Friday, July 3, 2026
Friday, July 3, 2026

ಬೀದಿ ವ್ಯಾಪಾರಿಗಳಿಗೆಬದಲಿ ಸ್ಥಳ: ಆಲ್ಕೊಳ ದ ಹತ್ತಿರ ಜಾಗದ ಸಮಸ್ಯೆಗಳ ಬಗ್ಗೆ ಶಾಸಕ ಚೆನ್ನಿ ಪರಿಶೀಲನೆ

Date:

ಶಿವಮೊಗ್ಗ “ನಗರದ ಬೀದಿ ವ್ಯಾಪಾರಿಗಳ ಜೀವಕ್ಕೆ ರಕ್ಷಣೆ ನೀಡುವುದು ಹಾಗೂ ಅವರಿಗೆ ಸುಸಜ್ಜಿತ ವ್ಯಾಪಾರ ವಲಯ ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ತಿಳಿಸಿದ್ದಾರೆ.

ಕಳೆದ ಸಂಜೆ ಶಾಸಕರು ಆಲ್ಕೊಳ ವೃತ್ತದ ಬಳಿ ಮಹಾನಗರ ಪಾಲಿಕೆಯ ವತಿಯಿಂದ ಬೀದಿ ವ್ಯಾಪಾರಿಗಳಿಗಾಗಿ ನಿಗದಿಪಡಿಸಲಾಗಿರುವ ಜಾಗಕ್ಕೆ ಭೇಟಿ ನೀಡಿ, ವ್ಯಾಪಾರಸ್ಥರ ಅಹವಾಲುಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವ್ಯಾಪಾರಸ್ಥರು ತಮಗೆ ನಿಗದಿಪಡಿಸಿದ ಜಾಗದಲ್ಲಿ ನೀರಿನ ಕೊರತೆ ಹಾಗೂ ಅಗತ್ಯ ಮೂಲಸೌಕರ್ಯಗಳಿಲ್ಲದಿರುವ ಬಗ್ಗೆ ಶಾಸಕರ ಗಮನಕ್ಕೆ ತಂದರು.

ಹೈಟೆನ್ಷನ್ ವೈರ್ ಭೀತಿ – ಪರ್ಯಾಯ ಸ್ಥಳಕ್ಕೆ ಆಗ್ರಹ: ಪ್ರಸ್ತುತ ಜಾಗದಲ್ಲಿ ಅಪಾಯಕಾರಿ ಹೈಟೆನ್ಷನ್ ವಿದ್ಯುತ್ ತಂತಿಗಳು ಹಾದುಹೋಗಿರುವುದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರ ಜೀವಕ್ಕೆ ಸದಾ ಆಪತ್ತಿನ ಭೀತಿ ಎದುರಾಗಿದೆ. ಈ ಗಂಭೀರ ಮತ್ತು ಸೂಕ್ಷ್ಮ ವಿಷಯವನ್ನು ತಕ್ಷಣವೇ ಪರಿಗಣಿಸಿದ ಶಾಸಕರು, ಸ್ಥಳದಲ್ಲೇ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಸ್ತುತ ಇರುವ ಜಾಗವನ್ನು ಬದಲಾಯಿಸಿ, ಸುರಕ್ಷಿತವಾದ ನೂತನ ಪರ್ಯಾಯ ಸ್ಥಳದ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಶೀಘ್ರವೇ ಕಾರ್ಯರೂಪಕ್ಕೆ ತರುವಂತೆ ಕಟ್ಟುನಿಟ್ಟಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸ್ಥಳೀಯ ಪ್ರಮುಖರು ಹಾಗೂ ಬೀದಿ ವ್ಯಾಪಾರಿಗಳು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಸೇವಾ ತೆರಿಗೆ: ಹತ್ತುವರ್ಷಗಳು.ಒಂದು ಅವಲೋಕನ.ಲೇ: ಆರ್.ಮನೋಹರ್.

Shivamogga News ಜುಲೈ 1, 2017 ರಂದು ಮಧ್ಯರಾತ್ರಿ ಹಳೆಯ ಸಂಸತ್ತಿನ...