Monday, August 24, 2026
Monday, August 24, 2026

ಹೊಯ್ಸಳ ಆರೋಗ್ಯ ಕೇಂದ್ರದಲ್ಲಿ ‘ಜೀವನಧಾರ’ ಡಯಾಲಿಸಿಸ್ ಬಗ್ಗೆ ಮಾಹಿತಿ‌ ಕಾರ್ಯಾಗಾರ

Date:

ಹೊಯ್ಸಳ ಸಹಕಾರ ಸಂಘದ ಅಧ್ಯಕ್ಷರೂ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಶಂಕರ್ ಮತ್ತು ಶಶಿ ಎಂ. ಶಂಕರ್ ಇವರ ನೇತೃತ್ವದಲ್ಲಿ ಕುವೆಂಪು ನಗರದಲ್ಲಿರುವ ಹೊಯ್ಸಳ ಆರೋಗ್ಯ ಕೇಂದ್ರದಲ್ಲಿ ‘ಜೀವನಧಾರ’ ಎಂಬ ಹೆಸರಿನಲ್ಲಿ ಪೋಷಕ ಸಿಬ್ಬಂದಿಯಿಂದ ಮೂತ್ರಪಿಂಡ ಡಯಾಲಿಸಿಸ್ ಪ್ರಕ್ರಿಯೆಯ ಬಗ್ಗೆ ಮಾಹಿತಿ ಕಾರ್ಯಗಾರ ಹಾಗೂ ಆರ್ಥಿಕ ನೀಡಿ ಕಾರ್ಯಕ್ರಮ ಆಯೋಜಿಸಲಾಯಿತು.

ಶಿವಮೊಗ್ಗ ಐಡಬ್ಲ್ಯೂಸಿಯ ಪ್ರಸ್ತುತ ಅಧ್ಯಕ್ಷೆ ಸುನೀತಾ ಮೋಹನ್, ಸಂಪಾದಕಿ ಸೋಮಿಯಾ ಮತ್ತು ಮಂಡಳಿಯ ಸದಸ್ಯೆ ಶ್ರೀರಂಜಿನಿ ದತ್ತಾತ್ರಿ ರವರು ಮಾನವ ಜೀವನದಲ್ಲಿ ವೈದ್ಯರ ಪ್ರಾಮುಖ್ಯತೆ ಮತ್ತು ಹೊಯ್ಸಳ ಆರೋಗ್ಯ ಕೇಂದ್ರದ ಬೆನ್ನೆಲುಬಾಗಿರುವ ಡಾ. ಕೇಶವಮೂರ್ತಿ ಸಿಜಿ ರವರ ಸಹಾಯದಿಂದ ಹೊಯ್ಸಳ ಆರೋಗ್ಯ ಕೇಂದ್ರವು ಒದಗಿಸುವ ಅಸಾಧಾರಣ ಸೇವೆಯ ಬಗ್ಗೆ ಮಾತನಾಡಿದರು.

ಈ ವಿಶೇಷ ಸಂದರ್ಭದಲ್ಲಿ ಡಾ. ಕೇಶವಮೂರ್ತಿ ಸಿ.ಜಿ ರವರನ್ನು ಗೌರವಿಸಲಾಯಿತು. ಹೊಯ್ಸಳ ಆರೋಗ್ಯ ಕೇಂದ್ರದಲ್ಲಿ ಮೂತ್ರಪಿಂಡ ಡಯಾಲಿಸಿಸ್ ಚಿಕಿತ್ಸೆಗಾಗಿ ಇಬ್ಬರು ಬಡ ರೋಗಿಗಳಿಗೆ ಔಷಧೀಯ ವೆಚ್ಚಗಳಿಗಾಗಿ ಇಬ್ಬರು ರೋಗಿಗಳಿಗೆ ದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಡಯಾಲಿಸಿಸ್ ರೋಗಿಗಳಿಗೆ ಆರ್ಥಿಕ ನೆರವು ನೀಡಲಾಯಿತು.

ಈ ವೇಳೆ ಇನ್ನರ್ ವೀಲ್ ಅಧ್ಯಕ್ಷರಾದ ಮಮತಾ ಸುಧೀಂದ್ರ, ಕಾರ್ಯದರ್ಶಿ ನಿರ್ಮಲಾ ಕೆ.ಪಿ., ಮಾಜಿ ಅಧ್ಯಕ್ಷರಾದ ಬಿಂದು ವಿಜಯ್ ಕುಮಾರ್, ಇನ್ನರ್ ವೀಲ್ ಸದಸ್ಯೆರು ಹಾಗೂ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...