Friday, July 3, 2026
Friday, July 3, 2026

Rotary Club Shivamogga ನಗರದ ಒಂದು ವಾರ್ಡನ್ನು “ಶೂನ್ಯತ್ಯಾಜ್ಯ” ಸ್ಥಳವಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆ ಇದೆ- ಎನ್.ಗೋಪಿನಾಥ್

Date:

Rotary Club Shivamogga ಶಿವಮೊಗ್ಗ ರೋಟರಿ ಕ್ಲಬ್ ಶಿವಮೊಗ್ಗದ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಎನ್. ಗೋಪಿನಾಥ್ ಅಧಿಕಾರ ಸ್ವೀಕರಿಸಿದರು.
ಸವಳಂಗ ರಸ್ತೆಯಲ್ಲಿರುವ ರೋಟರಿ ಯುವಕೇಂದ್ರದಲ್ಲಿ ನಡೆದ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷ ಎನ್. ಗೋಪಿನಾಥ್ ಮತ್ತು ಕಾರ್ಯದರ್ಶಿ ಕೆ.ಎಸ್. ಶೈಲನ್ ಬಾಬು ಹಾಗೂ ಅವರ ತಂಡಕ್ಕೆ ಪಿಡಿಜಿ ರೋಟೇರಿಯನ್ ಹೆಚ್.ಆರ್. ಕೇಶವ್ ಪ್ರಮಾಣವಚನ ಬೋಧಿಸಿ ಶುಭ ಹಾರೈಸಿದರು.
ನಂತರ ಮಾತನಾಡಿದ ಕೇಶವ್ ಅವರು, ಯಾವುದೇ ಅಧಿಕಾರ ಸಿಗುವುದು ದೊಡ್ಡದಲ್ಲ, ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಷ್ಟೇ. ರೋಟೇರಿಯನ್ ಆಗಲು ಹೆಮ್ಮೆ ಪಟ್ಟರೆ ಸಾಲದು, ಕರ್ತವ್ಯನಿಷ್ಠರಾಗಬೇಕು. ಹೊಸ ತಂಡವು ಸ್ಥಳೀಯ ಸಮಸ್ಯೆಗಳ ಅರಿತು ಸ್ಪಂದಿಸಿ ಉತ್ತಮ ಸಮಾಜಮುಖಿ ಕೆಲಸ ಮಾಡಿ ಎಂದು ದೃಷ್ಟಾಂತಗಳ ಮೂಲಕ ಕಿವಿಮಾತು ಹೇಳಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಎನ್. ಗೋಪಿನಾಥ್, ನಮ್ಮ ತಂಡದ ಮುಂದೆ ಸಾಕಷ್ಟು ಕನಸುಗಳಿವೆ. ಈ ವರ್ಷ ರೋಟರಿಯ ಧ್ಯೇಯವಾಕ್ಯ ‘ಶಾಶ್ವತ ಪರಿಣಾಮ ಸೃಷ್ಟಿಸೋಣ’ ಎಂದಾಗಿದ್ದು, ಇದರ ಅಂಗವಾಗಿ ನಗರದ ಒಂದು ವಾರ್ಡ್ ಅನ್ನು ಶೂನ್ಯ ತ್ಯಾಜ್ಯ ವಾರ್ಡ್ ಆಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಯೋಜನೆ ನಮ್ಮ ಮುಂದಿದೆ. ಜೊತೆಗೆ ರೈಲ್ವೇ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪಾರ್ಕ್ ಗಳ ಅಭಿವೃದ್ಧಿ, ಸ್ವಚ್ಛ ಪರಿಸರ, ಶಾಲೆಗಳ ಅಭಿವೃದ್ಧಿ, ಯುವಜನ ಸಬಲೀಕರಣ, ಕೌಶಾಲ್ಯಾಭಿವೃದ್ಧಿ ಸೇರಿದಂತೆ ಹಲವು ಕಾರ್ಯಕ್ರಮಗಳು ನಮ್ಮ ಮುಂದಿವೆ. ನನಗೆ ನೀಡಿರುವ ಜವಾಬ್ದಾರಿಯನ್ನು ಎಲ್ಲರ ಸಹಕಾರದಲ್ಲಿ ಪ್ರಾಮಾಣಿಕವಾಗಿ ನಿಭಾಯಿಸುವೆ ಎಂದರು.
ನಿಕಟಪೂರ್ವ ಅಧ್ಯಕ್ಷ ಆನಂದ್, ನನ್ನ ಅವಧಿಯಲ್ಲಿ ನನ್ನೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಡಿಜಿಇ ವಸಂತ್ ಹೋಬಳಿದಾರ್, ಗೋಪಿನಾಥ್ ಉತ್ತಮ ಕನಸುಗಾರ. ಅವರು ಅತ್ಯುತ್ತಮ ಕೆಲಸ ಮಾಡುತ್ತಾರೆ ಎಂಬ ಭರವಸೆ ಇದೆ ಎಂದರು
ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ಗವರ್ನರ್ ತೀರ್ಥಯ್ಯ, ಲೆಫ್ಟಿನೆಂಟ್ ರೇಣುಕಾರಾಧ್ಯ ಸೇರಿದಂತೆ ಹಲವು ರೋಟರಿ ಗಣ್ಯರು ಮಾತನಾಡಿದರು.
Rotary Club Shivamogga ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಿ ಸನ್ಮಾನಿಸಲಾಯಿತು. ಹೊಸ ಸದಸ್ಯರಿಗೆ ಹೂವು ನೀಡಿ ಬರಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಪಿ.ನಾರಾಯಣ್ ಹಾಗೂ ಹೊಸ ತಂಡದ ಪದಾಧಿಕಾರಿಗಳಾದ ರಾಜೇಂದ್ರ ಪ್ರಸಾದ್, ಸದಾನಂದ, ಶೈಲನ್ ಬಾಬು, ವಿಜಯ್ ಕುಮಾರ್, ಎಸ್.ಜಿ. ಗೋಪಾಲ್, ಸುನಿತಾ ಶ್ರೀಧರ್, ನಾಗೇಶ್ ಡಾ. ಬಿ .ವಿ. ಲಕ್ಷ್ಮಿದೇವಿ ಗೋಪಿನಾಥ್, ಮೋಹನ್, ವೀರಣ್ಣ ಹುಗ್ಗಿ, ಎಸ್. ದತ್ತಾತ್ರಿ, ಉದಯಶಂಕರ ಶಾಸ್ತ್ರಿ, ಪ್ರೊ. ಚಂದ್ರಶೇಖರ್, ಭಾರತಿ ಚಂದ್ರಶೇಖರ್, ಎ. ಮಂಜುನಾಥ್, ಡಾ. ಪೃಥ್ವಿ, ಸೇರಿದಂತೆ ಹಲವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಸೇವಾ ತೆರಿಗೆ: ಹತ್ತುವರ್ಷಗಳು.ಒಂದು ಅವಲೋಕನ.ಲೇ: ಆರ್.ಮನೋಹರ್.

Shivamogga News ಜುಲೈ 1, 2017 ರಂದು ಮಧ್ಯರಾತ್ರಿ ಹಳೆಯ ಸಂಸತ್ತಿನ...