Thursday, August 6, 2026
Thursday, August 6, 2026

ಕೂಡಲಿ ಶೃಂಗೇರಿ ಮಠದ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸುಳ್ಳು ಸುದ್ದಿ ನಂಬ ಬೇಡಿ- ಹರ್ಷ ಪಂತರ್

Date:

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಪತ್ರಿಕಾ ವರದಿಗಳ ಮೂಲಕ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಶ್ರೀ ಶಾರದಾ ಪೀಠಮ್ ಕುರಿತು ಅನವಶ್ಯಕ ಗೊಂದಲಕಾರಿ ಮಾಹಿತಿಗಳು ಹರಡುತ್ತಿರುವುದು ಗಮನಕ್ಕೆ ಬಂದ್ದು, ಭಕ್ತವೃಂದದವರು ಯಾವುದೇ ಗೊಂದಲಕ್ಕೆ ಒಳಗಾಗದೇ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಕೂಡಲಿ ಶೃಂಗೇರಿ ಮಠದ ಆಡಳಿತಾಧಿಕಾರಿ ಹರ್ಷ ಪಂತರ್ ಸ್ಪಷ್ಟೀಕರಣ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶ್ರೀಮದ್ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳು ಪ್ರಸ್ತುತ ಶ್ರೀಮಠದ ಶಾಖಾ ಮಠವಾದ ದಾವಣಗೆರೆಯಲ್ಲಿ ವಾಸ್ತವ್ಯದಲ್ಲಿದ್ದು, ಅಲ್ಲಿ ಭಕ್ತರಿಗೆ ನಿತ್ಯವೂ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
ಜಗದ್ಗುರುಗಳು ಶೃಂಗೇರಿಗೆ ತೆರಳಿರುವುದು ಕೇವಲ ದರ್ಶನ ಹಾಗೂ ಬಾಂಧವ್ಯ ಸಂಬಂಧಿತ ಉದ್ದೇಶಗಳಿಗೆ ಮಾತ್ರವಾಗಿದ್ದು, ಇತರೆ ಯಾವುದೇ ಚರ್ಚೆಗಳು ಅಥವಾ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಪಟ್ಟುದಲ್ಲ. ಹಾಗೂ ಶ್ರೀಮಠದ ಆಡಳಿತಾಧಿಕಾರಿಗಳಾದ ಹರ್ಷ ಪಂತರ್ ಹಾಗೂ ಧಾರ್ಮಿಕ ಸೇವೆಗಳ ನಿರ್ವಹಣೆಗೆ ಶ್ರೀ ಪ್ರದೀಪ್ ಅಗ್ನಿಹೋತ್ರಿ ಅವರನ್ನು ಜಗದ್ಗುರುಗಳೇ ಸ್ವತಃ ಪರಿಶೀಲಿಸಿ ನಿಯೋಜಿಸಿರುವುದು ಸ್ಪಷ್ಟಪಡಿಸಲಾಗುತ್ತದೆ ಎಂದಿದ್ದಾರೆ.
ಆದ್ದರಿಂದ, ಭಕ್ತಾದಿಗಳು ಯಾವುದೇ ವದಂತಿಗಳು ಅಥವಾ ಅಪ್ರಮಾಣಿತ ಮಾಹಿತಿಗಳಿಗೆ ಕಿವಿಗೊಡದೆ, ಶ್ರೀಮಠದ ಅಧಿಕೃತ ಪ್ರಕಟಣೆಗಳನ್ನೇ ನಂಬಿ ಸಹಕರಿಸುವಂತೆ ವಿನಂತಿಸಿಕೊಳ್ಳಲಾಗುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jog Falls ಪ್ರತೀ ಶನಿವಾರ & ಭಾನುವಾರ ರಸ್ತೆ ಸಾರಿಗೆ ನಿಗಮದಿಂದಸಿಗಂದೂರು- ಜೋಗ ಪ್ರವಾಸಿ ಪ್ಯಾಕೇಜ್ ಘೋಷಣೆ.

Jog Falls ಪ್ರಸ್ತುತ ಮಳೆಗಾಲದಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ವಿಶ್ವವಿಖ್ಯಾತ ಜೋಗ್‌ಫಾಲ್ಸ್...

Shivamogga News ಥಣ್ಣಗಾಗುತ್ತಿರುವ ಸಚಿವಾಕಾಂಕ್ಷಿತನ..…ಶಿವಕೌಶಲ

Shivamogga News ರಾಜಕೀಯದಲ್ಲಿ ಸ್ಥಿರತೆ ಯಾವತ್ತಿಗೂ ನಿರೀಕ್ಷಿಸಲಾಗದು ಎಂಬ ಮುತ್ಸದ್ದಿಗಳ ಮಾತಿದೆ....