ಶಿವಮೊಗ್ಗ ನಗರದ ಸಾಗರ ರಸ್ತೆಯ ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳವರ ಅಂಧ ಮಕ್ಕಳ ಸಂಗೀತ ವಿದ್ಯಾಲಯ ಶ್ರೀ ವೀರೇಶ್ವರ ಪುಣ್ಯಾಶ್ರಮ ಸಂಸ್ಕೃತ ಪಾಠಶಾಲೆಯಲ್ಲಿ ಜು. ೩೧ರ ಶುಕ್ರವಾರದಿಂದ ಆ. ೨ರ ಭಾನುವಾರದವರೆಗೆ ಗಾನ ಯೋಗಿ ಪಂ. ಪಂಚಾಕ್ಷರಗವಾಯಿಗಳವರ ೮೨ನೇ ಹಾಗೂ ಪಂ. ಪುಟ್ಟರಾಜ ಕವಿಗವಾಯಿಗಳವರ ೧೬ನೇ ಪುಣ್ಯ ಸ್ಮರಣೋತ್ಸವ ಸಂಗೀತ ಸ್ವರ ಸಮಾರಾಧನೆ, ಸಾಂಸ್ಕೃತಿಕ, ಧಾರ್ಮಿಕ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಜು. 31ರ ಸಂಜೆ 5:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಡೆಯರ್ ಡಾ. ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಗದಗ ಜಡೆಮಠದ ಡಾ. ಮಹಾಂತ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಶ್ರೀ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್.ಬಿ. ಸಂಗಮೇಶ್ವರ ಗವಾಯಿಗಳು ವಹಿಸುವರು.
ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ವಿದ್ಯಾಧರ ಶಾಸ್ತ್ರಿಗಳಿಂದ ವೇದಘೋಷ ಹಾಗೂ ಪ್ರಮುಖರಾದ ಎಸ್. ರುದ್ರೇಗೌಡ್ರು, ನವೀನ ಎಂ. ಪೈಸ್, ಕಿರಣಕುಮಾರ, ಆಶಾ ಚನ್ನಬಸಪ್ಪ ಎಸ್.ವಿ. ಚಂದ್ರಕಲಾ ಭಾಗವಹಿಸು ವರು. ಗೋಪಾಳದ ಶಾರದಾಶಂಕರ ಭಜನಾ ಮಂಡಳಿಯಿಂದ ಭಜನೆ, ಸಿದ್ದಣ್ಣ ಬಡಿಗೇರ ಅವರ ಗಾಯನ ನಡೆಯಲಿದೆ.
ಈ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು.
ಆ. ೧ರಂದು ಸಂಜೆ ೫.೩೦ಕ್ಕೆ ಮೂಲೆ ಗದ್ದೆ ಶಿವಯೋಗಾಶ್ರಮದ ಶ್ರೀ ಚನ್ನಬಸವ ಮಹಾಸ್ವಾಮಿಗಳು ಹಾಗೂ ಬೃಹಮ್ನಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ರೇವಣಸಿದ್ದಯ್ಯ ಶಾಸ್ತ್ರಿಗಳಿಂದ ವೇದಘೋಷ, ಸಿರಿ ಪಿ. ಹಿರೇಮಠ್ರಿಂದ ಭರತನಾಟ್ಯ, ಆಶ್ರಮದ ಮಕ್ಕಳಿಂದ ಪ್ರಾರ್ಥನೆ ನಡೆಯಲಿದೆ. ಗೀತಾಮೃತ ಭಜನಾ ಮಂಡಳಿಯಿಂದ ಭಜನಾ ಸೇವೆ, ಜೂನಿಯರ್ ವಿಷ್ಣುವರ್ಧನ್ ಜೈಶ್ರೀರಾಜ್ರಿಂದ ಮನರಂಜನೆ, ನಂತರ ಸಂಗೀತ ಗಾಯನ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಆ. 2ರಂದು ಶ್ರೀ ಬೆಕ್ಕನಿ ಕಲ್ಮಠ ಶ್ರೀ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು ಮತ್ತು ಶ್ರೀ ಶಿವಕುಮಾರ್ ಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀ ಅಭಿನವ ಪಂಚಾಕ್ಷರ ಶಿವಾ ಚಾರ್ಯ ಸ್ವಾಮಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ತೃತೀಯ ಪೀಠಾಧಿಪತಿ ಶ್ರೀ ಡಾ. ಕಲ್ಲಯ್ಯಜ್ಜ ಅಧ್ಯಕ್ಷತೆ ವಹಿಸುವರು. ರಾಜ ಪುರೋಹಿತ ಶ್ರೀ ಫಕ್ಕೀರಯ್ಯ ಸ್ವಾಮಿ ಅವರಿಂದ ವೇದಘೋಷ, ಶಿವಕುಮಾರಿ ಬಸವಲಿಂಗಪ್ಪರಿಂದ ತುಲಾಭಾರ ನಡೆಯಲಿದ್ದು, ಅತಿಥಿ ಗಳಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕ ಚನ್ನಬಸಪ್ಪ, ಡಿ.ಎಸ್. ಅರುಣ್ ಸೇರಿ ದಂತೆ ಹಲವರು ಭಾಗವಹಿಸಲಿದ್ದಾರೆ.
ಆ. ೨ರಂದು ಬೆಳಿಗ್ಗೆ ಶೇಖರಯ್ಯ ಶಾಸ್ತ್ರಿಗಳಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಆಶ್ರಮದಲ್ಲಿ ನಿರಂತರ ವಾದಕರಾಗಿ ಸೇವೆ ಸಲ್ಲಿಸುತ್ತಿರುವುದರಿಂದಲೇ ವಾಧ್ಯಘೋಷ ನಡೆಯಲಿದೆ. ಆ. 2ರ ಸಂಜೆ 5:30ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಡಾ. ಕಲ್ಲಯ್ಯಜ್ಜ ಅಧ್ಯಕ್ಷತೆಯಲ್ಲಿ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳ ರಚನೆಯ ಶ್ರೀಕೃಷ್ಣ ಗಾರುಡಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ವಿಜಯಾನಂದ ರಾಜೋಳ್ಳಿ ಉದ್ಘಾಟಿಸುವರು.
ಮೂರು ದಿನಗಳ ಈ ವಿಶೇಷ ಕಾಯಕ್ರಮಗಳಿಗೆ ವಿವಿಧ ಜಿಲ್ಲೆಗಳಿಂದ ಗಣ್ಯರು ಭಾಗವಹಿಸಲಿದ್ದಾರೆ.
