Monday, December 8, 2025
Monday, December 8, 2025

ಭ್ರಷ್ಟಾಚಾರ ಮತ್ತು ವೈಫಲ್ಯ ಇಷ್ಟೆ ಬೋಮ್ಮಾಯಿ ಸರ್ಕಾರದ ಸಾಧನೆ-ಸಿದ್ಧು

Date:

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಬೊಮ್ಮಾಯಿ ನೇತೃತ್ವದ ಸರ್ಕಾರದ ಸಾಧನೆ ಎಂದರೆ ಭ್ರಷ್ಟಾಚಾರ ಮತ್ತು ವೈಫಲ್ಯ. ಸಿಎಂ ಬದಲಾಗಿದ್ದಾರೆ ಹೊರತು ಸರ್ಕಾರ ಬದಲಾಗಿಲ್ಲ ಭ್ರಷ್ಟಾಚಾರ ನಿಂತಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

“ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಐದು ವರ್ಷದಲ್ಲಿ ನೀರಾವರಿಗಾಗಿ 1.50 ಲಕ್ಷ ಕೋಟಿ ರೂ ವೆಚ್ಚ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ವರ್ಷಕ್ಕೆ ಕನಿಷ್ಠ 30,000 ಕೋಟಿ ರೂ ಖರ್ಚು ಮಾಡಬೇಕಿತ್ತು. ಆದರೆ ಈ ಸರ್ಕಾರ ಖರ್ಚು ಮಾಡಿರುವುದು 6,300 ಕೋಟಿ ರೂ ಮಾತ್ರ. ಗಂಗಾ ಕಲ್ಯಾಣ ಯೋಜನೆಗೆ ಕೇವಲ 30 ಕೋಟಿ ರೂ ನೀಡಲಾಗಿದೆ. ಬಜೆಟ್ ಗಾತ್ರ ಹೆಚ್ಚಾದಂತೆ ಎಸ್ ಸಿ ಪಿ-ಟಿ ಎಸ್ ಪಿ ಅನುದಾನವೂ ಹೆಚ್ಚಾಗಬೇಕು ಆದರೆ ಅನುದಾನ ಕಡಿಮೆ ಮಾಡಿರುವುದು ದಲಿತರಿಗೆ ಮಾಡಿರುವ ದ್ರೋಹ” ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

“ಸರ್ಕಾರ ತನ್ನ ಜಾಹೀರಾತಿನಲ್ಲಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿಗೆ 3000 ಕೋಟಿ ರೂ ವೆಚ್ಚ ಮಾಡುವುದಾಗಿ ಹೇಳಿದ್ದು ಈವರೆಗೆ ಬಿಡುಗಡೆ ಯಾಗಿರುವುದು 1200 ಕೋಟಿ ರೂ ಕೊರೋನಾ ಪರಿಸ್ಥಿತಿ ನಿಯಂತ್ರಣದಲ್ಲಿ ಎಡವಿದೆ. ಕೋವಿಡ್ ಸಾವಿನ ಸಂಖ್ಯೆಯನ್ನು ಸುಳ್ಳು ಮಾಹಿತಿ ನೀಡಿದೆ” ಎಂದು ಹೆಚ್.ಕೆ ಪಾಟೀಲ್ ಅವರು ಸರ್ಕಾರದ ವಿರುದ್ಧ ಹರಿಹಾಯ್ದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು “ಜೆಡಿಎಸ್ ನಲ್ಲಿ ಇದ್ದಾಗಿನಿಂದಲೂ ಜೊತೆಗಿದ್ದವರು ಹಾಗಾಗಿ ಅವರು ಪಕ್ಷ ಬಿಡುವುದಿಲ್ಲ. ಸದ್ಯ ಪಕ್ಷದ ಮೇಲೆ ಕೋಪ ಬಂದಿದೆ. ಹಾಗಾಗಿ ಆ ರೀತಿ ಮಾತನಾಡಿದ್ದಾರೆ. ಅವರ ಕೋಪ ಕಡಿಮೆಯಾದ ಮೇಲೆ ನಾನು ಹೋಗಿ ಮಾತನಾಡುತ್ತೇನೆ. ಇಬ್ರಾಹಿಂ ಜೊತೆಗೆ ನಜೀರ್ ಅಹಮದ್ ಕೂಡ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಾಗಿದ್ದರು. ಎಲ್ಲಾ ಆಕಾಂಕ್ಷಿಗಳಿಗೆ ಅವಕಾಶ ನೀಡಲು ಸಾಧ್ಯವೇ?” ಎಂದು ತಿಳಿಸಿದ್ದಾರೆ.

“ಈ ಸರ್ಕಾರದ ಸಾಧನೆಯೆಂದರೆ ಭ್ರಷ್ಟಾಚಾರ. ಗುತ್ತಿಗೆದಾರರ ಸಂಘವು ಪ್ರಧಾನಿಗಳಿಗೆ ಪತ್ರ ಬರೆದರೂ ಚೌಕಿದಾರ್ ಎಂದು ಕರೆದುಕೊಳ್ಳುವ ಮೋದಿ ಸುಮ್ಮನಿದ್ದಾರೆ” ಎಂದು ಹೆಚ್ ಕೆ ಪಾಟೀಲ್ ಕುಟುಕಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ವಿಧಾನಸಭೆ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸಜ್ಜು.

CM Siddaramaiah ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಳಿಗಾಲದ ಅಧಿವೇಶನದ ಪ್ರಯುಕ್ತ ಸುವರ್ಣ...

Shimoga News ಜೀವರಕ್ಷಣಾ ಕೌಶಲ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು- ಸೀಮಾ ಆನಂದ್

Shimoga News ಜೀವ ರಕ್ಷಿಸುವ ಕೌಶಲ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವುದು ಅತ್ಯಂತ...

Gurudutt Hegde ಧ್ವಜವಂತಿಗೆ ನೀಡುವ ಮೂಲಕ ನಿವೃತ್ತ ಸೈನಿಕರಿಗೆ & ಅವರ ಅವಲಂಬಿತರಿಗೆ ನೆರವಾಗೋಣ- ಗುರುದತ್ತ ಹೆಗಡೆ

Gurudutt Hegde ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ಸೈನಿಕರನ್ನು ಗೌರವಿಸುವ ಉದ್ದೇಶದಿಂದ...

D S Arun ರಾಜ್ಯ ಕ್ರಿಕೆಟ್ ಸಂಸ್ಥೆಯ ನಿರ್ದೇಶಕರಾಗಿ ಶಾಸಕ ಡಿ.ಎಸ್.ಅರುಣ್ ಆಯ್ಕೆ.

D S Arun ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯ...