ಸಾಗರ. ಸಾಗರ ತಾಲೂಕಿನ ಹಿರೆಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡಗೋಡು ಗ್ರಾಮದ ಸರ್ವೆ ನಂ 62 ರಲ್ಲಿ ಸುಮಾರು 3 ಎಕರೆ ಪ್ರದೇಶದಲ್ಲಿ ಅತಿಕ್ರಮಣ , ಮಾಡಿ ಅರಣ್ಯ ನಾಶಮಾಡಿ, ಜಾಗ ಒತ್ತುವರಿ ಮಾಡಿ ಕೊಳ್ಳುತ್ತಿರುವಾಗ ಸ್ಥಳೀಯ ಗ್ರಾಮಸ್ಥರು ಕಂದಾಯ,ಅರಣ್ಯ ಇಲಾಖೆ ತಿಳಿಸಿದಾಗ ಡಾ.ಪ್ರತೀಬಾ .ಅರ್ ತಾಹಿಸೀಲ್ದಾರ,ಅರಣ್ಯ ಅಧಿಕಾರಿಗಳ ತಂಡ ಸ್ಥಳಕ್ಕೆ ಬಂದು ಜಾಗವನ್ನು ತೆರವು ಕಾರ್ಯಾಚರಣೆ ಮಾಡಿದ್ದಾರೆ. ಅರಣ್ಯ ಒತ್ತು ವರಿದಾರಿಗೆ ಎಚ್ಚರಿಕೆ ನೀಡಿದ್ದಾರೆ. ಹಿಂದೆಯು ಎರಡು ಬಾರಿ ಕೊಡ ಒತ್ತುವರಿ ಮಾಡಿದಾಗ ಗ್ರಾಮದ ಜನರು ನಮ್ಮೊಂದಿಗೆ ಹೊರಟ ಮಾಡಿ ಅರಣ್ಯ ಸಂರಕ್ಷಣೆ ಮಾಡಿಕೊಂಡಿದ್ದಾರೆ.
ಈ ವಿಚಾರ ವನ್ನು ಹಿಂದಿನ ಅರಣ್ಯ ಸಚಿವ ರಾದ ಮಾನ್ಯ ಈಶ್ವರ ಖಂಡ್ರೆ ಗಮನಕ್ಕೆ ತಂದಾಗ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೂ ಪದೇ ಪದೇ ಸಾಗರ ತಾಲೂಕಿನಲ್ಲಿ ಈ ರೀತಿಯ ಘಟನೆ ನಡೆದಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಅರಣ್ಯ ಮತ್ತು ಕಾಡಿನ ಹೊಸ ಅತಿಕ್ರಮಣಕ್ಕೆ ಬೆಂಬಲ ನಿಡಬಾರದು. ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿ ಎಂದು
ವೃಕ್ಷ ಲಕ್ಷ ಆಂದೋಲನ ಕರ್ನಾಟಕ ಸಂಚಾಲಕರಾದ ಕವಲಕೋಡು ವೆಂಕಟೇಶ್ ಕೆ. ವಿನಂತಿಸಿದ್ದಾರೆ.
ಮಲೆನಾಡಿನ ಅರಣ್ಯದ ಮೇಲೆ ಅತಿಕ್ರಮಣ ನಿಲ್ಲಿಸಿ- ಪರಿಸರವಾದಿ ಕವಲಕೋಡು ವೆಂಕಟೇಶ್ ಆಗ್ರಹ.
Date:
