Friday, February 13, 2026
Friday, February 13, 2026
Home Blog Page 108

Madhu Bangarappa ರಾಜ್ಯದಲ್ಲಿ 32,000 ಶಿಕ್ಷಕ ಹುದ್ದೆಗಳಿಗೆ ಭರ್ತಿಮಾಡುವ ಪ್ರಸ್ತಾಪವಿದೆ- ಮಧು ಬಂಗಾರಪ್ಪ.

0

Madhu Bangarappa ರಾಜ್ಯದಲ್ಲಿ 32,000 ಶಿಕ್ಷಕ ಹುದ್ದೆಗಳ ಭರ್ತಿಮಾಡಲಾಗುತ್ತದೆ ಎಂದು ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಕರ್ನಾಟಕ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರು‌ ಸಿಹಿಸುದ್ದಿ ನೀಡಿದ್ದಾರೆ.
ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳಲ್ಲಿ 51,000 ಶಿಕ್ಷಕರ ಕೊರತೆ ಇದೆ, ಇದರಲ್ಲಿ 13,000 ಶಿಕ್ಷಕರ ನೇಮಕಾತಿ ಪೂರ್ಣಗೊಂಡಿದೆ. ಉಳಿದ 32,000 ಹುದ್ದೆಗಳಿಗೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಈ ಭರ್ತಿ ಪ್ರಕ್ರಿಯೆ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಅನ್ವಯಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

Department of Women and Child Development ಶಿವಮೊಗ್ಗ ಜಿಲ್ಲಾ ಬಾಲಭವನದಲ್ಲಿ ಮಕ್ಕಳ ದಿನಾಚರಣೆ ಮುನ್ನ ವಿವಿಧ ಕಲಾ ಚಟುವಟಿಕೆಗಳ ಆಯೋಜನೆ

0

Department of Women and Child Development ಶಿವಮೊಗ್ಗ ಜಿಲ್ಲಾ ಬಾಲಭವನದಲ್ಲಿ 2025-26ನೇ ಸಾಲಿನ ಮಕ್ಕಳ ದಿನಾಚರಣೆಯ ಅಂಗವಾಗಿ ನ. 06 ರಂದು ಬೆಳಗ್ಗೆ 10.00ಕ್ಕೆ ಸರ್ಕಾರಿ ವೀಕ್ಷಣಾಲಯ, ಆಲ್ಕೋಳ, ಇಲ್ಲಿ ಏರ್ಪಡಿಸಲಾಗುವ ಸೃಜನಾತ್ಮಕ ಕಲೆ, ಬರವಣೆ, ಪ್ರದರ್ಶನ ಕಲೆ, ವಿಜ್ಞಾನದಲ್ಲಿ ನೂತನ ಆವಿಷ್ಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು ಹಾಜರಾಗುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-295514 ನ್ನು ಸಂಪರ್ಕಿಸುವುದು.

Directorate of Women And Child Development Department Government ಮಕ್ಕಳನ್ನ ಮಾರಾಟಮಾಡುವವರಿಗೆ & ಕೊಳ್ಳುವವರಿಗೆ 5 ವರ್ಷ ಸೆರೆವಾಸ, ₹1 ಲಕ್ಷದವರೆಗೂ ದಂಡ . ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಕಟಣೆ.

0

Directorate of Women And Child Development Department Government ಮಕ್ಕಳನ್ನು ಮಾರುವವರಿಗೂ ಹಾಗೂ ಕೊಳ್ಳುವವರಿಗೂ ಬಾಲನ್ಯಾಯ ಕಾಯ್ದೆ -2015 ಸೆಕ್ಷನ್ 80 ಮತ್ತು 81ರ ಅನ್ವಯ 5 ವರ್ಷಗಳವರೆಗೂ ಸೆರೆಮನೆ ವಾಸದೊಂದಿಗೆ ರೂ. 1.00 ಲಕ್ಷಗಳವರೆಗೆ ದಂಡ ವಿಧಿಸಬಹುದು. ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯ ಅವಧಿ 3 ವರ್ಷಗಳಿಂದ 7 ವರ್ಷಗಳವರೆಗೆ ವಿಧಿಸಲಾಗುವುದು.
ಸಾರ್ವಜನಿಕ ಸ್ಥಳಗಳಲ್ಲಿ ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳ ಮಾಹಿತಿಯು ಕಂಡು ಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆಲ್ಕೋಳ, ಶಿವಮೊಗ್ಗ ದೂ.ಸಂ.: 08182-295709 ಇಲ್ಲಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

S. N. Channabasappa ಶಿವಮೊಗ್ಗ ನಗರದ 6 ನೇ ವಾರ್ಡಿಗೆ ಭೇಟಿ ನೀಡಿ ಕುಂದುಕೊರತೆ ಪರಿಶೀಲಿಸಿದ ಶಾಸಕ ಚೆನ್ನಿ.

0

S. N. Channabasappa ನವೆಂಬರ್ 4 ರಂದು ಬೆಳಿಗ್ಗೆ,ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 6ರ ವಿವೇಕಾನಂದ ಬಡಾವಣೆಗೆ ಭೇಟಿ ನೀಡಿದರು.

ಈ ಭೇಟಿಯ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳ ದೈನಂದಿನ ಜೀವನದ ಕೊರತೆಗಳು ಮತ್ತು ಮೂಲಭೂತ ಸಮಸ್ಯೆಗಳನ್ನು ಕೂಲಂಕಷವಾಗಿ ಆಲಿಸಿದರು.

S. N. Channabasappa ನಿವಾಸಿಗಳಿಂದ ಸ್ವೀಕರಿಸಲಾದ ಎಲ್ಲಾ ಮನವಿಗಳನ್ನು ಶೀಘ್ರವಾಗಿ ಪರಿಶೀಲಿಸಿ, ಅವುಗಳ ನಿವಾರಣೆಗಾಗಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

Shimoga News ವೈದ್ಯರಿಗೆ ಜನಸಾಮಾನ್ಯರೊಂದಿಗೆ ಸಂವಹನಕ್ಕೆ ಕನ್ನಡವೇ ದಾರಿದೀಪ,-ಡಾ. ವೈ.ಸಿ.ಯೋಗಾನಂದ ರೆಡ್ಡಿ.

0

Shimoga News ಕನ್ನಡ ಭಾಷೆ ವೈದ್ಯರು ಸೇರಿದಂತೆ ಎಲ್ಲ ಜನರಿಗೂ ಬದುಕನ್ನು ಕಟ್ಟಿಕೊಟ್ಟಿದೆ. ವೈದ್ಯರಿಗೆ ವೃತ್ತಿಪರ ಶಿಕ್ಷಣ ಆಂಗ್ಲ ಭಾಷೆಯಲ್ಲಿ ಪಡೆದಿದ್ದರೂ ಜನಸಾಮಾನ್ಯರೊಂದಿಗೆ ಸಂವಹನಕ್ಕೆ ಕನ್ನಡವೇ ದಾರಿ ದೀಪವಾಗಿದೆ ಎಂದು ಕರ್ನಾಟಕ ವೈದ್ಯಕೀಯ ಪರಿಷತ್ ಅಧ್ಯಕ್ಷ ಡಾ. ಯೋಗಾನಂದ ರೆಡ್ಡಿ ವೈ ಸಿ ಹೇಳಿದರು.

ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು 2025-26ರ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕನ್ನಡ ನಮ್ಮ ಮನೆ ಮತ್ತು ಮನಗಳಲ್ಲಿ ಸದಾ ತುಂಬಿರಬೇಕು ಎಂದು ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘವು ಯುವ ವೈದ್ಯರನ್ನು ಮತ್ತಷ್ಟು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಬೇಕು. ಸಂಘಟನೆಯಾಗಿ ನಮ್ಮ ಐಎಂಎ ಸಮಾಜದ ವಿವಿಧ ಜನರನ್ನು ತಲುಪುವಲ್ಲಿ ಶ್ರಮಿಸಬೇಕು ಎಂದು ಅಭಿಪ್ರಾಯಪಟ್ಟರು.

ಭಾರತೀಯ ವೈದ್ಯಕೀಯ ಸಂಘ ರಾಜ್ಯ ಘಟಕದ ನಿಯೋಜಿತ ಅಧ್ಯಕ್ಷ ಡಾ. ಹರೀಶ ದೇಲಂತ ಬೆಟ್ಟು ಮಾತನಾಡಿ, ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಈವರೆಗೆ ನಡೆಸಿರುವ ಚಟುವಟಿಕೆಗಳು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸಲಿ ಎಂದು ಆಶಿಸಿದರು.

Shimoga News ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಘಟಕದ ಅಧ್ಯಕ್ಷ ಡಾ. ಕೆ.ಆರ್.ರವೀಶ್ ಅಧ್ಯಕ್ಷತೆ ವಹಿಸಿದ್ದರು. 2025-26ರ ಪದಾಧಿಕಾರಿಗಳಾಗಿ ಡಾ. ಕೆ.ಆರ್.ರವೀಶ್, ಡಾ. ಕೆ.ಎಸ್.ಶುಭ್ರತ, ಡಾ. ಶಶಿಧರ ಎಚ್.ಎಲ್, ಡಾ. ಕೌಸ್ತುಭಾ ಅರುಣ್, ಡಾ. ಶ್ವೇತಾ ಬಾದಾಮಿ, ಡಾ ರಾಮಚಂದ್ರ ಬಾದಾಮಿ, ಡಾ. ಸುಭಾಷ್ ಬಿ.ಎ, ಡಾ ಸತೀಶ್ ಎಂ.ಆರ್, ಡಾ. ರಾಕೇಶ್ ಬಿಸಿಲೇಹಳ್ಳಿ ಅಧಿಕಾರ ಸ್ವೀಕರಿಸಿದರು.

ಡಾ. ಎಸ್.ಶ್ರೀಧರ ಮತ್ತು ಡಾ. ವಿನಯ ಶ್ರೀನಿವಾಸ್ , ಡಾ. ರಾಜರಾಮ್ ಹಾಜರಿದ್ದರು. ಡಾ. ಕೆ.ಎನ್. ಗುರುದತ್ತ ಅವರು ವಿಶೇಷವಾದ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಐಎಂಎ ಮ್ಯೂಸಿಕ್ ಕ್ಲಬ್ ವತಿಯಿಂದ ಡಾ. ಚೇತನ್ ಹೆಚ್ ಎ, ಡಾ. ವಿಜಯಲಕ್ಷ್ಮೀ ರವೀಶ್, ಡಾ. ಪ್ರವೀಣ್ ಮಲವಡೆ, ಡಾ. ರಾಮಚಂದ್ರ ಬಾದಾಮಿ, ಡಾ. ಶ್ವೇತಾ ಬಾದಾಮಿ, ಡಾ. ಸುಭಾಷ್ ಬಿಎ, ಡಾ. ಶಂಭುಲಿಂಗ ಬಂಕೊಳ್ಳಿ ಮತ್ತು ಮಾಸ್ಟರ್ ಶ್ರೇಯಸ್ ಬಾದಾಮಿ ಕನ್ನಡ ಗೀತೆಗಳ ಗಾಯನ ನಡೆಸಿಕೊಟ್ಟರು. ಡಾ. ಶ್ವೇತಾ ಬಾದಾಮಿ ಅವರು ಕಾರ್ಯಕ್ರಮ ನಿರೂಪಿಸಿದರು.

Bharatada pramuka vyapara mela ಬೆಂಗಳೂರಿನಲ್ಲಿ ನವೆಂಬರ್ 6 ರಿಂದ 8 ವರೆಗೆ ಭಾರತದ ಪ್ರಮುಖ ವ್ಯಾಪಾರ ಮೇಳ- 2025

0

Bharatada pramuka vyapara mela ಭಾರತ ಉತ್ಪಾದನಾ ಪ್ರದರ್ಶನದ 7 ನೇ ಆವೃತ್ತಿ – ಬಾಹ್ಯಾಕಾಶ, ರಕ್ಷಣಾ ಮತ್ತು ಸಾಮಾನ್ಯ ಎಂಜಿನಿಯರಿoಗ್ ವಲಯಗಳಲ್ಲಿ ಭಾರತದ ಪ್ರಮುಖ ವ್ಯಾಪಾರ ಮೇಳ-ನವೆಂಬರ್ 6 ರಿಂದ 8, 2025 ರವರೆಗೆ ಬೆಂಗಳೂರಿನ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ.
ಐಎಂಎಸ್ ಫೌಂಡೇಶನ್ ಸಹಯೋಗದೊಂದಿಗೆ ಲಘು ಉದ್ಯೋಗ ಭಾರತಿ–ಕರ್ನಾಟಕ ಆಯೋಜಿಸುವ ಕೇಂದ್ರ ರಕ್ಷಣಾ ಸಚಿವಾಲಯ, ಕರ್ನಾಟಕ ಸರ್ಕಾರ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಬೆಂಬಲದೊoದಿಗೆ, ಈ ಕಾರ್ಯಕ್ರಮವು ಜಾಗತಿಕ ವೇದಿಕೆಯಲ್ಲಿ ಭಾರತದ ಉತ್ಪಾದನಾ ನಾಯಕತ್ವವನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ.
ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಭಾರಿ ಕೈಗಾರಿಕೆಗಳು ಮತ್ತು ಉಕ್ಕಿನ ಖಾತೆ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಮತ್ತು ಭಾರತ ಸರ್ಕಾರದ ಎಂಎಸ್‌ಎoಇ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರ ಸಮ್ಮುಖದಲ್ಲಿ ಈ ಪ್ರದರ್ಶನ ನಡೆಯಲಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಐಎಂಎಸ್ 2025 ಈ ಕಾರ್ಯಕ್ರಮದ ಇಲ್ಲಿಯವರೆಗಿನ ಅತಿದೊಡ್ಡ ಆವೃತ್ತಿಯಾಗಿದ್ದು, 6,000 ಚದರ ಮೀಟರ್‌ಗಿಂತಲೂ ಹೆಚ್ಚಿನದ್ದಾಗಿರುವ ಬಿಐಇಸಿಯ ಎರಡೂ ಸಭಾಂಗಣಗಳು – ಸಂಪೂರ್ಣವಾಗಿ ಮಾರಾಟವಾಗಿವೆ. 220 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸೇರಿದಂತೆ 450 ಕ್ಕೂ ಹೆಚ್ಚು ಪ್ರದರ್ಶಕರು, ಬಾಹ್ಯಾಕಾಶ ಮತ್ತು ರಕ್ಷಣಾ, ಆಟೊಮೇಷನ್ ಮತ್ತು ರೊಬೊಟಿಕ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಜನರಲ್ ಎಂಜಿನಿಯರಿoಗ್, ಪಂಪ್ ಮತ್ತು ಕವಾಟ, ಪರೀಕ್ಷೆ ಮತ್ತು ಅಳತೆ ಉಪಕರಣಗಳಂತಹ ಪ್ರಮುಖ ವಲಯಗಳಲ್ಲಿ ನಾವೀನ್ಯತೆಗಳನ್ನು ಪ್ರದರ್ಶಿಸಲಿದ್ದಾರೆ.
20,000 ವ್ಯಾಪಾರ ಸಂದರ್ಶಕರು ಈಗಾಗಲೇ ನೋಂದಾಯಿಸಿಕೊoಡಿದ್ದಾರೆ ಮತ್ತು 40,000 ಜನ ಭಾಗವಹಿಸುವ ನಿರೀಕ್ಷೆಯೊಂದಿಗೆ, ಐಎಂಎಸ್ 2025 ಭಾರತದ ಉತ್ಪಾದನಾ ಪರಿಸರ ವ್ಯವಸ್ಥೆಗೆ ಒಂದು ಹೆಗ್ಗುರುತು ಕಾರ್ಯಕ್ರಮವಾಗಲಿದೆ.
ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮ ಸಂಸ್ಥೆಗಳಾದ ಬಿಇಎಲ್, ಹೆಚ್‌ಎಎಲ್, ಬಿಇಎಂಎಲ್, ಇಸ್ರೋ, ಡಿಆರ್‌ಡಿಒ ಮತ್ತು ಸಿಇಎಂಐಎಲ್ ಎಸಿ ಸೇರಿದಂತೆ ಭಾರತ್ ಫೋರ್ಜ್, ಎಲ್ & ಟಿ ಡಿಫೆನ್ಸ್, ಪ್ರಮುಖ ಕಾರ್ಪೊರೇಟ್ ಕಂಪನಿಗಳೊoದಿಗೆ ಭಾಗವಹಿಸಲಿದ್ದಾರೆ. ಶ್ರೀ ಬಾಬಾ ಕಲ್ಯಾಣಿ, ಶ್ರೀ ಅರುಣ್ ರಾಮಚಂದಾನಿ ಮತ್ತು ಸತ್ಯನಾರಾಯಣ್ ನುವಾಲ್ ಅವರಂತಹ ಉನ್ನತ ಉದ್ಯಮ ನಾಯಕರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಐಎಂಎಸ್ 2025 ನ್ನು ತನ್ನ ಖರೀದಿ ಮತ್ತು ಮಾರುಕಟ್ಟೆ ಯೋಜನೆಯ ಅಡಿಯಲ್ಲಿ ಸೇರಿಸಿಕೊಂಡಿದ್ದು, ಸಬ್ಸಿಡಿಗಳ ಮೂಲಕ ಎಂಎಸ್‌ಎoಇ ಭಾಗವಹಿಸುವಿಕೆಯನ್ನು ಬೆಂಬಲಿಸುತ್ತದೆ.
IMSCON 2025-ಜ್ಞಾನ ಮತ್ತು ಸಹಯೋಗ ವೇದಿಕೆ: ಏಕಕಾಲದಲ್ಲಿ ನಡೆಯುವ, 2 ನೇ ಆವೃತ್ತಿ “ಭಾರತವನ್ನು ಸಬಲೀಕರಣಗೊಳಿಸುವುದು: ಜಾಗತಿಕ ಉತ್ಪಾದನೆಯ ಭವಿಷ್ಯ” ಎಂಬ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ನಿರ್ಣಾಯಕ ವಿಷಯಗಳ ಕುರಿತು ಎಂಟು ತಾಂತ್ರಿಕ ಅವಧಿಗಳನ್ನು ಒಳಗೊಂಡಿರುತ್ತದೆ.

  • ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾರತದ ಪಾತ್ರ
  • ಬಾಹ್ಯಾಕಾಶ ಮತ್ತು ರಕ್ಷಣಾ ಉತ್ಪಾದನೆಗೆ ಹೊಸ ಯುಗ
  • ಡಿಜಿಟಲ್ ಉತ್ಪಾದನೆ ಮತ್ತು ಕೈಗಾರಿಕೆ 4.0
  • ಬಾಹ್ಯಾಕಾಶ ಮತ್ತು ರಕ್ಷಣೆಯಲ್ಲಿ ಗುಣಮಟ್ಟದ ಭರವಸೆ ಮತ್ತು ಪ್ರಮಾಣೀಕರಣ
  • ಎಐ ಮತ್ತು ಮುಂದಿನ ಪೀಳಿಗೆಯ ನಾವೀನ್ಯತೆ
  • ಕೌಶಲ್ಯಗಳು, ಜನರು ಮತ್ತು ಸುಸ್ಥಿರತೆ
  • ಭಾರತೀಯ ರಕ್ಷಣಾ ಖರೀದಿ ನೀತಿ
  • ಸ್ಟಾರ್ಟ್ಅಪ್‌ಗಳಿಗೆ ಹಣಕಾಸು
    Bharatada pramuka vyapara mela ನೀತಿ ನಿರೂಪಕರು, ಸಿಇಒಗಳು, ಡೊಮೇನ್ ತಜ್ಞರು ಮತ್ತು ವಿಜ್ಞಾನಿಗಳು ಸೇರಿದಂತೆ 1,000 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನವು ದೊಡ್ಡ ನಿಗಮಗಳೊಂದಿಗೆ ಬಿ೨ಬಿ ಸಭೆಗಳು ಮತ್ತು ಮಾರಾಟಗಾರರ ಅಭಿವೃದ್ಧಿ ಅಧಿವೇಶಗಳನ್ನು ಸಹ ಆಯೋಜಿಸುತ್ತದೆ.
    2010 ರಿಂದ ಆರು ಯಶಸ್ವಿ ಆವೃತ್ತಿಗಳನ್ನು ಅನುಸರಿಸಿ, ಐಎಂಎಸ್ 2025, ಭಾರತದ ಉತ್ಪಾದನಾ ವಲಯಗಳಲ್ಲಿ ನಾವೀನ್ಯತೆ, ಸಹಯೋಗ ಮತ್ತು ಬೆಳವಣಿಗೆಯನ್ನು ಬೆಳೆಸುವ ತನ್ನ ಧ್ಯೇಯವನ್ನು ಮುಂದುವರೆಸಿದೆ. ಪ್ರಮುಖ ಕೈಗಾರಿಕಾ ಸಂಘಗಳ ಬೆಂಬಲ ಮತ್ತು ಆತ್ಮನಿರ್ಭರ ಭಾರತ ಸಹಯೋಗದೊಂದಿಗೆ ಹೊಂದಿಕೊoಡ ಐಎಂಎಸ್ 2025, ಬಾಹ್ಯಾಕಾಶ ಮತ್ತು ರಕ್ಷಣಾ ಪರಿಸರ ವ್ಯವಸ್ಥೆಯಲ್ಲಿ 30 ರಿಂದ 40 ಶೇಕಡಾ ದೇಶೀಕರಣವನ್ನು ಸಾಧಿಸುವ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಬಲಪಡಿಸುತ್ತದೆ.
    www.lubkarnataka.org

Rishab Shetty ತಮ್ಮ ಚಿತ್ರಕ್ಕೆ ನೀಡಿದ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿಯನ್ನು ಸರ್ಕಾರಿ ಶಾಲೆಯ ಮಕ್ಕಳಿಗೆ ಅರ್ಪಿಸುವೆ- ನಟ ರಿಷಬ್ ಶೆಟ್ಟಿ.

Rishab Shetty ಚಲನಚಿತ್ರ ತಂತ್ರಜ್ಞಾನವು ಅಂತರ್ ರಾಷ್ಟ್ತೀಯ ಮಟ್ಟದಲ್ಲಿ ಅಗಾಧವಾಗಿ ಬೆಳೆದಿದೆ. ಅದಕ್ಕೆ ತಕ್ಕಂತೆ ನಾವು ಕಾರ್ಯನಿರ್ವಹಿಸಬೇಕಿದೆ. ಮೈಸೂರಿನಲ್ಲಿ ಸ್ಥಾಪಿಸಲಾಗುವ ಚಿತ್ರನಗರಿಯು ಇದಕ್ಕೆ ಪೂರಕವಾಗಲಿದೆ ಎಂದು ಖ್ಯಾತ ಚಿತ್ರನಟ-ನಿರ್ದೇಶಕ ರಿಷಬ್ ಶೆಟ್ಟಿ ಅಭಿಪ್ರಾಯಪಟ್ಟರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಸೋಮವಾರ(ನ.3) ಏರ್ಪಡಿಸಿದ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ತಮ್ಮ ನಿರ್ದೇಶನದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ 2018 ನೇ ಸಾಲಿನ “ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ”ದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಮೈಸೂರಿನಲ್ಲಿ ಚಿತ್ರನಗರಿ(ಫಿಲಂ ಸಿಟಿ) ನಿರ್ಮಾಣಕ್ಕೆ 162 ಎಕರೆ ಜಮೀನು ನೀಡಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಅಂತರ್ರಾಷ್ಟ್ರೀ ಲಯ ಗುಣಮಟ್ಠದ ಚಿತ್ರ ನಿರ್ಮಾಣಕ್ಕೆ‌ಚಿತ್ರನಗರಿ ಸಹ
ಕಾರಿಯಾಗಲಿದೆ ಎಂದರು.

Rishab Shetty ಸರಕಾರ ನೀಡುವ ಪ್ರಶಸ್ತಿಯಿಂದ ಪ್ರೋತ್ಸಾಹ ಹಾಗೂ ಬೆಂಬಲ ದೊರಕಿದಂತಾಗುತ್ತದೆ.
ಅನಿವಾರ್ಯ ಕಾರಣಗಳಿಂದ ಬಾಕಿಬಿರುವ ಪ್ರಶಸ್ತಿಗಳನ್ನು ಆದಷ್ಟು ಬೇಗನೇ ಘೋಷಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿರುವುದು ಸಂತಸ ತಂದಿದೆ ಎಂದರು.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ 2018 ನೇ ಸಾಲಿನ “ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ”ದ ಪ್ರಶಸ್ತಿಯನ್ನು ಸರಕಾರಿ ಶಾಲೆಯ ಮಕ್ಕಳಿಗೆ ಅರ್ಪಿಸುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದರು.

CM Siddaramaiah ಹೈದ್ರಾಬಾದ್ ಫಿಲಂ ಸಿಟಿಯ ಮಾದರಿಯಲ್ಲಿ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ- ಸಿದ್ಧರಾಮಯ್ಯ.

0

CM Siddaramaiah ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆ ಹಾಗೂ‌ ಭಾಷೆಯ ಹಿತರಕ್ಷಣೆಗೆ ರಾಜ್ಯ ಸರಕಾರ ಬದ್ಧವಾಗಿದೆ. ಮುಂದಿನ ವರ್ಷದಿಂದ ಆಯಾ ವರ್ಷವೇ ಚಲನಚಿತ್ರ ಪ್ರಶಸ್ತಿ ಹಾಗೂ ಸಬ್ಸಿಡಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯನ್ನು ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಸೋಮವಾರ(ನ.3) 2018 ಹಾಗೂ 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ಮೊದಲಿನಂತೆ ಮೌಲ್ಯಯುತ, ಸಾಮಾಜಿ ಕ‌ಳಕಳಿ ಇರುವ ಚಿತ್ರಗಳ ಸಂಖ್ಯೆ ಈಗ ಕಡಿಮೆಯಾಗಿದೆ. ಸಿನಿಮಾ‌ ಪ್ರಭಾಶಾಲಿ‌ ಮಾಧ್ಯಮ. ಜನರು‌ ಹಾಗೂ ಸಮಾಜದ‌ಮೇಲೆ‌ ಪರಿಣಾಮ‌ ಬೀರುತ್ತವೆ. ಆದ್ದರಿಂದ ಸಮಾಜದಲ್ಲಿ ಉತ್ತಮ ಬದಲಾವಣೆಗೆ ಕಾರಣವಾಗುವ ಸಿನಿಮಾಗಳನ್ನು ನಿರ್ಮಿಸಬೇಕು ಎಂದು ಕರೆ ನೀಡಿದರು.

ಹಿಂದೆ ನಾಯಕ ನಟರು ಆದರ್ಶವಾಗಿದ್ದರು. ಜನರು ಅವರಂತೆ ಬದುಕು ರೂಪಿಸಿಕೊಳ್ಳುತ್ತಿದ್ದರು. ನಟರು ಪರದೆಯಲ್ಲಿ ಇರುವಂತೆಯೇ ನಿಜ ಜೀವನದಲ್ಲಿಯೂ ನಡೆದುಕೊಂಡರೆ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗುತ್ತೀರಿ ಎಂದರು.

ಗುಣಮಟ್ಟದ ಚಿತ್ರಗಳಿಗೆ ಸಬ್ಸಿಡಿ:

CM Siddaramaiah ಸರಕಾರ‌ ಚಿತ್ರೋದ್ಯಮದ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹಿಸಲು ಸಬ್ಸಿಡಿ ನೀಡಲಾಗುತ್ತಿದೆ. ಗುಣಮಟ್ಟದ ಚಿತ್ರಗಳಿಗೆ ಸಬ್ಸಿಡಿ ನೀಡಲು ಸರಕಾರ ಹಿಂದೇಟು ಹಾಕುವುದಿಲ್ಲ; ಆದರೆ ಸಬ್ಸಿಡಿಗಾಗಿ ಸಿನಿಮಾ ನಿರ್ಮಾಣ ಮಾಡದೇ ಸಮಾಜಮುಖಿ ಸಿನಿಮಾಗಳನ್ನು ನಿರ್ಮಿಸಬೇಕು ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಿವಿಮಾತು ಹೇಳಿದರು.

ಚಲನಚಿತ್ರಗಳ ಸಬ್ಸಿಡಿ ಪ್ರಕ್ರಿಯೆ ‌ನಿರಂತರವಾಗಿ ನಡೆಯುತ್ತಿದ್ದು, ಆಯಾ ವರ್ಷದಲ್ಲಿಯೇ ಸಬ್ಸಿಡಿ ನೀಡಲು ಕ್ರಮ ವಹಿಸಲಾಗುವುದು ಎಂದರು.

ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ:

ಮೈಸೂರು ನಗರದಲ್ಲಿ ಚಿತ್ರನಗರಿ ನಿರ್ಮಾಣಕ್ಕಾಗಿ 160 ಎಕರೆ ಪ್ರದೇಶವನ್ನು ಈಗಾಗಲೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಡಿಸೆಂಬರ್ ಅಂತ್ಯದೊಳಗೆ ಡಿಪಿಆರ್ ಪೂರ್ಣಗೊಳಿಸಿದ ಬಳಿಕ ಟೆಂಡರ್ ಕರೆದು ಪಿಪಿಪಿ ಮಾದರಿಯಲ್ಲಿ ಹೈದ್ರಾಬಾದ್ ಫಿಲಂ ಸಿಟಿಯಂತೆ ಮೈಸೂರಿನಲ್ಲಿ ಚಿತ್ರನಗರಿಯನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದರು.

ಮೈಸೂರು ಸಾಂಸ್ಕೃತಿಕ ನಗರ ಎಂದು ಕರೆಯಲಾಗುತ್ತದೆ. ನಗರದಲ್ಲಿ 2018 ಹಾಗೂ 2019ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಹಿಂದಿನ ಸರಕಾರ ಪ್ರಶಸ್ತಿಗಳನ್ನು ಪ್ರದಾನ ಮಾಡಿರಲಿಲ್ಲ. ನಾವು ಅಧಿಕಾರಕ್ಕೆ ಬಂದು ಎರಡು ವರ್ಷಗಳಲ್ಲಿ 2018 ಹಾಗೂ 2019ರ ಪ್ರಶಸ್ತಿ ನೀಡಲಾಗುತ್ತಿದೆ.

ಕೆಲವೇ ದಿನಗಳಲ್ಲಿ 2021ನೇ ಸಾಲಿನ ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಗುತ್ತದೆ. ಇನ್ನು ಮುಂದೆ ಈ ರೀತಿ ವಿಳಂಬವಾಗಲು ಅವಕಾಶ ನೀಡುವುದಿಲ್ಲ. ಆಯಾ ಸಾಲಿನಲ್ಲಿಯೇ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತೇವೆ.
ಐದಾರು ವರ್ಷ ವಿಳಂಬವಾಗಿ ಪ್ರಶಸ್ತಿ ನೀಡಿದರೆ ಅರ್ಥವಿರುವುದಿಲ್ಲ ಎಂದು ಹೇಳಿದರು.

ವಿದ್ಯಾರ್ಥಿಯಾಗಿದ್ದಾಗ ಪ್ರತಿದಿನ ಸಿನಿಮಾ ನೋಡುತ್ತಿದ್ದೆ ಎಂದು ಮೆಲುಕು ಹಾಕಿದ ಮುಖ್ಯಮಂತ್ರಿಗಳು, ಹಿಂದಿನ ಕಾಲದಲ್ಲಿ ನಟರು, ನಿರ್ದೇಶಕರು, ನಿರ್ಮಾಕರ ಸಂಖ್ಯೆ ಕಡಿಮೆ ಇತ್ತು. ವರ್ಷಕ್ಕೆ ಐದಾರು ಸಿನಿಮಾಗಳು ನಿರ್ಮಾಣವಾಗುತ್ತಿದ್ದವು. ಈಗ ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು ಹಾಗೂ ಕಲಾವಿದರ ಸಂಖ್ಯೆ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಯಾಗಿದ್ದಾಗ ಪ್ರತಿದಿನ ಸಿನಿಮಾ ನೋಡುತ್ತಿದ್ದೆ. ಇತ್ತೀಚಿನ ದಿನಗಳಲ್ಲಿ ಸಮಯದ ಅಭಾವದಿಂದ ಸಿನಿಮಾ ನೋಡಲಾಗುತ್ತಿಲ್ಲ ಎಂದರು.

ಡಾ.ರಾಜಕುಮಾರ್ ಅವರು ಪರದೆಯಲ್ಲಿರುವಂತೆ ನಿಜ ಜೀವನದಲ್ಲಿಯೂ ಇರುತ್ತಿದ್ದರು. ಅವರು ನಟಿಸಿದ ಸಿನಿಮಾಗಳು ಸಮಾಜದ ಮೇಲೆ‌ ಅಗಾಧವಾದ ಪರಿಣಾಮ ಬೀರಿವೆ.
ಇದೇ ರೀತಿಯಲ್ಲಿ ಎಲ್ಲ ನಟ-ನಟಿಯರು, ಕಲಾವಿದರು ಬದುಕಬೇಕು. ಜನರಿಗೆ ಆದರ್ಶವಾಗಬೇಕು ಎಂದು ಸಲಹೆ ನೀಡಿದರು.
2018 – 19 ನೇ ಸಾಲಿನ ಎಲ್ಲ ಪ್ರಶಸ್ತಿ ಪುರಸ್ಕೃತರಿಗೆ ಸರಕಾರದ ಪರವಾಗಿ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್, ಡಾ.ವಿಷ್ಣುವರ್ಧನ್ ಜೀವಮಾನದ ಸಾಧನೆ ಪ್ರಶಸ್ತಿ ಪುರಸ್ಕೃತರಿಗೆ ಕೂಡ ಅಭಿನಂದನೆ ಸಲ್ಲಿಸಿದರು.

ಕನ್ನಡ ಚಿತ್ರರಂಗದಿಂದ‌ ಬಹುತ್ವ ರಕ್ಷಣೆ:

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು, ಕನ್ನಡ ಚಲನಚಿತ್ರ ರಂಗವು ಕೇವಲ ಮನರಂಜನೆಗೆ ಸೀಮಿತವಾಗಿರದೆ ಬಹುತ್ವದ ರಕ್ಷಣೆಗೆ ಪರಿಣಾಮಕಾರಿ ಕೊಡುಗೆ ನೀಡಿದೆ. ದಾರಿ ತಪ್ಪಿ ಹೋಗುತ್ತಿದ್ದ ಸಮಾಜವನ್ನು ಹಾಗೂ ಯುವಸಮುದಾಯದ ಮನಪರಿವರ್ತನೆಗೆ ಶ್ರಮಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು ವಿವಿಧ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ.
ಸಮುದ್ರವನ್ನು ಹೊರತುಪಡಿಸಿದರೆ ಸಿನಿಮಾ ಚಿತ್ರೀಕರಣಕ್ಕೆ ಅಗತ್ಯವಾದ ಎಲ್ಲ ರೀತಿಯ ಅನುಕೂಲ ಮತ್ತು ಪರಿಸರವನ್ನು ಮೈಸೂರು ಹೊಂದಿದೆ.
ಅಂತರ್ ರಾಷ್ಟ್ರೀಯ ಮಟ್ಟದ ಚಲನಚಿತ್ರ ನಗರ(ಫಿಲಂ ಸಿಟಿ) ಡಿಪಿಆರ್ ಹಂತದಲ್ಲಿದೆ. ಅದು ಕಾರ್ಯಗತಗೊಂಡರೆ ಮೈಸೂರು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಚಿತ್ರರಂಗವನ್ನು ಸೆಳೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡ ಚಲನಚಿತ್ರ ರಂಗದ‌ ಬೆಳವಣಿಗೆಗೆ ಸದಾ ಪ್ರೋತ್ಸಾಹ ನೀಡುತ್ತ ಬಂದಿರುತ್ತಾರೆ. ಅವರ ಅಧಿಕಾರವಧಿಯಲ್ಲಿಯೇ ಫಿಲಂ ಸಿಟಿ ಒಂದು ಹಂತಕ್ಕೆ ತರಲಾಗುವುದು ಎಂದರು.

ಡಾ.ರಾಜಕುಮಾರ್ ಕನ್ನಡ ಕ್ಷೇತ್ರ ಹಾಗೂ ಕಲಾರಂಗಕ್ಕೆ ನೀಡಿದ ಸೇವೆ ಅದ್ವಿತೀಯವಾದುದು ಎಂದು ಸ್ಮರಿಸಿದ ಸಚಿವ ಮಹದೇವಪ್ಪ, ಇನ್ನುಳಿದ ಸಾಲಿನ ಪ್ರಶಸ್ತಿಗಳ ಆಯ್ಕೆಗಾಗಿ ಸಮಿತಿಗಳನ್ನು ರಚಿಸಲಾಗಿದ್ದು, ಆದಷ್ಟು ಬೇಗನೇ ಆ ಪ್ರಶಸ್ತಿಗಳನ್ನು ಕೂಡ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ನೂರಾರು ವರ್ಷಗಳಿಂದ ದಸರಾ ಆಚರಿಸಲಾಗುತ್ತಿದೆ. ಕಳೆದ ಬಾರಿಯ ದಸರಾ ಇತಿಹಾಸದಲ್ಲಿಯೇ ಅತ್ಯುತ್ತಮವಾದ ದಸರಾ ಎಂದು ಜನಮನ್ನಣೆ ಗಳಿಸಿತು. ಜಾತಿ-ಧರ್ಮ ಯಾವುದೇ ಇರಲಿ. ನಾವೆಲ್ಲರೂ ಭಾರತೀಯರು ಎಂಬುದನ್ನು ಸಾರಿತು ಎಂದು ಸಚಿವ ಎಚ್.ಸಿ.ಮಹದೇವಪ್ಪ ಅವರು ಅಭಿಮಾನ ವ್ಯಕ್ತಪಡಿಸಿದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರು, ಕಾರಣಾಂತರಗಳಿಂದ ತಡವಾಗಿದ್ದ ಚಲನಚಿತ್ರ ಪ್ರಶಸ್ತಿಗಳ ವಿತರಣೆ ಸಮಾರಂಭಕ್ಕೆ ಮುಖ್ಯಮಂತ್ರಿಗಳ ಒತ್ತಾಸೆಯಿಂದ ಇದೀಗ ಮುಹೂರ್ತ ಕೂಡಿ ಬಂದಿದೆ ಎಂದರು.
ಕೋವಿಡ್, ನ್ಯಾಯಾಲಯ ಪ್ರಕರಣ ಮತ್ತಿತರ ಕಾರಣಗಳಿಂದ ಪ್ರಶಸ್ತಿ ಘೋಷಣೆಯು ವಿಳಂಬವಾಗಿತ್ತು. ಒಂದೇ ವರ್ಷದ ಅವಧಿಯಲ್ಲಿ ಏಳು ನೂರು ಚಿತ್ರಗಳನ್ನು ವೀಕ್ಷಿಸಿ ನಾಲ್ಕು ವರ್ಷಗಳ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲಾಗಿದೆ ಎಂದರು.
2018 ಹಾಗೂ 2019 ನೇ ಸಾಲಿನ ಪ್ರಶಸ್ತಿಗಳ ಆಯ್ಕೆಗಾಗಿ ವಿವಿಧ ಆಯ್ಕೆ ಸಮಿತಿಯ ಅಧ್ಯಕ್ಷರು, ಸದಸ್ಯರ ಅಹರ್ನಿಶಿ ಶ್ರಮದ ಫಲವಾಗಿ ಇಂದು ಅಭೂತಪೂರ್ವ ಸಮಾರಂಭ ನಡೆಯಲು ಕಾರಣೀಭೂತರಾಗಿದ್ದಾರೆ ಎಂದು ಹೇಳಿದರು.

ಸ್ಮರಣಸಂಚಿಕೆ‌ ಲೋಕಾಪರ್ಣೆ:

2018 ಹಾಗೂ 2019 ನೇ ಸಾಲಿನ ಪ್ರಶಸ್ತಿ ಪುರಸ್ಕೃತ ನಟರು, ನಟಿಯರು, ನಿರ್ದೇಶಕರು, ಸಂಭಾಷಣೆಕಾರರು, ಛಾಯಾಗ್ರಾಹಕರು, ಗೀತರಚನೆಕಾರರು, ಹಿನ್ನೆಲೆ ಗಾಯಕರು, ಕಲಾ ನಿರ್ದೇಶಕರು ಸೇರಿದಂತೆ ಎಲ್ಲ ಕಲಾವಿದರನ್ನು ಪರಿಚಯಿಸುವ ಸ್ಮರಣಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆಗೊಳಿಸಿದರು.

ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಚಾಮರಾಜನಗರದ ಕ್ಷೇತ್ರದ ಸಂಸದರಾದ ಸುನೀಲ್ ಬೋಸ್, ಶಾಸಕರಾದ ರವಿಶಂಕರ್, ಜಿ.ಡಿ.ಹರೀಶ್ ಗೌಡ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಶಿವಕುಮಾರ್ ಕೆ., ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್,ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಬಿ.ಕಾವೇರಿ, ಮತ್ತಿತರರು ಉಪಸ್ಥಿತರಿದ್ದರು.

ಹಿರಿಯ ನಟಿ ಉಮಾಶ್ರೀ, ನಟ-ನಿರ್ದೇಶಕರಾದ ರಿಷಬ್ ಶೆಟ್ಟಿ, ಹಂಸಲೇಖ, ರಾಜೇಂದ್ರ ಸಿಂಗ್ ಬಾಬು, ರಾಘವೇಂದ್ರ ರಾಜಕುಮಾರ್, ಡಾರ್ಲಿಂಗ್ ಕೃಷ್ಣ, ವಿ.ಹರಿಕೃಷ್ಣ, ಜೆ.ಕೆ.ಶ್ರೀನಿವಾಸ್ ಮೂರ್ತಿ,ಪಿ.ಶೇಷಾದ್ರಿ, ಬಿ.ಎಸ್.ಬಸವರಾಜ್, ರಿಚರ್ಡ್ ಕ್ಯಾಸ್ಟಲಿನೋ, ಸುಂದರ್ ರಾಜ್ ಸೇರಿದಂತೆ ಚಿತ್ರರಂಗದ ದಿಗ್ಗಜರು, ನೂರಾರು ಕಲಾವಿದರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Karnataka Rajyotsava ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದವರನ್ನ ಸ್ಮರಿಸೋಣ-ಶಕುಂತಲಾ ಚಂದ್ರಶೇಖರ್.

0

Karnataka Rajyotsava ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಕರ್ನಾಟಕ ಏಕೀಕರಣಕ್ಕೆ ಅನೇಕ ಮಹನೀಯರು ಶ್ರಮಿಸಿದ್ದಾರೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
ನಗರದ ಬಾಲಕಿಯರ ಪದವಿಪೂರ್ವ ಕಾಲೇಜು ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆಗಾಗಿ ನಾವೆಲ್ಲರೂ ಪಣತೊಡಬೇಕಾಗಿದೆ. ಲೇಖಕರು, ಕವಿಗಳು ಸೇರಿದಂತೆ ಹಲವು ಮಹನೀಯರು ಕರ್ನಾಟಕ ಏಕೀಕರಣಕ್ಕೆ ಕಾರಣರಾದರು ಎಂದು ತಿಳಿಸಿದರು.
Karnataka Rajyotsava ಕನ್ನಡಿಗರ ಭಾಷೆ ಚೆಂದ, ಕನ್ನಡಿಗರ ಮನವು ಅಂದ, ಕನ್ನಡಿಗರ ನಾಡು ಚಂದವೋ ಚಂದ. ಕರ್ನಾಟಕ ನಮ್ಮ ಹೆಮ್ಮೆಯ ರಾಜ್ಯ. ಕನ್ನಡ ನಮ್ಮ ಮಾತೃಭಾಷೆ. ಕನ್ನಡಾಂಬೆ ಮಕ್ಕಳಾದ ನಾವು ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಾಂಬೆಗೆ ಗೌರವ ಸಲ್ಲಿಸುವುದು ಸೇರಿ ಕನ್ನಡ ಭಾಷಾಭಿಮಾನ ಮೆರೆಯಬೇಕು ಎಂದರು.
ಕಾಲೇಜಿನಲ್ಲಿ ಕನ್ನಡ ಬಾವುಟದ ಧ್ವಜಾರೋಹಣ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿ ಮಂಜುಳಾ ಪ್ರಮಾಣ ವಚನ ಬೋಧಿಸಿದರು.
ಪ್ರಾಚಾರ್ಯ ಟಿ.ಎಸ್.ಮಹೇಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಜಿಲ್ಲಾ ತರಬೇತಿ ಆಯುಕ್ತ ಎಚ್.ಶಿವಶಂಕರಪ್ಪ, ಸಹ ಜಿಲ್ಲಾ ಆಯುಕ್ತ ಮಲ್ಲಿಕಾರ್ಜುನ ಕಾನೂರು, ಗೈಡ್ ಆಯುಕ್ತೆ ಲಕ್ಷ್ಮೀ, ರೋವರ್ ಆಯುಕ್ತ ಕೆ ರವಿ., ಸ್ಥಳೀಯ ಸಂಸ್ಥೆ ತಾಲೂಕು ಕಾರ್ಯದರ್ಶಿ ರಾಜೇಶ್ ಅವಲಕ್ಕಿ, ರೇಂಜರ್ ಲೀಡರ್ ಗೀತಾ, ಭಾರತಿ, ಸುಧಾ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು

Shimoga News ಮಲವಗೊಪ್ಪ ಡ್ರೈವಿಂಗ್ ಟ್ರ್ಯಾಕ್ ನಲ್ಲಿವಾಯುಮಾಲಿನ್ಯ ಮಾಸಾಚರಣೆ ಜಾಗೃತಿ.

0

Shimoga News ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಶಿವಮೊಗ್ಗ ವತಿಯಿಂದ, ವಾಯುಮಾಲಿನ್ಯ ನಿಯಂತ್ರಣ ಮಾಸಚಾರಣೆ ನವೆಂಬರ್ ಮಾಹೆ 2025ನ್ನು ಕಚೇರಿಯ ಮಲವಗೋಪ್ಪಾ ಡ್ರೈವಿಂಗ್ ಟ್ರ್ಯಾಕ್ ನಲ್ಲಿ ಉದ್ಘಾಟನೆ ನೆರವೇರಿಸಲಾಯಿತು. ಮುಖ್ಯಅತಿಥಿಗಳಾಗಿ ಶ್ರೀನಾಗೇಂದ್ರಬಾಬುಕುಮಾರ್ ಐ.ಎ.ಎಸ್. ರವರುಹಾಜರಿದ್ದುಕರಪತ್ರ ಬಿಡುಗಡೆ ಗೊಳಿಸಿ ನೆರದಿದ್ದ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಿದರು ಶ್ರೀ ಮುರಗೇಂದ್ರ ಶಿರೋಳ್ಕರ್ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು. ಶ್ರೀ ಮಲ್ಲೇಶಪ್ಪ ಹಿರಿಯ ಮೋಟಾರ್ ವಾಹನ ನೀರಿಕ್ಷಕರು ಹಾಜರಿದ್ದರು