Sunday, August 9, 2026
Sunday, August 9, 2026

ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಬಗ್ಗೆ ಕೃಷಿಕರಿಗಾಗಿ ಇಲ್ಲಿದೆ ಮಾಹಿತಿ

Date:

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (R-WBCIS) 2024-25 ಕ್ಕೆ ಸಂಬಂಧಿಸಿದ ಸೂಚನೆ

ಮುಖ್ಯ ವಿವರಗಳು:

  1. ಯಾವ ಬೆಳೆಗಳಿಗೆ ವಿಮೆ
  • ಅಡಿಕೆ: ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು
  • ಕಾಳುಮೆಣಸು: ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು
  • ಶುಂಠಿ: ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು
  • ಮಾವು: ಶಿವಮೊಗ್ಗ, ಸೊರಬ ಮತ್ತು ಶಿಕಾರಿಪುರ ತಾಲ್ಲೂಕುಗಳು
  1. ಯಾರು ನೊಂದಾಯಿಸಬಹುದು
  • ಅಡಿಕೆ,ಮಾವು,ಶುಂಠಿ, ಕಾಳುಮೆಣಸು ಬೆಳೆದಿರುವ ರೈತರು
  • ಈ ಮೊದಲಿನ ಬೆಳೆಗಳಿಗೆ ಬೆಳೆಸಾಲ ಪಡೆದವರು/ಪಡೆಯದವರು ಎಲ್ಲರೂ ವಿಮೆಗೆ ಅರ್ಹರು
  • ಬೆಳೆ ಸಾಲ ಪಡೆದ ರೈತರಿಗೆ ವಿಮೆ ಕಡ್ಡಾಯ, ಸಾಲ ಪಡೆಯದ ರೈತರು ಸ್ವಯಂಪ್ರೇರಿತರಾಗಿ ಮಾಡಬಹುದು,
  1. ಬೇಕಾದ ದಾಖಲೆಗಳು
    ಆರ್ಜಿ ಜೊತೆ ಪಹಣಿ,ಬ್ಯಾಂಕ್ ಪಾಸ್‌ಬುಕ್,ಆಧಾರ್ ಕಾರ್ಡ್, ಸ್ವಯಂ ಘೋಷಿತ ಬೆಳೆ ವಿವರ ಇಟ್ಟುಕೊಂಡು ಬ್ಯಾಂಕ್/ಸಮೀಪದ ಸಾಮಾನ್ಯ ಸೇವಾ ಕೇಂದ್ರ (CSC)/ಗ್ರಾಮ ಒನ್ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳಬೇಕು.
  2. ಕೊನೆಯ ದಿನಾಂಕ: 31-07-2026
  3. ವಿಮಾ ಕಂತಿನ ವಿವರ
    ಕ್ರ.ಸಂ ಬೆಳೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ಪ್ರತಿ ಹೆಕ್ಟೇರ್‌ಗೆ ಕಂತು ರೈತರು ಪಾವತಿಸಬೇಕಾದ ಕಂತು
    1 ಅಡಿಕೆ 1,28,000/- 6400.00 2560.00
    2 ಕಾಳುಮೆಣಸು 47,000/- 4230.00 1692.00
    3 ಮಾವು 80,000/- 8000.00 4000.00
    4 ಶುಂಠಿ 1,30,000/- 6500.00 2600.00
    ಗುಂಟೆಗೆ ಲೆಕ್ಕ: ಅಡಿಕೆ ₹64, ಕಾಳುಮೆಣಸು ₹42.30, ಮಾವು ₹80, ಶುಂಠಿ ₹65
  4. ಪರಿಹಾರ ಹೇಗೆ: ಮಳೆ, ಭೂಕುಸಿತ, ಬರ ಇತ್ಯಾದಿ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟವಾದರೆ,ಕರ್ನಾಟಕ ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರದ ದತ್ತಾಂಶ ಆಧರಿಸಿ ಪರಿಹಾರ ನೀಡಲಾಗುತ್ತದೆ. Term sheet, Pay out structure ಪ್ರಕಾರ ಪಾವತಿ.

ಸಂಪರ್ಕ: ಹೆಚ್ಚಿನ ಮಾಹಿತಿಗೆ ಹತ್ತಿರದ ಬ್ಯಾಂಕ್, ರೈತ ಸಂಪರ್ಕ ಕೇಂದ್ರ ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಂಪರ್ಕಿಸಿ.

“ರೈತರೇ ಬನ್ನಿ, ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಳ್ಳಿ”

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ತೀರ್ಥಹಳ್ಳಿ ಬಳಿ ಗುಡ್ಡ ಕುಸಿತದಿಂದ ಸಾವಿನ ಅವಘಡ: ಸಚಿವ ಮಧು ಬಂಗಾರಪ್ಪ ಮೌಖಿಕ ಪರಿಶೀಲನೆ, ಪರಿಹಾರಕ್ಕೆ ಶೀಘ್ರ ಕ್ರಮ

Madhu Bangarappa ತೀರ್ಥಹಳ್ಳಿಯಲ್ಲಿ ಭೂಕುಸಿತದಿಂದ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ...

Madhu Bangarappa ಗ್ರಾಮೀಣರಲ್ಲಿ ವಿಬಿ-ಜಿ ರಾಮ್ ಜಿ ಯೋಜನೆ ಬಗ್ಗೆ ಮನವರಿಕೆ ಮಾಡಿ, ಹೆಚ್ಚಿನ ಜನಕ್ಕೆ ಕೆಲಸ ನೀಡಿ- ಮಧು ಬಂಗಾರಪ್ಪ

Madhu Bangarappa ಬರಗಾಲದ ಹಿನ್ನೆಲೆಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ...

DC Shivamogga ಹೋಂ ಸ್ಟೇ, ಹೊಟೆಲ್ & ರೆಸಾರ್ಟ್ಗಳಲ್ಲಿ ಮಾಹಿತಿ ಫಲಕ ಅಳವಡಿಕೆ ಕಡ್ಡಾಯ. ಪ್ರಭುಲಿಂಗ ಕವಳಿಕಟ್ಟಿ.

DC Shivamogga ಜಿಲ್ಲೆಯಲ್ಲಿರುವ ಎಲ್ಲಾ ಹೋಂಸ್ಟೇ, ಹೋಟೇಲ್, ರೆಸಾರ್ಟ್ ಹಾಗೂ ಇತರೆ ವಸತಿ...