದೆ. ಅಸ್ವಸ್ಥ ಪ್ರಾಣಿಗೆ ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ಸಂಭವಿಸಿದ ಈ ದುರ್ಘಟನೆ ನಿಜಕ್ಕೂ ಅತ್ಯಂತ ಹೃದಯವಿದ್ರಾವಕವಾಗಿದೆ ಎಂದು ಶಿವಮೊಗ್ಗ ಶಾಸಕ
ರಾದ ಎಸ್.ಎನ್. ಚೆನ್ನಬಸಪ್ಪನವರು ಸಂತಾಪ ಸೂಚಿಸಿದ್ದಾರೆ.

Breaking News ವನ್ಯಜೀವಿಗಳ ಸೇವೆಯಲ್ಲಿ ತೊಡಗಿದ್ದ ಒಬ್ಬ ಪ್ರತಿಭಾವಂತ ಯುವ ವೈದ್ಯೆಯನ್ನು ನಾವು ಕಳೆದುಕೊಂಡಿರುವುದು ಜಿಲ್ಲೆಗೆ ಮತ್ತು ಪಶುವೈದ್ಯಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು. ಈ ಘಟನೆಯಲ್ಲಿ ಸುರಕ್ಷತಾ ಲೋಪಗಳಿವೆಯೇ ಎಂಬುದರ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಕೂಲಂಕುಷ ತನಿಖೆಯಾಗಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ ಎಂದಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Ugadi ನಮ್ಮೂರಿನ ಯುಗಾದಿ.ಒಂದು ನೆನಪು…ಲೇ: ಎನ್.ಎಸ್.ಕುಮಾರ್.ನಿವೃತ್ತ ನಿರ್ದೇಶಕರು.( ಶಿಕ್ಷಣ ಇಲಾಖೆ).ಶಿವಮೊಗ್ಗ

0

Ugadi ಹಬ್ಬ ಎಂದರೆ ಎಲ್ಲರಿಗೂ ಸಡಗರ ಸಂಭ್ರಮ ಅದರಲ್ಲೂ ನಮ್ಮೂರಿನ ಹಬ್ಬದ ಸಂಭ್ರಮ ಇಂದು ನೆನಪಾಗುತ್ತಿದೆ. ವಿಶೇಷವಾಗಿ ಹೊಸ ವರ್ಷವನ್ನು ಹೊತ್ತು ತರುವ ಯುಗಾದಿ ಹಬ್ಬವು ಎಲ್ಲಾ ಜನರಿಗೂ ಹರುಷ ಉಲ್ಲಾಸ ಸಂತೋಷವನ್ನು ತರುವಂತದ್ದು ಹೊಸ ಬಟ್ಟೆಯನ್ನು ತೊಟ್ಟು ಪ್ರಕೃತಿಯ ಸೌಂದರ್ಯವೂ ಕಂಗೊಳಿಸುತ್ತಾ ಹೊಸ ಚಿಗುರನ್ನು ಆಹ್ವಾನಿಸುತ್ತಾ ಬಾಳಿನ ಬೆಳಕನ್ನು ಕಾಣಲು ಬಯಸುವ ಯುಗಾದಿ ಹಬ್ಬವು ವರ್ಷದುದ್ದಕ್ಕೂ ಸಂತಸವನ್ನು ತರುವಂತದ್ದಾಗಿದೆ.

ಯುಗಾದಿ ಹಬ್ಬದ ಬರುತ್ತಿದೆ ಎಂದು ಮನೆಯನ್ನ ಶುಭ್ರಗೊಳಿಸಿ ಸುಣ್ಣ ಬಣ್ಣ ಬಳಿದು ಮನೆ ಸುಂದರವಾಗಿ ಕಾಣುವಂತೆ ಮಾಡುತ್ತಿದ್ದರು ಅಮಾವಾಸ್ಯೆ ದಿನದಂದು ನಾವುಗಳು ಬೆಳಗ್ಗೆ ಎದ್ದು ಸ್ನಾನ ಮಾಡಿ ಬೇವು ಬೆಲ್ಲವನ್ನು ತೆಗೆದುಕೊಂಡು ಇರುವೆ ಗೂಡನ್ನು ಹುಡುಕುತ್ತಾ ಹೋಗಿ ಅವುಗಳಿಗೆ ಬೇವು ಬೆಲ್ಲದ ಮಿಶ್ರಣವನ್ನು ಹಾಕುತ್ತಿದ್ದೆವು ನಂತರ ಒಣ ಕೊಬ್ಬರಿ ಬಟ್ಟಲಿಗೆ ತೂತು ಮಾಡಿ ದಾರವನ್ನು ಕಟ್ಟಿ ಎರಡು ಕೈಗಳಿಂದ ದಾರವನ್ನು ಎಳೆದು ಕೊಬರಿ ಬಟ್ಟಲನ್ನು ತಿರುಗಿಸುತ್ತಿದ್ದೆವು . ಆನಂತರ ಮನೆಯ ಮುಂದೆ ಸಗಣಿಯಿಂದ ಅಂಗಳವನ್ನ ಬಳಿದು ಸ್ವಚ್ಛಗೊಳಿಸಿ ಮಾವಿನ ಸೊಪ್ಪಿನಿಂದ ಬಾಳೆ ಕಂಬದಿಂದ ಹಾಗೂ ಹೂವಿನ ಹಾರದಿಂದ ಮನೆಯನ್ನು ಶೃಂಗರಿಸಿ ಮನೆಯ ಮುಂದೆ ಜೋಕಾಲಿಯನ್ನ ಕಟ್ಟಿ ಕೆಲವರು ಮರದ ಕೊಂಬೆಗಳಿಗೆ ಜೋಕಾಲಿಯನ್ನು ಕಟ್ಟಿ ಹೊಸ ಬಟ್ಟೆಗಳನ್ನು ತೊಟ್ಟು ಜೋಕಾಲಿ ಆಡುತ್ತಿದ್ದೆವು. ಹೊಸ ಬಟ್ಟೆ ತೊಟ್ಟು ಮನೆ ಮನೆಗೆ ಹೋಗಿ ಬೇವುಬೆಲ್ಲವನ್ನ ಕೊಟ್ಟು ಸಂಭ್ರಮಿಸುತ್ತಿದ್ದೆವು. ಮನೆಯಲ್ಲಿ ಹಬ್ಬದ ಹಿಂದಿನ ದಿನ ಅಭ್ಯಂಜನ ಸ್ನಾನ ಮಾಡಿ ಮನೆಯಲ್ಲಿ ಶಾವಿಗೆ ಬಸಿದು ಅದಕ್ಕೆ ಬೇವು ಬೆಲ್ಲದ ಮಿಶ್ರಣವನ್ನು ಹಾಗೂ ಹಾಲನ್ನು ಹಾಕಿಕೊಂಡು ಊಟ ಮಾಡುತ್ತಿದ್ದೆವು ನಂತರ ಮಾರನೇ ದಿನ ಚಂದ್ರ ಕಾಣುತ್ತಾನೆಂದು ಹೋಳಿಗೆ ಊಟವನ್ನು ಮಾಡುತ್ತಿದ್ದರು ಏಕೆಂದರೆ ಹೋಳಿಗೆ ಊಟ ಮಾಡಿ ಚಂದ್ರನನ್ನು ನೋಡಬೇಕು ಎಂಬ ನಂಬಿಕೆ ಆ ದಿನ ಚಂದ್ರ ಕಾಣದಿದ್ದರೆ ಹೋಳಿಗೆ ಸ್ವಲ್ಪ ಊರ್ಣ ಇಟ್ಟು ಕೊಂಡು ಇರುತ್ತಿದ್ದರು ಮಾರನೇ ದಿನ ಪುನಹ ಹೋಳಿಗೆ ಮಾಡಿ ಚಂದ್ರನನ್ನು ನೋಡಲು ಸಂಜೆ ಹೊತ್ತು ರಾಂಪುರ್ ರಸ್ತೆಯಲ್ಲಿರುವ ಹಳ್ಳದ ಮೇಲೆ ಊರ ಜನರೆಲ್ಲರೂ ಹೊಸ ಬಟ್ಟೆ ತೊಟ್ಟುಕೊಂಡು ಆಕಾಶದಲ್ಲಿ ಚಂದ್ರನನ್ನು ಹುಡುಕುತ್ತಿದ್ದೆವು. ನಾನು ಮೊದಲು ನೋಡಬೇಕು. ನಾನು ಮೊದಲು ನೋಡಬೇಕು ಎಂದು ಎಲ್ಲರೂ ಹುಡುಕುತ್ತಿದ್ದೆವು. ಯಾರಾದರೂ ಮೊದಲು ನೋಡಿದರೆ ತಕ್ಷಣ ನನಗೆ ಕಾಣಿಸಿತು ಎಂದು ಜೋರಾಗಿ ಕೂಗಿ ಹೇಳುತ್ತಿದ್ದರು ಉಳಿದವರು ಎಲ್ಲಿ ಎಲ್ಲಿ ಎಂದು ಕೇಳುತ್ತಿದ್ದರು ಚಂದ್ರನನ್ನು ನೋಡಿದವರು ಕಪ್ಪು ಮೂಡದ ಮೇಲೆ ಕೆಳಗೆ ಅಕ್ಕ ಪಕ್ಕ ಲೈಟ್ ಕಂಬದ ಮೇಲೆ ಸೀದಾ ಎತ್ತರದಲ್ಲಿ ನೋಡಿ ಎಂದು Ugadi ಹೇಳುತ್ತಿದ್ದರು ನಾವೆಲ್ಲ ಹುಡುಕಿ ಚಂದ್ರ ಕಂಡ ತಕ್ಷಣ ಓ ನನಗೂ ಕಾಣಿಸುತ್ತೆ ಎಂದು ಚಂದ್ರನಿಗೆ ಕೈ ಮುಗಿದ ನಮಸ್ಕರಿಸಿ ಅಲ್ಲೇ ಇದ್ದ ಹಿರಿಯರಿಗೆ ಚಂದ್ರ ಕಾಣಿಸುತ್ತಾ ಎನ್ನುತ್ತಾ ಎಲ್ಲರಿಗೂ ಕಾಲಿಗೆ ನಮಸ್ಕರಿಸಿದ್ದೆವು ನಂತರ ನಮ್ಮೂರಿನ ಕಲ್ಲೇಶ್ವರ ದೇವಸ್ಥಾನಕ್ಕೆ ಹೋಗಿ ದೇವರಿಗೆ ನಮಸ್ಕರಿಸಿ ಹಣೆಗೆ ವಿಭೂತಿ ಧರಿಸಿ ಊರಿನಲ್ಲಿರುವ ಮನೆಮನೆಗೆ ಭೇಟಿ ನೀಡಿ ಅಲ್ಲಿರುವ ಹಿರಿಯರಿಗೆ ಚಂದ್ರ ಕಾಣಿಸುತ್ತಾ ಎಂದು ಕೇಳುತ್ತಾ , ಅವರ ಕಾಲಿಗೆ ನಮಸ್ಕರಿಸಿ ಅವರಿಂದ ಬೇವು ಬೆಲ್ಲವನ್ನು ಪಡೆದು ಇಡೀ ಊರೇ ಜನರೆಲ್ಲರೂ ಒಬ್ಬರ ಕಾಲಿನ ಮತ್ತೊಬ್ಬರು ಬೀಳುತ್ತಾ ಹಬ್ಬವನ್ನು ಸಂಭ್ರಮಿಸುತ್ತಿದ್ದೆವು ಊರಿನ ಕೆಲವು ಹಿರಿಯರು ಚಂದ್ರನು ಮೇಲೇರಿದ್ದಾನೆ ಕೆಳಗೆ ಇಳಿದಿದ್ದಾನೆ ಈ ವರ್ಷ ಮಳೆ ಬೆಳೆ ಚೆನ್ನಾಗಿದೆ ಚೆನ್ನಾಗಿಲ್ಲ ಮುಂಗಾರು ಮಳೆ ಹಿಂಗಾರು ಮಳೆ ಜಾಸ್ತಿ ಇದೆ ಅಥವಾ ಕಡಿಮೆ ಇದೆ ಎಂದು ಹಿರಿಯರು ನಾನು ಮಾತುಗಳನ್ನು ಆಡುತ್ತಿದ್ದರು ಆ ದಿನ ಊರಿನ ಜನರೆಲ್ಲರೂ ಊರಿನ ಎಲ್ಲಾ ಹಿರಿಯರಿಗೂ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು ಮದುವೆ ಆಗದವರಿಗೆ ಮುಂದಿನ ಚಂದ್ರಮಾನದೊಳಗೆ ಮದುವೆಯಾಗಲಿ. ಮಕ್ಕಳಾಗದ ಜೋಡಿಗಳಿಗೆ ಮುಂದಿನ ಚಂದ್ರನನ್ನು ನೋಡುವುದರೊಳಗಾಗಿ ಸಂತಾನವಾಗಲಿ ಎಂದು. ಕೆಲಸ ಸಿಗದವರಿಗೆ ಕೆಲಸ ಸಿಗಲಿ ಎಂದು ಅವರವರ ಅವಶ್ಯಕತೆ ತಕ್ಕಂತೆ ಹಿರಿಯರು ಆಶೀರ್ವಾದ ಮಾಡುತ್ತಿದ್ದರು. ಈ ರೀತಿಯಾಗಿ ನಮ್ಮೂರಿನ ಹಬ್ಬವನ್ನು ಸಂಭ್ರಮಿಸಿದ ದಿನಗಳು ನೆನಪಾಗುತ್ತಿದೆ. ಆದರೆ ಇಂದು ನಗರ ಪ್ರದೇಶಗಳಲ್ಲಿ ಹಾಗೂ ಹಳ್ಳಿಗಳಲ್ಲಿಯೂ ಸಹ ಸಂಭ್ರಮ ಕಾಣದಂತಾಗಿದೆ. ನಮ್ಮ ಮಕ್ಕಳಿಗೆ ನಮ್ಮ ಸಂಭ್ರಮದ ದಿನಗಳನ್ನು ಕಥೆ ರೂಪದಲ್ಲಿ ಹೇಳುವಂತೆ ಆಗಿದೆ ಇಂದು ಹಬ್ಬಗಳು ಅದರ ಅರ್ಥವನ್ನು ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ.

ಎನ್ ಎಸ್ ಕುಮಾರ್
ನಿವೃತ್ತ ನಿರ್ದೇಶಕರು
ಶಿಕ್ಷಣ ಇಲಾಖೆ
9448337434