Saturday, October 5, 2024
Saturday, October 5, 2024

ಆಸ್ಟ್ರೇಲಿಯನ್ ಓಪನ್ ಟೆನ್ನಿಸ್;ಆಶ್ಲೀ- ಬಾರ್ಟಿ ‌ಮಹಿಳೆಯರ ಫೈನಲ್ಸ್ ಗೆ

Date:

ಆಸ್ಟ್ರೇಲಿಯನ್ ಓಪನ್ ಹಾಲಿ ಆವೃತ್ತಿಯ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಗಾಗಿ ಸೆಣಸಾಡಲು ಅಗ್ರಶ್ರೇಯಾಂಕದ ಸ್ಥಳೀಯ ಪ್ರತಿಭೆ ಆಶ್ಲೀ, ಅಮೆರಿಕದ ಡೇನಿಯಲ್ ಕಾಲಿನ್ಸ್ ಮೊದಲ ಗ್ರ್ಯಾ ನ್ ಸ್ಲಾಮ್ ಪ್ರಶಸ್ತಿಯ ಕನಸು ಕಾಣುತ್ತಿದ್ದರೆ, ಎರಡನೇ ಸೆಮಿಫೈನಲ್ ನಲ್ಲಿ ಜಯ ಗಳಿಸಿರುವ ಕಾಲಿನ್ಸ್ ಮೊದಲ ಗ್ರ್ಯಾನ್ ಸ್ಲಾಮ್ ಟ್ರೋಫಿಯ ನಿರೀಕ್ಷೆಯಲ್ಲಿದ್ದಾರೆ.

ರಾಡ್ ಲೇವರ್ ಅರೇನಾದಲ್ಲಿ ನಡೆದ 2ಸೆಮಿಸ್ಟರ್ ಪಂದ್ಯಗಳು ಕ್ಷಿಪ್ರಗತಿಯಲ್ಲಿ ಮುಕ್ತಾಯ ಕಂಡಿದೆ. ಮೊದಲ ಪಂದ್ಯದಲ್ಲಿ ಆಶ್ಲೀ, ಅಮೆರಿಕದ ಮ್ಯಾಡಿಸನ್ ಕೀಸ್ ಗೆ 6-1,6-3 ನೇರ ಸೆಟ್ ಗಳಿಂದ ಸೋಲಿಸಿದರೇ, ಎರಡನೇ ಪಂದ್ಯದಲ್ಲಿ ಪೋಲೆಂಡ್ ನ ಇಗಾ ಸ್ವಿಯಾಟೆಕ್ ವಿರುದ್ಧ ಕಾಲಿನ್ಸ್ 6-4,6-1 ನೇರ ಸೆಟ್ ಗಳ ಸುಲಭ ಜಯ ದಾಖಲಿಸಿದರು. ಇವರಿಬ್ಬರ ನಡುವೆ ಶನಿವಾರ ಫೈನಲ್ ನಡೆಯಲಿದೆ. ಸ್ಥಳೀಯ ಆಟಗಾರ್ತಿ ಬಾರ್ಟಿ ಪ್ರಶಸ್ತಿ ಫೇವರಿಟ್ ಎನಿಸಿಕೊಂಡಿದ್ದಾರೆ.

ವಿಶ್ವದ ಅಗ್ರಶ್ರೇಯಾಂಕದ ಆಟಗಾರ್ತಿ ಬಾರ್ಟಿ ಮತ್ತು 51 ನೇ ಶ್ರೇಯಾಂಕದ ಕೀಸ್ ನಡುವಿನ ಪಂದ್ಯ ಕೇವಲ ಒಂದು ಗಂಟೆ ಎರಡು ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದ್ದ 25 ವರ್ಷದ ಬಾರ್ಟಿ, ಸ್ಥಳೀಯ ಅಭಿಮಾನಿಗಳ ಬೆಂಬಲದೊಂದಿಗೆ ಸುಲಭ ಜಯಕ್ಕೆ ಪಾತ್ರರಾದರು. ಇಷ್ಟಲ್ಲದೆ ಈ ಮೂಲಕ 42 ವರ್ಷಗಳ ನಂತರ ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶ ಪಡೆದ ಆಸ್ಟ್ರೇಲಿಯಾದ ಆಟಗಾರ್ತಿ ಎನಿಸಿಕೊಂಡರು. 2019 ರ ಫ್ರೆಂಚ್ ಓಪನ್ ಮತ್ತು 2021ರ ವಿಂಬಲ್ಡನ್ ಪ್ರಶಸ್ತಿಗಳ ಒಡತಿಯಾಗಿರುವ ಬಾರ್ಟಿ ತಮಗೆ ದೊರಕಿದ ಆರು ಬ್ರೇಕ್ ಪಾಯಿಂಟ್ ಅವಕಾಶಗಳಲ್ಲಿ ನಾಲ್ಕನ್ನು ತಮ್ಮ ಪರವಾಗಿಸಿಕೊಂಡರು. ಅವರ ಚಾಕಚಕ್ಯತೆ ಮತ್ತು ಬಲವಾದ ಮುಂಗೈ ಹೊಡೆತಗಳಿಗೆ 2017ರ ಯುಎಸ್ ಓಪನ್ ರನ್ನರ್ ಅಪ್ ಮ್ಯಾಡಿಸನ್ ನಿರುತ್ತರರಾದರು. ಒಂದು ಡಬಲ್ ಫಾಲ್ಟ್ ಎಸ ಗದೆ, ಶರವೇಗದಲ್ಲಿ 5 ಏಸ್ ಗಳನ್ನು ಸಿಡಿಸಿದ ಆಸ್ಟ್ರೇಲಿಯಾದ ತರುಣಿಗೆ ಅರ್ಹ ಜಯ ಲಭಿಸಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Chennabasappa ಬನ್ನಿ ಪೂಜೆಗೆ ಶಾಸಕ ಚೆನ್ನಿ ಅವರಿಂದ ಪೂರ್ವೋಚಿತ ಸಿದ್ಧತೆ

S.N.Chennabasappa ನವರಾತ್ರಿ ಉತ್ಸವದ ಕಡೆಯ ದಿನದಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ...

Shree Sigandur Chowdeshwari Temple ಸಿಗಂದೂರು ದೇವಿ ವೈಭವದ ನವರಾತ್ರಿ ಉತ್ಸವ

Shree Sigandur Chowdeshwari Temple ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ...

Madhu Bangarappa ಸಾರ್ವಜನಿಕರ ಅಹವಾಲುಗಳಿಗೆ ಸಕಾಲದಲ್ಲಿ ಅಗತ್ಯ ಸೌಲಭ್ಯ ಒದಗಿಸಿ- ಮಧು ಬಂಗಾರಪ್ಪ

Madhu Bangarappa ಸೌಲಭ್ಯ ಅರಸಿ ಕಚೇರಿಗೆ ಆಗಮಿಸುವ ಗ್ರಾಮೀಣ ಮತ್ತು...

CM Siddharamaiah ಚಾಮುಂಡೇಶ್ವರಿ ಆಶೀರ್ವಾದದಿಂದಲೇ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ- ಸಿದ್ಧರಾಮಯ್ಯ

CM Siddharamaiah ತಾಯಿ ಚಾಮುಂಡೇಶ್ವರಿ ಹಾಗೂ ಇಲ್ಲಿನ ಜನರ ಆಶೀರ್ವಾದದಿಂದಲೇ ಎರಡನೇ...